AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series: ಬುಮ್ರಾ ರಜೆ ಪಡೆದಿರುವುದು ಯಾಕೆ ಅನ್ನುವ ವಿಷಯ ಬಯಲಾಯ್ತು!

ಭಾರತ ಮತ್ತು ಇಂಗ್ಲೆಂಡ್​ ಮಧ್ಯೆ ನಡೆಯುತ್ತಿರುವ ಟೆಸ್ಟ್​ ಸರಣಿಯ ಕೊನೆಯ ಟೆಸ್ಟ್​ ಬುಧವಾರದಂದು ಅದೇ ಮೊಟೆರಾ ಮೈದಾನದಲ್ಲಿ ನಡೆಯಲಿದೆ. ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ರಜೆ ಪಡೆದು ಸರಣಿಯಿಂದ ಹೊರಬಿದ್ದಿದ್ದು, ಸೀಮಿತ ಓವರ್​ಗಳ ಸರಣಿಗೂ ಅವರು ವಾಪಸ್ಸಾಗುವ ಸಾಧ್ಯತೆ ಇಲ್ಲ. ಅ ವೈಯಕ್ತಿಕ ಕಾರಣ ಏನು ಅನ್ನುವುದು ಬೆಳಕಿಗೆ ಬಂದಿದೆ. ವಿಷಯ ಏನು ಗೊತ್ತಾ? ಯುವತಿಯೊಬ್ಬಳಿಗೆ ಕ್ಲೀನ್ ಬೌಲ್ಡ್ ಅಗಿರುವ ಯಾರ್ಕರ್ ಪರಿಣಿತ ಇಷ್ಟರಲ್ಲೇ ಚತುರ್ಭುಜರಾಗಲಿದ್ದಾರೆ! ಹೌದು, ನೀವು ಓದಿದ್ದು ನಿಜ. […]

India vs England Test Series: ಬುಮ್ರಾ ರಜೆ ಪಡೆದಿರುವುದು ಯಾಕೆ ಅನ್ನುವ ವಿಷಯ ಬಯಲಾಯ್ತು!
Jasprit Bumrah
ಅರುಣ್​ ಕುಮಾರ್​ ಬೆಳ್ಳಿ
| Updated By: ಪೃಥ್ವಿಶಂಕರ|

Updated on:Mar 15, 2021 | 1:42 PM

Share

ಭಾರತ ಮತ್ತು ಇಂಗ್ಲೆಂಡ್​ ಮಧ್ಯೆ ನಡೆಯುತ್ತಿರುವ ಟೆಸ್ಟ್​ ಸರಣಿಯ ಕೊನೆಯ ಟೆಸ್ಟ್​ ಬುಧವಾರದಂದು ಅದೇ ಮೊಟೆರಾ ಮೈದಾನದಲ್ಲಿ ನಡೆಯಲಿದೆ. ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ರಜೆ ಪಡೆದು ಸರಣಿಯಿಂದ ಹೊರಬಿದ್ದಿದ್ದು, ಸೀಮಿತ ಓವರ್​ಗಳ ಸರಣಿಗೂ ಅವರು ವಾಪಸ್ಸಾಗುವ ಸಾಧ್ಯತೆ ಇಲ್ಲ. ಅ ವೈಯಕ್ತಿಕ ಕಾರಣ ಏನು ಅನ್ನುವುದು ಬೆಳಕಿಗೆ ಬಂದಿದೆ. ವಿಷಯ ಏನು ಗೊತ್ತಾ? ಯುವತಿಯೊಬ್ಬಳಿಗೆ ಕ್ಲೀನ್ ಬೌಲ್ಡ್ ಅಗಿರುವ ಯಾರ್ಕರ್ ಪರಿಣಿತ ಇಷ್ಟರಲ್ಲೇ ಚತುರ್ಭುಜರಾಗಲಿದ್ದಾರೆ! ಹೌದು, ನೀವು ಓದಿದ್ದು ನಿಜ. ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮೂಲವೊಂದರ ಪ್ರಕಾರ ಮದುವೆ ತಯಾರಿಗೋಸ್ಕರವೇ ಬುಮ್ರಾ ರಜೆಗೆ ಅರ್ಜಿ ಗುಜರಾಯಿಸಿ ಸರಣಿಯಿಂದ ಹೊರಬಂದಿದ್ದಾರೆ.

ಸುದ್ದಿ ಸಂಸ್ಥೆಯೊಂದರ ಜೊತೆ ಮಾತಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಬುಮ್ರಾ ಇಷ್ಟರಲ್ಲೇ ಮದುವೆಯಾಗುತ್ತಿರುವುದನ್ನು ಖಚಿತಪಡಿಸಿದ್ದು ವಿವಾಹ ಮಹೋತ್ಸವ ತಯಾರಿ ಸಲುವಾಗಿಯೇ ರಜೆ ಪಡೆದಿದ್ದಾರೆಂದು ಹೇಳಿದ್ದಾರೆ.

‘ತಾವು ಮದುವೆಯಾಗುತ್ತಿರುವ ವಿಷಯವನ್ನು ಬುಮ್ರಾ ಬಿಸಿಸಿಐಗೆ ತಿಳಿಸಿದ್ದಾರೆ. ಮದುವೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಕುಟಂಬದವರಿಗೆ ನೆರವಾಗಲೆಂದು ಅವರು ರಜೆ ಪಡೆದಿದ್ದಾರೆ.’ ಅಂತ ಹೆಸರು ಹೇಳಿಕೊಳ್ಳಲಿಚ್ಛಿಸದ ಮಂಡಳಿಯ ಅಧಿಕಾರಿ ಹೇಳಿದ್ದಾರೆ.

27-ವರ್ಷದ ಬುಮ್ರಾ ಈಗ ಇಂಗ್ಲೆಂಡ್ ವಿರುದ್ಧ ಜಾರಿಯಲ್ಲಿರುವ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಕಾಣಿಸಿಕೊಂಡು 4 ವಿಕೆಟ್​ ಪಡೆದಿದ್ದಾರೆ. ಚೆನೈಯಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯಕ್ಕೆ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಅಹಮದಾಬಾದಿನಲ್ಲಿ ನಡೆದ ಮೂರನೇ ಟೆಸ್ಟ್​ಗೆ ವಾಪಸ್ಸಾದ ಅವರು, ಭಾರತದ ಸ್ಪಿನ್ನರ್​ಗಳು ಪಾರಮ್ಯ ಮೆರೆದ ಆ ಪಂದ್ಯದಲ್ಲಿ ಅವರು ಒಂದೂ ವಿಕೆಟ್​ ಪಡೆಯದೆ ಹೋದರು.

Jasprit Bumrah

ಜಸ್ಪ್ರೀತ್ ಬುಮ್ರಾ ಮದುವೆಯಾಗಲಿದ್ದಾರೆ!

ನಿರಂತರವಾಗಿ ಕ್ರಿಕೆಟ್​ ಆಡುತ್ತಿರುವುದರಿಂದ ವರ್ಕ್​ಲೋಡನ್ನು ನಿಭಾಯಿಸಲು ಅವರಿಗೆ ಸಾಧ್ಯವಾಗುವ ದೃಷ್ಟಿಯಿಂದ ಅವರನ್ನು ಇಂಗ್ಲೆಂಡ್​ ವಿರುದ್ಧ ನಡೆಯಲಿರುವ 5-ಪಂದ್ಯಗಳ ಟಿ20 ಸರಣಿಯಿಂದ ಕೈಬಿಡಲಾಗಿದೆ ಎಂದು ಮಂಡಳಿ ತಿಳಿಸಿತ್ತು.

ಭಾರತ 4-ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-1 ರಿಂದ ಮುಂದಿದೆ. ಅತಿಥೇಯರು ಕೊನೆಯ ಪಂದ್ಯವನ್ನು ಗೆದ್ದರೆ ಇಲ್ಲವೇ ಡ್ರಾ ಮಾಡಿಕೊಂಡರೂ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಆಡುವ ಅರ್ಹತೆ ಗಿಟ್ಟಿಸಲಿದ್ದಾರೆ. ಒಂದು ಪಕ್ಷ ಭಾರತ ಸೋತರೆ, ಆಸ್ಟ್ರೇಲಿಯಾ ಕ್ವಾಲಿಫೈ ಆಗಲಿದೆ. ನ್ಯೂಜಿಲೆಂಡ್​ ಈಗಾಗಲೇ ಫೈನಲ್ ತಲುಪಿದ್ದು, ಆ ಪಂದ್ಯವು ಫೆಬ್ರುವರಿಯಲ್ಲಿ ಲಂಡನ್​ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ: India vs England: ಅಂತಿಮ ಟೆಸ್ಟ್​ನಿಂದ ಹೊರಗುಳಿದ ಬುಮ್ರಾ.. ಟಿ20, ಏಕದಿನ ಸರಣಿಯಲ್ಲೂ ಕಣಕ್ಕಿಳಿಯುವುದು ಡೌಟ್

Published On - 10:59 pm, Tue, 2 March 21

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ