AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಕೆಣಕಿದ ರಾಣಾ: ಕಣ್ಣಲ್ಲೇ ಕೆಂಡಕಾರಿದ ಮಯಾಂಕ್ ಅಗರ್ವಾಲ್

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ​ (ಐಪಿಎಲ್ 2024) ಮೂರನೇ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿದೆ, ಅದರಲ್ಲೂ ಯುವ ಆಟಗಾರ ಹರ್ಷಿತ್ ರಾಣಾ ಹಾಗೂ ಮಯಾಂಕ್ ಅಗರ್ವಾಲ್ ನಡುವೆ ನೇರ ಪೈಪೋಟಿ ತಾರಕ್ಕೇರಿತು. ಅಂತಿಮವಾಗಿ ಈ ಪೈಪೋಟಿಯು ಕಣ್ಣೋಟದಲ್ಲೇ ಅಂತ್ಯವಾಗಿದ್ದು, ಮುಂದಿನ ಪಂದ್ಯದಲ್ಲಿ ಮುಂದುವರೆಯುವ ಸಾಧ್ಯತೆಯಿದೆ.

TV9 Web
| Edited By: |

Updated on: Mar 24, 2024 | 8:09 AM

Share
ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ (SRH) ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (KKR) ನಡುವಣ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ಈ ಪಂದ್ಯದಲ್ಲಿ ಕೆಕೆಆರ್​ ವೇಗಿ ಹರ್ಷಿತ್ ರಾಣಾ (Harshit Rana) ಹಾಗೂ ಎಸ್​ಆರ್​ಹೆಚ್ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ (Mayank Agarwal) ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂತು.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ (SRH) ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (KKR) ನಡುವಣ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ಈ ಪಂದ್ಯದಲ್ಲಿ ಕೆಕೆಆರ್​ ವೇಗಿ ಹರ್ಷಿತ್ ರಾಣಾ (Harshit Rana) ಹಾಗೂ ಎಸ್​ಆರ್​ಹೆಚ್ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ (Mayank Agarwal) ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂತು.

1 / 7
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೆಕೆಆರ್ ವೇಗದ ಬೌಲರ್ ಹರ್ಷಿತ್ ರಾಣಾರನ್ನು ಟಾರ್ಗೆಟ್ ಮಾಡಿದ್ದ ಮಯಾಂಕ್ ಸಿಕ್ಸ್-ಫೋರ್​ಗಳನ್ನು ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು.

ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೆಕೆಆರ್ ವೇಗದ ಬೌಲರ್ ಹರ್ಷಿತ್ ರಾಣಾರನ್ನು ಟಾರ್ಗೆಟ್ ಮಾಡಿದ್ದ ಮಯಾಂಕ್ ಸಿಕ್ಸ್-ಫೋರ್​ಗಳನ್ನು ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು.

2 / 7
ಇತ್ತ ಹರ್ಷಿಕ್ ರಾಣಾ ಕೂಡ ಮಾಯಾಂಕ್ ಅಗರ್ವಾಲ್ ವಿಕೆಟ್​ಗಾಗಿ ಪರಿತಪಿಸುತ್ತಿದ್ದರು. ಅದರಂತೆ ರಾಣಾ ಎಸೆದ 6ನೇ ಓವರ್​ನ ಮೂರನೇ ಎಸೆತವನ್ನು ಮಯಾಂಕ್ ಲೈಗ್​ ಸೈಡ್​ನತ್ತ ಬಾರಿಸಿದ್ದರು. ಆದರೆ ಅದಾಗಲೇ ಕ್ಯಾಚ್​ಗಾಗಿ ಬೌಂಡರಿ ಲೈನ್​ ಬಳಿ ಕಾದು ಕುಳಿತಿದ್ದ ರಿಂಕು ಸಿಂಗ್ ಚೆಂಡನ್ನು ಹಿಡಿದರು.

ಇತ್ತ ಹರ್ಷಿಕ್ ರಾಣಾ ಕೂಡ ಮಾಯಾಂಕ್ ಅಗರ್ವಾಲ್ ವಿಕೆಟ್​ಗಾಗಿ ಪರಿತಪಿಸುತ್ತಿದ್ದರು. ಅದರಂತೆ ರಾಣಾ ಎಸೆದ 6ನೇ ಓವರ್​ನ ಮೂರನೇ ಎಸೆತವನ್ನು ಮಯಾಂಕ್ ಲೈಗ್​ ಸೈಡ್​ನತ್ತ ಬಾರಿಸಿದ್ದರು. ಆದರೆ ಅದಾಗಲೇ ಕ್ಯಾಚ್​ಗಾಗಿ ಬೌಂಡರಿ ಲೈನ್​ ಬಳಿ ಕಾದು ಕುಳಿತಿದ್ದ ರಿಂಕು ಸಿಂಗ್ ಚೆಂಡನ್ನು ಹಿಡಿದರು.

3 / 7
ಮಯಾಂಕ್ ಅಗರ್ವಾಲ್ ಅವರ ವಿಕೆಟ್​ ಸಿಗುತ್ತಿದ್ದಂತೆ ಹರ್ಷಿತ್ ರಾಣಾ ಫ್ಲೈಯಿಂಗ್ ಕಿಸ್ ಕೊಡುವ ಮೂಲಕ ಬೀಳ್ಕೊಟ್ಟರು. ಇದರಿಂದ ಕುಪಿತಗೊಂಡ ಮಯಾಂಕ್ ಅಗರ್ವಾಲ್ ರಾಣಾರನ್ನು ಗುರಾಯಿಸಲಾರಂಭಿಸಿದರು.

ಮಯಾಂಕ್ ಅಗರ್ವಾಲ್ ಅವರ ವಿಕೆಟ್​ ಸಿಗುತ್ತಿದ್ದಂತೆ ಹರ್ಷಿತ್ ರಾಣಾ ಫ್ಲೈಯಿಂಗ್ ಕಿಸ್ ಕೊಡುವ ಮೂಲಕ ಬೀಳ್ಕೊಟ್ಟರು. ಇದರಿಂದ ಕುಪಿತಗೊಂಡ ಮಯಾಂಕ್ ಅಗರ್ವಾಲ್ ರಾಣಾರನ್ನು ಗುರಾಯಿಸಲಾರಂಭಿಸಿದರು.

4 / 7
ಅಲ್ಲದೆ ಹರ್ಷಿತ್ ರಾಣಾರನ್ನು ದಿಟ್ಟಿಸುತ್ತಾ ಮಯಾಂಕ್ ಅಗರ್ವಾಲ್ ಪೆವಿಲಿಯನ್​ನತ್ತ ಹೆಜ್ಜೆಹಾಕಿದರು. ಇತ್ತ ರಾಣಾ ಕೂಡ ಮಯಾಂಕ್​ ಕಣ್ಣೋಟಕ್ಕೆ ಕಣ್ಣು ನೀಡುವ ಮೂಲಕ ತಾನೇನು ಕಮ್ಮಿಯಿಲ್ಲ ಎಂಬುದನ್ನು ತೋರಿಸಿದರು. ಇದೀಗ ಭಾರತೀಯ ಆಟಗಾರಿಬ್ಬರ ಈ ಜಿದ್ದಾಜಿದ್ದಿನ ಕಣ್ಣೋಟವು ಮುಂದಿನ ಹಂತಕ್ಕೋಗುವ ಸೂಚನೆಯಿದೆ.

ಅಲ್ಲದೆ ಹರ್ಷಿತ್ ರಾಣಾರನ್ನು ದಿಟ್ಟಿಸುತ್ತಾ ಮಯಾಂಕ್ ಅಗರ್ವಾಲ್ ಪೆವಿಲಿಯನ್​ನತ್ತ ಹೆಜ್ಜೆಹಾಕಿದರು. ಇತ್ತ ರಾಣಾ ಕೂಡ ಮಯಾಂಕ್​ ಕಣ್ಣೋಟಕ್ಕೆ ಕಣ್ಣು ನೀಡುವ ಮೂಲಕ ತಾನೇನು ಕಮ್ಮಿಯಿಲ್ಲ ಎಂಬುದನ್ನು ತೋರಿಸಿದರು. ಇದೀಗ ಭಾರತೀಯ ಆಟಗಾರಿಬ್ಬರ ಈ ಜಿದ್ದಾಜಿದ್ದಿನ ಕಣ್ಣೋಟವು ಮುಂದಿನ ಹಂತಕ್ಕೋಗುವ ಸೂಚನೆಯಿದೆ.

5 / 7
ಅಂದರೆ ಉಭಯ ತಂಡಗಳು ಹೈದರಾಬಾದ್​ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದ್ದು, ಈ ವೇಳೆ ಹರ್ಷಿತ್ ರಾಣಾ ಹಾಗೂ ಮಯಾಂಕ್ ಅಗರ್ವಾಲ್ ನಡುವಣ ಕಣ್ಣಲ್ಲೇ ಕಿತ್ತಾಟ ಮುಂದುವರೆಯುವ ಸಾಧ್ಯತೆಯಿದೆ.

ಅಂದರೆ ಉಭಯ ತಂಡಗಳು ಹೈದರಾಬಾದ್​ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದ್ದು, ಈ ವೇಳೆ ಹರ್ಷಿತ್ ರಾಣಾ ಹಾಗೂ ಮಯಾಂಕ್ ಅಗರ್ವಾಲ್ ನಡುವಣ ಕಣ್ಣಲ್ಲೇ ಕಿತ್ತಾಟ ಮುಂದುವರೆಯುವ ಸಾಧ್ಯತೆಯಿದೆ.

6 / 7
ಇದಾಗ್ಯೂ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಹರ್ಷಿತ್ ರಾಣಾ ಯಶಸ್ವಿಯಾದರು. ಕೊನೆಯ ಓವರ್​ನಲ್ಲಿ 13 ರನ್​ಗಳ ಗುರಿ ಪಡೆದಿದ್ದ ಎಸ್​ಆರ್​ಹೆಚ್ ತಂಡವನ್ನು 204 ರನ್​ಗಳಿಗೆ ನಿಯಂತ್ರಿಸುವ ಮೂಲಕ ಹರ್ಷಿತ್ ರಾಣಾ ಕೆಕೆಆರ್ ತಂಡಕ್ಕೆ 4 ರನ್​ಗಳ ರೋಚಕ ಜಯ ತಂದುಕೊಟ್ಟರು.

ಇದಾಗ್ಯೂ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಹರ್ಷಿತ್ ರಾಣಾ ಯಶಸ್ವಿಯಾದರು. ಕೊನೆಯ ಓವರ್​ನಲ್ಲಿ 13 ರನ್​ಗಳ ಗುರಿ ಪಡೆದಿದ್ದ ಎಸ್​ಆರ್​ಹೆಚ್ ತಂಡವನ್ನು 204 ರನ್​ಗಳಿಗೆ ನಿಯಂತ್ರಿಸುವ ಮೂಲಕ ಹರ್ಷಿತ್ ರಾಣಾ ಕೆಕೆಆರ್ ತಂಡಕ್ಕೆ 4 ರನ್​ಗಳ ರೋಚಕ ಜಯ ತಂದುಕೊಟ್ಟರು.

7 / 7
Follow Us
‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಶಿವಲಿಂಗೇಗೌಡ
‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಶಿವಲಿಂಗೇಗೌಡ
ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ಜಮೀರ್​​ ಹೇಳಿದ್ದೇನು?
ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ಜಮೀರ್​​ ಹೇಳಿದ್ದೇನು?
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ