AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: RCB ತಂಡದ ಭರ್ಜರಿ ಚೇಸಿಂಗ್​ಗೆ ಈತನೇ ಕಾರಣ!

IPL 2026 RCB vs GT: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 205 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡ 18.5 ಓವರ್​ಗಳಲ್ಲಿ 206 ರನ್​ ಬಾರಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Virat Kohli: RCB ತಂಡದ ಭರ್ಜರಿ ಚೇಸಿಂಗ್​ಗೆ ಈತನೇ ಕಾರಣ!
Virat Kohli
ಝಾಹಿರ್ ಯೂಸುಫ್
|

Updated on: Apr 25, 2026 | 1:58 PM

Share

IPL 2026: ಐಪಿಎಲ್​ನ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್​ 20 ಓವರ್​ಗಳಲ್ಲಿ 205 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ 18.5 ಓವರ್​ಗಳಲ್ಲಿ 206 ರನ್​ಗಳಿಸಿ 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಆರ್​ಸಿಬಿ ತಂಡವು ಇಷ್ಟೊಂದು ಸುಲಭವಾಗಿ ಚೇಸ್ ಮಾಡಲು ದೇವದತ್ ಪಡಿಕ್ಕಲ್ ಕಾರಣ ಎಂದು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ದೇವದತ್ ಪಡಿಕ್ಕಲ್ ಚೆಂಡನ್ನು ಎಲ್ಲೂ ಸ್ಲಾಗ್​ ಮಾಡದೇ ಕೇವಲ ಕ್ರಿಕೆಟಿಂಗ್ ಶಾಟ್‌ಗಳ ಮೂಲಕವೇ ರನ್ ಗಳಿಸುತ್ತಾರೆ. ಅವರು ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡದೆ ಅಷ್ಟು ವೇಗವಾಗಿ ರನ್ ಗಳಿಸುವುದು ಅಪರೂಪದ ಸಂಗತಿ.

ಕಗಿಸೊ ರಬಾಡ ಅವರ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಪಡಿಕ್ಕಲ್ ಅವರ ಆತ್ಮವಿಶ್ವಾಸವು ತಂಡದ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ದೇವದತ್ ಪಡಿಕ್ಕಲ್ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಪರಿಣಾಮ ಆರ್​ಸಿಬಿ ತಂಡವು ಯಾವುದೇ ಒತ್ತಡವಿಲ್ಲದೇ 206 ರನ್​ಗಳಿಸಲು ಸಾಧ್ಯವಾಯಿತು. ಹೀಗಾಗಿ ಆರ್​ಸಿಬಿ ತಂಡದ ಚೇಸಿಂಗ್​ನ ಶ್ರೇಯಸ್ಸು ದೇವದತ್ ಪಡಿಕ್ಕಲ್​ಗೆ ಸಲ್ಲಬೇಕು ಎಂದು ವಿರಾಟ್ ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೌಲರ್​ಗಳಿಗೂ ಬಹುಪರಾಕ್:

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ ಒಂದು ಹಂತದಲ್ಲಿ 230-235 ರನ್ ಗಳಿಸುವ ಸೂಚನೆ ನೀಡಿತ್ತು. ಆದರೆ ಆರ್​​ಸಿಬಿ ಬೌಲರ್‌ಗಳು ಕೊನೆಯ ಓವರ್‌ಗಳಲ್ಲಿ ಅದ್ಭುತವಾಗಿ ಪುಟಿದೇಳುವ ಮೂಲಕ ಅವರನ್ನು 205 ರನ್‌ಗಳಿಗೆ ನಿಯಂತ್ರಿಸಿದರು.

ನಮ್ಮ ಬೌಲರ್‌ಗಳು 20-25 ರನ್‌ಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದು ಗೆಲುವಿಗೆ ಪ್ರಮುಖ ಕಾರಣವಾಯಿತು  ಎಂದು ಕೊಹ್ಲಿ ಬೌಲರ್‌ಗಳ ಶ್ರಮವನ್ನು ಸಹ ಶ್ಲಾಘಿಸಿದ್ದಾರೆ.

ಕೊಹ್ಲಿ ಮತ್ತು ಪಡಿಕ್ಕಲ್ ಜುಗಲ್​ಬಂಧಿ:

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 81 ರನ್ (8 ಬೌಂಡರಿ, 4 ಸಿಕ್ಸರ್) ಸಿಡಿಸಿ ‘ಪಂದ್ಯ ಪುರುಷ’ ಪ್ರಶಸ್ತಿ ಭಾಜನರಾದರು. ಆದರೆ, ಕೊಹ್ಲಿ ಅವರ ಪ್ರಕಾರ ಈ ಗೆಲುವಿನ ನಿಜವಾದ ಶಕ್ತಿ ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್. ಪಡಿಕ್ಕಲ್ ಕೇವಲ 27 ಎಸೆತಗಳಲ್ಲಿ 55 ರನ್ ಚಚ್ಚುವ ಮೂಲಕ ತಂಡಕ್ಕೆ ಅಗತ್ಯವಿದ್ದ ವೇಗವನ್ನು ನೀಡಿದರು. ಈ ಜೋಡಿ ಕೇವಲ 59 ಎಸೆತಗಳಲ್ಲಿ 115 ರನ್‌ಗಳ ಅಮೋಘ ಜೊತೆಯಾಟವಾಡಿ ಪಂದ್ಯವನ್ನು ಎದುರಾಳಿಗಳ ಕೈಯಿಂದ ಕಿತ್ತುಕೊಂಡಿತು.

ಇದನ್ನೂ ಓದಿ: 1,376 ಕಿ.ಮೀ ದೂರದ ತವರು ಮೈದಾನದಲ್ಲಿ 2 ಪಂದ್ಯಗಳನ್ನಾಡಲಿದೆ RCB

ಪರಿಣಾಮ ಆರ್​​ಸಿಬಿ ತಂಡವು 18.5 ಓವರ್​ಗಳಲ್ಲಿ 206 ರನ್​ಗಳಿಸಿ 5 ವಿಕೆಟ್​ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

Follow Us
ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ!
ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ!
ದೆಹಲಿಯಲ್ಲಿ ಡಿಕೆಬಿಗಿ ಪಟ್ಟು: ಮೇ ಮೊದಲ ವಾರವೇ ದೊಡ್ಡ ಬೆಳವಣಿಗೆ ಸಾಧ್ಯತೆ?
ದೆಹಲಿಯಲ್ಲಿ ಡಿಕೆಬಿಗಿ ಪಟ್ಟು: ಮೇ ಮೊದಲ ವಾರವೇ ದೊಡ್ಡ ಬೆಳವಣಿಗೆ ಸಾಧ್ಯತೆ?
ಮಣಿಪಾಲ: ಪಬ್ಲಿಕ್​ನಲ್ಲೇ ಯುವಜೋಡಿಯ ಸರಸ ಸಲ್ಲಾಪ! ವಿಡಿಯೋ ವೈರಲ್
ಮಣಿಪಾಲ: ಪಬ್ಲಿಕ್​ನಲ್ಲೇ ಯುವಜೋಡಿಯ ಸರಸ ಸಲ್ಲಾಪ! ವಿಡಿಯೋ ವೈರಲ್
ಶರಬತ್​ನಂತೆಯೇ ಕಾಣ್ಸುತ್ತೆ, ಕುಡಿದ್ರೆ ಇಡೀ ದಿನ ನಶೆಯಲ್ಲಿ ತೇಲಾಡೋದು ಪಕ್ಕಾ
ಶರಬತ್​ನಂತೆಯೇ ಕಾಣ್ಸುತ್ತೆ, ಕುಡಿದ್ರೆ ಇಡೀ ದಿನ ನಶೆಯಲ್ಲಿ ತೇಲಾಡೋದು ಪಕ್ಕಾ
ಟ್ರಾಫಿಕ್ ಪೊಲೀಸ್ ಬೈಕ್​ನಲ್ಲಿ ಅಡಗಿತ್ತು ಹಾವು! ವೀಡಿಯೋ ನೋಡಿ
ಟ್ರಾಫಿಕ್ ಪೊಲೀಸ್ ಬೈಕ್​ನಲ್ಲಿ ಅಡಗಿತ್ತು ಹಾವು! ವೀಡಿಯೋ ನೋಡಿ
ಅದ್ಭುತವಾಗಿ ‘ಅಂದೊಂದಿತ್ತು ಕಾಲ’ ಹಾಡನ್ನು ಹಾಡಿದ ರಾಮನಗರದ ಝೋಹಾನ್
ಅದ್ಭುತವಾಗಿ ‘ಅಂದೊಂದಿತ್ತು ಕಾಲ’ ಹಾಡನ್ನು ಹಾಡಿದ ರಾಮನಗರದ ಝೋಹಾನ್
ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ: ಪಲ್ಲಕ್ಕಿ ಉರುಳಿ ಅವಘಡ
ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ: ಪಲ್ಲಕ್ಕಿ ಉರುಳಿ ಅವಘಡ
ಶಾಸಕ ಲಕ್ಷ್ಮಣ ಸವದಿ ಕಣ್ಣೆದುರಲ್ಲೇ ಪ್ರಾಣಬಿಟ್ಟ ಆಪ್ತ!
ಶಾಸಕ ಲಕ್ಷ್ಮಣ ಸವದಿ ಕಣ್ಣೆದುರಲ್ಲೇ ಪ್ರಾಣಬಿಟ್ಟ ಆಪ್ತ!
ಮಹಿಳೆ ನೆಲಕ್ಕೆ ಬಿದ್ದರೂ ಬಿಡದೆ ಎಳೆದಾಡಿ ಸರ ಅಪಹರಿಸಿದ ಭೀಕರ ದೃಶ್ಯ ವೈರಲ್
ಮಹಿಳೆ ನೆಲಕ್ಕೆ ಬಿದ್ದರೂ ಬಿಡದೆ ಎಳೆದಾಡಿ ಸರ ಅಪಹರಿಸಿದ ಭೀಕರ ದೃಶ್ಯ ವೈರಲ್
ನೀವು ಸಾಲದ ಸುಳಿಯಲ್ಲಿ ಸಿಲುಕಿದ್ರೆ ಹೊರಗೆ ಬರಲು ಹೀಗೆ ಮಾಡಿ!
ನೀವು ಸಾಲದ ಸುಳಿಯಲ್ಲಿ ಸಿಲುಕಿದ್ರೆ ಹೊರಗೆ ಬರಲು ಹೀಗೆ ಮಾಡಿ!