AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಮದುವೆಗೆ ದುಂದು ವೆಚ್ಚ ಮಾಡದೆ ಅದೇ ಖರ್ಚಿನಲ್ಲಿ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ

ಬೆಂಗಳೂರು ಗ್ರಾಮಾಂತರದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ತಂದೆಯೊಬ್ಬರು ತಮ್ಮ ಮಗನ ಮದುವೆಯನ್ನು ಆಡಂಬರವಿಲ್ಲದೆ ಮಾಡಿ, ಅದೇ ಖರ್ಚಿನಲ್ಲಿ 11 ಬಡ ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿಸಿ ಮಾದರಿಯಾಗಿದ್ದಾರೆ. ಆ ಮೂಲಕ ಸರಳ ವಿವಾಹದ ಮಹತ್ವವನ್ನು ಎತ್ತಿ ಹೇಳಿದ್ದಾರೆ. ಫೋಟೋಸ್​ ಇಲ್ಲಿವೆ ನೋಡಿ.

ನವೀನ್ ಕುಮಾರ್ ಟಿ
| Edited By: |

Updated on:Jul 29, 2025 | 8:49 AM

Share
ಮದುವೆ ಅಂದರೆ ಸಾಕು ಅಲ್ಲಿ ಆಡಂಬರ, ಸಡಗರ-ಸಂಭ್ರಮ ಎದ್ದು ಕಾಣುವುದು ಸಹಜ. ಅದರಲ್ಲೂ ಮರ್ಯಾದೆ ಪ್ರಶ್ನೆ ಅಂತ ಬಹುತೇಕರು ಸಾಲ ಸೋಲ ಮಾಡಿ ಮದುವೆ ಮಾಡುತ್ತಾರೆ. ಆದರೆ ಇಂತವರ ನಡುವೆ ಇಲ್ಲೊಂದು ಕಡೆ ಲಕ್ಷ ಲಕ್ಷ ಹಣವಿದ್ದರೂ ಮಗನ ಮದುವೆಗೆ ದುಂದು ವೆಚ್ಚ ಮಾಡದೆ ಅದೇ ಖರ್ಚಿನಲ್ಲಿ 11 ನವಜೋಡಿ ಮದುವೆ ಮಾಡಿಸುವ ಮೂಲಕ ಮಾನವೀಯತೆ ಮೆರೆದು ಮಾದರಿ ಆಗಿದ್ದಾರೆ.   

ಮದುವೆ ಅಂದರೆ ಸಾಕು ಅಲ್ಲಿ ಆಡಂಬರ, ಸಡಗರ-ಸಂಭ್ರಮ ಎದ್ದು ಕಾಣುವುದು ಸಹಜ. ಅದರಲ್ಲೂ ಮರ್ಯಾದೆ ಪ್ರಶ್ನೆ ಅಂತ ಬಹುತೇಕರು ಸಾಲ ಸೋಲ ಮಾಡಿ ಮದುವೆ ಮಾಡುತ್ತಾರೆ. ಆದರೆ ಇಂತವರ ನಡುವೆ ಇಲ್ಲೊಂದು ಕಡೆ ಲಕ್ಷ ಲಕ್ಷ ಹಣವಿದ್ದರೂ ಮಗನ ಮದುವೆಗೆ ದುಂದು ವೆಚ್ಚ ಮಾಡದೆ ಅದೇ ಖರ್ಚಿನಲ್ಲಿ 11 ನವಜೋಡಿ ಮದುವೆ ಮಾಡಿಸುವ ಮೂಲಕ ಮಾನವೀಯತೆ ಮೆರೆದು ಮಾದರಿ ಆಗಿದ್ದಾರೆ.   

1 / 7
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಂಬಳಿಪುರದ ಕಾಟೇರಮ್ಮ ದೇವಸ್ಥಾನದಲ್ಲಿ ಮಗನ ಮದುವೆ ಜೊತೆಗೆ ಇತರೆ 11 ನವಜೋಡಿಗಳ ಸಾಮೂಹಿಕ ಮದುವೆ ಮಾಡುವ ಮೂಲಕ ತಂದೆಯೊಬ್ಬರು ಮಾದರಿಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಂಬಳಿಪುರದ ಕಾಟೇರಮ್ಮ ದೇವಸ್ಥಾನದಲ್ಲಿ ಮಗನ ಮದುವೆ ಜೊತೆಗೆ ಇತರೆ 11 ನವಜೋಡಿಗಳ ಸಾಮೂಹಿಕ ಮದುವೆ ಮಾಡುವ ಮೂಲಕ ತಂದೆಯೊಬ್ಬರು ಮಾದರಿಯಾಗಿದ್ದಾರೆ.

2 / 7
ಕಾಟೇರಮ್ಮ ದೇವಸ್ತಾನದ ಧರ್ಮದರ್ಶಿಯಾಗಿರುವ ರಾಮು ಎಂಬುವವರು ಸೋಮವಾರ ತಮ್ಮ ಮಗನ ವಿವಾಹವನ್ನ ಮಾಡಿದ್ದಾರೆ. ಯಾವುದೇ ರೀತಿಯ ದುಂದು ವೆಚ್ಚ ಮಾಡದೆ ಅದೇ ಹಣದಲ್ಲಿ ಬಡ ಮತ್ತು ಮಧ್ಯಮ ವರ್ಗದ 11 ಜನ ನವ ಜೋಡಿಗಳಿಗೆ ಮದುವೆ ಮಾಡಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ವೇದಿಕೆ ನಿರ್ಮಾಣ ಮಾಡಿ ನಾಲ್ಕೈದು ಜನ ಪಂಡಿತರೊಂದಿಗೆ 11 ನವಜೋಡಿಗಳಿಗೆ ಕಂಕಣ ಭಾಗ್ಯ ನೀಡಿದ್ದಾರೆ.

ಕಾಟೇರಮ್ಮ ದೇವಸ್ತಾನದ ಧರ್ಮದರ್ಶಿಯಾಗಿರುವ ರಾಮು ಎಂಬುವವರು ಸೋಮವಾರ ತಮ್ಮ ಮಗನ ವಿವಾಹವನ್ನ ಮಾಡಿದ್ದಾರೆ. ಯಾವುದೇ ರೀತಿಯ ದುಂದು ವೆಚ್ಚ ಮಾಡದೆ ಅದೇ ಹಣದಲ್ಲಿ ಬಡ ಮತ್ತು ಮಧ್ಯಮ ವರ್ಗದ 11 ಜನ ನವ ಜೋಡಿಗಳಿಗೆ ಮದುವೆ ಮಾಡಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ವೇದಿಕೆ ನಿರ್ಮಾಣ ಮಾಡಿ ನಾಲ್ಕೈದು ಜನ ಪಂಡಿತರೊಂದಿಗೆ 11 ನವಜೋಡಿಗಳಿಗೆ ಕಂಕಣ ಭಾಗ್ಯ ನೀಡಿದ್ದಾರೆ.

3 / 7
ತಂದೆ-ತಾಯಿ ಮತ್ತು ಕುಟುಂಬ ಸದಸ್ಯರು ಹಾಗೂ ಭಕ್ತರ ಸಮ್ಮುಖದಲ್ಲಿ ತಮ್ಮ ಮಗನ ಮದುವೆ ಜೊತೆಗೆ 11 ನವಜೋಡಿಗಳ ಮದುವೆ ಮಾಡಿದ್ದು, ಆ ಮೂಲಕ ಮದುವೆಗೆ ದುಂದು ವೆಚ್ಚ ಮಾಡುವ ಬದಲು ಕಷ್ಟದಲ್ಲಿರುವವರಿಗೆ ನೆರವಾಗುವಂತೆ ರಾಮು ಅವರು ಸಂದೇಶ ಸಾರಿದ್ದಾರೆ.

ತಂದೆ-ತಾಯಿ ಮತ್ತು ಕುಟುಂಬ ಸದಸ್ಯರು ಹಾಗೂ ಭಕ್ತರ ಸಮ್ಮುಖದಲ್ಲಿ ತಮ್ಮ ಮಗನ ಮದುವೆ ಜೊತೆಗೆ 11 ನವಜೋಡಿಗಳ ಮದುವೆ ಮಾಡಿದ್ದು, ಆ ಮೂಲಕ ಮದುವೆಗೆ ದುಂದು ವೆಚ್ಚ ಮಾಡುವ ಬದಲು ಕಷ್ಟದಲ್ಲಿರುವವರಿಗೆ ನೆರವಾಗುವಂತೆ ರಾಮು ಅವರು ಸಂದೇಶ ಸಾರಿದ್ದಾರೆ.

4 / 7
ಬೆಳಗ್ಗೆ ದೇವಸ್ಥಾನದಲ್ಲಿ ಮಗನ ಮದುವೆ ಮಾಡಿದ ನಂತರ ಅದೇ ವೇದಿಕೆಯಲ್ಲಿ 11 ನವಜೋಡಿಗಳಿಗೆ ಕಲ್ಯಾಣ ಮಾಡಿಸಿದ್ದಾರೆ. ಜೊತೆಗೆ ನೂತನವಾಗಿ ದೇವಸ್ತಾನದಲ್ಲಿ ಸಾಮೂಹಿಕ ವಿವಾಗದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಲ್ಲಿ ವಧುವಿಗೆ ಸೀರೆ, ವರನಿಗೆ ಶರ್ಟ್, ಪಂಚೆ, ಪೇಟ, ಚಿನ್ನದ ತಾಳಿ ಮತ್ತು 10 ಸಾವಿರ ರೂ ನಗದು ಉಡುಗೊರೆ ನೀಡಿದ್ದಾರೆ.

ಬೆಳಗ್ಗೆ ದೇವಸ್ಥಾನದಲ್ಲಿ ಮಗನ ಮದುವೆ ಮಾಡಿದ ನಂತರ ಅದೇ ವೇದಿಕೆಯಲ್ಲಿ 11 ನವಜೋಡಿಗಳಿಗೆ ಕಲ್ಯಾಣ ಮಾಡಿಸಿದ್ದಾರೆ. ಜೊತೆಗೆ ನೂತನವಾಗಿ ದೇವಸ್ತಾನದಲ್ಲಿ ಸಾಮೂಹಿಕ ವಿವಾಗದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಲ್ಲಿ ವಧುವಿಗೆ ಸೀರೆ, ವರನಿಗೆ ಶರ್ಟ್, ಪಂಚೆ, ಪೇಟ, ಚಿನ್ನದ ತಾಳಿ ಮತ್ತು 10 ಸಾವಿರ ರೂ ನಗದು ಉಡುಗೊರೆ ನೀಡಿದ್ದಾರೆ.

5 / 7
ಇನ್ನೂ ವಿವಾಹಕ್ಕೆ ಬಂದ ತಮ್ಮ ಬಂದು ಬಳಗ ಸೇರಿದಂತೆ 11 ನವ ದಂಪತಿಗಳ ಕುಟುಂಬಸ್ಥರು, ಭಕ್ತರಿಗೆಲ್ಲ ದೇವಸ್ಥಾನದಲ್ಲಿ ಮದುವೆ ಊಟವನ್ನು ಹಾಕಿಸಿ ಸರಳ ವಿವಾಹಕ್ಕೆ ಒತ್ತು ನೀಡುವಂತೆ ಜಾಗೃತಿ ಮೂಡಿಸಿದರು.

ಇನ್ನೂ ವಿವಾಹಕ್ಕೆ ಬಂದ ತಮ್ಮ ಬಂದು ಬಳಗ ಸೇರಿದಂತೆ 11 ನವ ದಂಪತಿಗಳ ಕುಟುಂಬಸ್ಥರು, ಭಕ್ತರಿಗೆಲ್ಲ ದೇವಸ್ಥಾನದಲ್ಲಿ ಮದುವೆ ಊಟವನ್ನು ಹಾಕಿಸಿ ಸರಳ ವಿವಾಹಕ್ಕೆ ಒತ್ತು ನೀಡುವಂತೆ ಜಾಗೃತಿ ಮೂಡಿಸಿದರು.

6 / 7
ಒಟ್ಟಾರೆ ಆಡಂಬರದ ಮದುವೆಗಾಗಿ ಆಸ್ತಿ-ಪಾಸ್ತಿ ಮಾರಿ ಸಾಲ ಸೋಲ ಮಾಡಿ ಪರದಾಡುವ ಸಾಕಷ್ಟು ಜನರ ನಡುವೆ ಆಡಂಬರದ ಮದುವೆ ಮಾಡುವ ಶಕ್ತಿ ಇದ್ದರೂ ಸರಳವಾಗಿ ಮಗನ ಮದುವೆ ಮಾಡುವುದಲ್ಲದೆ ಅದೇ ವೇದಿಕೆಯಲ್ಲಿ 11 ನವ ಜೋಡಿಗಳಗೆ ಕಂಕಣ ಭಾಗ್ಯ ಕಲ್ಪಿಸಿರುವುದು ನಿಜಕ್ಕೂ ಮಾದರಿ.

ಒಟ್ಟಾರೆ ಆಡಂಬರದ ಮದುವೆಗಾಗಿ ಆಸ್ತಿ-ಪಾಸ್ತಿ ಮಾರಿ ಸಾಲ ಸೋಲ ಮಾಡಿ ಪರದಾಡುವ ಸಾಕಷ್ಟು ಜನರ ನಡುವೆ ಆಡಂಬರದ ಮದುವೆ ಮಾಡುವ ಶಕ್ತಿ ಇದ್ದರೂ ಸರಳವಾಗಿ ಮಗನ ಮದುವೆ ಮಾಡುವುದಲ್ಲದೆ ಅದೇ ವೇದಿಕೆಯಲ್ಲಿ 11 ನವ ಜೋಡಿಗಳಗೆ ಕಂಕಣ ಭಾಗ್ಯ ಕಲ್ಪಿಸಿರುವುದು ನಿಜಕ್ಕೂ ಮಾದರಿ.

7 / 7

Published On - 8:48 am, Tue, 29 July 25

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!