AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರಾ? ಈ ಗುಣ ಖಂಡಿತ ನಿಮ್ಮಲ್ಲಿ ಇರುತ್ತೆ

ಅಶ್ವಿನೀ ನಕ್ಷತ್ರವು ಇಪ್ಪತ್ತೇಳು ನಕ್ಷತ್ರಗಳಲ್ಲಿ ಮೊದಲನೇ ನಕ್ಷತ್ರ. ಇದು ಆಕಾಶದಲ್ಲಿ ಕುದುರೆಯ ಮುಖದಂತೆ ಕಾಣುತ್ತದೆ. ಮೂರು ನಕ್ಷತ್ರಗಳ ಪುಂಜವಾಗಿ ಆಕಾಶದಲ್ಲಿ ತೋರುವುದು.‌ ಇದನ್ನು ಸರಳವಾಗಿ ನೋಡುವುದೆಂದರೆ ಚಂದ್ರನು ಯಾವಾಗ ಅಶ್ವಿನೀ ನಕ್ಷತ್ರದ ಬಳಿ ಬರುತ್ತಾನೆ ಅಂದು ಅದು ಸರಿಯಾಗಿ ಅರ್ಥವಾಗುತ್ತದೆ. ಈ ನಕ್ಷತ್ರದ ಅಧಿಪತಿ ಅಶ್ವಿನೀ ಕುಮಾರರು.

ನೀವು ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರಾ? ಈ ಗುಣ ಖಂಡಿತ ನಿಮ್ಮಲ್ಲಿ ಇರುತ್ತೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Digi Tech Desk|

Updated on:Sep 23, 2024 | 9:40 AM

Share

ಜ್ಯೋತಿಷ್ಯದಲ್ಲಿ ಕೇವಲ‌ ಗ್ರಹ ಆಧಾರದ ಮೇಲೆ ವ್ಯಕ್ತಿಯ ಗುಣಾವಗುಣಗಳನ್ನು ಹೇಳುವುದಿಲ್ಲ.‌ ನಕ್ಷತ್ರದ ಪ್ರಕಾರವೂ ತಿಳಿಸುವ ಕ್ರಮವಿದೆ. ಗ್ರಹಗಳ ಮೂಲಕ ಭೂತ ಮತ್ತು ಭವಿಷ್ಯವನ್ನು ತಿಳಿದುಕೊಳ್ಳುವುದಾದರೆ ನಕ್ಷತ್ರದ ಮೂಲಕ ವರ್ತಮಾನವನ್ನು ತಿಳಿಯಲು ಸಾಧ್ಯ. ಆ ನಕ್ಷತ್ರದಲ್ಲಿ ಜನಿಸಿದವರು ನಕ್ಷತ್ರದ ಹಲವು ಅಂಶಗಳನ್ನು ಇಟ್ಟುಕೊಂಡಿರುತ್ತಾರೆ.

ಅಶ್ವಿನೀ ನಕ್ಷತ್ರವಾದರೆ?

ಅಶ್ವಿನೀ ನಕ್ಷತ್ರವು ಇಪ್ಪತ್ತೇಳು ನಕ್ಷತ್ರಗಳಲ್ಲಿ ಮೊದಲನೇ ನಕ್ಷತ್ರ. ಇದು ಆಕಾಶದಲ್ಲಿ ಕುದುರೆಯ ಮುಖದಂತೆ ಕಾಣುತ್ತದೆ. ಮೂರು ನಕ್ಷತ್ರಗಳ ಪುಂಜವಾಗಿ ಆಕಾಶದಲ್ಲಿ ತೋರುವುದು.‌ ಇದನ್ನು ಸರಳವಾಗಿ ನೋಡುವುದೆಂದರೆ ಚಂದ್ರನು ಯಾವಾಗ ಅಶ್ವಿನೀ ನಕ್ಷತ್ರದ ಬಳಿ ಬರುತ್ತಾನೆ ಅಂದು ಅದು ಸರಿಯಾಗಿ ಅರ್ಥವಾಗುತ್ತದೆ. ಈ ನಕ್ಷತ್ರದ ಅಧಿಪತಿ ಅಶ್ವಿನೀ ಕುಮಾರರು. ಇದು ದೇವಗಣಕ್ಕೆ ಸೇರಿದ‌ ನಕ್ಷತ್ರವಾಗಿದೆ.

ಈ ನಕ್ಷತ್ರದಲ್ಲಿ ಜನಿಸಿಸವರು…

ದೈವಭಕ್ತಿ :

ಈ ನಕ್ಷತ್ರದಲ್ಲಿ ಜನಿಸಿದವರಿಗೆ ದೈವಭಕ್ತಿ ಹೆಚ್ಚು. ನಿರಂತರವಾಗಿ ದೇವರ ಉಪಾಸನೆಯನ್ನು ಮಾಡುತ್ತಾರೆ ಅಥವಾ ಹೆಚ್ಚು ದೇವತೆಗಳಿಗೆ ಪ್ರೀತಿಕರವಾದ ಕಾರ್ಯವನ್ನು ಮಾಡುತ್ತಾರೆ.

ವಿನಯಶೀಲತೆ :

ಹಿರಿಯರಲ್ಲಿ ಗೌರವಕ್ಕೆ ಪಾತ್ರರಾದವರಲ್ಲಿ, ವಿದ್ಯಾವಂತರಲ್ಲಿ ವೀನತಭಾವವು ಇರುತ್ತದೆ. ಯಾರನ್ನೂ ಧಿಕ್ಕರಿಸಿ ಕಾರ್ಯವನ್ನು ಮಾಡಲು ಹೋಗುವುದಿಲ್ಲ. ತಮ್ಮ ಸಭ್ಯತೆಯ ಚೌಕಟ್ಟಿನಲ್ಲಿ ಇರುವರು.

ಸಾತ್ತ್ವಿಕ‌ ಮನಸ್ಸು :

ಸಕಾರಾತ್ಮಕ ಆಲೋಚನೆಗಳು ಇರುತ್ತವೆ. ‌ಯಾರಿಗೂ ತೊಂದರೆಯನ್ನು ಉಂಟುಮಾಡುವ ಯೋಚನೆಯನ್ನು ಮಾಡಲಾರರು. ಎಲ್ಲರಿಗೂ ಹಿತವನ್ನು, ಸುಖವನ್ನು ಬಯಸುವವರು ಇವರಾಗುವರು. ಬಲದಿಂದ ಕೂಡಿದವರೂ ಇವರಾಗುವರು.

ಇದನ್ನೂ ಓದಿ: ಗರುಡ ಪುರಾಣದಲ್ಲಿ ​ಸ್ವರ್ಗ-ನರಕ ಪ್ರಾಪ್ತಿಯ ವ್ಯಾಖ್ಯಾನ ಏನಿದೆ? ಮೋಕ್ಷ- ಶಿಕ್ಷೆಯ ಪರಿಧಿ ಏನಿದೆ?

ಸಂಪತ್ತಿನ ಪ್ರಾಪ್ತಿ :

ಇವರಿಗೆ ಬೇರೆ ಬೇರೆ ಸಂಪತ್ತುಗಳು ಕಾಲಾನಂತರದಲ್ಲಿ ಸಿಗಲಿವೆ. ಬಯಸಿದ ಎಲ್ಲ ಸಂಪತ್ತುಗಳನ್ನೂ ಇವರು ಪಡೆಯುವರು. ಇದರಿಂದ ಸಂತೋಷಪಡುವರು.

ಸ್ತ್ರೀ ಪ್ರೀತಿ :

ಇವರಿಗೆ ಎಲ್ಲರಿಂದ ಪ್ರೀತಿ ಗೌರವವಗಳು ಸಿಕ್ಕರೂ ಸ್ತ್ರೀಯರಿಂದ ಹೆಚ್ಚು ಗೌರವ ಪ್ರೀತಿ ಒಡನಾಟಗಳು ಇರುತ್ತವೆ. ಸ್ತ್ರೀಯರೂ ಇವರನ್ನು ಹೆಚ್ಚು ಇಷ್ಟಪಡುತ್ತಾರೆ.

ಮಕ್ಕಳಿಂದ ಸಂತೋಷ :

ಇವರಿಗೆ ಹೆಚ್ಚು ಸಂತಾನವು ಪ್ರಾಪ್ತಿಯಾಗುತ್ತದೆ. ಮಕ್ಕಳಿಂದ ಸಂತೋಷವು ಇವರಿಗೆ ಸಿಗುವುದು.

ಸುರೂಪ :

ಎಲ್ಲರನ್ನೂ ಆಕರ್ಷಿಸುವ ಎತ್ತರ ಮೈಕಟ್ಟು ಮತ್ತು ನೋಡಲು ಅತ್ಯಂತ ಸುಂದರವಾದ ರೂಪಗಳನ್ನು ಇವರು ಹೊಂದಿರುತ್ತಾರೆ.

ಕಾರ್ಯದಲ್ಲಿ ದಕ್ಷ :

ಯಾವ ಕಾರ್ಯವನ್ನಾದರೂ ನಿರ್ವಹಿಸುವ, ಮಾಡುವ ದಕ್ಷತೆ ಇವರಲ್ಲಿ‌ ಇರುವುದು. ಎಲ್ಲರನ್ನೂ ನಿಭಾಯಿಸುವ ಶಕ್ತಿಯು ಇವರಿಗೆ ಬರುವುದು.

ಈ ಎಲ್ಲ ಲಕ್ಷಣಗಳನ್ನು ಹುಟ್ಟುವಾಗ ಇಟ್ಟುಕೊಂಡಿದ್ದರೂ ಕಾಲಕ್ರಮೇಣ ಎಲ್ಲವೂ ಪ್ರಾಪ್ತವಾಗುವುದು.

-ಲೋಹಿತ ಹೆಬ್ಬಾರ್ – 8762924271

Published On - 5:56 pm, Sat, 21 September 24

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ