AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಪನ್ ಹಾರ್ಟ್ ಸರ್ಜರಿ ಆದ್ರೂ 491 ಬಾರಿ ಮೆಟ್ಟಿಲುಗಳ ಮೂಲಕ ತಿರುಮಲ ಬೆಟ್ಟ ಹತ್ತಿದ ಮಹಾನ್ ಭಕ್ತ!

ಆಂಧ್ರಪ್ರದೇಶದ 59 ವರ್ಷದ ಭಕ್ತ ಮಹತಿ ಶ್ರೀನಿವಾಸರಾವ್ ಬರೋಬ್ಬರಿ 491 ಬಾರಿ ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟ ಏರಿ ಏಷ್ಯಾ ಬುಕ್ ಆಫ್ ರಿಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಓಪನ್ ಹಾರ್ಟ್ ಸರ್ಜರಿಯಾಗಿದ್ದರೂ ವೈದ್ಯರ ಎಚ್ಚರಿಕೆ ಮೀರಿ ಮತ್ತೂ 6 ಬಾರಿ ಯಶಸ್ವಿಯಾಗಿ ಮೆಟ್ಟಿಲುಗಳನ್ನು ಹತ್ತಿದ ಇವರ ಅಪ್ರತಿಮ ದೈವಭಕ್ತಿಯ ರೋಮಾಂಚನಕಾರಿ ಕಥೆ ಇಲ್ಲಿದೆ.

ಓಪನ್ ಹಾರ್ಟ್ ಸರ್ಜರಿ ಆದ್ರೂ 491 ಬಾರಿ ಮೆಟ್ಟಿಲುಗಳ ಮೂಲಕ ತಿರುಮಲ ಬೆಟ್ಟ ಹತ್ತಿದ ಮಹಾನ್ ಭಕ್ತ!
ತಿರುಮಲ
ಭಾವನಾ ಹೆಗಡೆ
|

Updated on:Jul 06, 2026 | 1:11 PM

Share

ಮುಖ್ಯಾಂಶಗಳು

  • ಆಂಧ್ರಪ್ರದೇಶದ ಮಹಾಭಕ್ತ ಶ್ರೀನಿವಾಸರಾವ್ 491 ಬಾರಿ ತಿರುಮಲ ಬೆಟ್ಟ ಹತ್ತಿ ದಾಖಲೆ ಬರೆದಿದ್ದಾರೆ.
  • ಓಪನ್ ಹಾರ್ಟ್ ಸರ್ಜರಿ ಆದ ಮೇಲೂ ಆರು ಬಾರಿ ಮೆಟ್ಟಿಲುಗಳ ಯಾತ್ರೆ ಮುಗಿಸಿದ್ದಾರೆ.
  • ಇವರ ಅಪರೂಪದ ದೈವಭಕ್ತಿಯ ಸಾಧನೆ ಈಗ ಏಷ್ಯಾ ಬುಕ್ ಆಫ್ ರಿಕಾರ್ಡ್ಸ್ ಸೇರಿದೆ.

ಒಂದೇ ಒಂದು ಬಾರಿ ತಿರುಮಲ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಶ್ರೀವಾರಿಯ ದರ್ಶನ ಪಡೆಯಲು ಸಾಮಾನ್ಯ ಜನರು ಹರಸಾಹಸ ಪಡುತ್ತಾರೆ. ಆದರೆ, ಆಂಧ್ರಪ್ರದೇಶದ ಶ್ರೀಕಾಕುಳಂನ 59 ವರ್ಷದ ಭಕ್ತರೊಬ್ಬರು ಬರೋಬ್ಬರಿ 491 ಬಾರಿ ಕಾಲ್ನಡಿಗೆ ಮಾರ್ಗದ ಮೂಲಕ ತಿರುಮಲ ಬೆಟ್ಟವನ್ನು ಏರಿ ಯಾರಿಗೂ ಸಾಧ್ಯವಾಗದ ಅಪರೂಪದ ದಾಖಲೆ ಬರೆದಿದ್ದಾರೆ.

ಯಾರಿವರು? ಏನಿದು ಅಪರೂಪದ ಸಾಧನೆ?

ಶ್ರೀಕಾಕುಳಂನ ಎಸ್‌ಬಿಐ ಲೈಫ್ ಇನ್ಸೂರೆನ್ಸ್‌ನಲ್ಲಿ ಉದ್ಯೋಗಿಯಾಗಿರುವ ಮಹತಿ ಶ್ರೀನಿವಾಸರಾವ್ ಎಂಬುವವರೇ ಈ ಅಪರೂಪದ ಸಾಧನೆ ಮಾಡಿದ ಮಹಾಭಕ್ತ. ‘ಸರ್ವೇಜನಾ ಸುಖಿನೋಭವಂತು’ ಎಂಬ ದಿವ್ಯ ಸಂಕಲ್ಪದೊಂದಿಗೆ ಇವರು ತಮ್ಮ 28ನೇ ವಯಸ್ಸಿನಿಂದಲೇ ತಿರುಮಲ ಕಾಲ್ನಡಿಗೆ ಯಾತ್ರೆಯನ್ನು ಆರಂಭಿಸಿದ್ದರು. ಕಳೆದ 30 ವರ್ಷಗಳಿಂದ ನಿರಂತರವಾಗಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತುತ್ತಾ ಬಂದಿರುವ ಇವರು, ಇತ್ತೀಚೆಗಷ್ಟೇ ತಮ್ಮ 491ನೇ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಅತ್ಯುನ್ನತ ಭಕ್ತಿಯ ಸಾಧನೆಗಾಗಿ ಇವರ ಹೆಸರು ‘ಏಷ್ಯಾ ಬುಕ್ ಆಫ್ ರಿಕಾರ್ಡ್ಸ್’ನಲ್ಲೂ ದಾಖಲಾಗಿದೆ.

ವೈದ್ಯರು ಬೇಡವೆಂದರೂ ಭಕ್ತಿಯನ್ನು ಮಾತ್ರ ಬಿಡಲಿಲ್ಲ!

ಶ್ರೀನಿವಾಸರಾವ್ ಅವರ ಈ ಸಾಧನೆಯ ಹಾದಿಯಲ್ಲಿ ಅತ್ಯಂತ ರೋಮಾಂಚಕ ಮತ್ತು ಸ್ಪೂರ್ತಿದಾಯಕ ಸಂಗತಿಗಳು ಎದುರಾಗಿವೆ. ಇವರಿಗೆ ಕಳೆದ ವರ್ಷ (2025 ರ ಫೆಬ್ರವರಿ 13 ರಂದು) ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ‘ಓಪನ್ ಹಾರ್ಟ್ ಸರ್ಜರಿ’ (Open Heart Surgery) ಆಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಇಷ್ಟು ಕಠಿಣವಾಗಿ ಮೆಟ್ಟಿಲುಗಳನ್ನು ಹತ್ತಬಾರದು ಎಂದು ವೈದ್ಯರು ಖಡಾಖಂಡಿತವಾಗಿ ಎಚ್ಚರಿಸಿದ್ದರು. ಆದರೆ, ಗೋವಿಂದನೇ ತನ್ನನ್ನು ಕರೆಯುತ್ತಿದ್ದಾನೆ ಎಂದು ನಂಬಿದ್ದ ಶ್ರೀನಿವಾಸರಾವ್, ಶಸ್ತ್ರಚಿಕಿತ್ಸೆಯ ನಂತರವೂ ಧೈರ್ಯದಿಂದ ಮತ್ತೂ 6 ಬಾರಿ ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲೇ ಹತ್ತುವ ಮೂಲಕ ತಮ್ಮ ಭಕ್ತಿ ಎಂಥದ್ದು ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ.

ಇದನ್ನೂ ಓದಿ Panchamukhi Ganesha: ಪಂಚಮುಖಿ ಗಣೇಶ ಮನೆಯಲ್ಲಿದ್ದರೆ ಸಕಲ ಕಷ್ಟಗಳೂ ನಿವಾರಣೆ; ಐದು ಮುಖಗಳ ದಿವ್ಯ ರಹಸ್ಯವೇನು?

ತಿರುಮಲ ಯಾತ್ರೆಯನ್ನು ಕೇವಲ ಒಂದು ಪ್ರವಾಸಿ ತಾಣದಂತೆ ನೋಡಬಾರದು, ಅದನ್ನು ಸಂಪೂರ್ಣ ಭಕ್ತಿ ಮತ್ತು ಶ್ರದ್ಧೆಯಿಂದ ಕೂಡಿದ ಆಧ್ಯಾತ್ಮಿಕ ಪ್ರಯಾಣವಾಗಿ ಅನುಭವಿಸಬೇಕು ಎಂದು ಇವರು ಇತರ ಭಕ್ತರಿಗೆ ಸಂದೇಶ ನೀಡುತ್ತಾರೆ. ಇವರ ಈ ಅಪ್ರತಿಮ ದೈವಭಕ್ತಿ ಮತ್ತು ದೃಢಸಂಕಲ್ಪ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Mon, 6 July 26

Follow Us
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ
ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ