AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ಸಿಗರಿಗೆ ಆಹ್ವಾನ; ಯತ್ನಾಳ್ ಏನಂದ್ರು ಗೊತ್ತಾ?

ಅಯೋಧ್ಯೆಯಲ್ಲಿ ರಾಮ ಮಂದಿರ(Ram Mandir) ಉದ್ಘಾಟನೆಗೆ ಕಾಂಗ್ರೆಸ್ಸಿಗರಿಗೆ ಆಹ್ವಾನದ ವಿಚಾರ ‘25 ಜನ ಕಾಂಗ್ರೆಸ್ಸಿನ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯಾ ರಾಮ ಮಂದಿರ ಕೇಸ್ ನಲ್ಲಿ ವಾದ ಮಾಡಿದ್ದರು. ಅದರಲ್ಲಿ ಕಪೀಲ್ ಸಿಬಲ್ ರಾಮ ಕಲ್ಪನೆ, ರಾಮ ಇದ್ದ ಎನ್ನಲು ದಾಖಲೆಗಳು ಇಲ್ಲ ಎಂದು ವಾದ ಮಾಡಿದ್ದರು. ಹಿಂದೂ ಸಂಸ್ಕೃತಿ, ಭಾರತೀಯ ಸಂಸ್ಕ್ರತಿಯಲ್ಲಿ ವೈರಿಗಳಿಗೂ ಸ್ವಾಗತ ಮಾಡುವುದು ಕರೆಯುವುದು ನಮ್ಮ ಧರ್ಮ‌ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಹೇಳಿದರು.

ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ಸಿಗರಿಗೆ ಆಹ್ವಾನ; ಯತ್ನಾಳ್ ಏನಂದ್ರು ಗೊತ್ತಾ?
ಬಸನಗೌಡ ಪಾಟೀಲ್ ಯತ್ನಾಳ್​
Follow us
TV9 Web
| Updated By: Digi Tech Desk

Updated on:Dec 28, 2023 | 11:11 AM

ವಿಜಯಪುರ, ಡಿ.22: ಅಯೋಧ್ಯೆಯಲ್ಲಿ ರಾಮ ಮಂದಿರ(Ram Mandir) ಉದ್ಘಾಟನೆಗೆ ಕಾಂಗ್ರೆಸ್ಸಿಗರಿಗೆ ಆಹ್ವಾನದ ವಿಚಾರ ‘ದೇಶದ ಬಗ್ಗೆ ಕಳಕಳಿ ಇದ್ದರೆ, ಹಿಂದೂಗಳ ವೋಟ್ ಬೇಕಾದರೆ ಬರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಹೇಳಿದರು. ವಿಜಯಪುರ ನಗರದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ಕಳಸದ ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಸೋನಿಯಾ ಗಾಂಧಿ ರಾಮ ಮಂದಿರಕ್ಕೆ ಬರುವುದು ಓಟಿಗಾಗಿ, ಸಾಬರ ಓಟ್ ಬೇಕಿದ್ದರೆ ಮೆಕ್ಕಾ ಮದೀನಾಕೆ ಹೋಗಲಿ ಎಂದರು.

25 ಜನ ಕಾಂಗ್ರೆಸ್ಸಿನ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯಾ ರಾಮ ಮಂದಿರ ಕೇಸ್ ನಲ್ಲಿ ವಾದ ಮಾಡಿದ್ದರು. ಅದರಲ್ಲಿ ಕಪೀಲ್ ಸಿಬಲ್ ರಾಮ ಕಲ್ಪನೆ, ರಾಮ ಇದ್ದ ಎನ್ನಲು ದಾಖಲೆಗಳು ಇಲ್ಲ ಎಂದು ವಾದ ಮಾಡಿದ್ದರು. ಹಿಂದೂ ಸಂಸ್ಕೃತಿ, ಭಾರತೀಯ ಸಂಸ್ಕ್ರತಿಯಲ್ಲಿ ವೈರಿಗಳಿಗೂ ಸ್ವಾಗತ ಮಾಡುವುದು ಕರೆಯುವುದು ನಮ್ಮ ಧರ್ಮ‌. ನಮ್ಮವರು ಹೋಗಿ ಕರೆದಿದ್ದಾರೆ, ಬರೋದು ಬಿಡೋದು ಅವರಿಗೆ ಬಿಟ್ಟದ್ದು ಎಂದರು.

ಇದನ್ನೂ ಓದಿ:ರಾಮಮಂದಿರ ವಿನ್ಯಾಸದಲ್ಲಿ 5,000 ವಜ್ರಖಚಿತ ಹಾರ; ವ್ಯಾಪಾರಿಯಿಂದ ಅಯೋಧ್ಯಾ ರಾಮನಿಗೆ ಡೈಮಂಡ್ ನೆಕ್​ಲೇಸ್ ಸಮರ್ಪಣೆ

ಬಿಜೆಪಿ ಹಾಗೂ ಆರ್​​ಎಸ್​ಎಸ್ ಕಂಡಿದ್ದ ಕನಸುಗಳು ಎಲ್ಲಾ ಈಡೇರಿವೆ

ರಾಮಮಂದಿರ ನಿರ್ಮಾಣ ಕುರಿತು ಹಿಂದೂಗಳ ಮನಸ್ಸಿನಲ್ಲಿ ಸಂಕಲ್ಪವಿತ್ತು. 370ನೇ ವಿಧಿ ರದ್ದಾಗಬೇಕೆಂಬುದು ವಾಜಪೇಯಿ ಮತ್ತು ಅಡ್ವಾಣಿ ಕನಸಾಗಿತ್ತು. ಅದಕ್ಕಾಗಿ ಎಲ್​.ಕೆ.ಅಡ್ವಾಣಿ ದೇಶದಲ್ಲಿ ರಥಯಾತ್ರೆ ಮಾಡಿದರು. 370ನೇ ವಿಧಿ ತೆಗೆದು ಹಾಕುವ ಮೂಲಕ ಮೋದಿ ಮನಸ್ಸು ಮಾಡಿದ್ದಾರೆ. ಈ ಮೂಲಕ ಬಿಜೆಪಿ ಹಾಗೂ ಆರ್​​ಎಸ್​ಎಸ್ ಕಂಡಿದ್ದ ಕನಸುಗಳು ಎಲ್ಲಾ ಈಡೇರಿವೆ. ಮೊದಲನೇಯದಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಕಾಶಿ ಮತ್ತು ಮಥುರಾದಲ್ಲಿ ಸರ್ವೆ ಕಾರ್ಯ ಆರಂಭವಾಗಿದೆ. ಅಲ್ಲಿ ಹಿಂದೂ ದೇವಸ್ಥಾನಗಳು ಇದ್ದವು ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಅವೆರಡೂ ದೇವಸ್ಥಾನಗಳು ಸಹ ನಮ್ಮ ಪಾಲಾಗುತ್ತವೆ ಎಂದರು.

ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡಿದ್ದೇವೆ

ಇನ್ನು ಜಮ್ಮು-ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡಿದ್ದೇವೆ. ಭಾರತವನ್ನು ಜಗತ್ತಿನ 5ನೇ ಆರ್ಥಿಕ ಶಕ್ತಿಯನ್ನಾಗಿ ಮೋದಿ ಮಾಡಿದ್ದಾರೆ. ಇನ್ನೊಂದು ಅವಧಿಗೆ ಮೋದಿ ಪ್ರಧಾನಿ ಆದರೆ ವಿಶ್ವನಾಥ ದೇಗುಲ ನಿರ್ಮಾಣವಾಗುತ್ತದೆ. ಅಲ್ಲಿರುವ ಮಸೀದಿ ತೆರವು ಮಾಡಿ ಭವ್ಯವಾದ ವಿಶ್ವನಾಥ ದೇಗುಲ ನಿರ್ಮಾಣ ಮಾಡಲಾಗುವುದು. ಗುಲಾಮಿ‌‌ ಸಂಕೇತವಿರುವ ಮೂರುವರೆ ಲಕ್ಷ ದೇವಸ್ಥಾನಗಳು ಮುಕ್ತ ಮಾಡುವುದು ವಿಹೆಚ್​ಪಿ ಹಾಗೂ ಆರ್​ಎಸ್​ಎಸ್ ಸಂಕಲ್ಪ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 

Published On - 7:26 pm, Fri, 22 December 23

ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ