- Kannada News Photo gallery Dharwad Worms found in school meal they are pieces of alasande grain says Officials at Dharwad news in Kannada
ಧಾರವಾಡ: ತಟ್ಟೆಯಲ್ಲಿ ಹುಳಗಳನ್ನು ನೋಡಿ ಊಟ ಬಿಟ್ಟ ಶಾಲಾ ಮಕ್ಕಳು, ಅಲಸಂದೆ ಕಾಳಿನ ಸ್ಪಷ್ಟನೆ ನೀಡಿದ ಅಧಿಕಾರಿಗಳು
ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಅಕ್ಷರ ದಾಸೋಹದ ಊಟದಲ್ಲಿ ಹುಳಗಳು ಪತ್ತೆಯಾಗುತ್ತಿರುವ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆಯೂ ಕೆಲವೊಂದು ಶಾಲೆಯಗಳ ಊಟದಲ್ಲಿ ಹುಳಗಳು ಪತ್ತೆಯಾಗಿವೆ. ಇದೀಗ ನವಲಗುಂದ ತಾಲೂಕಿನ ಶಾಲೆಗಳಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ.
Updated on:Feb 16, 2023 | 5:55 PM

ಧಾರವಾಡ: ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಅಕ್ಷರ ದಾಸೋಹದ ಊಟದಲ್ಲಿ ಹುಳಗಳು ಪತ್ತೆಯಾಗುತ್ತಿರುವ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆಯೂ ಕೆಲವೊಂದು ಶಾಲೆಯಗಳ ಊಟದಲ್ಲಿ ಹುಳಗಳು ಪತ್ತೆಯಾಗಿವೆ. ಇದೀಗ ನವಲಗುಂದ ತಾಲೂಕಿನ ಶಾಲೆಗಳಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ.

ನವಲಗುಂದ ತಾಲೂಕಿನ ಬೆಳವಟಗಿ, ಕಡದಳ್ಳಿ, ಗುಡಿಸಾಗರ, ನಾಗನೂರ ಮಾರ್ಗದ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಊಟದಲ್ಲಿ ಹುಳಗಳು ಪತ್ತೆಯಾಗಿವೆ. ತಮ್ಮ ತಟ್ಟೆಯಲ್ಲಿ ಹುಳನ್ನು ನೋಡಿದ ವಿದ್ಯಾರ್ಥಿಗಳು ಊಟ ಮಾಡದೆ ಹಾಗೇ ಬಿಟ್ಟಿದ್ದಾರೆ.

ಈ ಶಾಲೆಗಳಿಗೆ ಎನ್ಜಿಒದಿಂದ ನಿತ್ಯ ಊಟ ಬರುತ್ತದೆ ಎಂದು ಜನರು ಆರೋಪಿಸುತ್ತಿದ್ದಾರೆ. ಹುಳ ಪತ್ತೆಯಾದ ಊಟ ಶಾಲೆಗಳಲ್ಲಿ ಹಾಗೇ ಉಳಿದಿದೆ.

ಇನ್ನು ಊಟದಲ್ಲಿ ಹುಳಗಳು ಪತ್ತೆಯಾದ ಬಗ್ಗೆ ಸ್ಪಷ್ಟನೆ ನೀಡಿದ ಎನ್ಜಿಓ ಹಾಗೂ ಅಧಿಕಾರಿಗಳು, ಅಲಸಂದೆ ಬೀಜದ ಮೊಳಕೆ ಮುರಿದು ಹುಳದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ಅಧಿಕಾರಿಗಳು ಅಲಸಂದೆ ಮೊಳಕೆ ತುಂಡುಗಳು ಅಂತ ಹೇಳಿ ಆತ ಎಡವಟ್ಟಿನಿಂದ ತಪ್ಪಿಸಿಕೊಳ್ಳಲು ಸ್ಪಷ್ಟನೆ ನೀಡಿದ್ದಾರೆ. ಆದರೆ ಇದನ್ನು ಗ್ರಾಮಸ್ಥರು ನಂಬಬೇಕೇ? ಹುಳಗಳನ್ನು ಅಲಸಂಡೆ ಎಂದ ಅಧಿಕಾರಿಗಳ ಮಾತನ್ನು ಗ್ರಾಮಸ್ಥರು ಒಪ್ಪಿಕೊಳ್ಳಲು ತಯಾರಿಲ್ಲ. ಹೀಗಾಗಿ ಊಟವನ್ನು ಮರಳಿ ಕಳಿಸಿದ್ದಾರೆ.
Published On - 5:40 pm, Thu, 16 February 23




