AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಸುನಿಲ್ ನರೈನ್ ಹಿಟ್ ವಿಕೆಟ್ ಆದರೂ ಅಂಪೈರ್ ಔಟ್ ನೀಡಿಲ್ಲವೇಕೆ? ಇಲ್ಲಿದೆ ಕಾರಣ

IPL 2025 KKR vs RCB: ಐಪಿಎಲ್ ಸೀಸನ್-18ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ನಿಗದಿತ 20 ಓವರ್​ಗಳಲ್ಲಿ 174 ರನ್ ಕಲೆಹಾಕಿದರೆ, ಈ ಗುರಿಯನ್ನು ಆರ್​ಸಿಬಿ ಪಡೆ ಕೇವಲ 16.2 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಗೆಲುವು ದಾಖಲಿಸಿದೆ.

IPL 2025: ಸುನಿಲ್ ನರೈನ್ ಹಿಟ್ ವಿಕೆಟ್ ಆದರೂ ಅಂಪೈರ್ ಔಟ್ ನೀಡಿಲ್ಲವೇಕೆ? ಇಲ್ಲಿದೆ ಕಾರಣ
Sunil Narine
ಝಾಹಿರ್ ಯೂಸುಫ್
|

Updated on: Mar 23, 2025 | 7:57 AM

Share

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ (IPL 2025) ಸೀಸನ್-18ರ ಮೊದಲ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಆರ್​ಸಿಬಿ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ಸುನಿಲ್ ನರೈನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದ ಏಳನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಎಡಗೈ ಬ್ಯಾಟ್ಸ್‌ಮನ್ ಸುನಿಲ್ ನರೈನ್ ಶಾರ್ಟ್ ಬಾಲ್ ಆಡಲು ಪ್ರಯತ್ನಿಸಿ ವಿಫಲರಾದರು.

ಇದರ ಬೆನ್ನಲ್ಲೇ ಅವರ ಬ್ಯಾಟ್ ಸ್ಟಂಪ್​ಗೆ ತಗುಲಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಟಿಮ್ ಡೇವಿಡ್ ಹಿಟ್​ ವಿಕೆಟ್​ಗೆ ಮನವಿ ಮಾಡುವಂತೆ ಸೂಚಿಸಿದ್ದರು. ಅತ್ತ ರಜತ್ ಪಾಟಿದಾರ್ ಕೂಡ ಹಿಟ್​ ವಿಕೆಟ್​ ಮನವಿಗಾಗಿ ಆಸಕ್ತಿ ತೋರಿದ್ದರು. ಆದರೆ ವಿರಾಟ್ ಕೊಹ್ಲಿ ಹಾಗೂ ಜಿತೇಶ್ ಶರ್ಮಾ ಔಟ್ ಅಲ್ಲವೆಂದು ಸೂಚಿಸಿದರು. ಇದಕ್ಕೆ ಕಾರಣ ಹಿಟ್​ ವಿಕೆಟ್​ ನಿಯಮ.

ಇದನ್ನೂ ಓದಿ
Image
RCBಯಲ್ಲಿ ಬ್ರಿಟಿಷ್ ಪಡೆ... ಸೋತು ಸುಣ್ಣವಾಗಲಿದೆ ಎಂದ ಗಿಲ್​ಕ್ರಿಸ್ಟ್
Image
IPL 2025: ಐಪಿಎಲ್​ ಕಣದಲ್ಲಿದ್ದಾರೆ 13 ಕನ್ನಡಿಗರು
Image
IPL 2025: ಬ್ಯಾನ್ ಬ್ಯಾನ್ ಬ್ಯಾನ್... ಐಪಿಎಲ್ ಆಟಗಾರರಿಗೆ ಬ್ಯಾನ್ ಭೀತಿ
Image
IPL 2025: ಐಪಿಎಲ್​ನಲ್ಲಿ 10 ನಿಮಯಗಳು ಬದಲಾವಣೆ

ಹಿಟ್​ ವಿಕೆಟ್​ಗೆ ಮನವಿ ಮಾಡಬೇಕಿದ್ದರೆ ಚೆಂಡು ಚಾಲ್ತಿಯಲ್ಲಿರಬೇಕು. ಆದರೆ ಸುನಿಲ್ ನರೈನ್ ವಿಷಯದಲ್ಲಿ ಅದಾಗಲೇ ಬಾಲ್ ಡೆಡ್ ಆಗಿತ್ತು. ಅಂದರೆ ಚೆಂಡು ವಿಕೆಟ್ ಕೀಪರ್ ಕೈ ಸೇರಿದ ಮೇಲೆ, ಅಂಪೈರ್ ವೈಡ್ ತೀರ್ಪು ನೀಡಿದ ಬಳಿಕವಷ್ಟೇ ಸುನಿಲ್ ನರೈನ್ ಅವರ ಬ್ಯಾಟ್ ವಿಕೆಟ್​ಗೆ ತಗುಲಿತ್ತು.

ಅಂದರೆ ಬಾಲ್ ಡೆಡ್ ಆದ ಬಳಿಕವಷ್ಟೇ ಅವರು ಹಿಟ್ ವಿಕೆಟ್ ಆಗಿದ್ದಾರೆ. ಹೀಗಾಗಿ ಅದು ನಾಟೌಟ್, ಇದೇ ಕಾರಣದಿಂದಾಗಿ ಕೊಹ್ಲಿ ಸೇರಿದಂತೆ ಕೆಲ ಆಟಗಾರರು ರಜತ್ ಪಾಟಿದಾರ್ ಅವರಿಗೆ ಮೂರನೇ ಅಂಪೈರ್​ಗೆ ಮನವಿ ಸಲ್ಲಿಸುವ ಅವಶ್ಯಕತೆಯಿಲ್ಲ ಎಂದು ಸೂಚಿಸಿದ್ದರು.

ಸುನಿಲ್ ನರೈನ್ ಹಿಟ್ ವಿಕೆಟ್ ವಿಡಿಯೋ:

ಒಂದು ವೇಳೆ ಚೆಂಡು ಚಾಲ್ತಿಯಲ್ಲಿದಿದ್ದರೆ ಅಂಪೈರ್ ಎಂದು ತೀರ್ಪು ನೀಡುತ್ತಿದ್ದರು. ಅಂದರೆ ಸುನಿಲ್ ನರೈನ್ ಬ್ಯಾಟ್ ತಾಗಿದ ಬಳಿಕ ಚೆಂಡು ಮೈದಾನದಲ್ಲಿ ಇದ್ದಿದ್ದರೆ ಅಥವಾ ಚೆಂಡು ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರ ಕೈ ತಪ್ಪಿದ ಬಳಿಕ ಸುನಿಲ್ ನರೈನ್ ಅವರ ಬ್ಯಾಟ್ ವಿಕೆಟ್​ಗೆ ತಗುಲಿದ್ದರೆ ಹಿಟ್​ ವಿಕೆಟ್​ಗೆ ಮನವಿ ಮಾಡುವ ಅವಕಾಶವಿತ್ತು.

ಇದನ್ನೂ ಓದಿ: IPL 2025: RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಗಾಯಾಳು

ಆದರೆ ಸುನಿಲ್ ನರೈನ್ ಅವರು ಹಿಟ್ ವಿಕೆಟ್ ಆಗಿದ್ದು, ಅಂಪೈರ್ ಚೆಂಡು ಡೆಡ್ ಆದ ಬಳಿಕ ವೈಡ್ ಎಂದು ತೀರ್ಪು ನೀಡಿದ ಬಳಿಕವಷ್ಟೇ. ಹೀಗಾಗಿ ಈ ಬಗ್ಗೆ ಅಪೀಲ್ ಮಾಡಿದ್ದರೂ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡುತ್ತಿದ್ದರು.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!