Sign In

By signing in or creating an account, you agree with Associated Broadcasting Company's Terms & Conditions and Privacy Policy.

MahaLakshmi Vrat 2023: ಇಂದು ಮಹಾಲಕ್ಷ್ಮಿ ವ್ರತದ ಕೊನೆಯ ದಿನ, ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

ಈ ವರ್ಷ ಮಹಾಲಕ್ಷ್ಮಿ ವ್ರತವು ಸೆಪ್ಟೆಂಬರ್ 22ರಂದು ಪ್ರಾರಂಭವಾಗಿದ್ದು, ಇದು ಅಶ್ವಿನಿ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಅಂದರೆ ಇಂದು(ಅ06) ಕೊನೆಗೊಳ್ಳುತ್ತಿದೆ. ಆದ್ದರಿಂದ ನಿಮ್ಮ ವ್ರತವು ಸಂಪೂರ್ಣವಾಗಿ ಫಲಪ್ರದವಾಗಬೇಕಾದರೆ ಈ ಕೊನೆಯ ದಿನದಂದು ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.

MahaLakshmi Vrat 2023: ಇಂದು ಮಹಾಲಕ್ಷ್ಮಿ ವ್ರತದ ಕೊನೆಯ ದಿನ, ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
Maha Lakshmi Vrat 2023Image Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Oct 06, 2023 | 11:03 AM

ಇಂದು ಪಿತೃ ಪಕ್ಷದಲ್ಲಿ ಬರುವ ಮಹಾಲಕ್ಷ್ಮೀ ವೃತದ ಕೊನೆಯ ದಿನ. ಈ ವರ್ಷ ಸೆಪ್ಟೆಂಬರ್ 22 ರಿಂದ ಪ್ರಾರಂಭವಾದ ಈ ಉಪವಾಸವನ್ನು 16 ದಿನಗಳವರೆಗೆ ಅಂದರೆ ಇಂದಿನ ವರೆಗೆ ಆಚರಿಸಲಾಗುತ್ತದೆ. 16 ದಿನಗಳಲ್ಲಿ ಯಾರಿಗಾದರೂ ಮಹಾಲಕ್ಷ್ಮಿಯ ವ್ರತವನ್ನು ಆಚರಿಸಲು ಸಾಧ್ಯವಾಗದಿದ್ದರೆ, ಈ ಉಪವಾಸವನ್ನು ಆಚರಿಸಲು ಇಂದು ಕೊನೆಯ ಅವಕಾಶವಾಗಿದೆ. ಹಿಂದೂ ಧರ್ಮದಲ್ಲಿ ಮಹಾಲಕ್ಷ್ಮಿ ಉಪವಾಸಕ್ಕೆ ಹೆಚ್ಚಿನ ಮಹತ್ವವಿದೆ. ಈ ಅವಧಿಯಲ್ಲಿ, ಒಬ್ಬರು ಲಕ್ಷ್ಮಿ ದೇವಿಗೆ 16 ದಿನಗಳ ಕಾಲ ಉಪವಾಸವನ್ನು ಆಚರಿಸಿ ಭಕ್ತಿಯಿಂದ ಪೂಜಿಸುತ್ತಾರೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವು ಶಾಶ್ವತವಾಗಿ ನಿಮ್ಮ ಮೇಲಿರುತ್ತದೆ ಎಂಬುದು ನಂಬಿಕೆ.

ಅಶ್ವಿನಿ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಅಂದರೆ ಇಂದು ಕೊನೆಗೊಳ್ಳುವ ಈ ದಿನ ಲಕ್ಷ್ಮಿ ದೇವಿಯನ್ನು ಹಿಂದೂ ಸಂಪ್ರದಾಯದ ವಿಧಿವಿಧಾನಗಳ ಪ್ರಕಾರ ಪೂಜಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ ಮತ್ತು ನಿಮ್ಮ ಕುಟುಂಬವು ಸಮೃದ್ಧಿಯನ್ನು ಹೊಂದುತ್ತದೆ. ಅನೇಕ ಜನರು ತಮ್ಮ ಮಕ್ಕಳ ದೀರ್ಘಾಯುಷ್ಯ ಮತ್ತು ಉತ್ತಮ ಭವಿಷ್ಯಕ್ಕಾಗಿ ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ ಮತ್ತು ಸಂಜೆ ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ, ಅವರು ನಕ್ಷತ್ರಗಳಿಗೆ ಅರ್ಘ್ಯವನ್ನು ಅರ್ಪಿಸಿ ಉಪವಾಸವನ್ನು ಮುರಿಯುತ್ತಾರೆ.

ಇದನ್ನೂ ಓದಿ: ಪಿತೃಪಕ್ಷದ ಆಚರಣೆ, ಮಹತ್ವ, ಧರ್ಮ ಸಮ್ಮತವಾದ ಶಾಸ್ತ್ರೋಕ್ತ ವಿವರಗಳು ಇಲ್ಲಿವೆ

ಮಹಾಲಕ್ಷ್ಮಿ ವ್ರತದ ಕೊನೆಯ ದಿನ ಈ ತಪ್ಪುಗಳನ್ನು ಮಾಡಬೇಡಿ:

ಮಹಾಲಕ್ಷ್ಮಿ ವ್ರತದ ದಿನದಂದು ವಿಶೇಷ ಕಾಳಜಿ ವಹಿಸಬೇಕಾದ ಕೆಲವು ನಿಯಮಗಳನ್ನು ತಿಳಿಸಲಾಗಿದೆ. ಮಹಾಲಕ್ಷ್ಮಿ ವ್ರತದ ದಿನ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ.

  • ಮಹಾಲಕ್ಷ್ಮಿಯ ವ್ರತವನ್ನು ಆಚರಿಸುವ ಮೊದಲು, ಶುದ್ಧೀಕರಣ ಬಹಳ ಮುಖ್ಯ.ಮನೆಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳಿ. ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸಿ.
  • ಮಹಾಲಕ್ಷ್ಮಿ ವ್ರತದ ಉಪವಾಸವನ್ನು ಸಂಜೆ ವಿಧಿವಿಧಾನಗಳೊಂದಿಗೆ ಕೊನೆಗೊಳಿಸಲಾಗುತ್ತದೆ. ಆದರೆ ಈ ದಿನ ಲಕ್ಷ್ಮೀ ನಾರಾಯಣ ಮಂತ್ರ ಪಠಿಸಲು ಮರೆಯಬೇಡಿ. ಈ ಮಂತ್ರ ಪಠಣೆಯಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗಿದ್ದಾಳೆ.
  • ಮಹಾಲಕ್ಷ್ಮಿ ವ್ರತದ ದಿನ ಯಾರಿಗೂ ಸಾಲ ಕೊಡಬೇಡಿ, ಯಾರ ಬಳಿಯೂ ಸಾಲ ಮಾಡಬೇಡಿ.
  • ಈ ದಿನ ತಪ್ಪಾಗಿಯೂ ಯಾರನ್ನೂ ಅವಮಾನಿಸಬೇಡಿ ಅಥವಾ ಕೋಪಗೊಳ್ಳಬೇಡಿ. ಇದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು. ಉಪವಾಸದ ಸಮಯದಲ್ಲಿ ಮನಸ್ಸು ಸಂಪೂರ್ಣವಾಗಿ ಶಾಂತವಾಗಿರಬೇಕು.
  • ಈ ದಿನ ಪ್ರತೀಕಾರದ ವಿಷಯಗಳಿಂದ ದೂರವಿರಬೇಕು. ಹೀಗೆ ಮಾಡದಿದ್ದರೆ ತಾಯಿ ಲಕ್ಷ್ಮಿಗೆ ಕೋಪ ಬರಬಹುದು.
  • ಮಹಾಲಕ್ಷ್ಮಿ ವ್ರತದ ದಿನ  ಸೋಮಾರಿಗಳಾಗಬೇಡಿ, ಅಂದರೆ ಇಡೀ ದಿನ ಮಲಗಿಕೊಂಡೇ ಇರಬೇಡಿ. ಇದರಿಂದಾಗಿ ಉಪವಾಸದ ಪೂರ್ಣ ಪ್ರಯೋಜನವನ್ನು ಪಡೆಯುವುದಿಲ್ಲ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ