AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲಂಕಾ ಕ್ರಿಕೆಟಿಗರ ನಾಚಿಕೆಗೇಡಿನ ಕೆಲಸ; ಬಯೋ ಬಬಲ್ ಉಲ್ಲಂಘನೆ! ಇಂಗ್ಲೆಂಡ್‌ ರಸ್ತೆಗಳಲ್ಲಿ ಕಳ್ಳರಂತೆ ಓಡಾಟ, ಸರಣಿಯಿಂದ ಅಮಾನತು

ಶ್ರೀಲಂಕಾದ ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಮೂರನೇ ಟಿ 20 ಯಲ್ಲಿ ತಂಡದ ಸೋಲಿನ ನಂತರ ಈ ಇಬ್ಬರು ಆಟಗಾರರು ಡರ್ಹಾಮ್ ಬೀದಿಗಳಲ್ಲಿ ಓಡಾಡುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಶ್ರೀಲಂಕಾ ಕ್ರಿಕೆಟಿಗರ ನಾಚಿಕೆಗೇಡಿನ ಕೆಲಸ; ಬಯೋ ಬಬಲ್ ಉಲ್ಲಂಘನೆ! ಇಂಗ್ಲೆಂಡ್‌ ರಸ್ತೆಗಳಲ್ಲಿ ಕಳ್ಳರಂತೆ ಓಡಾಟ, ಸರಣಿಯಿಂದ ಅಮಾನತು
ಶ್ರೀಲಂಕಾ ಕ್ರಿಕೆಟಿಗರು
Follow us
ಪೃಥ್ವಿಶಂಕರ
|

Updated on: Jun 28, 2021 | 5:14 PM

ಶ್ರೀಲಂಕಾ ಕ್ರಿಕೆಟ್‌ನಲ್ಲಿ ಏನೂ ಸರಿಯಾಗಿಲ್ಲ ಎಂಬುದು ಇತ್ತೀಚೆಗೆ ಆಗಾಗ್ಗೆ ಸಾಭೀತಾಗುತ್ತಿದೆ. ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮೊದಲು, ಒಪ್ಪಂದಕ್ಕೆ ಸಂಬಂಧಿಸಿದಂತೆ ಆಟಗಾರರು ಮತ್ತು ಮಂಡಳಿಯ ನಡುವೆ ವಿವಾದವಿತ್ತು, ಅದು ಇನ್ನೂ ಬಗೆಹರಿದಿಲ್ಲ. ನಂತರ ಇಂಗ್ಲೆಂಡ್ ಪ್ರವಾಸದಲ್ಲಿ ಟಿ 20 ಸರಣಿಯಲ್ಲಿ ತಂಡದ ಮುಜುಗರದ ಪ್ರದರ್ಶನ ಮಂಡಳಿ ಸೇರಿದಂತೆ ಅಭಿಮಾನಿಗಳನ್ನು ನಿರಾಶೆಗೊಳಿಸಿದೆ. ಅನೇಕ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಟಗಾರರ ಮೇಲೆ ನಿರಂತರವಾಗಿ ಕೋಪವನ್ನು ಹೊರಹಾಕುತ್ತಿದ್ದಾರೆ. ಈಗ ಈ ಎಲ್ಲದರ ನಂತರ, ಹೆಚ್ಚು ಮುಜುಗರದ ಪ್ರಕರಣವು ಮುನ್ನೆಲೆಗೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕೆಲವು ವಿಡಿಯೋಗಳಲ್ಲಿ, ಶ್ರೀಲಂಕಾ ತಂಡದ ಮೂವರು ಆಟಗಾರರು ರಾತ್ರಿಯ ಸಮಯದಲ್ಲಿ ತಮ್ಮ ಹೋಟೆಲ್‌ನಿಂದ ಹೊರನಡೆದಿರುವುದು ಕಂಡುಬರುತ್ತದೆ. ನಂತರ ಬಯೋ-ಬಬಲ್ ಉಲ್ಲಂಘನೆಯಲ್ಲಿ ತಪ್ಪಿತಸ್ಥರೆಂದು ಕಂಡುಕೊಂಡ ನಂತರ ಮಂಡಳಿಯು ಅವರನ್ನು ಅಮಾನತುಗೊಳಿಸಿದೆ. ಮತ್ತು ಇಂಗ್ಲೆಂಡ್‌ನಿಂದ ವಾಪಸ್ ಕಳುಹಿಸಲಾಗುತ್ತಿದೆ.

ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳಾದ ನಿರೋಷನ್ ಡಿಕ್‌ವೆಲ್ಲಾ ಮತ್ತು ಕುಸಲ್ ಮೆಂಡಿಸ್ ಅವರು ಇಂಗ್ಲೆಂಡ್ ರಸ್ತೆಯಲ್ಲಿ ಕುಳಿತಿರುವ ವೀಡಿಯೊವನ್ನು ಕಳೆದ ರಾತ್ರಿಯಿಂದ ಟ್ವಿಟರ್‌ನಲ್ಲಿ ವ್ಯಾಪಕವಾಗಿ ನೋಡಲಾಗುತ್ತಿದೆ ಮತ್ತು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ, ಇಬ್ಬರು ಆಟಗಾರರು ರಾತ್ರಿಯಲ್ಲಿ ರಸ್ತೆಯ ಬದಿಯಲ್ಲಿ ತಿರುಗಾಡುವುದನ್ನು ಕಾಣಬಹುದು. ಶ್ರೀಲಂಕಾದ ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಮೂರನೇ ಟಿ 20 ಯಲ್ಲಿ ತಂಡದ ಸೋಲಿನ ನಂತರ ಈ ಇಬ್ಬರು ಆಟಗಾರರು ಡರ್ಹಾಮ್ ಬೀದಿಗಳಲ್ಲಿ ಓಡಾಡುತ್ತಿದ್ದಾರೆ ಎಂದು ತಿಳಿಸಲಾಗಿದೆ.

ವಿಡಿಯೋ ವೈರಲ್, ಎಸ್‌ಎಲ್‌ಸಿ ತನಿಖೆ ಆರಂಭಿಸಿದೆ ಈ ವೀಡಿಯೊ ನಿರಂತರ ಚರ್ಚೆಯ ವಿಷಯವಾಗಿ ಉಳಿದಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಭರ್ಜರಿ ಸೋಲಿನ ನಂತರ ಈಗಾಗಲೇ ಬಳಲುತ್ತಿರುವ ಶ್ರೀಲಂಕಾ ತಂಡಕ್ಕೆ ಈ ವಿಡಿಯೋ ಹೆಚ್ಚು ಮುಜುಗರದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ವೀಡಿಯೊ ಹೊರಹೊಮ್ಮಿದ ನಂತರ, ಎಸ್‌ಎಲ್‌ಸಿ ಇದರ ತನಿಖೆಗಾಗಿ ಇಂಗ್ಲೆಂಡ್‌ನ ತಂಡದ ನಿರ್ವಹಣೆಯನ್ನು ಕೇಳಿದೆ, ಈ ಇಬ್ಬರು ಆಟಗಾರರಲ್ಲದೆ, ದಾನುಷ್ಕಾ ಗುಣತಿಲ್ಕಾ ಕೂಡ ಬಯೋ ಬಬಲ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಮೂವರ ವಿರುದ್ಧ ಮಂಡಳಿ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ. ಅವರನ್ನು ಅಮಾನತು ಮಾಡಲಾಗಿದೆ.

ಏಕದಿನ ಸರಣಿಯಿಂದ ವಾಪಸ್ಸ್ ಈ ಕಾರಣದಿಂದಾಗಿ, ಈ ಮೂವರು ಆಟಗಾರರು ಇನ್ನು ಮುಂದೆ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದು ಜೂನ್ 29 ಮಂಗಳವಾರ ಚೆಸ್ಟರ್ ಲೀ ಸ್ಟ್ರೀಟ್‌ನಲ್ಲಿ ಪ್ರಾರಂಭವಾಗಲಿದೆ. ಕ್ರಿಕ್‌ಬಜ್​ನ ವರದಿಯ ಪ್ರಕಾರ, ಮೂವರನ್ನೂ ಕೂಡಲೇ ದೇಶಕ್ಕೆ ವಾಪಸ್ ಕಳುಹಿಸಲಾಗುವುದು ಎಮದು ವರದಿಯಾಗಿದೆ.

ಟಿ 20 ಸರಣಿಯಲ್ಲಿ ಮೂವರು ಆಟಗಾರರ ಸಾಧನೆ ತುಂಬಾ ಕಳಪೆ ಜೂನ್ 26 ರ ಶನಿವಾರ ಕೊನೆಗೊಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು ಶ್ರೀಲಂಕಾ ಕಳೆದುಕೊಂಡಿತು. ಸರಣಿಯ ಕೊನೆಯ ಪಂದ್ಯದಲ್ಲಿ, ಶ್ರೀಲಂಕಾ ತಂಡದ ಸ್ಥಿತಿ ಇನ್ನಷ್ಟು ಕೆಟ್ಟದಾಗಿತ್ತು. ಇಡೀ ತಂಡ ಕೇವಲ 91 ರನ್‌ಗಳಿಗೆ ಆಲ್​ಔಟ್ ಆಯಿತು. ಈ ಕಾರಣದಿಂದಾಗಿ ಇಂಗ್ಲೆಂಡ್ ಪಂದ್ಯವನ್ನು 89 ರನ್‌ಗಳಿಂದ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿತು. ಮೆಂಡಿಸ್ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಆಡಿದ್ದು ಕೇವಲ 54 ರನ್ ಗಳಿಸಲು ಸಾಧ್ಯವಾಯಿತು. ಗುಣತಿಲ್ಕಾ ಮೂರು ಪಂದ್ಯಗಳಲ್ಲಿ ಕೇವಲ 26 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಡಿಕ್ವೆಲ್ಲಾ ಎರಡನೇ ಮತ್ತು ಮೂರನೇ ಪಂದ್ಯವನ್ನು ಆಡಿದರು, ಇದರಲ್ಲಿ ಅವರು ಕೇವಲ 14 ರನ್ ಗಳಿಸಿದರು. ಅಕ್ಟೋಬರ್ 2020 ರ ನಂತರ ಇದು ಸತತ ಐದನೇ ಟಿ 20 ಸರಣಿಯಾಗಿದ್ದು, ಇದರಲ್ಲಿ ಶ್ರೀಲಂಕಾ ಸೋಲನ್ನು ಎದುರಿಸಬೇಕಾಗಿದೆ.