AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲ್, ಮೆಸೇಜ್, ವಿಡಿಯೋ ವೀಕ್ಷಿಸಲು ಸಿಮ್-ಇಂಟರ್ನೆಟ್ ಬೇಡ: ಭಾರತದಿಂದ D2M ತಂತ್ರಜ್ಞಾನ

Direct-to-Mobile technology: ಭಾರತದಲ್ಲಿ ಹೊಸ ತಂತ್ರಜ್ಞಾನದ ಮೇಲೆ ಕೆಲಸ ಮಾಡಲಾಗುತ್ತಿದೆ, ಅದರ ಮೂಲಕ ಸ್ಮಾರ್ಟ್​ಫೋನ್​ನಲ್ಲಿ ವಿಡಿಯೋ ಕರೆಗಳನ್ನು ಇಂಟರ್ನೆಟ್-ಸಿಮ್ ಇಲ್ಲದೆ ಸುಲಭವಾಗಿ ಮಾಡಬಹುದು. D2M ತಂತ್ರಜ್ಞಾನದ ಅಡಿಯಲ್ಲಿ, ಮೊಬೈಲ್ ಸಾಧನಕ್ಕೆ ಸಣ್ಣ ರಿಸೀವರ್ ಅನ್ನು ಸೇರಿಸಿದರೆ ಇದು ಕೆಲಸ ಮಾಡಲಿದೆ. ಈ ಬಗ್ಗೆ ವಿವರವಾಗಿ ತಿಳಿಯಿರಿ...

ಕಾಲ್, ಮೆಸೇಜ್, ವಿಡಿಯೋ ವೀಕ್ಷಿಸಲು ಸಿಮ್-ಇಂಟರ್ನೆಟ್ ಬೇಡ: ಭಾರತದಿಂದ D2M ತಂತ್ರಜ್ಞಾನ
Direct-to-Mobile technology
Vinay Bhat
|

Updated on: Jan 18, 2024 | 11:47 AM

Share

ಸಿಮ್ ಮತ್ತು ಇಂಟರ್ನೆಟ್ ಇಲ್ಲಿದಿದ್ದರೆ ಸ್ಮಾರ್ಟ್‌ಫೋನ್ (Smartphone) ಉಪಯೋಗಕ್ಕೆ ಬರುವುದಿಲ್ಲ. ಅನೇಕ ಜನರು ವೈಫೈ ಬಳಸುತ್ತಾರೆ. ಆದರೆ ಇದನ್ನು ಕೆಲವು ಸ್ಥಳಗಳಲ್ಲಿ ಮಾತ್ರ ಉಪಯೋಗಿಸಬಹುದು. ಆದರೆ, ಮುಂದಿನ ದಿನಗಳಲ್ಲಿ ಸ್ಮಾರ್ಟ್​ಫೋನ್​ನಲ್ಲಿ ಸಿಮ್-ಇಂಟರ್ನೆಟ್ ಇಲ್ಲದೆ ಕಾಲ್, ಮೆಸೇಜ್ ಜೊತೆಗೆ ವಿಡಿಯೋ ಕೂಡ ವೀಕ್ಷಿಸಬಹುದು. ಇದಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ತಂತ್ರಜ್ಞಾನದೊಂದಿಗೆ ಬರುತ್ತಿದೆ. ಈ ತಂತ್ರಜ್ಞಾನಕ್ಕೆ ಡೈರೆಕ್ಟ್ ಟು ಮೊಬೈಲ್ ಎಂದು ಹೆಸರಿಡಲಾಗಿದೆ.

ಬ್ರಾಡ್‌ಕಾಸ್ಟಿಂಗ್ ಶೃಂಗಸಭೆಯಲ್ಲಿ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಸ್ವದೇಶಿ-ಬೆಳೆದ ಡೈರೆಕ್ಟ್-ಟು-ಮೊಬೈಲ್ (D2M) ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ದೇಶದಲ್ಲಿ ಡೈರೆಕ್ಟ್ ಟು ಮೊಬೈಲ್ (D2M) ಅನ್ನು ಪರೀಕ್ಷಿಸಲಾಗುವುದು. ಆರಂಭದಲ್ಲಿ, ಈ ಸೇವೆಯನ್ನು ದೇಶದ 19 ನಗರಗಳಲ್ಲಿ ಪರೀಕ್ಷಿಸಲಾಗುತ್ತದೆ ಎಂದಿದ್ದಾರೆ.

ಡೈರೆಕ್ಟ್-ಟು-ಮೊಬೈಲ್ ಸೇವೆ ಎಂದರೇನು?:

ಡೈರೆಕ್ಟ್-ಟು-ಮೊಬೈಲ್ (D2M) ಸೇವೆಯು ಇಂಟರ್ನೆಟ್ ಸಂಪರ್ಕವಿಲ್ಲದೆ ಸ್ಮಾರ್ಟ್​ಫೋನ್​ನಲ್ಲಿ ಲೈವ್ ಟಿವಿ ಮತ್ತು ವಿಡಿಯೋವನ್ನು ವೀಕ್ಷಿಸಲು ಅನುಮತಿಸುವ ಹೊಸ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನವು FM ರೇಡಿಯೊದಂತೆ ಕಾರ್ಯನಿರ್ವಹಿಸುತ್ತದೆ, ಇದು ಮೊಬೈಲ್ ಸಾಧನಕ್ಕೆ ಆಡಿಯೋಯೊವನ್ನು ರವಾನಿಸಲು ರೇಡಿಯೊ ಸಂಕೇತಗಳನ್ನು ಬಳಸುತ್ತದೆ.

ಇದನ್ನೂ ಓದಿ
Image
ಸ್ಮಾರ್ಟ್​ಫೋನ್ ಬ್ಯಾಟರಿ ದಪ್ಪಗಾದರೆ ತಕ್ಷಣ ಹೀಗೆ ಮಾಡಿ
Image
ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿರುವ ಒಪ್ಪೋ ರೆನೋ 11 ಪ್ರೊ 5G ಸೇಲ್ ಆರಂಭ
Image
ಡಾರ್ಕ್ ಮೋಡ್ ಬಳಸಿದ್ರೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?
Image
ಸ್ಮಾರ್ಟ್​ಫೋನ್ ಅನ್ನು ಸರ್ವಿಸ್ ಸೆಂಟರ್​ಗೆ ಕೊಡುತ್ತಿದ್ದೀರಾ?

Nuclear Battery: ಚಾರ್ಜ್ ಮಾಡೋದೇ ಬೇಡ, 50 ವರ್ಷ ಬಾಳುವ ನ್ಯೂಕ್ಲಿಯಾರ್ ಬ್ಯಾಟರಿ ಸೃಷ್ಟಿ; ವಿದ್ಯುತ್ ಕ್ರಾಂತಿ ಮಾಡುತ್ತಿದೆ ಚೀನಾ

ಡೈರೆಕ್ಟ್-ಟು-ಮೊಬೈಲ್ ಸೇವೆ ಉಪಯೋಗ:

D2M ಸೇವೆಯಿಂದ ಹಲವು ಪ್ರಯೋಜನಗಳಿವೆ. ಮೊದಲನೆಯದಾಗಿ, ಇದು ಇಂಟರ್ನೆಟ್ ಸಂಪರ್ಕದ ಅಗತ್ಯವನ್ನು ನಿವಾರಿಸುತ್ತದೆ. ಮುಖ್ಯವಾಗಿ ದೂರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ (ನೆಟ್​ವರ್ಕ್ ಇಲ್ಲದ ಜಾಗ) ಹೆಚ್ಚು ಉಪಯುಕ್ತವಾಗಿದೆ. ಎರಡನೆಯದಾಗಿ, ಇದು ವಿಡಿಯೋ ಸ್ಟ್ರೀಮಿಂಗ್ ಗುಣಮಟ್ಟವನ್ನು ಸುಧಾರಿಸಬಹುದು, ಏಕೆಂದರೆ ಇದು ಇಂಟರ್ನೆಟ್ ಅನ್ನು ಅವಲಂಬಿಸಿಲ್ಲ. ಮೂರನೆಯದಾಗಿ, ಇದು ಮೊಬೈಲ್ ಡೇಟಾ ಬಳಕೆಯನ್ನು ಕಡಿಮೆ ಮಾಡಬಹುದು.

ಕೆಲವು ನಗರಗಳಲ್ಲಿ ಪ್ರಯೋಗ:

ಕಳೆದ ವರ್ಷ ಪ್ರಾಯೋಗಿಕ ಯೋಜನೆಯಲ್ಲಿ, ಡೈರೆಕ್ಟ್-ಟು-ಮೊಬೈಲ್ ತಂತ್ರಜ್ಞಾನವನ್ನು ಕೆಲವು ಸ್ಥಳಗಳಲ್ಲಿ ಪ್ರಯೋಗಿಸಲಾಯಿತು. ಇದರಲ್ಲಿ ಬೆಂಗಳೂರು, ನೋಯ್ಡಾ ನಗರಗಳೂ ಸೇರಿವೆ. ಈ ಪ್ರಯೋಗದ ಫಲಿತಾಂಶಗಳು ಪಾಸಿಟಿವ್ ಆಗಿ ಬಂದಿವೆ. ಹಾಗಾಗಿ ಈ ವರ್ಷ ಈ ಹೊಸ ತಂತ್ರಜ್ಞಾನವನ್ನು 19 ನಗರಗಳಲ್ಲಿ ಪರೀಕ್ಷಿಸಲಾಗುತ್ತಿದೆ.

”ಭಾರತದಲ್ಲಿ ಸುಮಾರು 280 ಮಿಲಿಯನ್ ಕುಟುಂಬಗಳಿವೆ. ಅವುಗಳಲ್ಲಿ 190 ಮಿಲಿಯನ್ ಕುಟುಂಬ ಮಾತ್ರ ಟಿವಿಯನ್ನು ಹೊಂದಿದೆ. ದೂರದ, ಗುಡ್ಡಗಾಡು ಪ್ರದೇಶದ ಜನರಿಗೆ ಈ ರೀತಿಯ ಯಾವುದೇ ಸೌಲಭ್ಯವಿಲ್ಲ. ಇದೀಗ ಈ ಹೊಸ ತಂತ್ರಜ್ಞಾನ ಅವರಿಗೆ ಉಪಯುಕ್ತವಾಗಲಿದೆ,” ಎಂದು ಅಪೂರ್ವ ಚಂದ್ರ ಹೇಳಿದ್ದಾರೆ.

ಎಷ್ಟು ಶುಲ್ಕ ವಿಧಿಸಲಾಗುತ್ತದೆ?:

ಚಂದ್ರು ಪ್ರಕಾರ, ದೇಶದಲ್ಲಿ 80 ಕೋಟಿ ಸ್ಮಾರ್ಟ್​ಫೋನ್ ಬಳಕೆದಾರರಿದ್ದಾರೆ. ಅವರು 69 ಪ್ರತಿಶತ ವಿಷಯವನ್ನು ವಿಡಿಯೋ ರೂಪದಲ್ಲಿ ಮಾತ್ರ ವೀಕ್ಷಿಸುತ್ತಾರೆ. ಆದರೆ ವಿಡಿಯೋ ಲೋಡ್ ಆಗುತ್ತಿದ್ದಂತೆ ನೆಟ್‌ವರ್ಕ್ ನಿಧಾನವಾಗುತ್ತದೆ. ಇದು ವಿಡಿಯೋ ಬಫರಿಂಗ್ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಕ್ಕೆಲ್ಲ ಡೈರೆಕ್ಟ್ ಟು ಮೊಬೈಲ್ ಸೇವೆ ಪರಿಹಾರ ಒದಗಿಸುತ್ತದೆ. ಆದರೆ, ಇದು ಉಚಿತವೇ ಅಥವಾ ಶುಲ್ಕ ವಿಧಿಸಲಾಗುತ್ತದೆಯೇ ಎಂಬುದು ಬಹಿರಂಗಗೊಂಡಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು