AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sade Sati: ಶನಿವಾರ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದೇ? ಪದ್ಮ ಪುರಾಣದ ರಹಸ್ಯ ಮತ್ತು ಸಾಡೇ ಸಾತಿಯ ನಿಯಮ ಇಲ್ಲಿದೆ

ಹಿಂದೂ ಧರ್ಮದಲ್ಲಿ ಶನಿವಾರ ಶನಿ ದೇವರಿಗೆ ಪ್ರಿಯವಾದ ದಿನ. ಕರ್ಮಫಲ ನೀಡುವ 'ನ್ಯಾಯಾಧಿಪತಿ' ಶನಿ ದೇವನ ಪ್ರಭಾವವು ಸಾಡೇ ಸಾತಿ, ಧೈಯಾದಲ್ಲಿ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಶನಿವಾರ ತಲೆಗೆ ಎಣ್ಣೆ ಹಚ್ಚಿಕೊಳ್ಳುವುದು ಅಶುಭಕರ. ಪದ್ಮ ಪುರಾಣದ ಪ್ರಕಾರ, ಇದು ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಶನಿ ದೋಷ ನಿವಾರಣೆಗೆ ಎಣ್ಣೆ ದಾನ ಉತ್ತಮ ಪರಿಹಾರ.

Sade Sati: ಶನಿವಾರ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದೇ? ಪದ್ಮ ಪುರಾಣದ ರಹಸ್ಯ ಮತ್ತು ಸಾಡೇ ಸಾತಿಯ ನಿಯಮ ಇಲ್ಲಿದೆ
ಶನಿವಾರ ಶನಿ ಪೂಜೆ
ಅಕ್ಷತಾ ವರ್ಕಾಡಿ
|

Updated on: Jul 25, 2026 | 9:18 AM

Share

ಮುಖ್ಯಾಂಶಗಳು

  • ಹಿಂದೂ ಧರ್ಮದಲ್ಲಿ ಶನಿವಾರ ಶನಿ ದೇವರಿಗೆ ಪ್ರಿಯವಾದ ದಿನ.
  • ಕರ್ಮಫಲ ನೀಡುವ 'ನ್ಯಾಯಾಧಿಪತಿ' ಶನಿ ದೇವನ ಪ್ರಭಾವವು ಸಾಡೇ ಸಾತಿ, ಧೈಯಾದಲ್ಲಿ ಹೆಚ್ಚಾಗಿರುತ್ತದೆ.
  • ಈ ಅವಧಿಯಲ್ಲಿ ಶನಿವಾರ ತಲೆಗೆ ಎಣ್ಣೆ ಹಚ್ಚಿಕೊಳ್ಳುವುದು ಅಶುಭಕರ.

ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿವಾರವನ್ನು ಶನಿ ದೇವರಿಗೆ ಅತ್ಯಂತ ಪ್ರಿಯವಾದ ದಿನವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಕರ್ಮಗಳಿಗೆ ತಕ್ಕಂತೆ ಫಲ ನೀಡುವ ಶನಿದೇವನನ್ನು “ನ್ಯಾಯಾಧಿಪತಿ” ಎಂದೂ ಕರೆಯಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಶನಿಯು ಅತ್ಯಂತ ಮಂದಗತಿಯ ಗ್ರಹವಾಗಿದ್ದು, ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಸುಮಾರು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಶನಿ ದೋಷ, ಧೈಯಾ ಅಥವಾ ಸಾಡೇ ಸಾತಿಯ ಪ್ರಭಾವದಿಂದ ಮುಕ್ತಿ ಪಡೆಯಲು ಶನಿವಾರದಂದು ವಿಶೇಷ ಪೂಜೆ, ಉಪವಾಸ ಮತ್ತು ದಾನ-ಧರ್ಮಗಳನ್ನು ಮಾಡಲಾಗುತ್ತದೆ.

ಪದ್ಮ ಪುರಾಣದ ಶಾಸ್ರ್ತೀಯ ನಿಯಮಗಳು:

ಧಾರ್ಮಿಕ ಗ್ರಂಥವಾದ ಪದ್ಮ ಪುರಾಣದ ಉತ್ತರಖಂಡದ 33 ಮತ್ತು 34ನೇ ಅಧ್ಯಾಯಗಳಲ್ಲಿ ಶನಿ ದೇವರನ್ನು ಪೂಜಿಸುವ ಮತ್ತು ಆರಾಧಿಸುವ ವಿಧಿವಿಧಾನಗಳನ್ನು ಅತ್ಯಂತ ವಿವರವಾಗಿ ಉಲ್ಲೇಖಿಸಲಾಗಿದೆ. ಶನಿವಾರದ ಪೂಜೆಯ ಸಮಯದಲ್ಲಿ ಶನಿ ದೇವರಿಗೆ ಎಣ್ಣೆ, ಕಪ್ಪು ಎಳ್ಳು ಮತ್ತು ಇತರ ಪವಿತ್ರ ದ್ರವ್ಯಗಳನ್ನು ಅರ್ಪಿಸುವುದು ಅತ್ಯಂತ ಶುಭಪ್ರದ. ಆದಾಗ್ಯೂ, ಈ ಪೂಜಾ ಆಚರಣೆಗಳಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ, ಅದರಲ್ಲಿ ಮುಖ್ಯವಾಗಿ ಶನಿವಾರದಂದು ಸ್ವಂತ ತಲೆಗೆ ಎಣ್ಣೆ ಹಚ್ಚಿಕೊಳ್ಳುವುದು ಸಂಪೂರ್ಣವಾಗಿ ನಿಷಿದ್ಧವಾಗಿದೆ.

ಸಾಡೇ ಸಾತಿಯ ಅವಧಿಯಲ್ಲಿ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದಿರುವುದಕ್ಕೆ ಕಾರಣಗಳು:

ಶನಿಯ ಸಾಡೇ ಸಾತಿ ಅಥವಾ ಧೈಯಾದ ಪ್ರಭಾವದಲ್ಲಿರುವವರು ಶನಿವಾರದಂದು ತಲೆಗೆ ಎಣ್ಣೆ ಹಚ್ಚಿಕೊಳ್ಳುವುದನ್ನು ತಪ್ಪಿಸಬೇಕು. ಶನಿ ದೇವರಿಗೆ ಅರ್ಪಿಸುವ ಸಾಸಿವೆ ಅಥವಾ ಎಳ್ಳೆಣ್ಣೆಯನ್ನು ಅಂದು ಸ್ವಂತ ದೇಹಸೌಂದರ್ಯಕ್ಕೆ ಅಥವಾ ಬಳಕೆಗೆ ಉಪಯೋಗಿಸಬಾರದು ಎಂಬುದು ಶಾಸ್ತ್ರೀಯ ನಿಯಮ. ಸಾಡೇ ಸಾತಿ ಅವಧಿಯಲ್ಲಿ ಜಾತಕದಲ್ಲಿ ಶನಿಯ ಪ್ರಭಾವ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಶನಿವಾರ ತಲೆಗೆ ಎಣ್ಣೆ ಹಚ್ಚಿಕೊಂಡರೆ ಮಾನಸಿಕ ಒತ್ತಡ ಹೆಚ್ಚಾಗುವುದು, ಕೈಗೊಂಡ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುವುದು ಮತ್ತು ನಿರೀಕ್ಷಿತ ಧನಾಗಮನಕ್ಕೆ ತೊಂದರೆಯಾಗಿ ಆರ್ಥಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಈ ವಿಶೇಷ ಪರಿಸ್ಥಿತಿಯಲ್ಲಿರುವವರು ಶನಿವಾರ ಎಣ್ಣೆ ಬಳಸಬಾರದು:

ಕೆಲವು ನಿರ್ದಿಷ್ಟ ರಾಶಿ ಮತ್ತು ಜಾತಕದ ಪರಿಸ್ಥಿತಿಯಲ್ಲಿರುವವರು ಶನಿವಾರ ತಲೆಗೆ ಎಣ್ಣೆ ಹಚ್ಚುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಪ್ರಸ್ತುತ ಸಾಡೇ ಸಾತಿಯ ವಿವಿಧ ಹಂತಗಳನ್ನು ಎದುರಿಸುತ್ತಿರುವ ಮೇಷ, ಮೀನ ಮತ್ತು ಕುಂಭ ರಾಶಿಯವರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರ ಜೊತೆಗೆ, ಶನಿಯ ಮಹಾದಶಾ ಅಥವಾ ಏಳನೇ ದಿನದ ಅಧಿಪತಿಯಾದ ಸೂರ್ಯನ ಬಲವಾದ ಪ್ರಭಾವದಲ್ಲಿ ಜನಿಸಿದವರು ಕೂಡ ಎಚ್ಚರ ವಹಿಸಬೇಕು. ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶನಿಯನ್ನು ತಂದೆ-ಮಗನೆಂದು ಪರಿಗಣಿಸಿದರೂ ಅವರನ್ನು ಪರಸ್ಪರ ಶತ್ರುಗಳೆಂದು ಕರೆಯಲಾಗುತ್ತದೆ, ಆದ್ದರಿಂದ ಶನಿಯ ಪ್ರಭಾವಕ್ಕೆ ವಿರುದ್ಧವಾದ ಕ್ರಿಯೆಗಳನ್ನು ಅಂದು ಮಾಡಬಾರದು.

ಶನಿ ದೋಷ ನಿವಾರಣೆ ಮತ್ತು ಪರಿಹಾರ ಮಾರ್ಗಗಳು:

ಶನಿ ದೋಷದ ಪ್ರಭಾವವನ್ನು ಕಡಿಮೆ ಮಾಡಲು ಶನಿವಾರದಂದು ಎಣ್ಣೆ, ಕಪ್ಪು ಎಳ್ಳು, ಉದ್ದಿನ ಬೇಳೆ ಮತ್ತು ಕಬ್ಬಿಣದ ವಸ್ತುಗಳನ್ನು ದಾನ ಮಾಡುವ ಪರಿಪಾಠವಿದೆ. ಹೀಗೆ ದಾನ ಧರ್ಮದಲ್ಲಿ ತೊಡಗಿಕೊಳ್ಳುವವರು ಅಂದು ಅವರ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದು. ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅಭಿಷೇಕವಾಗಿ ಅರ್ಪಿಸಿ, ಅಗತ್ಯವಿರುವ ಬಡವರಿಗೆ ದಾನ ಮಾಡುವುದು ಶನಿಯ ಕೃಪೆಗೆ ಪಾತ್ರರಾಗಲು ಅತ್ಯುತ್ತಮ ಮಾರ್ಗವಾಗಿದೆ. ಬಾಹ್ಯ ಆಚರಣೆಗಳ ಜೊತೆಗೆ, ಸದಾಚಾರದಿಂದ ಜೀವಿಸುವುದು ಮತ್ತು ಇತರರಿಗೆ ಹಾನಿ ಮಾಡದಿರುವುದೇ ಶನಿದೇವನ ನಿಜವಾದ ಕೃಪೆಯನ್ನು ತರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us