ಮುಟ್ಟಿನ ಕಾರಣದಿಂದ ಚೈತ್ರ ನವರಾತ್ರಿ ಪೂಜೆ ಮಾಡಲಾಗಲಿಲ್ಲ ಎಂದು ಮಹಿಳೆ ಆತ್ಮಹತ್ಯೆ
ಮುಟ್ಟಿನ ಕಾರಣದಿಂದ ಪೂಜೆ ಮಾಡಲಾಗಲಿಲ್ಲ ಎಂದು ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಹಾಗೆಯೇ ಚೈತ್ರ ನವರಾತ್ರಿಯಂದು ಮಹಿಳೆ ಮುಟ್ಟಾಗಿದ್ದ ಕಾರಣ ಹಬ್ಬವನ್ನು ಆಚರಿಸಲು ಸಾಧ್ಯವಾಗಲಿಲ್ಲ, ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. 36 ವರ್ಷದ ಪ್ರಿಯಾಂಶ ಸೋನಿ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಝಾನ್ಸಿ, ಏಪ್ರಿಲ್ 04: ಸಾಮಾನ್ಯವಾಗಿ ಹಬ್ಬ(Festival)ಗಳನ್ನು ಸಂಭ್ರಮದಿಂದ ಆಚರಿಸಬೇಕು ಎಂಬ ಹಂಬಲ ಎಲ್ಲರಲ್ಲಿರುತ್ತದೆ. ಸಾಧ್ಯವಾಗಲಿಲ್ಲವೆಂದಾದರೆ ಬೇಸರವಾಗುವುದಂತೂ ನಿಜ, ಆದರೆ ಇದೇ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಹೇಗೆ ಕರ್ನಾಟಕದಲ್ಲಿ ಯುಗಾದಿಯನ್ನು ಆಚರಣೆ ಮಾಡುತ್ತೇವೋ ಹಾಗೆಯೇ ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿ ಆಚರಣೆ ಮಾಡಲಾಗುತ್ತದೆ, ಇದು ಹೊಸ ವರ್ಷದ ಆರಂಭವನ್ನು ಸಂಭ್ರಮಿಸುವ ಕ್ಷಣವಾಗಿದೆ.
ಹಾಗೆಯೇ ಚೈತ್ರ ನವರಾತ್ರಿಯಂದು ಮಹಿಳೆ ಮುಟ್ಟಾಗಿದ್ದ ಕಾರಣ ಹಬ್ಬವನ್ನು ಆಚರಿಸಲು ಸಾಧ್ಯವಾಗಲಿಲ್ಲ, ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. 36 ವರ್ಷದ ಪ್ರಿಯಾಂಶ ಸೋನಿ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪ್ರಿಯಾಂಶ ಸೋನಿ ತನ್ನ ಪತಿ ಮುಖೇಶ್ ಸೋನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ಮೂರುವರೆ ವರ್ಷದ ಜಾನ್ವಿ ಮತ್ತು ಎರಡೂವರೆ ವರ್ಷದ ಮಾನ್ವಿ ಜೊತೆ ವಾಸವಾಗಿದ್ದರು. ಮುಖೇಶ್ ಹೇಳುವ ಪ್ರಕಾರ ಪ್ರಿಯಾಂಶ ಚೈತ್ರ ನವರಾತ್ರಿಗೆ ಉತ್ಸಾಹದಿಂದ ತಯಾರಿ ನಡೆಸಿದ್ದರು. ಮೊದಲ ದಿನವೇ ಆಕೆಗೆ ಮುಟ್ಟು ಕಾಣಿಸಿಕೊಂಡಿತ್ತು. ಉಪವಾಸ, ಪೂಜೆ ಎರಡನ್ನೂ ಮಾಡಲು ಸಾಧ್ಯವಾಗಲಿಲ್ಲ. ಆಕೆ ಭಾವನಾತ್ಮಕವಾಗಿ ಕುಗ್ಗಿ ಹೋದಳು. ಮುಖೇಶ್ ಅವಳನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ, ಅವಳು ಸಮಾಧಾನಗೊಳ್ಳಲು ಸಾಧ್ಯವಾಗಲಿಲ್ಲ.
ಎಲ್ಲಾ ಪೂಜಾ ಸಾಮಗ್ರಿಗಳನ್ನು ತರಲು ಅವಳು ನನ್ನನ್ನು ಕೇಳಿದ್ದಳು, ಅದನ್ನು ನಾನು ಮಾಡಿದೆ. ಆದರೆ ಮೊದಲ ದಿನ, ಅವಳಿಗೆ ಮುಟ್ಟು ಪ್ರಾರಂಭವಾಯಿತು.ಇದು ನೈಸರ್ಗಿಕ ಪ್ರಕ್ರಿಯೆ ಎಂದು ನಾನು ಅವಳಿಗೆ ವಿವರಿಸಿದೆ, ಆದರೆ ಅವಳು ನನ್ನ ಮಾತನ್ನು ಕೇಳಲೇ ಇಲ್ಲ. ಮುಖೇಶ್ ಅವರು ಅಂಗಡಿಯಲ್ಲಿದ್ದಾಗ ವಿಷ ಸೇವಿಸಿ ಪ್ರಿಯಾಂಶ ಆತ್ಮಹತ್ಯೆಗೆ ಯತ್ನಿಸಿದ್ದರು.
ಮತ್ತಷ್ಟು ಓದಿ: ಚಿಕ್ಕಮಗಳೂರಿನಲ್ಲಿ ಭಯಾನಕ ಘಟನೆ: ಪತ್ನಿ ಮೇಲಿನ ಸಿಟ್ಟಿಗೆ ಮಗಳು, ಅತ್ತೆ, ನಾದಿನಿಯ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಕೂಡಲೇ ವಿಷಯ ಅರಿತು ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬರಲಾಗಿತ್ತು, ಆದರೆ ಮತ್ತೆ ಆರೋಗ್ಯ ಕ್ಷೀಣಿಸಲು ಶುರುವಾಗಿತ್ತು. ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕೊತ್ವಾಲಿ ಪೊಲೀಸರು ಪ್ರಿಯಾಂಶ ಅವರ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ