AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Babar Azam: ಟಿ20 ವಿಶ್ವಕಪ್‌ ಫೈನಲ್​ಗೂ ಮುನ್ನ ತಂಡ ತೊರೆದ ಬಾಬರ್ ಅಜಮ್..!

Babar Azam: ಪಾಕ್ ತಂಡದ ನಾಯಕ ಬಾಬರ್ ಕರಾಚಿ ಕಿಂಗ್ಸ್‌ನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದು, ಪೇಶಾವರ್ ತಂಡ ಬಾಬರ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ.

TV9 Web
| Updated By: ಪೃಥ್ವಿಶಂಕರ|

Updated on: Nov 12, 2022 | 3:43 PM

Share
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಸಾಮರ್ಥ್ಯ ಪ್ರದರ್ಶಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದೀಗ ನವೆಂಬರ್ 13ರಂದು ಇಂಗ್ಲೆಂಡ್ ವಿರುದ್ಧ ಚಾಂಪಿಯನ್ ಆಗಲು ಪೈಪೋಟಿ ನಡೆಸಲಿದೆ. ಇದೆಲ್ಲದರ ನಡುವೆ ಪಾಕ್ ಕ್ರಿಕೆಟ್​ನಲ್ಲಿ ಸಂಚಲನ ಮೂಡಿದ್ದು, ಆಟಗಾರರ ವಿನಿಮಯ ಶುರುವಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಸಾಮರ್ಥ್ಯ ಪ್ರದರ್ಶಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದೀಗ ನವೆಂಬರ್ 13ರಂದು ಇಂಗ್ಲೆಂಡ್ ವಿರುದ್ಧ ಚಾಂಪಿಯನ್ ಆಗಲು ಪೈಪೋಟಿ ನಡೆಸಲಿದೆ. ಇದೆಲ್ಲದರ ನಡುವೆ ಪಾಕ್ ಕ್ರಿಕೆಟ್​ನಲ್ಲಿ ಸಂಚಲನ ಮೂಡಿದ್ದು, ಆಟಗಾರರ ವಿನಿಮಯ ಶುರುವಾಗಿದೆ.

1 / 6
ಈ ವಿನಿಮಯದ ಭಾಗವಾಗಿ ಪಾಕಿಸ್ತಾನಿ ತಂಡದ ನಾಯಕ ಬಾಬರ್ ಅಜಮ್ ಅವರು ಟಿ20 ವಿಶ್ವಕಪ್​ ಫೈನಲ್‌ಗೂ ಮುಂಚಿತವಾಗಿ ತಮ್ಮ ತಂಡವನ್ನು ತೊರೆದಿದ್ದಾರೆ. ವಾಸ್ತವವಾಗಿ ನಾವಿಲ್ಲಿ ಮಾತನಾಡುತ್ತಿರುವುದು ಪಾಕಿಸ್ತಾನದ ರಾಷ್ಟ್ರೀಯ ತಂಡದ ಬಗ್ಗೆ ಅಲ್ಲ. ಬದಲಿಗೆ ಪಾಕಿಸ್ತಾನ ಸೂಪರ್ ಲೀಗ್ ಬಗ್ಗೆ.

ಈ ವಿನಿಮಯದ ಭಾಗವಾಗಿ ಪಾಕಿಸ್ತಾನಿ ತಂಡದ ನಾಯಕ ಬಾಬರ್ ಅಜಮ್ ಅವರು ಟಿ20 ವಿಶ್ವಕಪ್​ ಫೈನಲ್‌ಗೂ ಮುಂಚಿತವಾಗಿ ತಮ್ಮ ತಂಡವನ್ನು ತೊರೆದಿದ್ದಾರೆ. ವಾಸ್ತವವಾಗಿ ನಾವಿಲ್ಲಿ ಮಾತನಾಡುತ್ತಿರುವುದು ಪಾಕಿಸ್ತಾನದ ರಾಷ್ಟ್ರೀಯ ತಂಡದ ಬಗ್ಗೆ ಅಲ್ಲ. ಬದಲಿಗೆ ಪಾಕಿಸ್ತಾನ ಸೂಪರ್ ಲೀಗ್ ಬಗ್ಗೆ.

2 / 6
ಪಿಎಸ್‌ಎಲ್‌ನ ಎಂಟನೇ ಸೀಸನ್‌ನ ಡ್ರಾಫ್ಟ್‌ಗೆ ಮೊದಲು, ಆಟಗಾರರ ಧಾರಣ ಮತ್ತು ವ್ಯಾಪಾರದ ಅಡಿಯಲ್ಲಿ, ಪಾಕ್ ತಂಡದ ನಾಯಕ ಬಾಬರ್, ಕರಾಚಿ ಕಿಂಗ್ಸ್‌ನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದು, ಪೇಶಾವರ್ ತಂಡ ಬಾಬರ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ಈಗ ಹೊಸ ಸೀಸನ್​ನಿಂದ ಬಾಬರ್ 2017 ರ ಚಾಂಪಿಯನ್ ಪೇಶಾವರ್ ತಂಡದ ಪರ ಆಡಲಿದ್ದಾರೆ.

ಪಿಎಸ್‌ಎಲ್‌ನ ಎಂಟನೇ ಸೀಸನ್‌ನ ಡ್ರಾಫ್ಟ್‌ಗೆ ಮೊದಲು, ಆಟಗಾರರ ಧಾರಣ ಮತ್ತು ವ್ಯಾಪಾರದ ಅಡಿಯಲ್ಲಿ, ಪಾಕ್ ತಂಡದ ನಾಯಕ ಬಾಬರ್, ಕರಾಚಿ ಕಿಂಗ್ಸ್‌ನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದು, ಪೇಶಾವರ್ ತಂಡ ಬಾಬರ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ಈಗ ಹೊಸ ಸೀಸನ್​ನಿಂದ ಬಾಬರ್ 2017 ರ ಚಾಂಪಿಯನ್ ಪೇಶಾವರ್ ತಂಡದ ಪರ ಆಡಲಿದ್ದಾರೆ.

3 / 6
ಕಳೆದ ಸೀಸನ್​ನಲ್ಲಿ ಕರಾಚಿ ಕಿಂಗ್ಸ್‌ ತಂಡದ ನಾಯಕರನ್ನಾಗಿ ಬಾಬರ್ ಅಜಮ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರ ನಾಯಕತ್ವದಲ್ಲಿ ತಂಡವು ಕೊನೆಯ ಅಂದರೆ ಆರನೇ ಸ್ಥಾನವನ್ನು ಗಳಿಸಿತು. ಸ್ವತಃ ಬಾಬರ್ ಕೂಡ ಬ್ಯಾಟ್‌ನಿಂದ ವಿಶೇಷವಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.

ಕಳೆದ ಸೀಸನ್​ನಲ್ಲಿ ಕರಾಚಿ ಕಿಂಗ್ಸ್‌ ತಂಡದ ನಾಯಕರನ್ನಾಗಿ ಬಾಬರ್ ಅಜಮ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರ ನಾಯಕತ್ವದಲ್ಲಿ ತಂಡವು ಕೊನೆಯ ಅಂದರೆ ಆರನೇ ಸ್ಥಾನವನ್ನು ಗಳಿಸಿತು. ಸ್ವತಃ ಬಾಬರ್ ಕೂಡ ಬ್ಯಾಟ್‌ನಿಂದ ವಿಶೇಷವಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.

4 / 6
ತಮಾಷೆಯೆಂದರೆ ಬಾಬರ್ ಬದಲಿಗೆ ಅನುಭವಿ ಆಲ್ ರೌಂಡರ್ ಶೋಯೆಬ್ ಮಲಿಕ್ ಅವರನ್ನು ಪೇಶಾವರ ತಂಡ ಕರಾಚಿ ತಂಡಕ್ಕೆ ಬಿಟ್ಟುಕೊಟ್ಟಿದೆ. ಇತ್ತೀಚೆಗೆ, ಶೋಯೆಬ್ ಮಲಿಕ್ ಅವರನ್ನು ಏಷ್ಯಾಕಪ್ ಮತ್ತು ನಂತರ ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟಿದಕ್ಕಾಗಿ ಬಾಬರ್ ಮೇಲೆ ಪ್ರಶ್ನೆಗಳನ್ನು ಎದಿದ್ದವು.

ತಮಾಷೆಯೆಂದರೆ ಬಾಬರ್ ಬದಲಿಗೆ ಅನುಭವಿ ಆಲ್ ರೌಂಡರ್ ಶೋಯೆಬ್ ಮಲಿಕ್ ಅವರನ್ನು ಪೇಶಾವರ ತಂಡ ಕರಾಚಿ ತಂಡಕ್ಕೆ ಬಿಟ್ಟುಕೊಟ್ಟಿದೆ. ಇತ್ತೀಚೆಗೆ, ಶೋಯೆಬ್ ಮಲಿಕ್ ಅವರನ್ನು ಏಷ್ಯಾಕಪ್ ಮತ್ತು ನಂತರ ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟಿದಕ್ಕಾಗಿ ಬಾಬರ್ ಮೇಲೆ ಪ್ರಶ್ನೆಗಳನ್ನು ಎದಿದ್ದವು.

5 / 6
ಬಾಬರ್ ಮಾತ್ರವಲ್ಲದೆ ಮತ್ತೊಂದು ಆಘಾತಕಾರಿ ನಿರ್ಧಾರವನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ ತೆಗೆದುಕೊಂಡಿದೆ. 2019 ರ ಚಾಂಪಿಯನ್ ಆಗಿರುವ ಈ ತಂಡವು ಪಾಕಿಸ್ತಾನದ ಯುವ ವೇಗದ ಬೌಲರ್ ನಸೀಮ್ ಶಾ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ನಸೀಮ್ ಸದ್ಯ ಪಾಕಿಸ್ತಾನದೊಂದಿಗೆ ಟಿ20 ವಿಶ್ವಕಪ್ ಫೈನಲ್ ಆಡಲು ತಯಾರಿ ನಡೆಸುತ್ತಿದ್ದಾರೆ.

ಬಾಬರ್ ಮಾತ್ರವಲ್ಲದೆ ಮತ್ತೊಂದು ಆಘಾತಕಾರಿ ನಿರ್ಧಾರವನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ ತೆಗೆದುಕೊಂಡಿದೆ. 2019 ರ ಚಾಂಪಿಯನ್ ಆಗಿರುವ ಈ ತಂಡವು ಪಾಕಿಸ್ತಾನದ ಯುವ ವೇಗದ ಬೌಲರ್ ನಸೀಮ್ ಶಾ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ನಸೀಮ್ ಸದ್ಯ ಪಾಕಿಸ್ತಾನದೊಂದಿಗೆ ಟಿ20 ವಿಶ್ವಕಪ್ ಫೈನಲ್ ಆಡಲು ತಯಾರಿ ನಡೆಸುತ್ತಿದ್ದಾರೆ.

6 / 6
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್