AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Identity theft: ಇ-ಕಾಮರ್ಸ್, ಒಟಿಟಿಗಳಲ್ಲಿ ಗುರುತು ಕಳುವು ಪ್ರಕರಣಗಳ ಸಿಕ್ಕಾಪಟ್ಟೆ ಏರಿಕೆ ಬಗ್ಗೆ ತಿಳಿಸಿದ ಅಧ್ಯಯನ

ಇ-ಕಾಮರ್ಸ್ ಹಾಗೂ ಒಟಿಟಿಯಲ್ಲಿ ಗುರುತು ಕಳುವು ಪ್ರಕರಣಗಳ ಸಂಖ್ಯೆ ತುಂಬ ಜಾಸ್ತಿ ಆಗಿದೆ ಎಂದು ಟೆಕ್ನಿಸ್ಯಾಂಕ್ಟ್ ಎಂಬ ಸಂಸ್ಥೆಯೊಂದು ಅಧ್ಯಯನ ವರದಿಯಲ್ಲಿ ತಿಳಿಸಿದೆ.

Identity theft: ಇ-ಕಾಮರ್ಸ್, ಒಟಿಟಿಗಳಲ್ಲಿ ಗುರುತು ಕಳುವು ಪ್ರಕರಣಗಳ ಸಿಕ್ಕಾಪಟ್ಟೆ ಏರಿಕೆ ಬಗ್ಗೆ ತಿಳಿಸಿದ ಅಧ್ಯಯನ
ಸೈಬರ್ ಕ್ರೈಂ
Srinivas Mata
|

Updated on: May 26, 2021 | 1:44 PM

Share

ಭಾರತದಲ್ಲಿ ನಿರಂತರವಾಗಿ ಮಾಹಿತಿ ಸೋರಿಕೆ, ಹಣಕಾಸು ವಂಚನೆ ಮತ್ತು ಮಾಧ್ಯಮಗಳಿಂದ, ಎಡ್​ಟೆಕ್ ಮತ್ತು ಇ-ರೀಟೇಲ್ ಪ್ಲಾಟ್​ಫಾರ್ಮ್​ಗಳಲ್ಲಿ ಗುರುತು ಕಳುವು ಆಗುತ್ತಿರುವ ಬಗ್ಗೆ ಕೊಚ್ಚಿ ಮೂಲದ ಸೈಬರ್ ಭದ್ರತಾ ಸಂಸ್ಥೆ ಟೆಕ್ನಿಸ್ಯಾಂಕ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅಧ್ಯಯನದಲ್ಲಿ ತಿಳಿದುಬಂದಿದೆ. ಈ ಅಧ್ಯಯನದಲ್ಲಿ 12 ಸಾವಿರಕ್ಕೂ ಹೆಚ್ಚು ಓವರ್-ದ-ಟಾಪ್ (ಒಟಿಟಿ), 7,500 ಇ-ರೀಟೇಲ್ ಮತ್ತು ಇ-ಕಾಮರ್ಸ್ ಹಾಗೂ 4,500 ಎಡ್​ಟೆಕ್ ಖಾತೆಗಳನ್ನು 2021ರ ಜನವರಿಯಿಂದ ಮೇ ಮಧ್ಯೆ ಅಧ್ಯಯನ ಮಾಡಲಾಗಿದೆ. ಡಾರ್ಕ್ ವೆಬ್​ನಲ್ಲಿ ಅಕೌಂಟ್​ ಟೇಕ್​ಓವರ್ (ATO) ಶೇ 90ರಿಂದ 100ರಷ್ಟು ಜಾಸ್ತಿ ಆಗಿದೆ. ATO ಅಂದರೆ ಆನ್​ಲೈನ್ ಗುರುತು ಕಳುವು. ಈ ಮೂಲಕ ಸೈಬರ್ ಕ್ರಿಮಿನಲ್​ಗಳು ಸಂತ್ರಸ್ತರ ಬ್ಯಾಂಕ್ ಖಾತೆಗೆ, ಇ-ಕಾಮರ್ಸ್ ಅಥವಾ ಒಟಿಟಿ ಖಾತೆಗೆ ಸಂಪರ್ಕ ಪಡೆಯುತ್ತಾರೆ. ಹಣವನ್ನು ವಂಚಿಸುವ ಉದ್ದೇಶದಿಂದ ಕ್ರೆಡಿಟ್ ಅಥವಾ ಡೆಬಿಟ್ ಮಾಹಿತಿ ಅಥವಾ ಲಾಯಲ್ಟಿ ಪಾಯಿಂಟ್ಸ್ ಅನ್ನು ಕಳವು ಮಾಡಿ, ಇನ್ನೊಂದು ಸೈಬರ್​ಕ್ರೈಮ್ ಅಥವಾ ವಂಚನೆಗೆ ಸಿದ್ಧವಾಗುತ್ತಾರೆ.

ಅಧ್ಯಯನ ವರದಿ ಪ್ರಕಾರ, ಎಡ್​ಟೆಕ್, ಒಟಿಟಿ ಪ್ಲಾಟ್​ಫಾರ್ಮ್​ಗಳು ಮತ್ತು ಇ-ಕಾಮರ್ಸ್ ಹಾಗೂ ಇ-ರೀಟೇಲ್​ ಅಪ್ಲಿಕೇಷನ್​ಗಳಲ್ಲಿ ಬಹುತೇಕ ಅಪರಾಧಗಳು ನಡೆಯುತ್ತವೆ. ಈ ಅಪರಾಧಗಳು ಸಂಭವಿಸುವುದಕ್ಕೆ ಮುಖ್ಯವಾದ ಕಾರಣ ಏನೆಂದರೆ, ಈ ಬ್ರ್ಯಾಂಡ್​ಗಳಲ್ಲಿ ಮಾಹಿತಿ ಸೋರಿಕೆ ಆಗಿದ್ದ 2014ರ ಪಾಸ್​ವರ್ಡ್ ಭಾರತೀಯರು ಈಗಲೂ ಬಳಸುತ್ತಿದ್ದಾರೆ. ಇದರ ಜತೆಗೆ ಅಧ್ಯಯನದಿಂದ ಗೊತ್ತಾಗಿರುವ ಸಂಗತಿ ಏನೆಂದರೆ, ಒಟಿಟಿ ಯೂಸರ್​ನೇಮ್ ಮತ್ತು ಪಾಸ್​ವರ್ಡ್​ಗೆ ಲಾಕ್​ಡೌನ್ ಶುರುವಾದಾಗಿನಿಂದ ಬೇಡಿಕೆ ಹೆಚ್ಚಾಗಿದೆ. ಇನ್ನು ವಿವಿಧ ಬ್ರ್ಯಾಂಡ್​ಗಳ ಕ್ರೆಡೆನ್ಷಿಯಲ್​ಗಳನ್ನು ಟೆಲಿಗ್ರಾಮ್​ನಲ್ಲಿ ಮತ್ತು ಡಾರ್ಕ್ ವೆಬ್​ನಲ್ಲಿ ನಿರಂತರವಾಗಿ ಮಾರಾಟಕ್ಕೆ ಇಡಲಾಗುತ್ತಿದೆ.

ಬಳಸುವುದಕ್ಕೆ ಸುಲಭವಾಗಲಿ ಎಂಬ ಕಾರಣಕ್ಕೆ ಒಂದೇ ಪಾಸ್​ವರ್ಡ್ ಇಟ್ಟುಕೊಂಡಿರುತ್ತಾರೆ ಮತ್ತು ಡಿಜಿಟಲ್ ಬಿಜಿನೆಸ್ ಕಂಪೆನಿಗಳು ಟೂ ಫ್ಯಾಕ್ಟರ್ ಅಥೆಂಟಿಕೇಷನ್ ಬಳಸುವುದಿಲ್ಲ. ಇದರ ಜತೆಗೆ ಆಗಾಗ ಪಾಸ್​ವರ್ಡ್ ಬದಲಾಯಿಸಬೇಕು ಎಂಬ ಬಗ್ಗೆ ಸೂಚನೆಯೂ ಬರುವುದಿಲ್ಲ. ಹೀಗೆ ಮಾಡುವುದರಿಂದ ಗ್ರಾಹಕರು ಎಲ್ಲಿ ರೇಜಿಗೆ ಮಾಡಿಕೊಳ್ಳುತ್ತಾರೋ ಎಂಬ ಅಳುಕಿಗೆ ಹಾಗೆ ಮಾಡಲಾಗುತ್ತದೆ. ಇದರಿಂದಾಗಿ ATO, ಕ್ರೆಡೆನ್ಷಿಯಲ್​ಗಳನ್ನು ಭೇದಿಸುವ ಅವಕಾಶಗಳು ಹೆಚ್ಚು ಎಂದು ಟೆಕ್ನಿಸ್ಯಾಂಕ್ಟ್ ಸ್ಥಾಪಕ ಹಾಗೂ ಸಿಇಒ ನಂದಕಿಶೋರ್ ಹರಿಕುಮಾರ್ ಹೇಳಿದ್ದಾರೆ.

ಕ್ರೆಡೆನ್ಷಿಯಲ್ ಕಳುವು ಪ್ರಕರಣದಲ್ಲಿ ಹ್ಯಾಕರ್​ಗಳು ಅದನ್ನು ಬಳಸಿಕೊಂಡು, ಸಂತ್ರಸ್ತರ ಇತರ ಖಾತೆಗಳಿಗೂ ಸಂಪರ್ಕ ಪಡೆಯುವುದುಂಟು. ಒಂದೇ ಕ್ರೆಡೆನ್ಷಿಯಲ್​ ಅನ್ನು ಇತರ ಪ್ಲಾಟ್​ಫಾರ್ಮ್​ಗಳಿಗೂ ಸಂತ್ರಸ್ತರು ಬಳಸುತ್ತಾರೆ ಎಂಬುದು ಹ್ಯಾಕರ್​ಗಳ ಲೆಕ್ಕಾಚಾರ. ಇನ್ನು ಅಧ್ಯಯನ ವರದಿ ಹೇಳುವಂತೆ, ಒಟಿಟಿ ಪ್ಲಾಟ್​ಫಾರ್ಮ್​ ಅದರಲ್ಲೂ ಪ್ರೀಮಿಯಂ ಖಾತೆಗಳು ಮುಖ್ಯವಾಗಿ ಇಂಥ ಹ್ಯಾಕರ್​ಗಳ ಗುರಿ ಆಗುತ್ತವೆ. ಎಡ್​ಟೆಕ್ ವಲಯದ ಕ್ರೆಡೆನ್ಷಿಯಲ್​ಗಳು ಟೆಲಿಗ್ರಾಮ್ ಪ್ಲಾಟ್​ಫಾರ್ಮ್​ನಲ್ಲಿ ಜನಪ್ರಿಯ. ಆದ್ದರಿಂದ ಪ್ರಬಲವಾದ ಪಾಸ್​ವರ್ಡ್ ಬಳಸುವಂತೆ, ಅದರಲ್ಲೂ ಎಡ್​ಟೆಕ್ ಬ್ರ್ಯಾಂಡ್​ಗಳಲ್ಲಿ ಈ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಲಾಗುತ್ತದೆ.

ಇದನ್ನೂ ಓದಿ: ನೀವು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಸುತ್ತೀರಾ? ಈ 8 ಅಪ್ಲಿಕೇಷನ್‌ಗಳನ್ನು ತಕ್ಷಣ ಅನ್​ ಇನ್​ಸ್ಟಾಲ್​ ಮಾಡಿ

ಇದನ್ನೂ ಓದಿ: ಲಕ್ಷಾಂತರ Airtel​ ಮೊಬೈಲ್​ ಗ್ರಾಹಕರ ಮಾಹಿತಿ ಸೋರಿಕೆ.. ಖಾಸಗಿ ಡೇಟಾ ಮಾರಾಟಕ್ಕೆ ಇಟ್ಟ ಹ್ಯಾಕರ್ಸ್​

(Identity theft and ATO increased by 90 to 100% according to study by Kochi based technology company)

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು