AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಭ ಮುಹೂರ್ತದಲ್ಲಿ ಸೇವಾ ತೀರ್ಥದಲ್ಲಿ ಮೊದಲ ಸಭೆ ನಡೆಸಿದ ಪ್ರಧಾನಿ ಮೋದಿ; ಈ ದಿನದ ವಿಶೇಷವೇನು?

ಪ್ರಧಾನಿ ನರೇಂದ್ರ ಮೋದಿ ಸಂಪುಟದ ಮೊದಲ ಸಭೆಯನ್ನು ಹೊಸ ಪ್ರಧಾನಿ ಕಚೇರಿ "ಸೇವಾ ತೀರ್ಥ"ದಲ್ಲಿ ನಡೆಸಲಾಯಿತು. ಅಲ್ಲಿ "ಸೇವಾ ಸಂಕಲ್ಪ" ನಿರ್ಣಯವನ್ನು ಅಂಗೀಕರಿಸಲಾಯಿತು. ಕೇರಳವನ್ನು "ಕೇರಳಂ" ಎಂದು ಮರುನಾಮಕರಣ ಮಾಡುವುದು, ಶ್ರೀನಗರ ವಿಮಾನ ನಿಲ್ದಾಣ ಯೋಜನೆಗೆ ಅನುಮೋದನೆ ಸೇರಿದಂತೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಪ್ರಧಾನಿ ಮೋದಿ "ಸೇವಾ ತೀರ್ಥ"ವನ್ನು ರಾಷ್ಟ್ರೀಯ ಸೇವೆಯ ಕರ್ತವ್ಯ ಆಧಾರಿತ ತ್ಯಾಗ ಎಂದು ಬಣ್ಣಿಸಿದರು.

ಶುಭ ಮುಹೂರ್ತದಲ್ಲಿ ಸೇವಾ ತೀರ್ಥದಲ್ಲಿ ಮೊದಲ ಸಭೆ ನಡೆಸಿದ ಪ್ರಧಾನಿ ಮೋದಿ; ಈ ದಿನದ ವಿಶೇಷವೇನು?
Pm Modi
ಸುಷ್ಮಾ ಚಕ್ರೆ
|

Updated on:Feb 24, 2026 | 6:25 PM

Share

ನವದೆಹಲಿ, ಫೆಬ್ರವರಿ 24: ನರೇಂದ್ರ ಮೋದಿ ಸಂಪುಟದ ಮೊದಲ ಸಭೆಯು ಹೊಸ ಪ್ರಧಾನ ಮಂತ್ರಿ ಕಚೇರಿಯಾದ ಸೇವಾ ತೀರ್ಥದಲ್ಲಿ (Seva Teertha) ನಡೆಯಿತು. ಹಿಂದೂ ಪಂಚಾಂಗದ ಪ್ರಕಾರ ಇಂದು ಬಹಳ ವಿಶೇಷವಾದ ದಿನವೂ ಹೌದು. ಇಂದಿನ ಸಂಪುಟ ಸಭೆಯಲ್ಲಿ ಸೇವಾ ಸಂಕಲ್ಪ ನಿರ್ಣಯವನ್ನು ಅಂಗೀಕರಿಸಲಾಯಿತು. ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡಲಾಯಿತು. ಶ್ರೀನಗರದಲ್ಲಿನ ಸಮಗ್ರ ವಿಮಾನ ನಿಲ್ದಾಣ ಟರ್ಮಿನಲ್ ಯೋಜನೆಗೆ ಸಹ ಅನುಮೋದನೆ ನೀಡಲಾಯಿತು.

ಸೇವಾ ತೀರ್ಥದಲ್ಲಿ ನಡೆದ ಮೊದಲ ಸಭೆಯ ಕುರಿತು ಪ್ರಧಾನಿ ಮೋದಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, “ಇಂದು ಯುಗಾಬ್ದ 5127, ವಿಕ್ರಮ್ ಸಂವತ್ 2082, ಫಾಲ್ಗುಣ ಶುಕ್ಲ ಅಷ್ಟಮಿಯಂದು ಕೇಂದ್ರ ಸಂಪುಟದ ಮೊದಲ ಸಭೆಯನ್ನು ಹೊಸದಾಗಿ ನಿರ್ಮಿಸಲಾದ ಸೇವಾ ತೀರ್ಥದಲ್ಲಿ ನಡೆಸಲಾಯಿತು. ದೇಶಕ್ಕಾಗಿ ಅನೇಕ ಅಭೂತಪೂರ್ವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಗುಲಾಮಗಿರಿಯನ್ನು ಮೆಟ್ಟಿ ಹೊಸ ಇತಿಹಾಸ ಸೃಷ್ಟಿಸಿದ್ದೇವೆ; ಸೇವಾ ತೀರ್ಥದಲ್ಲಿ ಪ್ರಧಾನಿ ಮೋದಿ ಮೊದಲ ಭಾಷಣ

“ಸ್ಥಳೀಯ ಚಿಂತನೆ, ಆಧುನಿಕ ವಿನ್ಯಾಸ ಮತ್ತು 1.4 ಶತಕೋಟಿ ದೇಶವಾಸಿಗಳ  ಸಾಮರ್ಥ್ಯದ ಅಡಿಪಾಯದ ಮೇಲೆ ನಿರ್ಮಿಸಲಾದ ಸೇವಾ ತೀರ್ಥವು ರಾಷ್ಟ್ರೀಯ ಸೇವೆಯ ಕರ್ತವ್ಯ ಆಧಾರಿತ ಯಾಗವನ್ನು ನಿರಂತರವಾಗಿ ಮುನ್ನಡೆಸುತ್ತದೆ ಎಂದು ಸಚಿವ ಸಂಪುಟ ನಿರ್ಧರಿಸಿದೆ. ಈ ರಾಷ್ಟ್ರೀಯ ಯಾಗದಲ್ಲಿ ನಮ್ಮ ಮಂತ್ರ: ಯದ್ ಭದ್ರಮ್ ತನ್ನ್ ಆ ಸುವಾ. ಶುಭ ಮತ್ತು ಪ್ರಯೋಜನಕಾರಿಯಾದ ಹೊಸದೆಲ್ಲವನ್ನೂ ನಾವು ನಿರಂತರವಾಗಿ ಸ್ವೀಕರಿಸುವಂತಾಗಲಿ ಎಂದು ಇದರ ಅರ್ಥ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Tue, 24 February 26

Follow Us