AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಣಕ್ಯ ನೀತಿ: ಈ ದುರ್ಗುಣಗಳು ವಿದ್ಯೆ, ಸಂಪತ್ತನ್ನು ನಾಶ ಪಡಿಸುತ್ತದೆ; ಸೇನೆಯನ್ನೂ ಅಧೀರನನ್ನಾಗಿಸುತ್ತದೆ

ಮನುಷ್ಯನ ಕೆಲವು ಕೆಟ್ಟ ಗುಣಗಳು, ಚಟಗಳು ಆತನನ್ನು ಪಾತಾಳಕ್ಕೆ ತಳ್ಳಬಲ್ಲವು. ಆತನ ಅಷ್ಟೂ ಶ್ರಮವನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿಬಿಡುತ್ತದೆ. ಹಾಗಾದರೆ ಯಾವುವು ಅಂತಹ ದುರ್ಗುಣಗಳು? ಮುಖ್ಯವಾಗಿ ವಿದ್ಯೆ, ಸಂಪತ್ತು ಮತ್ತು ಸೇನೆಯನ್ನು ನಾಶಪಡಿಸುವ ಗುಣಲಕ್ಷಣಗಳು ಯಾವುವು ತಿಳಿಯೋಣ ಬನ್ನೀ.

ಚಾಣಕ್ಯ ನೀತಿ: ಈ ದುರ್ಗುಣಗಳು ವಿದ್ಯೆ, ಸಂಪತ್ತನ್ನು ನಾಶ ಪಡಿಸುತ್ತದೆ; ಸೇನೆಯನ್ನೂ ಅಧೀರನನ್ನಾಗಿಸುತ್ತದೆ
ಚಾಣಕ್ಯ ನೀತಿ: ಈ ದುರ್ಗುಣಗಳು ವಿದ್ಯೆ, ಸಂಪತ್ತನ್ನು ನಾಶ ಪಡಿಸುತ್ತದೆ; ಸೇನೆಯನ್ನೂ ಅಧೀರನನ್ನಾಗಿಸುತ್ತದೆ
TV9 Web
| Edited By: |

Updated on: Oct 10, 2021 | 7:05 AM

Share

ಆಚಾರ್ಯ ಚಾಣಕ್ಯ ಪ್ರಕಾರ ಕೆಲವು ದುರ್ಗುಣಗಳು ವಿದ್ಯೆ ಮತ್ತು ಸಂಪತ್ತನ್ನು ನಾಶ ಪಡಿಸುತ್ತದೆ. ವಿಸ್ತರಿಸಿ ಹೇಳುವುದಾದರೆ ದೇಶ ಕಾಯುವ ಸೇನೆಯನ್ನು ನಾಶ ಮಾಡಿಬಿಡುತ್ತದೆ. ಚಾಣಕ್ಯ ಅಂದು ಹೇಳಿದ ಆ ಮಾತುಗಳು ಇಂದಿಗೂ ಪ್ರಸ್ತುತ ಎನಿಸುತ್ತದೆ. ಅಚಾರ್ಯ ಚಾಣಕ್ಯನ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿರುವ ಕೆಲ ಚಟಗಳು ಮನುಷ್ಯನನ್ನು ನಾಶ ಮಾಡಿಬಿಡುತ್ತದೆ.

ಆಚಾರ್ಯ ಚಾಣಕ್ಯ (Acharya Chanakya) ಅಸಾಧಾರಣ ವ್ಯಕ್ತಿ, ಮೌರ್ಯ ವಂಶ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತನ್ನ ಕೂಟನೀತಿ ಮತ್ತು ಕುಶಾಗ್ರ ಬುದ್ಧಿಯಿಂದ ಇತಿಹಾಸದ ಗತಿಯನ್ನೇ ಬದಲಿಸಿ ನಂದ ವಂಶವನ್ನು ಕೊನೆಗಾಣಿಸಿ ಚಂದ್ರಗುಪ್ತ ಮೌರ್ಯನನ್ನು ಸಾಮ್ರಾಟನನ್ನಾಗಿಸಿದ ಹಿರಿಮೆ ಈತನದು. ಇಂದಿಗೂ ಚಾಣಕ್ಯನನ್ನು ಕುಶಾಲ ಅರ್ಥಶಾಸ್ತ್ರಜ್ಞ, ಪ್ರಕಾಂಡ ಪಂಡಿತ, ಕೂಟನೀತಿಜ್ಞ ಮತ್ತು ಅತ್ಯುತ್ತಮ ಜೀವನ ಮಾರ್ಗದರ್ಶಿ ರೂಪದಲ್ಲಿ ನೆನಪಿಸಿಕೊಳ್ಳಬಹುದು.

ಮನುಷ್ಯನ ಕೆಲವು ಕೆಟ್ಟ ಗುಣಗಳು, ಚಟಗಳು ಆತನನ್ನು ಪಾತಾಳಕ್ಕೆ ತಳ್ಳಬಲ್ಲವು. ಆತನ ಅಷ್ಟೂ ಶ್ರಮವನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿಬಿಡುತ್ತದೆ. ಹಾಗಾದರೆ ಯಾವುವು ಅಂತಹ ದುರ್ಗುಣಗಳು? ಮುಖ್ಯವಾಗಿ ವಿದ್ಯೆ, ಸಂಪತ್ತು ಮತ್ತು ಸೇನೆಯನ್ನು ನಾಶಪಡಿಸುವ ಗುಣಲಕ್ಷಣಗಳು ಯಾವುವು ತಿಳಿಯೋಣ ಬನ್ನೀ.

ಅಭ್ಯಾಸ ಮಾಡದಿರುವುದು ನೀವು ಎಷ್ಟೇ ಪ್ರತಿಭಾಶಾಲಿ ಆಗಿದ್ದರೂ ನಿಮ್ಮ ಪ್ರತಭೆಯನ್ನು ಪುಟಕಿಟ್ಟ ಚಿನ್ನದಂತೆ ಕಂಗೊಳಿಸುವಂತಿರಬೇಕು ಅಂದ್ರೆ ಅಭ್ಯಾಸ ಕ್ರಮವನ್ನು ಸದಾ ಜಾರಿಯಲ್ಲಿಟ್ಟಿರಬೇಕು. ಅಭ್ಯಾಸದಿಂದ ನಿಮ್ಮ ಕೆಲಸದ ನಿಖರತೆ ಮತ್ತು ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಬಹುದು.

ಆದರೆ ಅಭ್ಯಾಸವನ್ನೇ ಮಾಡಲಿಲ್ಲ ಅಂತಾದರೆ ನಿಧಾನಕ್ಕೆ ಎಲ್ಲವನ್ನೂ ಮರೆತುಬಿಡುತ್ತೀರಿ. ವರ್ಷಾನುಗಟ್ಟಲೆಯಿಂದ ಕಲಿತಿರುವ ವಿದ್ಯೆಯ ವಿನಾಶ ಆಗುತ್ತೆ. ನಿರಂತರ ಅಭ್ಯಾಸದಿಂದ ನೈಪುಣ್ಯತೆ ಸಾಧಿಸಬಹುದಾಗಿದೆ. ಸಾಫಲ್ಯತೆ ಹೊಂದಬೇಕು ಅಂದರೆ ಕೆಲಸದಲ್ಲಿ ನೈಪುಣ್ಯತೆ ಸಾಧಿಸಲೇಬೇಕು, ಅಲ್ಲವಾ!

ಇತರರನ್ನು ನಂಬಿ ಹಣವನ್ನು ಅವರ ಸುಪರ್ದಿಗೆ ನೀಡುವುದು ವಾಸ್ತವವಾಗಿ ನೀವು ಹಣ ಗಳಿಸಬೇಕು ಅಂದರೆ ಅದರ ಕಾಳಜಿಯನ್ನು ನೀವು ವಹಿಸಬೇಕು. ಒಂದು ವೇಳೆ ಬೇರೆಯವರ ಮೇಲೆ ನಂಬಿಕೆಯಿಟ್ಟು ಹಣದ ವ್ಯವಹಾರವನ್ನು ಅವರಿಗೆ ಒಪ್ಪಿಸಿದರೆ ಹಾಳಾಗುವುದು ನಿಶ್ಚಿತ. ಬೇರೆಯವರ ಕೈಗೆ ಹಣ ಕೊಟ್ಟರೆ ಅವರಿಂದ ಮೋಸವಾಗುವುದು ನಿಶ್ಚಿತ. ಕೊನೆಗೆ ನಿಮ್ಮ ಹಣದ ಮೇಲೆ ನಿಮಗೆ ಅಧಿಕಾರ ಇಲ್ಲದೇ ಹೋಗಬಹುದು. ಹಾಗಾಗಿಯೇ ಚಾಣಕ್ಯ ಅಂದೇ ಹೇಳಿರುವುದು ಧನ ಸಂಪತ್ತಿನ ಮೇಲೆ ಸರಿಯಾದ ಹಿಡಿತ ಹೊಂದಿದ್ದು, ಅದರ ಜವಾಬ್ದಾರಿಯನ್ನ ನೀವೇ ಹೊರಬೇಕಾಗುತ್ತದೆ.

ಸೇನಾಪತಿ ಇಲ್ಲದಿದ್ದರೆ ಸೇನೆ ನಾಶವಾಗುವುದು ನಿಶ್ಚಿತ ಯಾವುದೇ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಬೇಕು ಅಂದರೆ ಅದನ್ನು ಬಿಡಿ ಬಿಡಿಯಾಗಿ ಬೇರೆಯವರ ಜವಾಬ್ದಾರಿಗೆ ನೀಡಬೇಕು. ಸೇನೆಯಲ್ಲಿ ಸೇನೆಯನ್ನು ಮುನ್ನಡೆಸುವ ಜವಾಬ್ದಾರಿ ಸೇನಾಪತಿಯದ್ದಾಗಿರುತ್ತದೆ. ಆತನೇ ಸೇನೆಯ ಮಾರ್ಗದರ್ಶಕ ಆಗಿರುತ್ತಾನೆ. ಆದರೆ ಯಾವುದೇ ಸೇನೆಗೆ ಸೇನಾಪತಿಯೇ ಇಲ್ಲಾ ಅಂತಾದರೆ ಆ ಸೇನೆ ತುಂಡು ತುಂಡಾಗಿ ಬಿಡುತ್ತದೆ. ಒಗ್ಗಟ್ಟಿನಿಂದ ಒಟ್ಟುಗೂಡಿರುವುದಿಲ್ಲ. ಇಡೀ ಸೇನೆಯನ್ನು ಹಳ್ಳ ಹಿಡಿಸಿಬಿಡುತ್ತದೆ.

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು