AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸ್ತ್ರದ ಪ್ರಕಾರ ಯಾವ ದಿನ ಯಾವ ದೇವರನ್ನು ಪೂಜಿಸಬೇಕು?

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳನ್ನು ಪೂಜಿಸಲಾಗುತ್ತೆ. ಪ್ರತಿಯೊಂದು ದೇವರೂ ತಮ್ಮದೇ ಆದ ಶಕ್ತಿ ಮಹತ್ವವನ್ನು ಹೊಂದಿದ್ದಾರೆ. ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವೂ ಒಂದೊಂದು ದೇವರನ್ನು ಪೂಜಿಸಲಾಗುತ್ತೆ. ವಾರದ ಆಯಾಯ ದಿನಗಳನ್ನು ಪ್ರತ್ಯೇಕವಾಗಿ ಒಂದೊಂದು ದೇವರ ಆರಾಧನೆಗೆ ಸಮರ್ಪಿಸಲಾಗಿದೆ. ಆ ದಿನದಂದು ಆ ದೇವರನ್ನು ಪೂಜಿಸುವುದರಿಂದ ಹೆಚ್ಚಿನ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.

TV9 Web
| Updated By: ಆಯೇಷಾ ಬಾನು|

Updated on:Feb 08, 2022 | 10:50 AM

Share
ಭಾನುವಾರ: ಈ ದಿನವನ್ನು ಭಗವಾನ್ ಸೂರ್ಯ ದೇವನಿಗೆ(Lord Surya Deva) ಸಮರ್ಪಿಸಲಾಗಿದೆ. ಹಿಂದೂ ಪುರಾಣಗಳಲ್ಲಿ, ಭಗವಾನ್ ಸೂರ್ಯನಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಭೂಮಿಗೆ ಆಯುಷ್ಯ, ಆರೋಗ್ಯ ಮತ್ತು ಸಮೃದ್ಧಿಯನ್ನು ದಯಪಾಲಿಸುವವನು ಸೂರ್ಯನೇ ಎಂದು ಭಕ್ತರು ನಂಬುತ್ತಾರೆ. ಅಲ್ಲದೆ, ಭಗವಾನ್ ಸೂರ್ಯ ದೇವನನ್ನು ಪೂಜಿಸುವುದರಿಂದ ಆರೋಗ್ಯದ ಸಮಸ್ಯೆಗಳು, ಚರ್ಮದ ಕಾಯಿಲೆ ನಿವಾರಣೆಯಾಗುತ್ತೆ. ಸಕಾರಾತ್ಮಕತೆ ಹೆಚ್ಚಾಗುವುದು.

Worshipping hindu gods based on different days of the week

1 / 7
ಸೋಮವಾರ: ಈ ದಿನವನ್ನು ಶಿವನಿಗೆ(Lord Shiva) ಸಮರ್ಪಿಸಲಾಗಿದೆ. ಭಕ್ತರು ಶಿವನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ಶಿವನ ಜೊತೆ ಮಾತಾ ಪಾರ್ವತಿಯನ್ನೂ ಪೂಜಿಸುತ್ತಾರೆ. ಅಲ್ಲದೆ ಕೆಲವೊಂದು ನಂಬಿಕೆಗಳ ಪ್ರಕಾರ ಈ ದಿನ ಚಂದ್ರನನ್ನೂ ಕೂಡ ಪೂಜಿಸುತ್ತಾರೆ. ಈ ದಿನದಂದು ಚಂದ್ರಧಾರಿತ ಶಿವನಿಗೆ ವಿಶೇಷ ಅಲಂಕಾರಗಳೊಂದಿಗೆ ಪೂಜಿಸಲಾಗುತ್ತೆ. ತಮ್ಮ ದೇವತೆಗಳನ್ನು ಮೆಚ್ಚಿಸಲು, ಭಕ್ತರು ಸಾಮಾನ್ಯವಾಗಿ ಸೋಮವಾರ ಉಪವಾಸವನ್ನು ಆಚರಿಸುತ್ತಾರೆ. ಶಿವನು ತನ್ನ ಭಕ್ತರಿಗೆ ಶಾಶ್ವತ ಶಾಂತಿ, ದೀರ್ಘಾಯುಷ್ಯ ಮತ್ತು ಆರೋಗ್ಯವನ್ನು ಅನುಗ್ರಹಿಸುತ್ತಾನೆ. ಈ ದಿನ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳನ್ನು ಮಾಡಲಾಗುತ್ತೆ.

Worshipping hindu gods based on different days of the week

2 / 7
ಮಂಗಳವಾರ: ಈ ದಿನವನ್ನು ಭಗವಾನ್ ಹನುಮಂತನಿಗೆ(Lord Hanuman) ಸಮರ್ಪಿಸಲಾಗಿದೆ. ಹಿಂದೂ ಪುರಾಣಗಳಲ್ಲಿ ಹನುಮಂತನನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದೆ. ಭಗವಾನ್ ಹನುಮಂತನು ತನ್ನ ಜೀವನದ ಅಡೆತಡೆಗಳನ್ನು ಮತ್ತು ಭಯವನ್ನು ನಿವಾರಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ. ಈ ದಿನದಂದು ಭಕ್ತರು ಹನುಮಂತನನ್ನು ಪೂಜಿಸುತ್ತಾರೆ ಮತ್ತು ಉಪವಾಸಗಳನ್ನು ಇಡುತ್ತಾರೆ. ಸೂರ್ಯನಿಗೆ ಮೊದಲು ಅರ್ಘ್ಯವನ್ನು ಅರ್ಪಿಸಿ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಈ ವೇಳೆ ಹನುಮಂತನ ಮುಂದೆ ದೀಪವನ್ನು ಹಚ್ಚಿ ಕೆಂಪು ಅಥವಾ ಕೇಸರಿ ಬಣ್ಣದ ಹೂಗಳನ್ನು ಅರ್ಪಿಸಬೇಕು.

ಮಂಗಳವಾರ: ಈ ದಿನವನ್ನು ಭಗವಾನ್ ಹನುಮಂತನಿಗೆ(Lord Hanuman) ಸಮರ್ಪಿಸಲಾಗಿದೆ. ಹಿಂದೂ ಪುರಾಣಗಳಲ್ಲಿ ಹನುಮಂತನನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದೆ. ಭಗವಾನ್ ಹನುಮಂತನು ತನ್ನ ಜೀವನದ ಅಡೆತಡೆಗಳನ್ನು ಮತ್ತು ಭಯವನ್ನು ನಿವಾರಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ. ಈ ದಿನದಂದು ಭಕ್ತರು ಹನುಮಂತನನ್ನು ಪೂಜಿಸುತ್ತಾರೆ ಮತ್ತು ಉಪವಾಸಗಳನ್ನು ಇಡುತ್ತಾರೆ. ಸೂರ್ಯನಿಗೆ ಮೊದಲು ಅರ್ಘ್ಯವನ್ನು ಅರ್ಪಿಸಿ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಈ ವೇಳೆ ಹನುಮಂತನ ಮುಂದೆ ದೀಪವನ್ನು ಹಚ್ಚಿ ಕೆಂಪು ಅಥವಾ ಕೇಸರಿ ಬಣ್ಣದ ಹೂಗಳನ್ನು ಅರ್ಪಿಸಬೇಕು.

3 / 7
ಬುಧವಾರ: ಈ ದಿನ ವಿಘ್ನನಿವಾರಕ, ಸಂಕಷ್ಟ ಹರ ಗಣೇಶನಿಗೆ(Lord Ganesha) ಸಮರ್ಪಿಸಲಾಗಿದೆ. ಗಣೇಶ ತನ್ನ ಭಕ್ತರ ಜೀವನದಿಂದ ನಕಾರಾತ್ಮಕತೆ ಮತ್ತು ಅಡೆತಡೆಗಳನ್ನು ತೊಡೆದುಹಾಕುತ್ತಾನೆ. ಹಿಂದೂಗಳು ಸಾಮಾನ್ಯವಾಗಿ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸುತ್ತಾರೆ. ಗಣೇಶನನ್ನು ಪೂಜಿಸುವ ಜೊತೆಗೆ, ಜನರು ಶ್ರೀಕೃಷ್ಣನ ಅವತಾರವೆಂದು ನಂಬಲಾದ ವಿಠ್ಠಲನನ್ನು ಸಹ ಪೂಜಿಸುತ್ತಾರೆ. ಈ ದಿನ ಗಣೇಶನ ಮಂತ್ರಗಳನ್ನು ಪಠಿಸಿ ಬಾಳೆಹಣ್ಣು, ಮೋದಕ, ಗರಿಕೆ ಅರ್ಪಿಸುವುದರಿಂದ ಗಣೇಶನ ಕೃಪೆಗೆ ಪಾತ್ರರಾಗುವಿರಿ.

ಬುಧವಾರ: ಈ ದಿನ ವಿಘ್ನನಿವಾರಕ, ಸಂಕಷ್ಟ ಹರ ಗಣೇಶನಿಗೆ(Lord Ganesha) ಸಮರ್ಪಿಸಲಾಗಿದೆ. ಗಣೇಶ ತನ್ನ ಭಕ್ತರ ಜೀವನದಿಂದ ನಕಾರಾತ್ಮಕತೆ ಮತ್ತು ಅಡೆತಡೆಗಳನ್ನು ತೊಡೆದುಹಾಕುತ್ತಾನೆ. ಹಿಂದೂಗಳು ಸಾಮಾನ್ಯವಾಗಿ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸುತ್ತಾರೆ. ಗಣೇಶನನ್ನು ಪೂಜಿಸುವ ಜೊತೆಗೆ, ಜನರು ಶ್ರೀಕೃಷ್ಣನ ಅವತಾರವೆಂದು ನಂಬಲಾದ ವಿಠ್ಠಲನನ್ನು ಸಹ ಪೂಜಿಸುತ್ತಾರೆ. ಈ ದಿನ ಗಣೇಶನ ಮಂತ್ರಗಳನ್ನು ಪಠಿಸಿ ಬಾಳೆಹಣ್ಣು, ಮೋದಕ, ಗರಿಕೆ ಅರ್ಪಿಸುವುದರಿಂದ ಗಣೇಶನ ಕೃಪೆಗೆ ಪಾತ್ರರಾಗುವಿರಿ.

4 / 7
ಗುರುವಾರ: ಈ ದಿನವನ್ನು ಭಗವಾನ್ ವಿಷ್ಣು(Lord Vishnu) ಮತ್ತು ಗುರು ಬೃಹಸ್ಪತಿಗೆ ಸಮರ್ಪಿಸಲಾಗಿದೆ. ಜನರು ಸಾಯಿ ಬಾಬಾ, ಗುರು ರಾಘವೇಂದ್ರ ಸ್ವಾಮಿಯನ್ನು ಪೂಜಿಸುತ್ತಾರೆ ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ವೈವಾಹಿಕ ಜೀವನದಲ್ಲಿ ನೆಮ್ಮದಿ, ಸಂತೋಷ ಇರುತ್ತದೆ. ಮತ್ತು ಕುಟುಂಬದಲ್ಲಿನ ಕಲಹಗಳು ದೂರ ಆಗುತ್ತವೆ ಎಂದು ನಂಬಲಾಗಿದೆ.

ಗುರುವಾರ: ಈ ದಿನವನ್ನು ಭಗವಾನ್ ವಿಷ್ಣು(Lord Vishnu) ಮತ್ತು ಗುರು ಬೃಹಸ್ಪತಿಗೆ ಸಮರ್ಪಿಸಲಾಗಿದೆ. ಜನರು ಸಾಯಿ ಬಾಬಾ, ಗುರು ರಾಘವೇಂದ್ರ ಸ್ವಾಮಿಯನ್ನು ಪೂಜಿಸುತ್ತಾರೆ ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ವೈವಾಹಿಕ ಜೀವನದಲ್ಲಿ ನೆಮ್ಮದಿ, ಸಂತೋಷ ಇರುತ್ತದೆ. ಮತ್ತು ಕುಟುಂಬದಲ್ಲಿನ ಕಲಹಗಳು ದೂರ ಆಗುತ್ತವೆ ಎಂದು ನಂಬಲಾಗಿದೆ.

5 / 7
ಶುಕ್ರವಾರ: ಶುಕ್ರ ಗ್ರಹಕ್ಕೆ ಅರ್ಪಿಸಲಾದ ಈ ದಿನವನ್ನು ಲಕ್ಷ್ಮಿ ದೇವಿ(Godess Lakshmi), ದುರ್ಗಾ ಮತ್ತು ಅನ್ನಪೂರ್ಣೇಶ್ವರಿ ದೇವಿಗೆ ಸಮರ್ಪಿತವಾಗಿದೆ. ಈ ಮೂರು ದೇವತೆಗಳು ಹಿಂದೂ ಪುರಾಣಗಳಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ಈ ದಿನದಂದು ಉಪವಾಸವನ್ನು ಆಚರಿಸುವುದು ಮತ್ತು ಮೂರು ದೇವತೆಗಳನ್ನು ಪೂಜಿಸುವುದರಿಂದ ತಮ್ಮ ಜೀವನದಲ್ಲಿ ಸಮೃದ್ಧಿ, ಸಂಪತ್ತು, ಸಕಾರಾತ್ಮಕತೆ ಮತ್ತು ನೆಮ್ಮದಿಯನ್ನು ತರಬಹುದು ಎಂದು ಭಕ್ತರು ನಂಬುತ್ತಾರೆ.

ಶುಕ್ರವಾರ: ಶುಕ್ರ ಗ್ರಹಕ್ಕೆ ಅರ್ಪಿಸಲಾದ ಈ ದಿನವನ್ನು ಲಕ್ಷ್ಮಿ ದೇವಿ(Godess Lakshmi), ದುರ್ಗಾ ಮತ್ತು ಅನ್ನಪೂರ್ಣೇಶ್ವರಿ ದೇವಿಗೆ ಸಮರ್ಪಿತವಾಗಿದೆ. ಈ ಮೂರು ದೇವತೆಗಳು ಹಿಂದೂ ಪುರಾಣಗಳಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ಈ ದಿನದಂದು ಉಪವಾಸವನ್ನು ಆಚರಿಸುವುದು ಮತ್ತು ಮೂರು ದೇವತೆಗಳನ್ನು ಪೂಜಿಸುವುದರಿಂದ ತಮ್ಮ ಜೀವನದಲ್ಲಿ ಸಮೃದ್ಧಿ, ಸಂಪತ್ತು, ಸಕಾರಾತ್ಮಕತೆ ಮತ್ತು ನೆಮ್ಮದಿಯನ್ನು ತರಬಹುದು ಎಂದು ಭಕ್ತರು ನಂಬುತ್ತಾರೆ.

6 / 7
ಶನಿವಾರ: ಈ ದಿನ ಭಗವಾನ್ ಶನಿ ದೇವ(Lord Shani)ನನ್ನು ಪೂಜಿಸುವ ದಿನ. ಇದನ್ನು ಶನಿ ಸ್ವಾಮಿಗೆ ಸಮರ್ಪಿಸಲಾಗಿದೆ. ಶನಿ ಭಗವಂತ ಕಾರ್ಯಗಳಿಗೆ ಅನುಗುಣವಾಗಿ ಪ್ರತಿಫಲ ಅಥವಾ ಶಿಕ್ಷೆ ನೀಡುತ್ತಾನೆ. ಈ ದಿನವನ್ನು ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ನಂಬಿಕೆ ಇರುವ ಜನರು ಆಚರಿಸುತ್ತಾರೆ. ಈ ದಿನದಂದು ಶನಿ ದೇವರನ್ನು ಪೂಜಿಸುವುದರಿಂದ ಶನಿ ದೇವರಿಂದ ಸಂತೋಷ, ಸಂಪತ್ತು ಮತ್ತು ಶಾಂತಿ ರೂಪದಲ್ಲಿ ಅದೃಷ್ಟ ಮತ್ತು ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

ಶನಿವಾರ: ಈ ದಿನ ಭಗವಾನ್ ಶನಿ ದೇವ(Lord Shani)ನನ್ನು ಪೂಜಿಸುವ ದಿನ. ಇದನ್ನು ಶನಿ ಸ್ವಾಮಿಗೆ ಸಮರ್ಪಿಸಲಾಗಿದೆ. ಶನಿ ಭಗವಂತ ಕಾರ್ಯಗಳಿಗೆ ಅನುಗುಣವಾಗಿ ಪ್ರತಿಫಲ ಅಥವಾ ಶಿಕ್ಷೆ ನೀಡುತ್ತಾನೆ. ಈ ದಿನವನ್ನು ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ನಂಬಿಕೆ ಇರುವ ಜನರು ಆಚರಿಸುತ್ತಾರೆ. ಈ ದಿನದಂದು ಶನಿ ದೇವರನ್ನು ಪೂಜಿಸುವುದರಿಂದ ಶನಿ ದೇವರಿಂದ ಸಂತೋಷ, ಸಂಪತ್ತು ಮತ್ತು ಶಾಂತಿ ರೂಪದಲ್ಲಿ ಅದೃಷ್ಟ ಮತ್ತು ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

7 / 7

Published On - 7:15 am, Fri, 4 February 22

‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ