AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Auction 2025: ಆರ್​ಸಿಬಿ ಟಾರ್ಗೆಟ್ ಲಿಸ್ಟ್​ನಲ್ಲಿ 7 ಆಟಗಾರರು

RCB IPL Auction 2025: ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್​ಸಿಬಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ತಂಡದಲ್ಲಿ ಕೇವಲ 3 ಆಟಗಾರರಿದ್ದು, ಉಳಿದ ಸ್ಲಾಟ್​ಗಳಿಗೆ ಯಾರ್ಯಾರು ಭರ್ತಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಆರ್​ಸಿಬಿ ಈ 7 ಆಟಗಾರರನ್ನು ಖರೀದಿಸಲು ಮುಂದಾಗುವ ಸಾಧ್ಯತೆಗಳಿವೆ.

ಪೃಥ್ವಿಶಂಕರ
|

Updated on: Nov 23, 2024 | 7:48 PM

Share
ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಎಲ್ಲಾ 10 ಫ್ರಾಂಚೈಸಿಗಳು ಸಕಲ ತಂತ್ರಗಳೊಂದಿಗೆ ಯಾರ್ಯಾರನ್ನು ತಮ್ಮ ಖಾತೆಗೆ ಹಾಕಿಕೊಳ್ಳಬೇಕು ಎಂಬ ಲೆಕ್ಕಾಚಾರವನ್ನು ಅಂತಿಮಗೊಳಿಸಿಕೊಂಡಿವೆ. ಆ 10 ಫ್ರಾಂಚೈಸಿಗಳ ಪೈಕಿ ಆರ್​ಸಿಬಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ತಂಡದಲ್ಲಿ ಕೇವಲ 3 ಆಟಗಾರರಿದ್ದು, ಉಳಿದ ಸ್ಲಾಟ್​ಗಳಿಗೆ ಯಾರ್ಯಾರು ಭರ್ತಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಆರ್​ಸಿಬಿ ಈ 7 ಆಟಗಾರರನ್ನು ಖರೀದಿಸಲು ಮುಂದಾಗುವ ಸಾಧ್ಯತೆಗಳಿವೆ.

ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಎಲ್ಲಾ 10 ಫ್ರಾಂಚೈಸಿಗಳು ಸಕಲ ತಂತ್ರಗಳೊಂದಿಗೆ ಯಾರ್ಯಾರನ್ನು ತಮ್ಮ ಖಾತೆಗೆ ಹಾಕಿಕೊಳ್ಳಬೇಕು ಎಂಬ ಲೆಕ್ಕಾಚಾರವನ್ನು ಅಂತಿಮಗೊಳಿಸಿಕೊಂಡಿವೆ. ಆ 10 ಫ್ರಾಂಚೈಸಿಗಳ ಪೈಕಿ ಆರ್​ಸಿಬಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ತಂಡದಲ್ಲಿ ಕೇವಲ 3 ಆಟಗಾರರಿದ್ದು, ಉಳಿದ ಸ್ಲಾಟ್​ಗಳಿಗೆ ಯಾರ್ಯಾರು ಭರ್ತಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಆರ್​ಸಿಬಿ ಈ 7 ಆಟಗಾರರನ್ನು ಖರೀದಿಸಲು ಮುಂದಾಗುವ ಸಾಧ್ಯತೆಗಳಿವೆ.

1 / 8
ಆರ್​ಸಿಬಿಯ ಮೊದಲ ಆಯ್ಕೆಯಾಗಿ ಕೆಎಲ್ ರಾಹುಲ್ ಹೆಸರಿರುವುದು ಖಚಿತ ಎಂದು ಹೇಳಲಾಗುತ್ತಿದೆ. ಹೇಳಿ ಕೇಳಿ ಕನ್ನಡದ ಹುಡುಗನಾಗಿರುವ ರಾಹುಲ್ ಖರೀದಿಗೆ ಆರ್​ಸಿಬಿ ಮುಂದಾಗಬಹುದು. ಅಲ್ಲದೆ ಈ ಹಿಂದೆ ಆರ್​​ಸಿಬಿ ಪರ ಆಡಿರುವ ರಾಹುಲ್, ಮತ್ತೆ ತಂಡ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿರುವುದು ಕೂಡ ಇದಕ್ಕೆ ಪೂರಕವಾಗಿದೆ.

ಆರ್​ಸಿಬಿಯ ಮೊದಲ ಆಯ್ಕೆಯಾಗಿ ಕೆಎಲ್ ರಾಹುಲ್ ಹೆಸರಿರುವುದು ಖಚಿತ ಎಂದು ಹೇಳಲಾಗುತ್ತಿದೆ. ಹೇಳಿ ಕೇಳಿ ಕನ್ನಡದ ಹುಡುಗನಾಗಿರುವ ರಾಹುಲ್ ಖರೀದಿಗೆ ಆರ್​ಸಿಬಿ ಮುಂದಾಗಬಹುದು. ಅಲ್ಲದೆ ಈ ಹಿಂದೆ ಆರ್​​ಸಿಬಿ ಪರ ಆಡಿರುವ ರಾಹುಲ್, ಮತ್ತೆ ತಂಡ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿರುವುದು ಕೂಡ ಇದಕ್ಕೆ ಪೂರಕವಾಗಿದೆ.

2 / 8
ರಾಹುಲ್​ಗಿಂತ ಮುಂಚಿತವಾಗಿ ರಿಷಬ್ ಪಂತ್ ಹರಾಜಿಗೆ ಬರುವ ಕಾರಣ ಆರ್​ಸಿಬಿ, ಪಂತ್​ ಮೇಲು ಕಣ್ಣಿಟ್ಟಿದೆ. ಪಂತ್ ಆಗಮನದಿಂದ ತಂಡಕ್ಕೆ ಮೂರು ಉಪಯೋಗಗಳಾಗಲಿದ್ದು, ವಿಕೆಟ್ ಕೀಪರ್ ಜೊತೆಗೆ ನಾಯಕನ ಆಯ್ಕೆಯೂ ಸಿಗಲಿದೆ. ಹೀಗಾಗಿ ಪಂತ್​ ಕೂಡ ಆರ್​ಸಿಬಿ ಟಾರ್ಗೆಟ್ ಲಿಸ್ಟ್​ನಲ್ಲಿದ್ದಾರೆ.

ರಾಹುಲ್​ಗಿಂತ ಮುಂಚಿತವಾಗಿ ರಿಷಬ್ ಪಂತ್ ಹರಾಜಿಗೆ ಬರುವ ಕಾರಣ ಆರ್​ಸಿಬಿ, ಪಂತ್​ ಮೇಲು ಕಣ್ಣಿಟ್ಟಿದೆ. ಪಂತ್ ಆಗಮನದಿಂದ ತಂಡಕ್ಕೆ ಮೂರು ಉಪಯೋಗಗಳಾಗಲಿದ್ದು, ವಿಕೆಟ್ ಕೀಪರ್ ಜೊತೆಗೆ ನಾಯಕನ ಆಯ್ಕೆಯೂ ಸಿಗಲಿದೆ. ಹೀಗಾಗಿ ಪಂತ್​ ಕೂಡ ಆರ್​ಸಿಬಿ ಟಾರ್ಗೆಟ್ ಲಿಸ್ಟ್​ನಲ್ಲಿದ್ದಾರೆ.

3 / 8
ಆರ್​ಸಿಬಿಯ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್‌ ಕೂಡ ಮತ್ತೆ ಆರ್​ಸಿಬಿಗೆ ಸೇರುವ ಸಾಧ್ಯತೆಗಳಿವೆ. ನಾಯನಾಗಿ ಫಾಫ್ ಫೇಲ್ ಆಗಿದ್ದರೂ ಆಟಗಾರನಾಗಿ ಅವರ ಪ್ರದರ್ಶನ ಅಮೋಘವಾಗಿದೆ. ಹೀಗಾಗಿ ಆರ್​ಸಿಬಿ ಬಳಿ ಮೂರು ಆರ್​ಟಿಎಮ್ ಕಾರ್ಡ್​ ಇರುವ ಕಾರಣ, ಫಾಫ್ ಮೇಲೆ ಆರ್​ಸಿಬಿ ಅದನ್ನು ಬಳಸುವ ಸಾಧ್ಯತೆಗಳಿವೆ.

ಆರ್​ಸಿಬಿಯ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್‌ ಕೂಡ ಮತ್ತೆ ಆರ್​ಸಿಬಿಗೆ ಸೇರುವ ಸಾಧ್ಯತೆಗಳಿವೆ. ನಾಯನಾಗಿ ಫಾಫ್ ಫೇಲ್ ಆಗಿದ್ದರೂ ಆಟಗಾರನಾಗಿ ಅವರ ಪ್ರದರ್ಶನ ಅಮೋಘವಾಗಿದೆ. ಹೀಗಾಗಿ ಆರ್​ಸಿಬಿ ಬಳಿ ಮೂರು ಆರ್​ಟಿಎಮ್ ಕಾರ್ಡ್​ ಇರುವ ಕಾರಣ, ಫಾಫ್ ಮೇಲೆ ಆರ್​ಸಿಬಿ ಅದನ್ನು ಬಳಸುವ ಸಾಧ್ಯತೆಗಳಿವೆ.

4 / 8
ಡು ಪ್ಲೆಸಿಸ್‌ನಂತೆ, ಜ್ಯಾಕ್ಸ್ ಕೂಡ ಈ ಮೊದಲ  ಆರ್​ಸಿಬಿ ಪರ ಆಡಿದ್ದಾರೆ. ಅಲ್ಲದೆ ಅವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದರು. ಇದರ ಜೊತೆಗೆ ಆಫ್-ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಜ್ಯಾಕ್ಸ್, ಆರ್​ಸಿಬಿಯಲ್ಲಿ ಮ್ಯಾಕ್ಸ್‌ವೆಲ್ ಸ್ಥಾನವನ್ನು ತುಂಬಬಹುದು.

ಡು ಪ್ಲೆಸಿಸ್‌ನಂತೆ, ಜ್ಯಾಕ್ಸ್ ಕೂಡ ಈ ಮೊದಲ ಆರ್​ಸಿಬಿ ಪರ ಆಡಿದ್ದಾರೆ. ಅಲ್ಲದೆ ಅವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದರು. ಇದರ ಜೊತೆಗೆ ಆಫ್-ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಜ್ಯಾಕ್ಸ್, ಆರ್​ಸಿಬಿಯಲ್ಲಿ ಮ್ಯಾಕ್ಸ್‌ವೆಲ್ ಸ್ಥಾನವನ್ನು ತುಂಬಬಹುದು.

5 / 8
ಪಂಜಾಬ್ ಪರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅರ್ಷದೀಪ್ ಸಿಂಗ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತ ಟಿ20 ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿರುವ ಅರ್ಷದೀಪ್, ಆರ್​ಸಿಬಿಗೆ ಬಂದರೆ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಉತ್ತಮವಾಗಲಿದೆ.

ಪಂಜಾಬ್ ಪರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅರ್ಷದೀಪ್ ಸಿಂಗ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತ ಟಿ20 ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿರುವ ಅರ್ಷದೀಪ್, ಆರ್​ಸಿಬಿಗೆ ಬಂದರೆ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಉತ್ತಮವಾಗಲಿದೆ.

6 / 8
ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಆಸೀಸ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮೇಲು ಆರ್​ಸಿಬಿ ಕಣ್ಣಿಟ್ಟಿದೆ. ಸ್ಟೊಯಿನಿಸ್ ಆಗಮನದಿಂದ ತಂಡದ ಕೆಳ ಕ್ರಮಾಂಕ ಬಲಿಷ್ಠವಾಗುವುದಲ್ಲದೆ ಬೌಲಿಂಗ್ ಆಯ್ಕೆಯೂ ಸಿಗಲಿದೆ. ಅಲ್ಲದೆ ಈ ಹಿಂದೆ ಆರ್​ಸಿಬಿ ಪರ ಆಡಿರುವ ಸ್ಟೊಯಿನಿಸ್ ಖರೀದಿಗೆ ಆರ್​ಸಿಬಿ ಮುಂದಾಗಬಹುದು.

ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಆಸೀಸ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮೇಲು ಆರ್​ಸಿಬಿ ಕಣ್ಣಿಟ್ಟಿದೆ. ಸ್ಟೊಯಿನಿಸ್ ಆಗಮನದಿಂದ ತಂಡದ ಕೆಳ ಕ್ರಮಾಂಕ ಬಲಿಷ್ಠವಾಗುವುದಲ್ಲದೆ ಬೌಲಿಂಗ್ ಆಯ್ಕೆಯೂ ಸಿಗಲಿದೆ. ಅಲ್ಲದೆ ಈ ಹಿಂದೆ ಆರ್​ಸಿಬಿ ಪರ ಆಡಿರುವ ಸ್ಟೊಯಿನಿಸ್ ಖರೀದಿಗೆ ಆರ್​ಸಿಬಿ ಮುಂದಾಗಬಹುದು.

7 / 8
ಕಳೆದ ಕೆಲವು ಆವೃತ್ತಿಗಳಲ್ಲಿ ಆರ್​ಸಿಬಿಗೆ ಪ್ರಮುಖವಾಗಿ ಕಾಡಿದ್ದು, ಒಬ್ಬ ಉತ್ತಮ ಸ್ಪಿನ್ನರ್​ನ ಕೊರತೆ. 2022 ರ ಮೆಗಾ ಹರಾಜಿನಲ್ಲಿ ಆರ್​ಸಿಬಿಯಿಂದ ರಾಜಸ್ಥಾನ ತಂಡಕ್ಕೆ ಯುಜ್ವೇಂದ್ರ ಚಹಾಲ್ ಹೋದ ಬಳಿಕ ಆ ಸ್ಥಾನವನ್ನು ತುಂಬಲು ಇದುವರೆಗು ಯಾರಿಗೂ ಸಾಧ್ಯವಾಗಿಲ್ಲ. ಹೀಗಾಗಿ ಚಹಾಲ್ ಮತ್ತೊಮ್ಮೆ ಆರ್​ಸಿಬಿ ಪಾಳಯವನ್ನು ಸೇರಬಹುದು ಎನ್ನಲಾಗುತ್ತಿದೆ.

ಕಳೆದ ಕೆಲವು ಆವೃತ್ತಿಗಳಲ್ಲಿ ಆರ್​ಸಿಬಿಗೆ ಪ್ರಮುಖವಾಗಿ ಕಾಡಿದ್ದು, ಒಬ್ಬ ಉತ್ತಮ ಸ್ಪಿನ್ನರ್​ನ ಕೊರತೆ. 2022 ರ ಮೆಗಾ ಹರಾಜಿನಲ್ಲಿ ಆರ್​ಸಿಬಿಯಿಂದ ರಾಜಸ್ಥಾನ ತಂಡಕ್ಕೆ ಯುಜ್ವೇಂದ್ರ ಚಹಾಲ್ ಹೋದ ಬಳಿಕ ಆ ಸ್ಥಾನವನ್ನು ತುಂಬಲು ಇದುವರೆಗು ಯಾರಿಗೂ ಸಾಧ್ಯವಾಗಿಲ್ಲ. ಹೀಗಾಗಿ ಚಹಾಲ್ ಮತ್ತೊಮ್ಮೆ ಆರ್​ಸಿಬಿ ಪಾಳಯವನ್ನು ಸೇರಬಹುದು ಎನ್ನಲಾಗುತ್ತಿದೆ.

8 / 8
Follow Us
ಆಸ್ಟ್ರೇಲಿಯಾದಲ್ಲಿ ಭಾರತೀಯರಿಂದ ಮೋದಿಗೆ ಭವ್ಯ ಸ್ವಾಗತ; ವಂದೇ ಮಾತರಂ ಜೈಕಾರ
ಆಸ್ಟ್ರೇಲಿಯಾದಲ್ಲಿ ಭಾರತೀಯರಿಂದ ಮೋದಿಗೆ ಭವ್ಯ ಸ್ವಾಗತ; ವಂದೇ ಮಾತರಂ ಜೈಕಾರ
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ