AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG 5th Test: ಭಾರತ ಈ 5 ತಪ್ಪುಗಳನ್ನು ಮಾಡದಿದ್ದರೆ ನಾಲ್ಕನೇ ದಿನವೇ ಗೆಲ್ಲುತ್ತಿತ್ತು

England vs India 5th Test Day 4: ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ನಡುವೆ ನಾಲ್ಕನೇ ವಿಕೆಟ್‌ಗೆ 195 ರನ್‌ಗಳ ಪಾಲುದಾರಿಕೆ ಇತ್ತು. ಇಬ್ಬರೂ ಒಟ್ಟಾಗಿ ಭಾರತೀಯ ತಂಡದ ವಿರುದ್ಧ ವೇಗವಾಗಿ ರನ್ ಗಳಿಸಿದರು. ಇಬ್ಬರೂ ಪಂದ್ಯವನ್ನು ಭಾರತದ ಹಿಡಿತದಿಂದ ದೂರ ತೆಗೆದುಕೊಂಡಿದ್ದರು. ಆದರೆ, ಹ್ಯಾರಿ ಬ್ರೂಕ್ ವಿಕೆಟ್ ನಂತರ ಪಂದ್ಯದ ಸ್ಥಿತಿ ಬದಲಾಯಿತು. ಐದನೇ ದಿನದಂದು ಭಾರತ ಇನ್ನೂ ಈ ಪಂದ್ಯವನ್ನು ಗೆಲ್ಲುವ ಸಣ್ಣ ಅವಕಾಶ ಹೊಂದಿದೆ.

IND vs ENG 5th Test: ಭಾರತ ಈ 5 ತಪ್ಪುಗಳನ್ನು ಮಾಡದಿದ್ದರೆ ನಾಲ್ಕನೇ ದಿನವೇ ಗೆಲ್ಲುತ್ತಿತ್ತು
India Vs England 5th Test
ಪ್ರೀತಿ ಭಟ್​, ಗುಣವಂತೆ
| Updated By: Vinay Bhat|

Updated on: Aug 04, 2025 | 8:35 AM

Share

ಬೆಂಗಳೂರು (ಆ. 04): ಭಾರತ (Indian Cricket Team) ಮತ್ತು ಇಂಗ್ಲೆಂಡ್ ನಡುವಿನ ಓವಲ್ ಟೆಸ್ಟ್‌ನ ನಾಲ್ಕನೇ ದಿನದಾಟ ಮಂದ ಬೆಳಕು ಮತ್ತು ನಂತರ ಮಳೆಯಿಂದಾಗಿ ಬೇಗನೆ ಆಟವನ್ನು ಕೊನೆಗೊಳಿಸಲಾಯಿತು. ನಾಲ್ಕನೇ ದಿನದ ಆಟ ತುಂಬಾ ರೋಮಾಂಚಕಾರಿಯಾಗಿತ್ತು. ದಿನದ ಅಂತ್ಯದ ವೇಳೆಗೆ, ಇಂಗ್ಲೆಂಡ್ 6 ವಿಕೆಟ್‌ಗಳಿಗೆ 339 ರನ್ ಗಳಿಸಿದೆ. ಇಂಗ್ಲೆಂಡ್‌ಗೆ ಈಗ ಗೆಲ್ಲಲು 35 ರನ್‌ಗಳು ಬೇಕಾಗಿದ್ದರೆ, ಭಾರತದ ಗೆಲುವಿಗೆ 4 ವಿಕೆಟ್‌ಗಳು ಬೇಕಾಗಿವೆ. ಈಗ ನಾವು ನಾಲ್ಕನೇ ದಿನದಂದು ಭಾರತ ಮಾಡಿದ ಆ 5 ತಪ್ಪುಗಳ ಬಗ್ಗೆ ಹೇಳಲಿದ್ದೇವೆ, ಇದರಿಂದಾಗಿ ಟೀಮ್ ಇಂಡಿಯಾ ಪಂದ್ಯವನ್ನು ನಾಲ್ಕನೇ ದಿನ ಗೆಲ್ಲಲು ಸಾಧ್ಯವಾಗಲಿಲ್ಲ. ಭಾರತ ಈ ತಪ್ಪುಗಳನ್ನು ಮಾಡದಿದ್ದರೆ, ಬಹುಶಃ ಪಂದ್ಯವು ಐದನೇ ದಿನಕ್ಕೆ ಹೋಗುತ್ತಿರಲಿಲ್ಲ.

ಕ್ಯಾಚ್ ಕೈಬಿಟ್ಟ ಮೊಹಮ್ಮದ್ ಸಿರಾಜ್

ಬೌಂಡರಿ ಲೈನ್‌ನಲ್ಲಿ ಮೊಹಮ್ಮದ್ ಸಿರಾಜ್ ದೊಡ್ಡ ಪ್ರಮಾದ ಎಸಗಿದರು. ಅವರು ಹ್ಯಾರಿ ಬ್ರೂಕ್‌ಗೆ 19 ರನ್‌ ಗಳಿಸಿದ್ದಾಗ ಜೀವದಾನ ನೀಡಿದರು, ನಂತರ ಅವರು ಶತಕ ಗಳಿಸಿದರು. ಸಿರಾಜ್ ಬ್ರೂಕ್ ಕ್ಯಾಚ್ ಹಿಡಿದಿದ್ದರಾದರೂ ಚೆಂಡು ಕೈಯಲ್ಲಿರುವಾಗ ನಿಯಂತ್ರಣ ತಪ್ಪಿ ಬೌಂಡರಿ ಹಗ್ಗದ ಮೇಲೆ ನಿಂತಿದ್ದರು.

ಇಂಗ್ಲೆಂಡ್ ಪ್ರಾಬಲ್ಯ ಸಾಧಿಸಲು ಅವಕಾಶ ನೀಡಿದರು

ಪಂದ್ಯದ ನಾಲ್ಕನೇ ದಿನದಂದು ಭಾರತ ತಂಡವು ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ಅವರಿಗೆ ಪ್ರಾಬಲ್ಯ ಸಾಧಿಸಲು ಅವಕಾಶ ಮಾಡಿಕೊಟ್ಟಿತು. ಬ್ರೂಕ್ ಮತ್ತು ರೂಟ್ ಆಡುತ್ತಿದ್ದಾಗ, ಇಂಗ್ಲೆಂಡ್ ಸುಲಭವಾಗಿ ರನ್ ಗಳಿಸುತ್ತಿತ್ತು. ಇವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಲು ಭಾರತ ವಿಫಲವಾಗಿದ್ದು, ಇಂದು ಸಂಕಷ್ಟಕ್ಕೆ ಬಂದು ನಿಂತಿದೆ.

ಇದನ್ನೂ ಓದಿ
Image
ಮಳೆಯಿಂದ 4ನೇ ದಿನದಾಟ ರದ್ದು; ಗೆಲುವಿಗೆ 35 ರನ್​ ದೂರದಲ್ಲಿ ಇಂಗ್ಲೆಂಡ್
Image
ಹ್ಯಾಟ್ರಿಕ್ ಶತಕ ಸಿಡಿಸಿ ಹಲವು ದಾಖಲೆ ಬರೆದ ಜೋ ರೂಟ್
Image
ವಯಸ್ಸಿನ ವಂಚನೆಯನ್ನು ತಡೆಯಲು ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟ ಬಿಸಿಸಿಐ
Image
ಓವಲ್ ಟೆಸ್ಟ್​ನಲ್ಲಿ ದಾಖಲೆಯ ಶತಕ ಸಿಡಿಸಿದ ಹ್ಯಾರಿ ಬ್ರೂಕ್

IND vs ENG: ರೋಚಕ ಘಟ್ಟದತ್ತ 5ನೇ ಟೆಸ್ಟ್; ಭಾರತದ ಗೆಲುವಿಗೆ ಬೇಕು 3 ವಿಕೆಟ್

ಸ್ಪಿನ್ನರ್‌ಗಳನ್ನು ತಡವಾಗಿ ಕರೆತಂದರು

ನಾಯಕ ಶುಭ್​ಮನ್ ಗಿಲ್ ವೇಗದ ಬೌಲರ್‌ಗಳನ್ನು ದೀರ್ಘಕಾಲ ಬೌಲಿಂಗ್ ಮಾಡುವಂತೆ ಮಾಡಿದರು. ಅವರು ತಮ್ಮ ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಅವರನ್ನು ತಡವಾಗಿ ಬೌಲಿಂಗ್ ಮಾಡಲು ಕರೆತಂದರು. ಇದು ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಹಿಂದೆ ಭಾರತ ವಿಕೆಟ್​ಗಾಗಿ ಪರದಾಡುತ್ತಿದ್ದಾಗ ಸುಂದರ್ ಅನೇಕ ಬಾರಿ ಬ್ರೇಕ್ ತಂದುಕೊಟ್ಟದ್ದರು. ಹೀಗಿದ್ದರೂ ಇವರನ್ನು ತಡವಾಗಿ ಬೌಲಿಂಗ್​ಗೆ ತರಲಾಯಿತು.

ಆಕ್ರಮಣಶೀಲತೆ ಇಲ್ಲದೆ ಬೌಲಿಂಗ್

ನಾಲ್ಕನೇ ದಿನದ ಪಂದ್ಯದಲ್ಲಿ ಭಾರತ ತಂಡದ ಭುಜಗಳು ಜೋತುಬಿದ್ದಿದ್ದ ಒಂದು ಸಂದರ್ಭವಿತ್ತು. ಅವರ ಆಕ್ರಮಣಶೀಲತೆ ಗೋಚರಿಸಲಿಲ್ಲ, ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳಾದ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಇದರ ಸಂಪೂರ್ಣ ಲಾಭ ಪಡೆದರು.

ಇಂಗ್ಲೆಂಡ್ ವೇಗವಾಗಿ ರನ್ ಗಳಿಸಲು ಅವಕಾಶ ನೀಡಿದರು

ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ನಡುವೆ ನಾಲ್ಕನೇ ವಿಕೆಟ್‌ಗೆ 195 ರನ್‌ಗಳ ಪಾಲುದಾರಿಕೆ ಇತ್ತು. ಇಬ್ಬರೂ ಒಟ್ಟಾಗಿ ಭಾರತೀಯ ತಂಡದ ವಿರುದ್ಧ ವೇಗವಾಗಿ ರನ್ ಗಳಿಸಿದರು. ಇಬ್ಬರೂ ಪಂದ್ಯವನ್ನು ಭಾರತದ ಹಿಡಿತದಿಂದ ದೂರ ತೆಗೆದುಕೊಂಡಿದ್ದರು. ಆದರೆ, ಹ್ಯಾರಿ ಬ್ರೂಕ್ ವಿಕೆಟ್ ನಂತರ ಪಂದ್ಯದ ಸ್ಥಿತಿ ಬದಲಾಯಿತು. ಐದನೇ ದಿನದಂದು ಭಾರತ ಇನ್ನೂ ಈ ಪಂದ್ಯವನ್ನು ಗೆಲ್ಲುವ ಸಣ್ಣ ಅವಕಾಶ ಹೊಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ