AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜತ್ ಕ್ಯಾಚ್ ಔಟೋ-ನಾಟೌಟೋ? ನಿಯಮ ಏನು ಹೇಳುತ್ತೆ?

ಜಿಟಿ vs ಆರ್​​ಸಿಬಿ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಹಿಡಿದ ರಜತ್ ಪಟಿದಾರ್ ಅವರ ವಿವಾದಾತ್ಮಕ ಕ್ಯಾಚ್ ಬಗ್ಗೆ ಚರ್ಚೆ ನಡೆದಿದೆ. ಬಾಲ್ ನೆಲಕ್ಕೆ ತಗುಲಿದರೂ ಔಟ್ ನೀಡಲಾಯಿತು. MCC ನಿಯಮ 33.2.1 ರ ಪ್ರಕಾರ, ಫೀಲ್ಡರ್ ಚೆಂಡು ಮತ್ತು ದೇಹದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರೆ, ನಂತರ ಚೆಂಡು ನೆಲಕ್ಕೆ ತಾಗಿದರೂ ಅದನ್ನು ಔಟ್ ಎಂದೇ ಪರಿಗಣಿಸಲಾಗುತ್ತದೆ.

ರಜತ್ ಕ್ಯಾಚ್ ಔಟೋ-ನಾಟೌಟೋ? ನಿಯಮ ಏನು ಹೇಳುತ್ತೆ?
ಕ್ಯಾಚ್
ರಾಜೇಶ್ ದುಗ್ಗುಮನೆ
|

Updated on:May 01, 2026 | 8:19 AM

Share

ಜಿಟಿ vs ಆರ್​​ಸಿಬಿ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಹಿಡಿದ ರಜತ್ ಪಟಿದಾರ್ ಅವರ ಕ್ಯಾಚ್ ಈಗ ಚರ್ಚೆಗೆ ಕಾರಣ ಆಗಿದೆ. ರಜತ್ ಅವರು ಸಿಕ್ಸ್ ಬಾರಿಸುವ ಪ್ರಯತ್ನದಲ್ಲಿ ಇದ್ದರು. ಈ ವೇಳೆ ಚೆಂಡು ಹೋಲ್ಡರ್ ಕೈ ಸೇರಿತು. ಆ ಬಳಿಕ ಅವರು ಬಾಲ್​ ಅನ್ನು ನೆಲಕ್ಕೆ ಉಜ್ಜಿಕೊಂಡು ಹೋದರು. ಈ ಕ್ಯಾಚ್ ಬಗ್ಗೆ ಚರ್ಚೆ ಶರುವಾಗಿದೆ. ಹಾಗಾದರೆ ನಿಯಮದ ಪ್ರಕಾರ ನೋಡೋದಾದರೆ ಈ ಕ್ಯಾಚ್ ಔಟೋ ಅಥವಾ ಇಲ್ಲವೋ? ಆ ಬಗ್ಗೆ ಇಲ್ಲಿದೆ ವಿವರ. ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್​​ ಬಗ್ಗೆ ವಿವಾದ ಆಗಿದೆ. ಜೇಸನ್ ಹೋಲ್ಡರ್ ಅವರು ಬಾಲ್​ ಅನ್ನೇ ನೋಡುತ್ತಾ ಬಂದು, ಅದನ್ನು ಕೈಗೆ ತೆಗೆದುಕೊಂಡರು. ನಂತರ ನೆಲಕ್ಕೆ ಬಿದ್ದರು. ಬಾಲ್ ಅವರ ಕೈಯಲ್ಲೇ ಇದ್ದರೂ ಅದು ನೆಲಕ್ಕೆ ಉಜ್ಜುತ್ತಾ ಹೋಯಿತು. ನಂತರ ಅವರು ಬಾಲ್ ಹಿಡಿದ ಕೈಯನ್ನೇ ಊರಿ ಮೇಲಕ್ಕೆ ಎದ್ದರು. ಎಲ್ಲರೂ ಇದನ್ನು ನಾಟೌಟ್ ಕೊಡುತ್ತಾರೆ ಎಂದು ಭಾವಿಸಿದ್ದರು. ಆದರೆ, ಔಟ್ ಕೊಡಲಾಯಿತು. ಇದು ನಾಟೌಟ್ ಎಂದು ಭಾರತ ತಂಡ ಮಾಜಿ ಬೌಲರ್ ಹಾಗೂ ಕಮೆಂಟೇಟರ್ ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.

ನಿಯಮ ಏನು ಹೇಳುತ್ತದೆ?

ಅಂಪೈರ್​​​ಗಳು ಔಟ್ ಕೊಟ್ಟಿದ್ದು ನಿಯಮಗಳನ್ನು ಆಧರಿಸಿಯೇ. ಮೆರಿಲಿಬೋನ್ ಕ್ರಿಕೆಟ್ ಕ್ಲಬ್ ರಚಸಿದ ನಿಯಮ 33.2.1ರ ಪ್ರಕಾರ ಅಂಪೈರ್ ಔಟ್ ಕೊಟ್ಟಿದ್ದಾರೆ. ಓರ್ವ ಫೀಲ್ಡರ್ ಕ್ಯಾಚ್ ಹಿಡಿದ ನಂತರ ಆತ ತನ್ನ ಶರೀರದ ಚಲನೆ ಮತ್ತು ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕು. ಆನಂತರ ಚೆಂಡು ನೆಲಕ್ಕೆ ತಗುಲಿದರೂ ಅದನ್ನು ‘ಔಟ್’ ಎಂದೇ ಪರಿಗಣಿಸಲಾಗುತ್ತದೆ.

ಜೇಸನ್ ಕ್ಯಾಚ್ ಹಿಡಿದಾಗ ದೇಹದ ಚಲನೆ ಹಾಗೂ ಬೌಲ್ ಮೇಲೆ ಅವರಿಗೆ ಸಂಪೂರ್ಣ ನಿಯಂತ್ರ ಇದೆ ಎಂದೇ ಥರ್ಡ್​ ಅಂಪೈರ್ ಪರಿಗಣಿಸಿರಬಹುದು. ಹೀಗಾಗಿ, ಇದನ್ನು ಔಟ್ ಎಂದು ಕೊಟ್ಟಿದ್ದಾರೆ. ಫೀಲ್ಡರ್ ಚೆಂಡನ್ನು ಸುರಕ್ಷಿತವಾಗಿ ಕೈಯಲ್ಲಿ ಹಿಡಿದು, ತಾವು ಸಮತೋಲನ ಕಳೆದುಕೊಳ್ಳದೆ ನಿಯಂತ್ರಣದಲ್ಲಿದ್ದಾರೆ ಎಂದು ಖಚಿತವಾದ ಮೇಲೆ ಚೆಂಡು ನೆಲಕ್ಕೆ ತಗುಲಿದೆ ಎಂಬುದು ಥರ್ಡ್​ ಅಂಪೈರ್ ವಾದ. ಆದರೆ, ಹೋಲ್ಡರ್ ನಿಯಂತ್ರಣದಲ್ಲಿ ಇರಲಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಇದನ್ನೂ ಓದಿ: ಇದೇ ಮಾದರಿಯ ಕ್ಯಾಚ್ ಅಂದು ನಾಟ್​​ ಔಟ್, ಇಂದು ಔಟ್; ಇದೆಂತಹ ನ್ಯಾಯ? 1787ರಲ್ಲಿ ಸ್ಥಾಪನೆಯಾದ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (MCC), ವಿಶ್ವದ ಅತ್ಯಂತ ಸಕ್ರಿಯ ಕ್ರಿಕೆಟ್ ಕ್ಲಬ್. ಇದು ಲಂಡನ್‌ನಲ್ಲಿರುವ ಲಾರ್ಡ್ಸ್ ಕ್ರಿಕೆಟ್ ಮೈದಾನದ ಮಾಲೀಕರು ಆಗಿದ್ದಾರೆ. ಪ್ರಪಂಚದಾದ್ಯಂತ ಬಳಸಲಾಗುವ ಎಲ್ಲಾ ಕ್ರಿಕೆಟ್ ನಿಯಮಗಳನ್ನು ಇವರು ರಚಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:18 am, Fri, 1 May 26

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಉತ್ತರ ಪ್ರದೇಶದ ಬುಲಂದ್‌ಶಹರ್ ಕಾರ್ಖಾನೆಯಲ್ಲಿ ಬೆಂಕಿ ದುರಂತ
ಉತ್ತರ ಪ್ರದೇಶದ ಬುಲಂದ್‌ಶಹರ್ ಕಾರ್ಖಾನೆಯಲ್ಲಿ ಬೆಂಕಿ ದುರಂತ
ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ
ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ
ಈಗ ಸ್ವಲ್ಪ ಕನ್ನಡ ಬರುತ್ತೆ, ಮುಂದಿನ ಸಲ ಜಾಸ್ತಿ ಮಾತಾಡುವೆ: ರಾಮ್ ಚರಣ್
ಈಗ ಸ್ವಲ್ಪ ಕನ್ನಡ ಬರುತ್ತೆ, ಮುಂದಿನ ಸಲ ಜಾಸ್ತಿ ಮಾತಾಡುವೆ: ರಾಮ್ ಚರಣ್
ಗುಲ್ಮಾರ್ಗ್‌ನಲ್ಲಿ ಆಕಾಶದ ಮಧ್ಯೆ ಸಿಲುಕಿದ 300 ಪ್ರವಾಸಿಗರು!
ಗುಲ್ಮಾರ್ಗ್‌ನಲ್ಲಿ ಆಕಾಶದ ಮಧ್ಯೆ ಸಿಲುಕಿದ 300 ಪ್ರವಾಸಿಗರು!
ಧರ್ಮೇಂದ್ರ ಪರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ನಟಿ ಹೇಮಾ ಮಾಲಿನಿ
ಧರ್ಮೇಂದ್ರ ಪರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ನಟಿ ಹೇಮಾ ಮಾಲಿನಿ
ಕೊಯಮತ್ತೂರು ಬಾಲಕಿ ಹತ್ಯೆ ಕುರಿತ ಸುದ್ದಿಗೋಷ್ಠಿಯಲ್ಲಿ ನಕ್ಕ ಮಹಿಳಾ ಪೊಲೀಸ್!
ಕೊಯಮತ್ತೂರು ಬಾಲಕಿ ಹತ್ಯೆ ಕುರಿತ ಸುದ್ದಿಗೋಷ್ಠಿಯಲ್ಲಿ ನಕ್ಕ ಮಹಿಳಾ ಪೊಲೀಸ್!
SIR ಸಭೆಗೆ ಗೈರಾದ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಿಗೆ ‘ಕೈ’ ಕೊಕ್
SIR ಸಭೆಗೆ ಗೈರಾದ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಿಗೆ ‘ಕೈ’ ಕೊಕ್
ಶಿವಮೊಗ್ಗ KSCA ಮೈದಾನದಲ್ಲಿ ಕ್ರಿಕೆಟ್ ಆಟಗಾರ ಅಕ್ಷಯ್ ಅಂತಿಮ ದರ್ಶನ
ಶಿವಮೊಗ್ಗ KSCA ಮೈದಾನದಲ್ಲಿ ಕ್ರಿಕೆಟ್ ಆಟಗಾರ ಅಕ್ಷಯ್ ಅಂತಿಮ ದರ್ಶನ
ಒಂದೇ ನೋಂದಣಿಯಲ್ಲಿ 2 ಮಕ್ಕಳಿಗೆ ಜನನ ಪ್ರಮಾಣಪತ್ರ: ಲೋಕಾ ದಾಳಿ
ಒಂದೇ ನೋಂದಣಿಯಲ್ಲಿ 2 ಮಕ್ಕಳಿಗೆ ಜನನ ಪ್ರಮಾಣಪತ್ರ: ಲೋಕಾ ದಾಳಿ
ಪೊಲೀಸ್ ಠಾಣೆ ಮುಂದೆಯೇ ಬೆಂಗಳೂರು 'ಪಂಕ್ಚರ್ ಮಾಫಿಯಾ' ಆಟ!
ಪೊಲೀಸ್ ಠಾಣೆ ಮುಂದೆಯೇ ಬೆಂಗಳೂರು 'ಪಂಕ್ಚರ್ ಮಾಫಿಯಾ' ಆಟ!