AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy 2024: ರಣಜಿ ಟ್ರೋಫಿ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ

Ranji Trophy 2024 Schedule: ರಣಜಿ ಟ್ರೋಫಿ 2024 ರ ಪಂದ್ಯಗಳು ನಾಕೌಟ್ ಹಂತಕ್ಕೆ ಬಂದು ನಿಂತಿದೆ. ಕರ್ನಾಟಕ ತಂಡವನ್ನು 127 ರನ್​ ಗಳಿಂದ ಮಣಿಸಿ ವಿದರ್ಭ ತಂಡವು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಹಾಗೆಯೇ ಬರೋಡಾ ವಿರುದ್ಧ ಡ್ರಾ ಸಾಧಿಸಿರುವ ಮುಂಬೈ ತಂಡವು ಸೆಮಿಫೈನಲ್​ಗೆ ಏರುವಲ್ಲಿ ಯಶಸ್ವಿಯಾಗಿದೆ.

Ranji Trophy 2024: ರಣಜಿ ಟ್ರೋಫಿ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ
Ranji Trophy 2024
TV9 Web
| Edited By: |

Updated on: Feb 28, 2024 | 8:06 AM

Share

ದೇಶೀಯ ಅಂಗಳದ ಟೆಸ್ಟ್​ ಪಂದ್ಯಾವಳಿ ರಣಜಿ ಟ್ರೋಫಿ ಟೂರ್ನಿಯು (Ranji Trophy 2024) ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 32 ತಂಡಗಳೊಂದಿಗೆ ಶುರುವಾದ ಟೂರ್ನಿಯಿಂದ ಈಗಾಗಲೇ 28 ತಂಡಗಳು ಹೊರಬಿದ್ದಿದೆ. ಇದೀಗ ನಾಲ್ಕು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಮಾರ್ಚ್ 2 ರಿಂದ ಸೆಮಿಫೈನಲ್ ಪಂದ್ಯಗಳು ಶುರುವಾಗಲಿದೆ.

ಸೆಮಿಫೈನಲ್​ನಲ್ಲಿ ಕಣಕ್ಕಿಳಿಯುವ ತಂಡಗಳು:

  • ವಿದರ್ಭ
  • ತಮಿಳುನಾಡು
  • ಮುಂಬೈ
  • ಮಧ್ಯ ಪ್ರದೇಶ್

ಸೆಮಿಫೈನಲ್ ಹಾದಿ:

  • ಮೊದಲ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 127 ರನ್​ಗಳಿಂದ ಮಣಿಸಿ ವಿದರ್ಭ ತಂಡವು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ.
  • ಮುಂಬೈ ಮತ್ತು ಬರೋಡಾ ನಡುವಣ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದಾಗ್ಯೂ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಪಡೆದುಕೊಂಡಿದ್ದ ಮುಂಬೈ ತಂಡವು ಸೆಮಿಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
  • ಮೂರನೇ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು 33 ರನ್​ಗಳಿಂದ ಮಣಿಸಿ ತಮಿಳುನಾಡು ತಂಡವು ಸೆಮಿಫೈನಲ್​​ಗೇರಿದೆ.
  • ಆಂಧ್ರ ಪ್ರದೇಶ ವಿರುದ್ಧದ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 4 ರನ್​ಗಳ ರೋಚಕ ಜಯ ಸಾಧಿಸುವ ಮೂಲಕ ಮಧ್ಯ ಪ್ರದೇಶ್ ತಂಡವು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ.

ಸೆಮಿಫೈನಲ್ ಮುಖಾಮುಖಿ:

  • ಮಾರ್ಚ್ 2 ರಿಂದ 6: ವಿದರ್ಭ vs ಮಧ್ಯ ಪ್ರದೇಶ್ (ಮೊದಲ ಸೆಮಿಫೈನಲ್)
  • ಮಾರ್ಚ್ 2 ರಿಂದ 6: ತಮಿಳುನಾಡು vs ಮುಂಬೈ (ಎರಡನೇ ಸೆಮಿಫೈನಲ್)
  • ಮಾರ್ಚ್ 10 ರಿಂದ 14: ಫೈನಲ್ ಪಂದ್ಯ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಈ ಎಲ್ಲಾ ಪಂದ್ಯಗಳನ್ನು ಜಿಯೋ ಸಿನಿಮಾ ಆ್ಯಪ್ ಮತ್ತು ಸ್ಪೋರ್ಟ್ಸ್​ 18 ಚಾನೆಲ್​ಗಳಲ್ಲಿ ಲೈವ್ ವೀಕ್ಷಿಸಬಹುದು.

4 ತಂಡಗಳು ಹೀಗಿವೆ:

ವಿದರ್ಭ ತಂಡ: ಶುಭಂ ದುಬೆ , ಫೈಜ್ ಫಜಲ್ , ಕರುಣ್ ನಾಯರ್ , ಧ್ರುವ ಶೋರೆ , ದರ್ಶನ್ ನಲ್ಕಂಡೆ , ಅಕ್ಷಯ್ ವಾಖರೆ , ಉಮೇಶ್ ಯಾದವ್ , ಯಶ್ ಠಾಕೂರ್ , ಅಕ್ಷಯ್ ವಾಡ್ಕರ್ (ನಾಯಕ) , ಆದಿತ್ಯ ಸರ್ವತೆ , ಹರ್ಷ್ ದುಬೆ , ಲಲಿತ್ ಯಾಶ್ ಯಹದ್ ಕಾಳೆ , ಆದಿತ್ಯ ಠಾಕರೆ , ಸಿದ್ಧೇಶ್ ವಾಥ್ , ರಜನೀಶ್ ಗುರ್ಬಾನಿ , ಜಿತೇಶ್ ಶರ್ಮಾ , ಅಥರ್ವ ತೈಡೆ.

ಮಧ್ಯ ಪ್ರದೇಶ್ ತಂಡ: ವೆಂಕಟೇಶ್ ಅಯ್ಯರ್ , ಶುಭಂ ಎಸ್ ಶರ್ಮಾ , ಅವೇಶ್ ಖಾನ್ , ಕುಮಾರ್ ಕಾರ್ತಿಕೇಯ , ಕುಲವಂತ್ ಖೇಜ್ರೋಲಿಯಾ , ಆದಿತ್ಯ ಶ್ರೀವಾಸ್ತವ (ನಾಯಕ) , ಅನುಭವ್ ಅಗರ್ವಾಲ್ , ಅಮರ್ಜೀತ್ ಸಿಂಗ್ , ರಿಷಭ್ ಚೌಹಾನ್ , ಯಶ್ ದುಬೆ , ಹರ್ಷ್ ಮನ್ ಹಿರ್ ಮಾನ್ , ಹರ್ಶ್ ಮಾನ್ ಹಿರ್ವಾ , ಹರ್ಶ್ ಮಾನ್ ಹಿರ್ವಾಲಿ ಪಾಂಡೆ , ಸುಮಿತ್ ಕುಶ್ವಾ.

ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ) , ಸುವೇದ್ ಪಾರ್ಕರ್ , ಶಿವಂ ದುಬೆ , ತನುಷ್ ಕೋಟ್ಯಾನ್ , ಶಮ್ಸ್ ಮುಲಾನಿ , ಮೋಹಿತ್ ಅವಸ್ತಿ , ತುಷಾರ್ ದೇಶಪಾಂಡೆ , ಧವಳ್ ಕುಲಕರ್ಣಿ , ಅಥರ್ವ ಅಂಕೋಲೇಕರ್ , ಜಯ್ ಗೋಕುಲ್ ಬಿಸ್ತಾ , ಪ್ರಸಾದ್ ತಮೋರ್ , ಪ್ರಸಾದ್ ಲ್ ಡಿಯಾಸ್ ಅಯ್ಯರ್ , ಸಿಲ್ವೆಸ್ಟರ್ ಡಿಸೋಜಾ , ಸೂರ್ಯಾಂಶ್ ಶೆಡ್ಗೆ , ಪೃಥ್ವಿ ಶಾ , ಶಾರ್ದೂಲ್ ಠಾಕೂರ್ , ಅಮೋಘ್ ಭಟ್ಕಳ್ , ಮುಶೀರ್ ಖಾನ್.

ಇದನ್ನೂ ಓದಿ: IPL 2024: RCB ಗೆದ್ದರೆ ಹೊಸ ಇತಿಹಾಸ

ತಮಿಳುನಾಡು ತಂಡ: ಸಾಯಿ ಸುದರ್ಶನ್ , ಬಿ ಸಚಿನ್ , ವಿಜಯ್ ಶಂಕರ್ , ಪ್ರದೋಶ್ ಪೌಲ್ , ಎನ್ ಜಗದೀಸನ್ , ಸುರೇಶ್ ಲೋಕೇಶ್ವರ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ (ನಾಯಕ) , ಎಸ್ ಅಜಿತ್ ರಾಮ್ , ಎಂ ಮೊಹಮ್ಮದ್ , ಸಂದೀಪ್ ವಾರಿಯರ್ , ಟಿ ನಟರಾಜನ್ , ತ್ರಿಲೋಕ್ ನಾಗ್ , ಬಾಬಾ ಇಂದ್ರಜಿತ್ , ಮೊಹಮ್ಮದ್ ಅಜಿತ್ ಕುಮಾರ್ , ಮೊಹಮ್ಮದ್ ಅಜಿತ್ ಕುಮಾರ್ ಅಜಯ್ ಕೃಷ್ಣ , ವಿಮಲ್ ಕುಮಾರ್ , ಕುಲದೀಪ್ ಸೇನ್ , ಆರ್ ಎಸ್ ಮೋಕಿತ್ ಹರಿಹರನ್.

Follow Us
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು