AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eclipse Explained: ಗ್ರಹಣ ಎಂದರೇನು, ಹೇಗೆ ಸಂಭವಿಸುತ್ತದೆ?

ರಾಹು ಕೇತು ಎಂಬ ಋಣಾತ್ಮಕವಾದ ವಾತಾವರಣವನ್ನು ಸೃಷ್ಟಿಸುವ ತಮೋಗುಣ ಭರಿತವಾದ ಎರಡು ಗ್ರಹಗಳು ಸೂರ್ಯ ಅಥವಾ ಚಂದ್ರರನ್ನು ಆವರಿಸುತ್ತದೆ. ಅದರಿಂದ ಲೋಕಕ್ಕೆ ಕಂಟಕವಾಗುತ್ತದೆ ಎಂಬುದು ಶಾಸ್ತ್ರದ ಮಾತು. ವೈಜ್ಞಾನಿಕವಾಗಿ ಈ ಕುರಿತಾಗಿ ಸ್ವಲ್ಪ ಯೋಚನಾ ಪಥ ವಿಭಿನ್ನವಾಗಿದೆ. ಅದು ಏನೇ ಇರಲಿ ವಾಸ್ತವವಾಗಿ ಗ್ರಹಣದಿಂದ ನಿಜವಾಗಿಯೂ ವಿಪತ್ತು ಇದೆಯೇ? ಆಹಾರ ವಿಹಾರದಿಂದ ವಿಪತ್ತು ಸಂಭವಿಸುತ್ತದೆಯೇ? ಎಂದು ಕೇಳಿದರೆ ಹೌದು ಎನ್ನಬೇಕಾಗುತ್ತದೆ.

Eclipse Explained: ಗ್ರಹಣ ಎಂದರೇನು, ಹೇಗೆ ಸಂಭವಿಸುತ್ತದೆ?
ಗ್ರಹಣ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Digi Tech Desk

Updated on:Mar 21, 2023 | 11:22 AM

ಪ್ರಕೃತಿಯನ್ನು ಬಿಟ್ಟು ಮಾನವನು ಎಂದೂ ಬದುಕಲಾರ. ನಮ್ಮ ಸನಾತನ ಆಚರಣೆಗಳೇನಿವೆ ಅವೆಲ್ಲಾ ಪ್ರಕೃತಿಯನ್ನು ಎಂದೂ ಧಿಕ್ಕರಿಸಿಲ್ಲ. ನಾವು ನಮ್ಮ ಯೋಚನಾ ಲಹರಿಗೆ ನಿಲುಕದ ಹಲವಾರು ಅಂಶಗಳನ್ನು ಮೂಢನಂಬಿಕೆ ಎಂಬ ಹೆಸರಿನಿಂದ ತಿರಸ್ಕರಿಸುತ್ತಿದ್ದೇವೆ ಅಷ್ಟೇ. ಆದರೆ ಸನಾತನ ಆಚರಣೆಗಳು ಹೆಚ್ಚಿನವು ಪ್ರಕೃತಿಯೊಂದಿಗೆ ತನ್ನದೇ ಆದ ಅಲೌಕಿಕ ನಂಟನ್ನು ಸದಾ ಇಟ್ಟುಕೊಂಡಿವೆ. ನಮ್ಮ ವಿಚಾರಧಾರೆ ಪ್ರಾಮಾಣಿಕವಾಗಿ ಪ್ರಕೃತಿಯೊಂದಿಗೆ ಬೆರೆತರೆ ಆ ತಾತ್ವಿಕತೆ ಅರಿವಿಗೆ ಬರುವುದು. ಆದ ಕಾರಣವೇ ಮಳೆ ಬರುವ ಮೊದಲು ನವಿಲು ನರ್ತಿಸುತ್ತದೆ. ಕಪ್ಪೆ ಕೂಗುತ್ತದೆ. ಗಾಳಿ ತನ್ನ ಗತಿಯನ್ನು ಸ್ಥಿತಿಯನ್ನು ಬದಲಿಸುತ್ತದೆ. ಗದ್ದೆಯಲ್ಲಿ ಪೈರು ಬೆಳೆದುದು ನಮಗೆ ತಿಳಿಯದಿದ್ದರೂ ಕಾಡಲ್ಲಿನ ಗಿಳಿ ಮೊದಲಾದ ಪಕ್ಷಿಗಳಿಗೆ ತಿಳಿಯುತ್ತದೆ. ಸಕ್ಕರೆ ಚೆಲ್ಲಿದ್ದರೆ ಇರುವೆಗೆ ಯಾರೂ ಆಮಂತ್ರಣ ನೀಡಬೇಕಿಂದಿಲ್ಲ. ಹೀಗೇ ಪ್ರಕೃತಿ ತನ್ನನ್ನು ಪ್ರೀತಿಸುವವರಿಗೆ ಸುಲಭವಾಗಿ ಹತ್ತಿರವಾಗುತ್ತದೆ.

ನಮ್ಮ ಪೂರ್ವಿಕರು ಪ್ರಕೃತಿಯಲ್ಲಾಗುವ ಪ್ರತೀ ಬದಲಾವಣೆಗೂ ಒಂದೊಂದು ಶುಭ ಮತ್ತು ಅಶುಭ ಸ್ವರೂಪ ಅಥವಾ ಪರಿಣಾಮವನ್ನು ಕಂಡುಕೊಂಡಿದ್ದಾರೆ. ಅದನ್ನು ಆಚರಿಸುವುದರಿಂದ ಅವರು ಆರೋಗ್ಯವಂತರಾಗಿ ದೀರ್ಘಾಯುಷ್ಯವನ್ನು ಹೊಂದಿದ್ದಾರೆ ಹೊರತು ಎಂದೂ ವಾಸಿಯಾಗದ ಕಾಯಿಲೆಯಿಂದ ಬಳಲಿದ್ದು ಅತೀ ಕಡಿಮೆ. ಹಾಗಂತ ವರ್ತಮಾನ ಹಾಳು ಅಂತ ಅರ್ಥವಲ್ಲ.

ಅವರು ಪ್ರಕೃತಿಯನ್ನು ನಂಬಿ ಪ್ರೀತಿಸಿ ನೆಮ್ಮದಿಯಿಂದ ಇದ್ದರು. ನಾವು ಎಲ್ಲೋ ಆಧುನಿಕತೆಯ ಸೋಗಲ್ಲಿ ಪ್ರಕೃತಿಯನ್ನು ಮರೆತು ಕೃತಕತೆಯಲ್ಲಿ ನೆಮ್ಮದಿ ಹುಡುಕಲು ಆರಂಭಿಸಿದ್ದೇವೋ ಎಂಬ ಯೋಚನೆ ಸತ್ಯಕ್ಕೆ ದೂರವಾದದ್ದು ಅಲ್ಲ. ಇಂತಹ ಬದಲಾವಣೆಗಳಲ್ಲಿ ಒಂದು ಗ್ರಹಣ.

ರಾಹು ಕೇತು ಎಂಬ ಋಣಾತ್ಮಕವಾದ ವಾತಾವರಣವನ್ನು ಸೃಷ್ಟಿಸುವ ತಮೋಗುಣ ಭರಿತವಾದ ಎರಡು ಗ್ರಹಗಳು ಸೂರ್ಯ ಅಥವಾ ಚಂದ್ರರನ್ನು ಆವರಿಸುತ್ತದೆ. ಅದರಿಂದ ಲೋಕಕ್ಕೆ ಕಂಟಕವಾಗುತ್ತದೆ ಎಂಬುದು ಶಾಸ್ತ್ರದ ಮಾತು. ವೈಜ್ಞಾನಿಕವಾಗಿ ಈ ಕುರಿತಾಗಿ ಸ್ವಲ್ಪ ಯೋಚನಾ ಪಥ ವಿಭಿನ್ನವಾಗಿದೆ. ಅದು ಏನೇ ಇರಲಿ ವಾಸ್ತವವಾಗಿ ಗ್ರಹಣದಿಂದ ನಿಜವಾಗಿಯೂ ವಿಪತ್ತು ಇದೆಯೇ? ಆಹಾರ ವಿಹಾರದಿಂದ ವಿಪತ್ತು ಸಂಭವಿಸುತ್ತದೆಯೇ? ಎಂದು ಕೇಳಿದರೆ ಹೌದು ಎನ್ನಬೇಕಾಗುತ್ತದೆ.

ಇದನ್ನೂ ಓದಿ: ಯಮನಿಗೂ ಶಾಪ ನೀಡಿದ ಋಷಿ, ಅದರ ಫಲವೇನಾಯಿತು? ಈ ಶಾಪದ ಫಲವೇ ವಿದುರನ ಜನನಕ್ಕೆ ಕಾರಣವಾಯಿತೇ?

ಗೃಹ್ಣಾತಿ ಇತಿ ಗ್ರಹಣಮ್; ಗ್ರಹಣವೆಂದರೆ ಹಿಡಿದುಕೊಳ್ಳುವುದು ಅಥವಾ ಆವರಿಸಿಕೊಳ್ಳುವುದು ಎಂದು ಅರ್ಥ. ಪ್ರತೀ ಜೀವಿಯ ಜೀವನದಲ್ಲಿ ಸೂರ್ಯ ಚಂದ್ರರು ಅತ್ಯಂತ ಮಹತ್ವದ ಪಾತ್ರವನ್ನು ಹೊಂದಿದ್ದಾರೆ. ಈ ಎರಡು ಚೇತನಗಳು ಜಾತಿ ಮತವೆನ್ನದೇ ತಮ್ಮ ಪ್ರಭಾವದಿಂದ ಜನರ ಜೀವನದಲ್ಲಿ ಅವಿಭಾಜ್ಯವಾಗಿ ಹೊಂದಿಕೊಂಡಿದ್ದಾರೆ. ಈ ಎರಡು ಗ್ರಹಗಳ ಚಲನೆಯ ಸಮಯದಲ್ಲಿ ಕೆಲವು ಕಾಲ ಇವರಿಗೆ ಅಡ್ಡವಾದ ವಾತಾವರಣ ಉಂಟಾಗಿ ಇವರ ನೇರ ಕಿರಣಗಳು ಭೂಮಿಗೆ ಬೀಳುವುದಿಲ್ಲ. ಈ ಕಾಲದಲ್ಲಿ ಪ್ರಕೃತಿಯಲ್ಲಿ ಏನೋ ಬದಲಾವಣೆ ನಡೆಯುತ್ತದೆ. ಆಗ ಇರುವ ನಕ್ಷತ್ರಗಳಿಗೆ ಅದರಲ್ಲಿ ಜನಿಸಿದ ವ್ಯಕ್ತಿಗಳಿಗೆ ಮತ್ತು ಆಕಾಲದ ರಾಶಿಗಳಿಗೆ ಅವುಗಳಲ್ಲಿ ಜನಿಸಿದ ವ್ಯಕ್ತಿಗಳಿಗೆ ವಿಪತ್ತು ಉಂಟಾಗುವ ಸಂದರ್ಭಗಳು ಇರುತ್ತವೆ.

ಈಗ ಪ್ರಶ್ನೆ ಉಂಟಾಗುತ್ತದೆ, ಏನೆಂದರೆ ಕೇವಲ ಆ ರಾಶಿ ನಕ್ಷತ್ರದವರಿಗೆ ಮಾತ್ರ ವಿಪತ್ತೇ ಎಂದು. ಅದಕ್ಕುತ್ತರ ಕೆಲವರಿಗೆ ಬಿಸಿಲು ಎಷ್ಟು ಹೆಚ್ಚದರೂ ಸಮಸ್ಯೆ ಆಗುವುದಿಲ್ಲ ಇನ್ನು ಕೆಲವರಿಗೆ ಚಳಿ ಸಮಸ್ಯೆ ತರುವುದಿಲ್ಲ ಹಾಗಂತ ಅದರಿಂದ ತೊಂದರೆ ಆಗುವುತ್ತಿರುವ ವ್ಯಕ್ತಿ ಹೇಳುವುದು ಸುಳ್ಳು ಎನ್ನಲಾಗುತ್ತದೆಯೇ? ಹಾಗೆಯೇ ಇದು.

ಪ್ರಕೃತಿಯಲ್ಲಾಗುವ ಒಂದು ವಿಶೇಷ ಬದಲಾವಣೆಯ ಸಮಯ ಗ್ರಹಣ ಎನ್ನಬಹುದು. ಅದನ್ನು ಬರಿಯ ಕಣ್ಣಲ್ಲಿ ನೋಡಿದರೆ ಹೇಗೆ ಸಮಸ್ಯೆಯೋ ಅಂತೆಯೇ ಆಹಾರಾದಿಗಳ ಸೇವೆನೆಯಿಂದ ಸಮಸ್ಯೆ ಆಗುತ್ತದೆ ಎನ್ನುವುದು ನಂಬಿಕೆ. ಅದರ ಪರಿಣಾಮ ಕೆಲವರ ಅನುಭವಕ್ಕೆ ಬರಬಹುದು ಕೆಲವರಿಗೆ ಬರದೇ ಇರಬಹುದು ಹಾಗಂತ ಅದು ಸುಳ್ಳು ಎನ್ನಲಾಗುವುದಿಲ್ಲ.

ಅದಕ್ಕುತ್ತರ ಹೀಗೆ ಹೇಳಬಹುದು ಒಬ್ಬನಿಗೆ ಹತ್ತು ದಿನಗಳ ಕಾಲ ಜ್ವರ ಬಾಧಿಸಬಹುದು. ಕೆಲವರಿಗೆ ಎರಡು ದಿನಗಳಲ್ಲಿ ಕಡಿಮೆ ಆಗಬಹುದು. ಅದು ಅವರ ದೈಹಿಕ ಪ್ರಕೃತಿ ಹೊರತು ವ್ಯಕ್ತಿ ಮಾಡುತ್ತಿರುವ ನಾಟಕ ಅಲ್ಲ ಅಲ್ಲವೇ?

ಗ್ರಹಣ ಕಾಲದಲ್ಲಿ ವಾತಾವರಣ ಅಥವಾ ಪ್ರಕೃತಿ ತುಂಬಾ ನಿಶ್ಚಲವಾಗಿರುವುದರಿಂದ ಆ ಕಾಲದಲ್ಲಿ ಜಪ ಹೋಮ ದಾನ ಕೀರ್ತನೆ ಧ್ಯಾನ ಮಾಡುವುದರಿಂದ ಮತ್ತು ಅದರ ಪೂರ್ವ ಕಾಲದಲ್ಲಿ ಉಪವಾಸ ಮಾಡಿ ದೇಹವನ್ನು ಶಾಂತವಾಗಿಡುವುದರಿಂದ ಉತ್ತಮವಾದ ಫಲ ಇರುವುದು ನಿಶ್ಚಿತ. ಇದೊಂದು ನಂಬಿಕೆಯ ವಿಚಾರವಾಗಿದೆ. ಇಲ್ಲಿ ಕೇವಲ ಪ್ರಕೃತಿಯ ಮೇಲಿನ ಶ್ರದ್ಧೆ ಕೆಲಸ ಮಾಡುವುದು ಹೊರತು ವಿಪರೀತವಾದ ತರ್ಕವಲ್ಲ.

ಡಾ. ಗೌರಿ ಕೇಶವಕಿರಣ ಬಿ

ಧಾರ್ಮಿಕ ಚಿಂತಕರು

Published On - 8:30 am, Tue, 21 March 23

ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ