AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಗಣೇಶ ಉತ್ಸವದಲ್ಲಿ ಮಣ್ಣಿನ ಗಣೇಶ ಪೂಜೆ ಸಾಮಾನ್ಯವಾದರೂ, ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೋ ಎಂಬ ಗೊಂದಲವಿದೆಯೇ? ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ, ಬೆಳ್ಳಿ ಗಣೇಶ ಸಂಪತ್ತು, ಸಮೃದ್ಧಿ, ಕೀರ್ತಿ ಮತ್ತು ಶಾಂತಿಯನ್ನು ತರುತ್ತದೆ. ಸರಿಯಾದ ದಿಕ್ಕಿನಲ್ಲಿ ಸ್ಥಾಪಿಸಿ, ನಿತ್ಯ ಪೂಜಿಸುವುದರಿಂದ ಸಾಲಬಾಧೆ ಮುಕ್ತಿ ಹೊಂದಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ಇದರ ಪ್ರಯೋಜನಗಳನ್ನು ತಿಳಿದುಕೊಳ್ಳಿ.

ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೇ?  ವಾಸ್ತು ಶಾಸ್ತ್ರ ಹೇಳುವುದೇನು?
ಗಣಪತಿ ಪೂಜೆImage Credit source: Getty Images
TV9 Web
| Edited By: |

Updated on: Sep 19, 2026 | 4:28 PM

Share

ಗಣೇಶ ಉತ್ಸವದ ಸಮಯದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಗಣಪತಿ ಪೂಜೆ ಪುರಸ್ಕಾರಗಳು ಸಡಗರದಿಂದ ನಡೆಯುತ್ತವೆ. ಸಾಮಾನ್ಯವಾಗಿ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅನಂತ ಚತುರ್ದಶಿಯಂದು ವಿಸರ್ಜನೆ ಮಾಡಲಾಗುತ್ತದೆ. ಆದರೆ, ಹಲವರು ತಮ್ಮ ಮನೆಗಳಲ್ಲಿ ಎಂದಿಗೂ ವಿಸರ್ಜಿಸದ ಬೆಳ್ಳಿಯ ಗಣೇಶ ಮೂರ್ತಿಯನ್ನು ಇಟ್ಟು ನಿತ್ಯವೂ ಪೂಜಿಸುತ್ತಾರೆ. ಆದರೆ ಬೆಳ್ಳಿಯ ಗಣೇಶನ ಮೂರ್ತಿ ಇಡುವುದು ಶುಭವೇ ಎಂಬ ಗೊಂದಲ ಸಾಕಷ್ಟು ಜನರಲ್ಲಿದೆ. ಇದಕ್ಕೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.

ಸಂಪತ್ತು, ಸಮೃದ್ಧಿ ಮತ್ತು ಕೀರ್ತಿ ವೃದ್ಧಿ:

ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬೆಳ್ಳಿಯ ಗಣೇಶನ ಮೂರ್ತಿ ಇಡುವುದು ಅತ್ಯಂತ ಶುಭ ಹಾಗೂ ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. ಚಂದ್ರನಿಗೆ ಸಂಬಂಧಿಸಿದ ಬೆಳ್ಳಿಯನ್ನು ಪವಿತ್ರ ಹಾಗೂ ತಂಪು ನೀಡುವ ಲೋಹವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಬೆಳ್ಳಿಯ ಗಣೇಶನನ್ನು ಇಡುವುದರಿಂದ ಆರ್ಥಿಕ ಲಾಭ ಹೆಚ್ಚಾಗಿ, ಮನೆಗೆ ಲಕ್ಷ್ಮಿಯ ಆಗಮನವಾಗುತ್ತದೆ. ಜೊತೆಗೆ ಬೆಳ್ಳಿ ಗಣೇಶನ ನಿತ್ಯ ಪೂಜೆಯಿಂದ ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗುತ್ತದೆ ಹಾಗೂ ವೃತ್ತಿಜೀವನದಲ್ಲಿ ಅಭಿವೃದ್ಧಿಗೆ ಹೊಸ ದಾರಿಗಳು ತೆರೆದುಕೊಳ್ಳುತ್ತವೆ.

ಸಾಲಬಾಧೆ ಮುಕ್ತಿ ಹಾಗೂ ಕುಟುಂಬದಲ್ಲಿ ಶಾಂತಿ:

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ನಿಂತಿರುವ ಭಂಗಿಯಲ್ಲಿರುವ ಬೆಳ್ಳಿ ಗಣೇಶನನ್ನು ಪೂಜಿಸುವುದರಿಂದ ಪದೇ ಪದೇ ಎದುರಾಗುವ ಆರ್ಥಿಕ ನಷ್ಟ ಹಾಗೂ ಸಾಲದ ಹೊರೆಯಿಂದ ಮುಕ್ತಿ ಸಿಗುತ್ತದೆ. ಬೆಳ್ಳಿ ಮೂರ್ತಿಯು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರಮಾಡಿ, ಕುಟುಂಬದ ಸದಸ್ಯರ ನಡುವಿನ ಕಿರಿಕಿರಿ ಹಾಗೂ ಸಂಘರ್ಷಗಳನ್ನು ಕೊನೆಗೊಳಿಸಿ ಸದಾ ಶಾಂತಿ ನೆಲೆಸುವಂತೆ ಮಾಡುತ್ತದೆ.

ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ

ಸ್ಥಾಪನೆಗೆ ಸೂಕ್ತ ದಿಕ್ಕು ಮತ್ತು ಸೊಂಡಿಲ ನಿಯಮ:

ಮೂರ್ತಿಯನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಅಥವಾ ಪೂಜಾ ಕೋಣೆಯಲ್ಲಿ ಉತ್ತರ ಅಥವಾ ಪೂರ್ವ ದಿಕ್ಕಿಗೆ ಎದುರಾಗಿ ಸ್ಥಾಪಿಸುವುದು ಶ್ರೇಷ್ಠ. ಮನೆಗೆ ಯಾವಾಗಲೂ ಎಡಮುರಿ ಸೊಂಡಿಲು (ಎಡಕ್ಕೆ ಬಾಗಿದ ಸೊಂಡಿಲು) ಇರುವ ಗಣೇಶನ ಮೂರ್ತಿಯನ್ನೇ ಆಯ್ಕೆ ಮಾಡಬೇಕು, ಏಕೆಂದರೆ ಬಲಮುರಿ ಸೊಂಡಿಲ ಗಣೇಶನಿಗೆ ಕಟ್ಟುನಿಟ್ಟಾದ ಪೂಜಾ ನಿಯಮಗಳಿರುತ್ತವೆ.

ಸ್ಥಳದ ಆಯ್ಕೆ ಹಾಗೂ ನಿತ್ಯ ಪೂಜಾ ವಿಧಾನ:

ಗಣೇಶನ ಮೂರ್ತಿಯನ್ನು ಸ್ನಾನಗೃಹದ ಹತ್ತಿರ, ಮೆಟ್ಟಿಲುಗಳ ಕೆಳಗೆ ಅಥವಾ ಮಲಗುವ ಕೋಣೆಯಲ್ಲಿ ಎಂದಿಗೂ ಇಡಬಾರದು. ಆದರೆ ವ್ಯಾಪಾರದಲ್ಲಿ ಪ್ರಗತಿ ಬಯಸುವವರು ಅಂಗಡಿಯ ನಗದು ಪೆಟ್ಟಿಗೆ ಅಥವಾ ಮನೆಯ ತಿಜೋರಿಯಲ್ಲಿ ಇಡಬಹುದು. ಮನೆಯಲ್ಲಿ ಬೆಳ್ಳಿಯ ಮೂರ್ತಿಯನ್ನಿಟ್ಟರೆ ಪ್ರತಿದಿನ ಶುಚಿರ್ಭೂತರಾಗಿ ವಿಧಿವಿಧಾನಗಳಂತೆ ಪೂಜಿಸಿ, ಮೋದಕ ಅಥವಾ ಲಡ್ಡು ನೈವೇದ್ಯ ಅರ್ಪಿಸುವುದು ಕಡ್ಡಾಯವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಭಾರತೀಯ ವಾಯುಪಡೆಗೆ ಹೆಚ್ಎಎಲ್ ನಿರ್ಮಿತ ಯುದ್ಧ ವಿಮಾನಗಳ ಹಸ್ತಾಂತರ
ಭಾರತೀಯ ವಾಯುಪಡೆಗೆ ಹೆಚ್ಎಎಲ್ ನಿರ್ಮಿತ ಯುದ್ಧ ವಿಮಾನಗಳ ಹಸ್ತಾಂತರ
ಅವಕಾಶ ಕೊಟ್ಟ ವೇದಿಕೆಗೆ ಅಗೌರವ; ಕಿಚ್ಚನ ಕ್ಲಾಸ್ ಹೇಗಿದೆ ನೋಡಿ
ಅವಕಾಶ ಕೊಟ್ಟ ವೇದಿಕೆಗೆ ಅಗೌರವ; ಕಿಚ್ಚನ ಕ್ಲಾಸ್ ಹೇಗಿದೆ ನೋಡಿ
ಕೆಪಿಎಸ್​ಸಿ ಹಗರಣ: ಜ್ಞಾನೇಂದ್ರ ಕುಮಾರ್, ಕನ್ನಾಳೆ ಬಂಧಿಸಿದ ಇಡಿ
ಕೆಪಿಎಸ್​ಸಿ ಹಗರಣ: ಜ್ಞಾನೇಂದ್ರ ಕುಮಾರ್, ಕನ್ನಾಳೆ ಬಂಧಿಸಿದ ಇಡಿ
ನಾನು ಈಗ ವೆಜ್​ಟೇರಿಯನ್, ಅಶೋಕಣ್ಣಂಗೆ ಫ್ರೆಶ್ ಮೀನು ಕಳಿಸ್ತೀನಿ: ಡಿಕೆಶಿ
ನಾನು ಈಗ ವೆಜ್​ಟೇರಿಯನ್, ಅಶೋಕಣ್ಣಂಗೆ ಫ್ರೆಶ್ ಮೀನು ಕಳಿಸ್ತೀನಿ: ಡಿಕೆಶಿ
ಬಂದರು ಪ್ರದೇಶದಲ್ಲಿ ಬೋಟ್ ಹತ್ತಿ ಸಮುದ್ರಕ್ಕಿಳಿದೇ ಬಿಟ್ರು ಸಿಎಂ ಡಿಕೆಶಿ
ಬಂದರು ಪ್ರದೇಶದಲ್ಲಿ ಬೋಟ್ ಹತ್ತಿ ಸಮುದ್ರಕ್ಕಿಳಿದೇ ಬಿಟ್ರು ಸಿಎಂ ಡಿಕೆಶಿ
ಸಿಎಂ ಡಿಕೆ ಶಿವಕುಮಾರ್ ಮಂಗಳೂರು ಮೀನುಗಾರಿಕೆ ಬಂದರಿಗೆ ದಿಢೀರ್ ಭೇಟಿ
ಸಿಎಂ ಡಿಕೆ ಶಿವಕುಮಾರ್ ಮಂಗಳೂರು ಮೀನುಗಾರಿಕೆ ಬಂದರಿಗೆ ದಿಢೀರ್ ಭೇಟಿ