Kannada Sahitya Sammelana: ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಜನ ಮನ ಸೆಳೆದ ಫಲ ಪುಷ್ಪ ಪ್ರದರ್ಶನ: ಕಲ್ಲಂಗಡಿಯಲ್ಲಿ ಅರಳಿದ ನಟ ಅಪ್ಪು
Kannada Sahitya Sammelana Haveri: 86ನೇ ಕನ್ನಡ ಸಾಹಿತ್ಯ ಸಮ್ಮೆಳನ ಅದ್ಧೂರಿಯಾಗಿ ನಿನ್ನೆ(ಜ.6) ಆರಂಭವಾಗಿದ್ದು, 7 ಮತ್ತು 8ರ ವರೆಗೆ ಇರಲಿದೆ. ಕನ್ನಡ ಸಾಹಿತ್ಯ ಸಮ್ಮೆಳನದ ಎರಡೆನೇ ದಿನವಾದ ಇಂದು ಫಲ ಪುಷ್ಪ ಪ್ರದರ್ಶನ ಜನ ಮನ ಸೆಳೆದದ್ದು ಹೀಗೆ.
Updated on:Jan 07, 2023 | 4:23 PM

ಯಾಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೆಳನ ಅದ್ಧೂರಿಯಾಗಿ ನಿನ್ನೆ(ಜ.6) ಆರಂಭವಾಗಿದ್ದು, 7 ಮತ್ತು 8ರ ವರೆಗೆ ಇರಲಿದೆ. ಕನ್ನಡ ಸಾಹಿತ್ಯ ಸಮ್ಮೆಳನದ ಎರಡನೇ ದಿನವಾದ ಇಂದು ಫಲ ಪುಷ್ಪ ಪ್ರದರ್ಶನ ಜನ ಮನ ಸೆಳೆದದ್ದು ಹೀಗೆ.

ಇನ್ನು ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಕಲ್ಲಂಗಡಿಯಲ್ಲಿ ಅರಳಿದ ನಟ ಪುನೀತ್ ರಾಜ್ಕುಮಾರ್ ಅವರ ನಗು ಮುಖವನ್ನು ಕಂಡು ಜನರು ಫೋಟೋ ಕ್ಲಿಕ್ಕಿಸಿಕೊಂಡರು.

ಹಾವೇರಿ ಜಿಲ್ಲೆಯಲ್ಲಿ ಬೆಳೆಯುವ ತರಕಾರಿ, ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ನಾಲ್ಕಕ್ಕೂ ಹೆಚ್ಚು ಬಗೆಯ ಕುಂಬಳಕಾಯಿ, ಪಪ್ಪಾಯಿ, ಕಬ್ಬು, ಬದನೆಕಾಯಿ ಹೀಗೆ ವಿವಿಧ ಬಗೆಯ ತರಕಾರಿಗಳನ್ನು ಇಡಲಾಗಿತ್ತು.

ನಾಲ್ಕಕ್ಕೂ ಹೆಚ್ಚು ಬಗೆಯ ಕುಂಬಳಕಾಯಿಯನ್ನು ಬಳಿಸಿಕೊಂಡು ಕನ್ನಡಾಂಬೆ ಭುವನೇಶ್ವರಿ ದೇವಿಯನ್ನು ಕಲಾವಿದರು ಸಿದ್ಧಪಡಿಸಿದ್ದಾರೆ.

ಕೇವಲ ತರಕಾರಿಗಳು ಮಾತ್ರವಲ್ಲದೆ, ಪುಷ್ಪ ಪ್ರದರ್ಶನವು ಇದ್ದು, ತಬಲ, ವೀಣೆ, ಮೃದಂಗ ವಿವಿಧ ಪುಷ್ಪಗಳಲ್ಲಿ ಅರಳಿವೆ.

ಚಿಕ್ಕ ಮಕ್ಕಳು, ಯುವಕರು, ವಯಸ್ಕರರು, ಮಹಿಳೆಯರು ಎಲ್ಲ ವರ್ಗದ ಜನರು ಫಲ ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ ಕಣ್ತುಂಬಿಕೊಂಡರು
Published On - 4:22 pm, Sat, 7 January 23




