AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್​ ಕೆಲಸದೊಂದಿಗೆ ಟೊಮೆಟೊ ಬೆಳೆದ, ಒಂದೇ ಎಕರೆಯಲ್ಲಿ 20 ಲಕ್ಷ ರೂ. ಲಾಭ ತೆಗೆದ!

ಮಳೆ ಹಾಗೂ ಇನ್ನಿತರ ಕಾರಣಗಳಿಂದ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಹೆಚ್ಚಾಗಿವೆ. ಅದರಲ್ಲೂ ಪ್ರಮುಖವಾಗಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಈ ಬಾರಿ ಟೊಮೆಟೊ ರೈತನ ಹಾಗೂ ವ್ಯಾಪಾರಿಗಳ ಕೈ ಹಿಡಿದಿದೆ. ಹೀಗಾಗಿ ರೈತರು ಟೊಮೆಟೊ ಬೆಳೆಯತ್ತ ಹೆಚ್ಚಿನ ಗಮನ ಕೊಡುತ್ತಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇನ್ನು ಇಲ್ಲೊಬ್ಬರು ಪೊಲೀಸ್ ಕೆಲಸದೊಂದಿಗೆ ಟೊಮೆಟೊ ಬೆಳೆದು ಬರೋಬ್ಬರಿ 20 ಲಕ್ಷ ರೂ. ಲಾಭ ತೆಗೆದಿದ್ದಾರೆ.

ಮಂಜುನಾಥ ಕೆಬಿ
| Edited By: |

Updated on: Jul 14, 2023 | 3:36 PM

Share
ಹಾಸನ ಮೂಲದ ರೈತ ಕೇವಲ ಒಂದೇ ಒಂದು ಎಕರೆಯಲ್ಲಿ ಟೊಮೆಟೊ ಬೆಳೆದು 20 ಲಕ್ಷಕ್ಕೂ ಅಧಿಕ ಲಾಭ ಪಡೆದಿದ್ದಾರೆ

ಹಾಸನ ಮೂಲದ ರೈತ ಕೇವಲ ಒಂದೇ ಒಂದು ಎಕರೆಯಲ್ಲಿ ಟೊಮೆಟೊ ಬೆಳೆದು 20 ಲಕ್ಷಕ್ಕೂ ಅಧಿಕ ಲಾಭ ಪಡೆದಿದ್ದಾರೆ

1 / 9
ಇದುರೆಗೆ ಒಟ್ಟು ಏಳು ಬೀಡು ಕಟಾವು ಮಾಡಿ 1000 ಬಾಕ್ಸ್ ಟೊಮೆಟೊ ಕುಯ್ದಿರುವ ಬೈರೇಶ್, ಇದುವರೆಗೆ 16 ಲಕ್ಷಕ್ಕೂ ಅಧಿಕ ಲಾಭ ಗಳಿಸಿದ್ದಾರೆ,

ಇದುರೆಗೆ ಒಟ್ಟು ಏಳು ಬೀಡು ಕಟಾವು ಮಾಡಿ 1000 ಬಾಕ್ಸ್ ಟೊಮೆಟೊ ಕುಯ್ದಿರುವ ಬೈರೇಶ್, ಇದುವರೆಗೆ 16 ಲಕ್ಷಕ್ಕೂ ಅಧಿಕ ಲಾಭ ಗಳಿಸಿದ್ದಾರೆ,

2 / 9
ಪೊಲೀಸ್ ಕರ್ತವ್ಯದ ಜೊತೆ ಕೃಷಿಯಲ್ಲಿ ತೊಡಗಿ ಬಂಪರ್ ಬೆಲೆ ಪಡೆದುಕೊಂಡಿದ್ದಾರೆ.

ಪೊಲೀಸ್ ಕರ್ತವ್ಯದ ಜೊತೆ ಕೃಷಿಯಲ್ಲಿ ತೊಡಗಿ ಬಂಪರ್ ಬೆಲೆ ಪಡೆದುಕೊಂಡಿದ್ದಾರೆ.

3 / 9
ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಎನ್ನುವವರು ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ಆಗಿದ್ದು,  ಈ ಬಾರಿ ಟೊಮೆಟೊ ಬೆಳೆಯಿಂದ ಉತ್ತಮ ಆದಾಯಗಳಿಸಿದ್ದಾರೆ.

ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಎನ್ನುವವರು ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ಆಗಿದ್ದು, ಈ ಬಾರಿ ಟೊಮೆಟೊ ಬೆಳೆಯಿಂದ ಉತ್ತಮ ಆದಾಯಗಳಿಸಿದ್ದಾರೆ.

4 / 9
ಮೊದಲ ಬೀಡಿನಲ್ಲಿ ಒಂದು ಬಾಕ್ಸ್ ಗೆ 900. ರೂ ನಂತೆ ಮಾರಟ ಮಾಡಿದ್ದು, ಎರಡನೇ ಬೀಡು ಬಾಕ್ಸ್ ಗೆ 1200 ರೂ. ಮೂರು ಮತ್ತು ನಾಲ್ಕನೇ ಕಟಾವಿನಲ್ಲಿ ಬಾಕ್ಸ್ ಒಂದಕ್ಕೆ 1600 ರೂ, 5ನೇ ಬೀಡು ಕಟಾವು ಮಾಡಿದಾಗ 1950 ರೂ ಬಾಕ್ಸ್ ಗೆ ಮಾರಾಟ, ಆರನೇ ಬೀಡು 1750 ರೂ.ಗೆ ಮಾರಾಟ ಮಾಡಿದ್ರೆ,  ಇಂದು ಏಳನೇ ಬೀಡು ಕಟಾವು ಮಾಡುವಾಗ ಬಾಕ್ಸ್ ಗೆ  2000. ರೂನಂತೆ ಮಾರಾಟ ಮಾಡಿದ್ದಾರೆ.

ಮೊದಲ ಬೀಡಿನಲ್ಲಿ ಒಂದು ಬಾಕ್ಸ್ ಗೆ 900. ರೂ ನಂತೆ ಮಾರಟ ಮಾಡಿದ್ದು, ಎರಡನೇ ಬೀಡು ಬಾಕ್ಸ್ ಗೆ 1200 ರೂ. ಮೂರು ಮತ್ತು ನಾಲ್ಕನೇ ಕಟಾವಿನಲ್ಲಿ ಬಾಕ್ಸ್ ಒಂದಕ್ಕೆ 1600 ರೂ, 5ನೇ ಬೀಡು ಕಟಾವು ಮಾಡಿದಾಗ 1950 ರೂ ಬಾಕ್ಸ್ ಗೆ ಮಾರಾಟ, ಆರನೇ ಬೀಡು 1750 ರೂ.ಗೆ ಮಾರಾಟ ಮಾಡಿದ್ರೆ, ಇಂದು ಏಳನೇ ಬೀಡು ಕಟಾವು ಮಾಡುವಾಗ ಬಾಕ್ಸ್ ಗೆ 2000. ರೂನಂತೆ ಮಾರಾಟ ಮಾಡಿದ್ದಾರೆ.

5 / 9
ಪ್ರತೀ ಕಟಾವಿನಲ್ಲಿ ತಲಾ 28 ಕೆಜಿ ತೂಕದ 150 ಬಾಕ್ಸ್ ನಂತೆ ಇದುವರೆಗೆ 1000 ಬಾಕ್ಸ್​ಗೂ ಅಧಿಕ ಪ್ರಮಾಣದ ಟೊಮೆಟೊ ಮಾರಾಟ ಮಾಡಿದ್ದಾರೆ.

ಪ್ರತೀ ಕಟಾವಿನಲ್ಲಿ ತಲಾ 28 ಕೆಜಿ ತೂಕದ 150 ಬಾಕ್ಸ್ ನಂತೆ ಇದುವರೆಗೆ 1000 ಬಾಕ್ಸ್​ಗೂ ಅಧಿಕ ಪ್ರಮಾಣದ ಟೊಮೆಟೊ ಮಾರಾಟ ಮಾಡಿದ್ದಾರೆ.

6 / 9
ಇನ್ನೂ ಕನಿಷ್ಠ ಏಳು ಬೀಡು ಕಟಾವು ಮಾಡುವಷ್ಟು ಬೆಳೆ ಹೊಂದಿದ್ದು, ಇದರಿಂದ ಇನ್ನಷ್ಟು ಲಾಭದ ನಿರೀಕ್ಷೆಯಲ್ಲಿದ್ದಾರೆ ಬೈರೇಶ್.

ಇನ್ನೂ ಕನಿಷ್ಠ ಏಳು ಬೀಡು ಕಟಾವು ಮಾಡುವಷ್ಟು ಬೆಳೆ ಹೊಂದಿದ್ದು, ಇದರಿಂದ ಇನ್ನಷ್ಟು ಲಾಭದ ನಿರೀಕ್ಷೆಯಲ್ಲಿದ್ದಾರೆ ಬೈರೇಶ್.

7 / 9
ಮೂರು ಲಕ್ಷ ಖರ್ಚು ಮಾಡಿ ಒಂದು ಎಕರೆ ಆರು ಗುಂಟೆಯಲ್ಲಿ ಟೊಮೆಟೊ ಬೆಳೆದಿರುವ ಬೈರೇಶ್,
ಖರ್ಚು ಕಳೆದು ಇಪ್ಪತ್ತು ಲಕ್ಷ ಆದಾಯ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂರು ಲಕ್ಷ ಖರ್ಚು ಮಾಡಿ ಒಂದು ಎಕರೆ ಆರು ಗುಂಟೆಯಲ್ಲಿ ಟೊಮೆಟೊ ಬೆಳೆದಿರುವ ಬೈರೇಶ್, ಖರ್ಚು ಕಳೆದು ಇಪ್ಪತ್ತು ಲಕ್ಷ ಆದಾಯ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

8 / 9
ಹಗಲು ಪೊಲೀಸ್ ಡ್ಯೂಟಿ ರಾತ್ರಿ ಟೊಮೆಟೊ ಕಳವಾಗದಂತೆ ಹೊಲದ ಬಳಿ ಕಾವಲು ಕಾದು ಬೆಳೆ ಉಳಿಸಿಕೊಂಡು ಬಂಪರ್ ಬೆಲೆ ಪಡೆದು ಸಂತಸದಲ್ಲಿದ್ದಾರೆ.  ಕನಿಷ್ಟ 1000 ರೂ ನಂತೆ ಮಾರಾಟವಾದರೂ ಇನ್ನೂ ಆರೇಳು ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಹಗಲು ಪೊಲೀಸ್ ಡ್ಯೂಟಿ ರಾತ್ರಿ ಟೊಮೆಟೊ ಕಳವಾಗದಂತೆ ಹೊಲದ ಬಳಿ ಕಾವಲು ಕಾದು ಬೆಳೆ ಉಳಿಸಿಕೊಂಡು ಬಂಪರ್ ಬೆಲೆ ಪಡೆದು ಸಂತಸದಲ್ಲಿದ್ದಾರೆ. ಕನಿಷ್ಟ 1000 ರೂ ನಂತೆ ಮಾರಾಟವಾದರೂ ಇನ್ನೂ ಆರೇಳು ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

9 / 9
Follow Us
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!