AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

cheetahs: ನಮೀಬಿಯಾದಿಂದ ಬಂದಿರುವ ಚೀತಾಗಳನ್ನು ಜನರು ಯಾವಾಗ ನೋಡಬಹುದು? ಮೋದಿ ಹೇಳಿದ್ದೇನು?

ಚೀತಾಗಳನ್ನು ವೀಕ್ಷಿಸಲು ರಚಿಸಲಾದ ಕಾರ್ಯಪಡೆಯ ಶಿಫಾರಸಿನ ಆಧಾರದ ಮೇಲೆ ಜನರು ಚೀತಾಗಳನ್ನು ಯಾವಾಗ ನೋಡಬಹುದು ಎಂಬುದನ್ನು ನಿರ್ಧರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ‘ಮನ್ ಕಿ ಬಾತ್’ ಹೇಳಿದ್ದಾರೆ.

cheetahs: ನಮೀಬಿಯಾದಿಂದ ಬಂದಿರುವ ಚೀತಾಗಳನ್ನು ಜನರು ಯಾವಾಗ ನೋಡಬಹುದು? ಮೋದಿ ಹೇಳಿದ್ದೇನು?
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Sep 26, 2022 | 4:03 PM

Share

ದೆಹಲಿ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳನ್ನು ವೀಕ್ಷಿಸಲು ರಚಿಸಲಾದ ಕಾರ್ಯಪಡೆಯ ಶಿಫಾರಸಿನ ಆಧಾರದ ಮೇಲೆ ಜನರು ಚೀತಾಗಳನ್ನು ಯಾವಾಗ ನೋಡಬಹುದು ಎಂಬುದನ್ನು ನಿರ್ಧರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ‘ಮನ್ ಕಿ ಬಾತ್’ ಹೇಳಿದ್ದಾರೆ. ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಹೇಳಿರುವಂತೆ ಸ್ನೇಹಿತರೇ, ಈಗಾಗಲೇ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳನ್ನು ನೀವು ವೀಕ್ಷಣೆ ಮಾಡಲು ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆಯು ಚೀತಾಗಳ ಮೇಲೆ ನಿಗಾ ಇಡುತ್ತದೆ ಮತ್ತು ಅವು ಇಲ್ಲಿನ ಪರಿಸರಕ್ಕೆ ಎಷ್ಟು ಹೊಂದಿಕೊಂಡಿದೆ ಎಂಬುದನ್ನು ನೋಡುತ್ತದೆ. ಇದರ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು, ನಂತರದಲ್ಲಿ ನೀವು ಚೀತಾಗಳನ್ನು ನೋಡಬಹುದು ಎಂದು ಪಿಎಂ ಮೋದಿ ತಮ್ಮ ಮಾಸಿಕ ರೇಡಿಯೊ ಪ್ರಸಾರವಾದ ‘ಮನ್ ಕಿ ಬಾತ್’ನ 93 ನೇ ಸಂಚಿಕೆಯಲ್ಲಿ ಹೇಳಿದರು.

ಚೀತಾಗಳು ಭಾರತಕ್ಕೆ ಮರಳಿದ ಬಗ್ಗೆ ದೇಶದ ಜನರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ‘ಮನ್ ಕಿ ಬಾತ್’ನಲ್ಲಿ ಹೇಳಿದ್ದಾರೆ. 130 ಕೋಟಿ ಭಾರತೀಯರು ಸಂತೋಷದಿಂದಿದ್ದಾರೆ, ಹೆಮ್ಮೆಪಡುವ ವಿಷಯವಾಗಿದ್ದು, ಇದು ಪ್ರಕೃತಿಯ ಮೇಲಿನ ಭಾರತದ ಪ್ರೀತಿ ಎಂದು ಪ್ರಧಾನಿ ಹೇಳಿದರು. ನಮೀಬಿಯಾದಿಂದ ಬಂದಿರುವ ಚೀತಾಗಳನ್ನು ಯಾವಾಗ ನೋಡಲು ಅವಕಾಶ ಸಿಗುತ್ತದೆ ಎಂಬ ಕುತೂಹಲದ ಪ್ರಶ್ನೆಗಳನ್ನು ಜನರು ಮುಂದಿಡುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಕಾರ್ಯಕ್ರಮದ ಮೂಲಕ ಚೀತಾಗಳಿಗೆ ಯಾವ ಹೆಸರನ್ನು ಇಡಬೇಕು ಎಂದು ಮೋದಿ ಜನರಲ್ಲಿ ಕೇಳಿದ್ದಾರೆ.

ಇದಕ್ಕೆ ನಿಮಗೆ ಕೆಲವೊಂದು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದಕ್ಕಾಗಿ MyGov ವೇದಿಕೆಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುವುದು, ಅದರಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ನಾನು ಜನರಲ್ಲಿ ಹೇಳುತ್ತೇವೆ. ಈ ವೇದಿಕೆಯಲ್ಲಿ ಚೀತಾಗಳಿಗೆ ಯಾವ ಹೆಸರನ್ನು ಇಡಬೇಕು ಎಂದು ನಿಮ್ಮ ಪ್ರಶ್ನೆಯನ್ನು ಇಡುತ್ತೇವೆ, ಅಲ್ಲಿ ನೀವು ಉತ್ತರಿಸಬೇಕು ಎಂದು ಹೇಳೀದ್ದಾರೆ. ಇದೊಂದು ಮಗುವಿಗೆ ನಾಮಕರಣ ಮಾಡಿದಂತೆ ನೀವು ಇದಕ್ಕೆ ಹೆಸರನ್ನು ಸೂಚಿಸಬಹುದು. ನಮ್ಮ ಸಮಾಜ ಮತ್ತು ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆ, ನಮ್ಮನ್ನು ಸುಲಭವಾಗಿ ಸೆಳೆಯುತ್ತದೆ.

Published On - 4:01 pm, Mon, 26 September 22

ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ
Daily Devotional: ನೀರು ಹೇಗೆ ಉಪಯೋಗಿಸಿದ್ರೆ ದುಡ್ಡು ಹಾಗೆ ಖರ್ಚಾಗುತ್ತಾ?
Daily Devotional: ನೀರು ಹೇಗೆ ಉಪಯೋಗಿಸಿದ್ರೆ ದುಡ್ಡು ಹಾಗೆ ಖರ್ಚಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಮನ್ನಣೆ ಸಿಗುತ್ತದೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಮನ್ನಣೆ ಸಿಗುತ್ತದೆ
ಹಾವುಗಳಿಗೆ ಹೇಗೆ ಆಹಾರ ನೀಡುತ್ತಾರೆಂದು ನೋಡಿದ್ದೀರಾ? ಇಲ್ಲಿದೆ ವಿಡಿಯೋ
ಹಾವುಗಳಿಗೆ ಹೇಗೆ ಆಹಾರ ನೀಡುತ್ತಾರೆಂದು ನೋಡಿದ್ದೀರಾ? ಇಲ್ಲಿದೆ ವಿಡಿಯೋ