AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shani Jayanti 2021: ಶನಿ ದೇವರ ಆರಾಧನೆಯ ಮಹತ್ವ, ಪೂಜಾ ವಿಧಾನ ತಿಳಿಯಿರಿ

ಶನಿ ಜಯಂತಿ: ಅಮಾವಾಸ್ಯೆಯ ದಿನದಂದು ಪವಿತ್ರವಾದ ಶುದ್ಧ ಜನದಲ್ಲಿ ಸ್ನಾನ ಮಾಡಿ ಶನಿ ದೇವನ ಮೊರೆ ಹೋಗುವ ಪದ್ಧತಿ ಸಾಂಪ್ರದಾಯಿಕವಾಗಿ ಬಂಧಂತದ್ದು. ನಾವು ಗೊತ್ತಿದ್ದು ಮಾಡಿರುವ ಹಾಗೂ ಕೆಲವು ಅಚಾತುರ್ಯದಿಂದ ನಡೆದ ತಪ್ಪುಗಳಿಗೆಲ್ಲಾ ಶನಿ ದೇವನು ಫಲ ನೀಡುತ್ತಾನೆ ಎಂಬ ನಂಬಿಕೆ ಇದೆ.

Shani Jayanti 2021: ಶನಿ ದೇವರ ಆರಾಧನೆಯ ಮಹತ್ವ, ಪೂಜಾ ವಿಧಾನ ತಿಳಿಯಿರಿ
ಶನಿ
TV9 Web
| Updated By: shruti hegde|

Updated on: Jun 10, 2021 | 11:13 AM

Share

ನಾವು ಮಾಡಿದ ತಪ್ಪು-ಸರಿಗಳಿಗೆ ಶನೀಶ್ವರ ನಮಗೆ ತಕ್ಕ ಫಲ ಕೊಡುತ್ತಾನೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ. ಇಂದು (ಜೂನ್​ 10) ಶನೀಶ್ವರನ ಆರಾಧನೆಯನ್ನು ಮಾಡಲಾಗುತ್ತಿದೆ. ಶನಿ ದೇವರನ್ನು ಆರಾಧನೆಯ ಮಹತ್ವವೇನು ಮತ್ತು ಈ ದಿನವನ್ನು ಹೇಗೆ ಆಚರಿಸಬೇಕು ಎಂಬುದರ ಕುರಿತಾಗಿ ತಿಳಿದುಕೊಳ್ಳೋಣ.

ಶನಿ ದೇವನು ಜ್ಯೇಷ್ಠ ಅಮಾವಾಸ್ಯೆಯ ದಿನದಂದು ಹುಟ್ಟಿದನು. ಹಾಗಾಗಿ ಈ ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಅಮಾವಾಸ್ಯೆಯ ದಿನದಂದು ಪವಿತ್ರವಾದ ಶುದ್ಧ ಜಲದಲ್ಲಿ ಸ್ನಾನ ಮಾಡಿ ಶನಿ ದೇವನ ಮೊರೆ ಹೋಗುವ ಪದ್ಧತಿ ಸಾಂಪ್ರದಾಯಿಕವಾಗಿ ಬಂಧಂತದ್ದು. ನಾವು ಗೊತ್ತಿದ್ದು ಮಾಡಿರುವ ಹಾಗೂ ಕೆಲವು ಅಚಾತುರ್ಯದಿಂದ ನಡೆದ ತಪ್ಪುಗಳಿಗೆಲ್ಲಾ ಶನಿ ದೇವನು ಫಲ ನೀಡುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಇಂದು ಶನಿ ದೇವರ ಮಂತ್ರ ಪಠಿಸುತ್ತಾ ಈ ದಿನ ಭಕ್ತರು ಧ್ಯಾನಸ್ಥರಾಗುತ್ತಾರೆ.

ಇಂದಿನ ಪೂಜಾ ಕ್ರಮ ಹೇಗೆ? ನಿನ್ನೆ ಮಧ್ಯಾಹ್ನ 1 ಗಂಟೆ 57 ನಿಮಿಷದಿಂದ ಶನಿ ದೇವರ ಪೂಜೆಯ ಮೂಹೂರ್ತ ಪ್ರಾರಂಭವಾಗಿದೆ. ಇಂದು ಸಂಜೆ ನಾಲ್ಕು ಗಂಟೆ 22 ನಿಮಿಷದ ವರೆಗೂ ಪೂಜಿಸಲು ಮುಹೂರ್ತವಿದೆ.

* ಶುದ್ಧ ನೀರಿನಲ್ಲಿ ಸ್ನಾನ ಮಾಡಿ * ಶುಭ್ರ ಬಟ್ಟೆಯನ್ನು ಧರಿಸಿ * ಇಂದು ಸಂಕಲ್ಪ ಕೈಗೊಳ್ಳಲು ಒಳ್ಳೆಯ ದಿನ * ಪ್ರಾಮಾಣಿಕವಾಗಿ ವೃತವನ್ನು ಕೈಗೊಂಡು ಭಕ್ತಿಯಿಂದ ಶನಿ ದೇವರನ್ನು ನೆನೆಯಿರಿ * ಎಳ್ಳೆಣ್ಣೆಯಿಂದ ದೀಪ ಬೆಳಗಿಸಿ * ಹನುಮಾನ್​ ಚಾಲೀಸ​ ಮಂತ್ರವನ್ನು ಪಠಿಸಿ * ನಿಮ್ಮ ಕೈಲಾದಷ್ಟು ದಾನ-ಧರ್ಮ ಮಾಡುವುದರದಲ್ಲಿ ಈ ದಿನವನ್ನು ತೊಡಗಿಸಿಕೊಳ್ಳಿ

ಈ ದಿನದಂದು ಏನು ಮಾಡಬಾರದು? * ಅಕ್ಕಿ-ಗೋಧಿಯಿಂದ ತಯಾರಿಸಿ ಯಾವುದೇ ಆಹಾರವನ್ನು ಸೇವಿಸಬೇಡಿ * ಈರುಳ್ಳಿ-ಬೆಳ್ಳಿ ಪದಾರ್ಥದಿಂದ ದೂರವಿರಿ * ಮಾಂಸ-ಮೊಟ್ಟೆಗಳನ್ನು ಇಂದು ಸೇವಿಸುವುದು ಬೇಡ * ತಂಬಾಕು-ಮದ್ಯ ಸೇವನೆಯನ್ನು ಇಂದು ಕಟ್ಟುನಿಟ್ಟಾಗಿ ಸೇವಿಸಿ * ನಿಮ್ಮ ಕೋಪದ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ * ಹೆಚ್ಚು ಚರ್ಚೆ ಅಥವಾ ವಾದಗಳಿಗೆ ಇಳಿಯಬೇಡಿ * ಇತರರಿಗೆ ನೋವುಂಟು ಮಾಡುವ ಕೆಲಸಗಳನ್ನು ಮಾಡಬೇಡಿ

ಇದನ್ನೂ ಓದಿ:

ಜಗತ್ತಿಗೆ ಬೆಳಕು ನೀಡುವ ಸೂರ್ಯನ ಆರಾಧನೆಯಿಂದ ಬಾಳಲ್ಲಿರುವ ಕತ್ತಲು ದೂರವಾಗುತ್ತೆ; ಇಲ್ಲಿದೆ ಅಧಿಪತಿಯನ್ನು ಒಲಿಸಿಕೊಳ್ಳುವ ಮಂತ್ರಗಳು

Sade sati: ಏಳರಾಟ ಶನಿ ಅಂದರೇನು, ಏನಿದರ ಪ್ರಭಾವ, ಜನರು ಯಾಕಿಷ್ಟು ಹೆದರುತ್ತಾರೆ?

ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ