AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rahul Chahar divorce: ಮತ್ತೊಬ್ಬ ಟೀಮ್​ ಇಂಡಿಯಾ ಕ್ರಿಕೆಟರ್​​ ಬಾಳಲ್ಲಿ ಬಿರುಕು; ವಿಚ್ಛೇದನ ಘೋಷಣೆ

ಚಾಹಲ್, ಹಾರ್ದಿಕ್, ಶಿಖರ್‌ ಧವನ್​​ ಬಳಿಕ ಇದೀಗ ಟೀಮ್​​ ಇಂಡಿಯಾದ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್​​ ಕೂಡ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಇಶಾನಿ ಜೋಹರ್​​ರಿಂದ ವಿಚ್ಛೇದನ ಪಡೆದುಕೊಳ್ಳುವ ಮೂಲಕ ಸುಮಾರು ಮೂರು ವರ್ಷದ ದಾಂಪತ್ಯ ಜೀವನಕ್ಕೆ ಗುಡ್​ ಬೈ ಹೇಳಿದ್ದಾರೆ.

Rahul Chahar divorce: ಮತ್ತೊಬ್ಬ ಟೀಮ್​ ಇಂಡಿಯಾ ಕ್ರಿಕೆಟರ್​​ ಬಾಳಲ್ಲಿ ಬಿರುಕು; ವಿಚ್ಛೇದನ ಘೋಷಣೆ
ರಾಹುಲ್ ಚಾಹರ್, ಇಶಾನಿImage Credit source: timesnownews
ಗಂಗಾಧರ​ ಬ. ಸಾಬೋಜಿ
|

Updated on:Feb 20, 2026 | 10:10 PM

Share

ಬೆಂಗಳೂರು, ಫೆಬ್ರವರಿ 20: ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡದ ಸ್ಪಿನ್ನರ್ ರಾಹುಲ್ ಚಾಹರ್ (Rahul Chahar)​​ ಅವರು ತಮ್ಮ ಪತ್ನಿ ಇಶಾನಿ ಜೋಹರ್​​ರಿಂದ ವಿಚ್ಛೇದನ (divorce) ಪಡೆದಿದ್ದಾರೆ. ಈ ಬಗ್ಗೆ ಖುದ್ಧು ರಾಹುಲ್ ಚಾಹರ್​​ ಸೋಶಿಯಲ್ ​ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ. ಆ ಮೂಲಕ ಮೂರು ವರ್ಷದ ದಾಂಪತ್ಯ ಜೀವನಕ್ಕೆ ಗುಡ್​ ಬೈ ಹೇಳಿದ್ದಾರೆ.

2022ರ ಮಾರ್ಚ್​ 9ರಂದು ಗೋವಾದಲ್ಲಿ ಇಶಾನಿ ಜೋಹರ್​​ರೊಂದಿಗೆ ರಾಹುಲ್ ಚಾಹರ್​ ಮದುವೆಯಾಗಿದ್ದರು. ಆ ಮೂಲಕ ಸಿಎಸ್‌ಕೆ ಸ್ಟಾರ್ ತಮ್ಮ 22ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ 4ನೇ ವಾರ್ಷಿಕೋತ್ಸವಕ್ಕೂ ಮುನ್ನವೇ ವಿಚ್ಛೇದನ ಘೋಷಿಸಿದ್ದಾರೆ. 2021ರಲ್ಲಿ ಭಾರತ ತಂಡದ ಪರ ಕೊನೆಯ ಬಾರಿ ರಾಹುಲ್ ಚಾಹರ್​ ಪಂದ್ಯ ಆಡಿದ್ದರು.

ರಾಹುಲ್ ಚಾಹರ್ ಇನ್ಸ್ಟಾ ಪೋಸ್ಟ್‌

View this post on Instagram

A post shared by Rahul Chahar (@rdchahar1)

ಈ ಬಗ್ಗೆ ಇನ್ಸ್ಟಾಗ್ರಾಂ ಪೋಸ್ಟ್‌ ಹಂಚಿಕೊಂಡಿರುವ ಟೀಮ್ ಇಂಡಿಯಾ ಆಟಗಾರ ರಾಹುಲ್ ಚಾಹರ್, ‘ನಾನು ನನ್ನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮೊದಲು, ನನ್ನ ಮೌಲ್ಯವನ್ನು ಅರಿಯುವ ಮೊದಲು ಮತ್ತು ನಾನು ಬಯಸಿದ ಜೀವನ ತಿಳಿಯುವ ಮೊದಲೇ ಅಂದರೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಕೊಂಡೆ’.

ಇದನ್ನೂ ಓದಿ: Ranji Trophy 2025-26: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​​ ಪಂದ್ಯ; ರಾಜ್ ನಗರ ಸ್ಟೇಡಿಯಂ ಬಗ್ಗೆ ನಿಮಗೆಷ್ಟು ಗೊತ್ತು?

‘ಅದಾದ ಬಳಿಕ ನಾನು ನಿರೀಕ್ಷಿಸದ ಅನೇಕ ಪಾಠಗಳು ನನ್ನ ಬದುಕಿನಲ್ಲಿ ಎದುರಾದವು. ಕಳೆದ ಹದಿನೈದು ತಿಂಗಳು ನ್ಯಾಯಾಲಯದ ಕೋಣೆಗಳಲ್ಲಿ ಕಳೆದೆ. ಅಲ್ಲಿ ನಾನು ಸಹನೆ, ದೃಢತೆ ಮತ್ತು ಸತ್ಯದ ಶಕ್ತಿಯನ್ನು ಕಲಿತೆ. ಇಂದು ನನ್ನ ಜೀವನದ ಆ ಅಧ್ಯಾಯ ಅಧಿಕೃತವಾಗಿ ಮುಕ್ತಾಯಗೊಳ್ಳುತ್ತಿದೆ. ಸೂಕ್ತ ಕಾನೂನು ಪ್ರಕ್ರಿಯೆಯ ನಂತರ, ನನ್ನ ಜೀವನದ ಈ ಹಂತ ಅಂತ್ಯವಾಗಿದೆ’ ಎಂದರು.

‘ನಾನು ಈ ಅಧ್ಯಾಯವನ್ನು ಕೋಪದಿಂದಲೂ ಅಥವಾ ಪಶ್ಚಾತ್ತಾಪದಿಂದ ಕೊನೆಗೊಳಿಸುವುದಿಲ್ಲ, ಬದಲಾಗಿ ಸ್ಪಷ್ಟತೆಯೊಂದಿಗೆ ಅಂತ್ಯಗೊಳಿಸುತ್ತೇನೆ. ಕೆಲವು ಸಂಬಂಧಗಳು ಸದಾಕಾಲ ಇರಲು ಆಗಲ್ಲ, ಅವು ನಮ್ಮನ್ನು ಎಚ್ಚರಿಸಲು, ಪಾಠ ಕಲಿಸಲು ಮತ್ತು ಬದಲಾವಣೆಗೊಳಿಸಲು ಬರುತ್ತವೆ’ ಎಂದಿದ್ದಾರೆ.

ಇದನ್ನೂ ಓದಿ: IND vs SA: ಅಮ್ಮನಿಗೆ ಯಾರಿಗೆ ಸಪೋರ್ಟ್​ ಮಾಡ್ಬೇಕು ಎಂಬುದೇ ಗೊಂದಲ!

‘ಇದು ಅಂತ್ಯವಲ್ಲ. ಇದು ಮುಕ್ತಯ. ಒಂದು ಹೊಸ ಆರಂಭ. ಇಂದಿನಿಂದ ನನ್ನ ಪ್ರತಿಯೊಂದೂ ನಿರ್ಧಾರ ಸ್ವಾಭಿಮಾನ, ಶಾಂತಿ ಮತ್ತು ಉತ್ತಮ ಆಯ್ಕೆಗಳ ಮೇಲೆ ನಿಂತಿರುತ್ತದೆ ಎಂಬ ಭರವಸೆ ಇದೆ. ನಾನು ಮುಂದೆ ತೆಗೆದುಕೊಂಡು ಹೋಗುವುದು ಕೋಪವಲ್ಲ, ಕಲಿತ ಪಾಠ, ಗೌರವ ಮತ್ತು ಧೈರ್ಯ ಮಾತ್ರ’ ಎಂದು ರಾಹುಲ್ ಚಾಹರ್ ವಿಚ್ಛೇದನದ ವಿಚಾರ ಹಂಚಿಕೊಂಡಿದ್ದಾರೆ.

ಮತ್ತಷ್ಟ ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:26 pm, Fri, 20 February 26

ಪೆಟ್ರೋಲ್ ಬಂಕ್​ನಲ್ಲಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂ
ಪೆಟ್ರೋಲ್ ಬಂಕ್​ನಲ್ಲಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂ
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್