AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಹಣಕಾಸು ಸಚಿವೆ ನೇತೃತ್ವದ ಬಜೆಟ್ ಟೀಮ್​ನ ಪ್ರಮುಖ ಸದಸ್ಯರಿವರು…

ನವದೆಹಲಿ, ಜನವರಿ 28: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1ರಂದು ತಮ್ಮ ಸತತ 8ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಮಹತ್ವದ ಬಜೆಟ್ ಅನ್ನು ತಯಾರಿಸಲು ಹಣಕಾಸು ಸಚಿವೆಗೆ ಜೊತೆಯಾಗಿ ನಿಂತು ಕೆಲಸ ಮಾಡುತ್ತಿರುವವರು ಹಲವರಿದ್ದಾರೆ. ಅವರಲ್ಲಿ ಕೆಲ ಪ್ರಮುಖರು ಯಾರೆಂದು ನೋಡುವುದಾದರೆ....

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 28, 2025 | 6:22 PM

ತುಹಿನ್ ಕಾಂತ ಪಾಂಡೆ, ಹಣಕಾಸು ಮತ್ತು ಕಂದಾಯ ಕಾರ್ಯದರ್ಶಿ: ಇವರು 1987ರ ಒಡಿಶಾ ಕೇಡರ್​ನ ಐಎಎಸ್ ಅಧಿಕಾರಿ. ಬಜೆಟ್​ಗೆ ಕೆಲ ದಿನಗಳ ಮುಂಚೆಯಷ್ಟೇ ಇವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದಾಯ ತೆರಿಗೆ ಕಾನೂನಿನಲ್ಲಿ ಏನಾದರೂ ಬದಲಾವಣೆ ಆಗುತ್ತದೆ ಎಂದಾದರೆ, ಅದಕ್ಕೆ ಮುಖ್ಯ ಕಾರಣ ಇದೇ ವ್ಯಕ್ತಿಯಾಗಿರಬಹುದು. ತೆರಿಗೆ ಇಳಿಕೆ ಮಾಡಬೇಕು ಎನ್ನುವ ನಿರೀಕ್ಷೆಗಳನ್ನು ನೆರವೇರಿಸುವ ಸವಾಲಿನ ಕೆಲಸವನ್ನು ಇವರಿಗೆ ನೀಡಲಾಗಿದೆ.

ತುಹಿನ್ ಕಾಂತ ಪಾಂಡೆ, ಹಣಕಾಸು ಮತ್ತು ಕಂದಾಯ ಕಾರ್ಯದರ್ಶಿ: ಇವರು 1987ರ ಒಡಿಶಾ ಕೇಡರ್​ನ ಐಎಎಸ್ ಅಧಿಕಾರಿ. ಬಜೆಟ್​ಗೆ ಕೆಲ ದಿನಗಳ ಮುಂಚೆಯಷ್ಟೇ ಇವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದಾಯ ತೆರಿಗೆ ಕಾನೂನಿನಲ್ಲಿ ಏನಾದರೂ ಬದಲಾವಣೆ ಆಗುತ್ತದೆ ಎಂದಾದರೆ, ಅದಕ್ಕೆ ಮುಖ್ಯ ಕಾರಣ ಇದೇ ವ್ಯಕ್ತಿಯಾಗಿರಬಹುದು. ತೆರಿಗೆ ಇಳಿಕೆ ಮಾಡಬೇಕು ಎನ್ನುವ ನಿರೀಕ್ಷೆಗಳನ್ನು ನೆರವೇರಿಸುವ ಸವಾಲಿನ ಕೆಲಸವನ್ನು ಇವರಿಗೆ ನೀಡಲಾಗಿದೆ.

1 / 6
ಅಜಯ್ ಸೇಠ್, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ: ಇವರೂ ಕೂಡ 1987ರ ಬ್ಯಾಚ್​ನ ಐಎಎಸ್ ಅಧಿಕಾರಿ. ಆದರೆ, ಕರ್ನಾಟಕ ಕೇಡರ್​ನವರು. ಅಂತಿಮ ಬಜೆಟ್ ದಾಖಲೆಗಳನ್ನು ಸಿದ್ಧಪಡಿಸುವುದು ಇವರ ನೇತೃತ್ವದಲ್ಲೇ. ವೆಚ್ಚಕ್ಕೆ ನಿಯಂತ್ರಣ ತರುವುದರ ಜೊತೆಗೆ ಬೆಳವಣಿಗೆಗೆ ಅಗತ್ಯವಾದ ವೆಚ್ಚಕ್ಕೂ ಅವಕಾಶ ಕೊಡುವ ಸೂಕ್ಷ್ಮ ಪರಿಸ್ಥಿತಿಯನ್ನು ಸರಿದೂಗಿಸುವ ಜವಾಬ್ದಾರಿ ಇವರದ್ದಾಗಿದೆ.

ಅಜಯ್ ಸೇಠ್, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ: ಇವರೂ ಕೂಡ 1987ರ ಬ್ಯಾಚ್​ನ ಐಎಎಸ್ ಅಧಿಕಾರಿ. ಆದರೆ, ಕರ್ನಾಟಕ ಕೇಡರ್​ನವರು. ಅಂತಿಮ ಬಜೆಟ್ ದಾಖಲೆಗಳನ್ನು ಸಿದ್ಧಪಡಿಸುವುದು ಇವರ ನೇತೃತ್ವದಲ್ಲೇ. ವೆಚ್ಚಕ್ಕೆ ನಿಯಂತ್ರಣ ತರುವುದರ ಜೊತೆಗೆ ಬೆಳವಣಿಗೆಗೆ ಅಗತ್ಯವಾದ ವೆಚ್ಚಕ್ಕೂ ಅವಕಾಶ ಕೊಡುವ ಸೂಕ್ಷ್ಮ ಪರಿಸ್ಥಿತಿಯನ್ನು ಸರಿದೂಗಿಸುವ ಜವಾಬ್ದಾರಿ ಇವರದ್ದಾಗಿದೆ.

2 / 6
ವಿ ಅನಂತನಾಗೇಶ್ವರನ್, ಮುಖ್ಯ ಆರ್ಥಿಕ ಸಲಹೆಗಾರರು: ಐಐಟಿಯಲ್ಲಿ ಓದಿ, ಅಮೆರಿಕದಲ್ಲಿ ಡಾಕ್ಟರೇಟ್ ಪಡೆದಿರುವ ಇವರು ತಮ್ಮ ನೇತೃತ್ವದಲ್ಲಿ ಆರ್ಥಿಕ ಸಮೀಕ್ಷೆ ನಡೆಸಿ ವರದಿ ನೀಡಲಿದ್ದಾರೆ. ಇವರ ಸಮೀಕ್ಷೆಯ ಅಂಶಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ಸರ್ಕಾರವು ತನ್ನ ನೀತಿಗಳನ್ನು ರೂಪಿಸಬಹುದು.

ವಿ ಅನಂತನಾಗೇಶ್ವರನ್, ಮುಖ್ಯ ಆರ್ಥಿಕ ಸಲಹೆಗಾರರು: ಐಐಟಿಯಲ್ಲಿ ಓದಿ, ಅಮೆರಿಕದಲ್ಲಿ ಡಾಕ್ಟರೇಟ್ ಪಡೆದಿರುವ ಇವರು ತಮ್ಮ ನೇತೃತ್ವದಲ್ಲಿ ಆರ್ಥಿಕ ಸಮೀಕ್ಷೆ ನಡೆಸಿ ವರದಿ ನೀಡಲಿದ್ದಾರೆ. ಇವರ ಸಮೀಕ್ಷೆಯ ಅಂಶಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ಸರ್ಕಾರವು ತನ್ನ ನೀತಿಗಳನ್ನು ರೂಪಿಸಬಹುದು.

3 / 6
ಮನೋಜ್ ಗೋವಿಲ್, ವೆಚ್ಚ ಇಲಾಖೆಯ ಕಾರ್ಯದರ್ಶಿ: ಮಧ್ಯಪ್ರದೇಶ ಕೇಡರ್​ನ ಐಎಎಸ್ ಅಧಿಕಾರಿಯಾದ ಇವರು ಹಿಂದೆ ಕಾರ್ಪೊರೇಟ್ ಅಫೇರ್ಸ್ ಮಿನಿಸ್ಟ್ರಿಯಲ್ಲಿ ಕಾರ್ಯದರ್ಶಿಯಾಗಿದ್ದರು. ಈ ಬಜೆಟ್​ನಲ್ಲಿ ಅವರು ಸಬ್ಸಿಡಿಗಳು ಹಾಗೂ ಕೇಂದ್ರ ಪ್ರಾಯೋಜಿತ ಸ್ಕೀಮ್​ಗಳ ವೆಚ್ಚದ ಮೇಲೆ ನಿಗಾ ಇಡಲಿದ್ದಾರೆ. ಸರ್ಕಾರ ಮಾಡುವ ವೆಚ್ಚ ವ್ಯರ್ಥವಾಗದ ರೀತಿಯಲ್ಲಿ ಯೋಜನೆಗಳನ್ನು ನಿಭಾಯಿಸುವುದು ಇವರಿಗಿರುವ ಹೊಣೆಗಾರಿಕೆ.

ಮನೋಜ್ ಗೋವಿಲ್, ವೆಚ್ಚ ಇಲಾಖೆಯ ಕಾರ್ಯದರ್ಶಿ: ಮಧ್ಯಪ್ರದೇಶ ಕೇಡರ್​ನ ಐಎಎಸ್ ಅಧಿಕಾರಿಯಾದ ಇವರು ಹಿಂದೆ ಕಾರ್ಪೊರೇಟ್ ಅಫೇರ್ಸ್ ಮಿನಿಸ್ಟ್ರಿಯಲ್ಲಿ ಕಾರ್ಯದರ್ಶಿಯಾಗಿದ್ದರು. ಈ ಬಜೆಟ್​ನಲ್ಲಿ ಅವರು ಸಬ್ಸಿಡಿಗಳು ಹಾಗೂ ಕೇಂದ್ರ ಪ್ರಾಯೋಜಿತ ಸ್ಕೀಮ್​ಗಳ ವೆಚ್ಚದ ಮೇಲೆ ನಿಗಾ ಇಡಲಿದ್ದಾರೆ. ಸರ್ಕಾರ ಮಾಡುವ ವೆಚ್ಚ ವ್ಯರ್ಥವಾಗದ ರೀತಿಯಲ್ಲಿ ಯೋಜನೆಗಳನ್ನು ನಿಭಾಯಿಸುವುದು ಇವರಿಗಿರುವ ಹೊಣೆಗಾರಿಕೆ.

4 / 6
ಎಂ ನಾಗರಾಜು, ಹಣಕಾಸು ಸೇವೆ  ಇಲಾಖೆಯ ಕಾರ್ಯದರ್ಶಿ: ತ್ರಿಪುರ ಕೇಡರ್​ನ ಐಎಎಸ್ ಅಧಿಕಾರಿಯಾದ ಇವರು ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಸಾಲ, ಠೇವಣಿ ಸಂಗ್ರಹ ಹರಿದುಬರುವಂತೆ ನೋಡಿಕೊಳ್ಳುತ್ತಾರೆ. ಫಿನ್​ಟೆಕ್ ಕಂಪನಿಗಳ ಮೇಲೆ ನಿಯಂತ್ರಣ, ಇನ್ಷೂರೆನ್ಸ್ ಕವರೇಜ್ ಹೆಚ್ಚಿಸುವುದು, ಡಿಜಿಟಲ್ ಇಂಟರ್​ಫೇಸ್​ಗಳನ್ನು ಪ್ರಬಲಗೊಳಿಸುವುದು ಇವೇ ಮುಂತಾದ ಕಾರ್ಯಗಳಿಗೆ ಇವರು ಯೋಜಿಸಿದ್ದಾರೆ.

ಎಂ ನಾಗರಾಜು, ಹಣಕಾಸು ಸೇವೆ ಇಲಾಖೆಯ ಕಾರ್ಯದರ್ಶಿ: ತ್ರಿಪುರ ಕೇಡರ್​ನ ಐಎಎಸ್ ಅಧಿಕಾರಿಯಾದ ಇವರು ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಸಾಲ, ಠೇವಣಿ ಸಂಗ್ರಹ ಹರಿದುಬರುವಂತೆ ನೋಡಿಕೊಳ್ಳುತ್ತಾರೆ. ಫಿನ್​ಟೆಕ್ ಕಂಪನಿಗಳ ಮೇಲೆ ನಿಯಂತ್ರಣ, ಇನ್ಷೂರೆನ್ಸ್ ಕವರೇಜ್ ಹೆಚ್ಚಿಸುವುದು, ಡಿಜಿಟಲ್ ಇಂಟರ್​ಫೇಸ್​ಗಳನ್ನು ಪ್ರಬಲಗೊಳಿಸುವುದು ಇವೇ ಮುಂತಾದ ಕಾರ್ಯಗಳಿಗೆ ಇವರು ಯೋಜಿಸಿದ್ದಾರೆ.

5 / 6
ಅರುಣೀಶ್ ಚಾವ್ಲಾ, ಡಿಐಪಿಎಎಂ ಕಾರ್ಯದರ್ಶಿ: ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯಾದ ಡಿಐಪಿಎಎಂ, ಹಾಗೂ ಸರ್ಕಾರಿ ಉದ್ದಿಮೆಗಳ ಇಲಾಖೆ (ಡಿಪಿಇ) ಮುಖ್ಯಸ್ಥರಾದ ಇವರು ಸರ್ಕಾರಿ ಸಂಸ್ಥೆಗಳಿಂದ ಬಂಡವಾಳ ಹಿಂತೆಗೆತ ಕ್ರಮಗಳನ್ನು ಚುರುಕುಗೊಳಿಸುವುದು, ಸರ್ಕಾರಿ ಆಸ್ತಿಗಳ ನಗದೀಕರಣಗೊಳಿಸುವುದು ಮುಂತಾದ ಕಾರ್ಯಗಳಿಗೆ ಯೋಜಿಸುತ್ತಿದ್ದಾರೆ. ಐಡಿಬಿಐ ಬ್ಯಾಂಕ್ ಅನ್ನು ಮಾರುವ ಪ್ಲಾನ್ ಕೂಡ ಇದೆ.

ಅರುಣೀಶ್ ಚಾವ್ಲಾ, ಡಿಐಪಿಎಎಂ ಕಾರ್ಯದರ್ಶಿ: ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯಾದ ಡಿಐಪಿಎಎಂ, ಹಾಗೂ ಸರ್ಕಾರಿ ಉದ್ದಿಮೆಗಳ ಇಲಾಖೆ (ಡಿಪಿಇ) ಮುಖ್ಯಸ್ಥರಾದ ಇವರು ಸರ್ಕಾರಿ ಸಂಸ್ಥೆಗಳಿಂದ ಬಂಡವಾಳ ಹಿಂತೆಗೆತ ಕ್ರಮಗಳನ್ನು ಚುರುಕುಗೊಳಿಸುವುದು, ಸರ್ಕಾರಿ ಆಸ್ತಿಗಳ ನಗದೀಕರಣಗೊಳಿಸುವುದು ಮುಂತಾದ ಕಾರ್ಯಗಳಿಗೆ ಯೋಜಿಸುತ್ತಿದ್ದಾರೆ. ಐಡಿಬಿಐ ಬ್ಯಾಂಕ್ ಅನ್ನು ಮಾರುವ ಪ್ಲಾನ್ ಕೂಡ ಇದೆ.

6 / 6
Follow us
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ