AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಣಕ್ಯ ನೀತಿ: ಈ ದುರ್ಗುಣಗಳು ವಿದ್ಯೆ, ಸಂಪತ್ತನ್ನು ನಾಶ ಪಡಿಸುತ್ತದೆ; ಸೇನೆಯನ್ನೂ ಅಧೀರನನ್ನಾಗಿಸುತ್ತದೆ

ಮನುಷ್ಯನ ಕೆಲವು ಕೆಟ್ಟ ಗುಣಗಳು, ಚಟಗಳು ಆತನನ್ನು ಪಾತಾಳಕ್ಕೆ ತಳ್ಳಬಲ್ಲವು. ಆತನ ಅಷ್ಟೂ ಶ್ರಮವನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿಬಿಡುತ್ತದೆ. ಹಾಗಾದರೆ ಯಾವುವು ಅಂತಹ ದುರ್ಗುಣಗಳು? ಮುಖ್ಯವಾಗಿ ವಿದ್ಯೆ, ಸಂಪತ್ತು ಮತ್ತು ಸೇನೆಯನ್ನು ನಾಶಪಡಿಸುವ ಗುಣಲಕ್ಷಣಗಳು ಯಾವುವು ತಿಳಿಯೋಣ ಬನ್ನೀ.

ಚಾಣಕ್ಯ ನೀತಿ: ಈ ದುರ್ಗುಣಗಳು ವಿದ್ಯೆ, ಸಂಪತ್ತನ್ನು ನಾಶ ಪಡಿಸುತ್ತದೆ; ಸೇನೆಯನ್ನೂ ಅಧೀರನನ್ನಾಗಿಸುತ್ತದೆ
ಚಾಣಕ್ಯ ನೀತಿ: ಈ ದುರ್ಗುಣಗಳು ವಿದ್ಯೆ, ಸಂಪತ್ತನ್ನು ನಾಶ ಪಡಿಸುತ್ತದೆ; ಸೇನೆಯನ್ನೂ ಅಧೀರನನ್ನಾಗಿಸುತ್ತದೆ
TV9 Web
| Updated By: ಆಯೇಷಾ ಬಾನು|

Updated on: Oct 10, 2021 | 7:05 AM

Share

ಆಚಾರ್ಯ ಚಾಣಕ್ಯ ಪ್ರಕಾರ ಕೆಲವು ದುರ್ಗುಣಗಳು ವಿದ್ಯೆ ಮತ್ತು ಸಂಪತ್ತನ್ನು ನಾಶ ಪಡಿಸುತ್ತದೆ. ವಿಸ್ತರಿಸಿ ಹೇಳುವುದಾದರೆ ದೇಶ ಕಾಯುವ ಸೇನೆಯನ್ನು ನಾಶ ಮಾಡಿಬಿಡುತ್ತದೆ. ಚಾಣಕ್ಯ ಅಂದು ಹೇಳಿದ ಆ ಮಾತುಗಳು ಇಂದಿಗೂ ಪ್ರಸ್ತುತ ಎನಿಸುತ್ತದೆ. ಅಚಾರ್ಯ ಚಾಣಕ್ಯನ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿರುವ ಕೆಲ ಚಟಗಳು ಮನುಷ್ಯನನ್ನು ನಾಶ ಮಾಡಿಬಿಡುತ್ತದೆ.

ಆಚಾರ್ಯ ಚಾಣಕ್ಯ (Acharya Chanakya) ಅಸಾಧಾರಣ ವ್ಯಕ್ತಿ, ಮೌರ್ಯ ವಂಶ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತನ್ನ ಕೂಟನೀತಿ ಮತ್ತು ಕುಶಾಗ್ರ ಬುದ್ಧಿಯಿಂದ ಇತಿಹಾಸದ ಗತಿಯನ್ನೇ ಬದಲಿಸಿ ನಂದ ವಂಶವನ್ನು ಕೊನೆಗಾಣಿಸಿ ಚಂದ್ರಗುಪ್ತ ಮೌರ್ಯನನ್ನು ಸಾಮ್ರಾಟನನ್ನಾಗಿಸಿದ ಹಿರಿಮೆ ಈತನದು. ಇಂದಿಗೂ ಚಾಣಕ್ಯನನ್ನು ಕುಶಾಲ ಅರ್ಥಶಾಸ್ತ್ರಜ್ಞ, ಪ್ರಕಾಂಡ ಪಂಡಿತ, ಕೂಟನೀತಿಜ್ಞ ಮತ್ತು ಅತ್ಯುತ್ತಮ ಜೀವನ ಮಾರ್ಗದರ್ಶಿ ರೂಪದಲ್ಲಿ ನೆನಪಿಸಿಕೊಳ್ಳಬಹುದು.

ಮನುಷ್ಯನ ಕೆಲವು ಕೆಟ್ಟ ಗುಣಗಳು, ಚಟಗಳು ಆತನನ್ನು ಪಾತಾಳಕ್ಕೆ ತಳ್ಳಬಲ್ಲವು. ಆತನ ಅಷ್ಟೂ ಶ್ರಮವನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿಬಿಡುತ್ತದೆ. ಹಾಗಾದರೆ ಯಾವುವು ಅಂತಹ ದುರ್ಗುಣಗಳು? ಮುಖ್ಯವಾಗಿ ವಿದ್ಯೆ, ಸಂಪತ್ತು ಮತ್ತು ಸೇನೆಯನ್ನು ನಾಶಪಡಿಸುವ ಗುಣಲಕ್ಷಣಗಳು ಯಾವುವು ತಿಳಿಯೋಣ ಬನ್ನೀ.

ಅಭ್ಯಾಸ ಮಾಡದಿರುವುದು ನೀವು ಎಷ್ಟೇ ಪ್ರತಿಭಾಶಾಲಿ ಆಗಿದ್ದರೂ ನಿಮ್ಮ ಪ್ರತಭೆಯನ್ನು ಪುಟಕಿಟ್ಟ ಚಿನ್ನದಂತೆ ಕಂಗೊಳಿಸುವಂತಿರಬೇಕು ಅಂದ್ರೆ ಅಭ್ಯಾಸ ಕ್ರಮವನ್ನು ಸದಾ ಜಾರಿಯಲ್ಲಿಟ್ಟಿರಬೇಕು. ಅಭ್ಯಾಸದಿಂದ ನಿಮ್ಮ ಕೆಲಸದ ನಿಖರತೆ ಮತ್ತು ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಬಹುದು.

ಆದರೆ ಅಭ್ಯಾಸವನ್ನೇ ಮಾಡಲಿಲ್ಲ ಅಂತಾದರೆ ನಿಧಾನಕ್ಕೆ ಎಲ್ಲವನ್ನೂ ಮರೆತುಬಿಡುತ್ತೀರಿ. ವರ್ಷಾನುಗಟ್ಟಲೆಯಿಂದ ಕಲಿತಿರುವ ವಿದ್ಯೆಯ ವಿನಾಶ ಆಗುತ್ತೆ. ನಿರಂತರ ಅಭ್ಯಾಸದಿಂದ ನೈಪುಣ್ಯತೆ ಸಾಧಿಸಬಹುದಾಗಿದೆ. ಸಾಫಲ್ಯತೆ ಹೊಂದಬೇಕು ಅಂದರೆ ಕೆಲಸದಲ್ಲಿ ನೈಪುಣ್ಯತೆ ಸಾಧಿಸಲೇಬೇಕು, ಅಲ್ಲವಾ!

ಇತರರನ್ನು ನಂಬಿ ಹಣವನ್ನು ಅವರ ಸುಪರ್ದಿಗೆ ನೀಡುವುದು ವಾಸ್ತವವಾಗಿ ನೀವು ಹಣ ಗಳಿಸಬೇಕು ಅಂದರೆ ಅದರ ಕಾಳಜಿಯನ್ನು ನೀವು ವಹಿಸಬೇಕು. ಒಂದು ವೇಳೆ ಬೇರೆಯವರ ಮೇಲೆ ನಂಬಿಕೆಯಿಟ್ಟು ಹಣದ ವ್ಯವಹಾರವನ್ನು ಅವರಿಗೆ ಒಪ್ಪಿಸಿದರೆ ಹಾಳಾಗುವುದು ನಿಶ್ಚಿತ. ಬೇರೆಯವರ ಕೈಗೆ ಹಣ ಕೊಟ್ಟರೆ ಅವರಿಂದ ಮೋಸವಾಗುವುದು ನಿಶ್ಚಿತ. ಕೊನೆಗೆ ನಿಮ್ಮ ಹಣದ ಮೇಲೆ ನಿಮಗೆ ಅಧಿಕಾರ ಇಲ್ಲದೇ ಹೋಗಬಹುದು. ಹಾಗಾಗಿಯೇ ಚಾಣಕ್ಯ ಅಂದೇ ಹೇಳಿರುವುದು ಧನ ಸಂಪತ್ತಿನ ಮೇಲೆ ಸರಿಯಾದ ಹಿಡಿತ ಹೊಂದಿದ್ದು, ಅದರ ಜವಾಬ್ದಾರಿಯನ್ನ ನೀವೇ ಹೊರಬೇಕಾಗುತ್ತದೆ.

ಸೇನಾಪತಿ ಇಲ್ಲದಿದ್ದರೆ ಸೇನೆ ನಾಶವಾಗುವುದು ನಿಶ್ಚಿತ ಯಾವುದೇ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಬೇಕು ಅಂದರೆ ಅದನ್ನು ಬಿಡಿ ಬಿಡಿಯಾಗಿ ಬೇರೆಯವರ ಜವಾಬ್ದಾರಿಗೆ ನೀಡಬೇಕು. ಸೇನೆಯಲ್ಲಿ ಸೇನೆಯನ್ನು ಮುನ್ನಡೆಸುವ ಜವಾಬ್ದಾರಿ ಸೇನಾಪತಿಯದ್ದಾಗಿರುತ್ತದೆ. ಆತನೇ ಸೇನೆಯ ಮಾರ್ಗದರ್ಶಕ ಆಗಿರುತ್ತಾನೆ. ಆದರೆ ಯಾವುದೇ ಸೇನೆಗೆ ಸೇನಾಪತಿಯೇ ಇಲ್ಲಾ ಅಂತಾದರೆ ಆ ಸೇನೆ ತುಂಡು ತುಂಡಾಗಿ ಬಿಡುತ್ತದೆ. ಒಗ್ಗಟ್ಟಿನಿಂದ ಒಟ್ಟುಗೂಡಿರುವುದಿಲ್ಲ. ಇಡೀ ಸೇನೆಯನ್ನು ಹಳ್ಳ ಹಿಡಿಸಿಬಿಡುತ್ತದೆ.

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು