AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kangana Ranaut

Kangana Ranaut

ಕಂಗನಾ ರಣಾವತ್ ಅವರರು ನಟನೆಯಿಂದ ಹಾಗೂ ವಿವಾದಗಳಿಂದ ಸದಾ ಸುದ್ದಿ ಆಗುವ ನಟಿ. ಪರದೆಯ ಮೇಲೆ ಮತ್ತು ಪರದೆಯ ಹೊರಗೆ ಸದಾ ಚರ್ಚೆಯಲ್ಲಿ ಇರುತ್ತಾರೆ. ಅವರು ದಿಟ್ಟತನಕ್ಕೆ ಹೆಸರುವಾಸಿಯಾಗಿದ್ದಾರೆ. 1987ರ ಮಾರ್ಚ್ 23ರಂದು ಹಿಮಾಚಲ ಪ್ರದೇಶದಲ್ಲಿ ಕಂಗನಾ ಜನಿಸಿದರು. ಅವರು 2006ರಲ್ಲಿ ‘ಗ್ಯಾಂಗ್‌ಸ್ಟರ್’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು. ಮೊದಲ ಸಿನಿಮಾದಲ್ಲೇ ಗೆಲುವು ಸಿಕ್ಕಿತು. ಈ ಚಿತ್ರಕ್ಕಾಗಿ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿತು. ಕಂಗನಾ ಅವರು ‘ಕ್ವೀನ್’, ‘ತನು ವೆಡ್ಸ್ ಮನು’, ‘ಫ್ಯಾಶನ್’ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಂಗನಾ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳತ್ತಾರೆ. ಅವರು ನಿರ್ದೇಶಕಿ ಹಾಗೂ ನಿರ್ಮಾಪಕಿ ಕೂಡ ಹೌದು. ಸಾಕಷ್ಟು ವಿವಾದಗಳನ್ನು ಕೂಡ ಕಂಗನಾ ಮಾಡಿಕೊಂಡಿದ್ದಾರೆ.

ಇನ್ನೂ ಹೆಚ್ಚು ಓದಿ

ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ "ಜಾದೂ" ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಕಂಗನಾ ರಣಾವತ್ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ದೊಡ್ಡ "ತಲೆನೋವು" ಎಂದು ಹೇಳಿದ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಬಾಲ್ಯದಲ್ಲಿ ಕಂಡ ಮ್ಯಾಜಿಕ್ ಪ್ರದರ್ಶನದಿಂದಾಗಿ ಅವರು ಬಾಲ್ಯದ ಆಘಾತವನ್ನು ಅನುಭವಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

8 ಗಂಟೆ ಕೆಲಸದ ಶಿಫ್ಟ್ ವಿವಾದ: ದೀಪಿಕಾ ಪಡುಕೋಣೆ ಪರ ನಿಂತ ಕಂಗನಾ ರಣಾವತ್

ನಟಿ ಕಂಗನಾ ರಣಾವತ್ ಅವರು ಸಾಮಾನ್ಯವಾಗಿ ಯಾರನ್ನೂ ಹೊಗಳುವುದಿಲ್ಲ. ಆದರೆ ಈಗ ಅವರು ದೀಪಿಕಾ ಪರವಾಗಿ ನಿಂತಿದ್ದಾರೆ. 8 ಗಂಟೆ ಕೆಲಸದ ಅವಧಿಗೆ ಸಂಬಂಧಿಸಿದಂತೆ ಶುರುವಾದ ವಿವಾದದ ಬಗ್ಗೆ ಕಂಗನಾ ರಣಾವತ್ ಅವರು ತಮ್ಮ ನಿಲುವು ಏನು ಎಂಬುದನ್ನು ತಿಳಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ಕಂಗನಾ ಮಾಡಿದ ‘ಎಮರ್ಜೆನ್ಸಿ’ ಸಿನಿಮಾ 2 ದಿನ ಓಡಲಿಲ್ಲ: ಖಾರವಾಗಿ ಹೇಳಿದ ‘ಧುರಂಧರ್ 2’ ನಟ

‘ಧುರಂಧರ್ 2’ ಸಿನಿಮಾದ ನಟ ರಾಕೇಶ್ ಬೇಡಿ ಅವರು ‘ಎಮರ್ಜೆನ್ಸಿ’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಕಂಗನಾ ರಣಾವತ್ ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಆ ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಈಗ ರಾಕೇಶ್ ಬೇಡಿ ಅವರು ಆ ಚಿತ್ರದ ಬಗ್ಗೆ ಮಾತನಾಡಲು ಕಾರಣ ಕೂಡ ಇದೆ. ಆ ಕುರಿತು ಮಾಹಿತಿ ಇಲ್ಲಿದೆ.

ಪ್ರೇಮ್ ಬರೆದ ‘ಕೆಡಿ’ ಸಿನಿಮಾದ ಹಾಡಿನ ಅಶ್ಲೀಲತೆಗೆ ಕಂಗನಾ ರಣಾವತ್ ಆಕ್ರೋಶ

‘ಕೆಡಿ’ ಚಿತ್ರದ ನಿರ್ದೇಶಕ ಪ್ರೇಮ್ ಬರೆದ ಅಶ್ಲೀಲ ಹಾಡು ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆದಿದೆ. ನಟಿ, ಸಂಸದೆ ಕಂಗನಾ ರಣಾವತ್ ಕೂಡ ಈ ಹಾಡಿನ ಅಸಭ್ಯ ಸಾಹಿತ್ಯವನ್ನು ಖಂಡಿಸಿದ್ದಾರೆ. ಇಂಥ ಹಾಡುಗಳ ಬಗ್ಗೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ.

ಎ.ಆರ್. ರೆಹಮಾನ್ ಪೂರ್ವಾಗ್ರಹ ಪೀಡಿತ, ದ್ವೇಷಪೂರಿತ ವ್ಯಕ್ತಿ: ಕಂಗನಾ ಆರೋಪ

ಧರ್ಮದ ಕಾರಣದಿಂದ ತಮಗೆ ಹಿಂದಿ ಚಿತ್ರರಂಗದಲ್ಲಿ ಅವಕಾಶ ಕಡಿಮೆ ಆಗಿದೆ ಎಂದು ಎ.ಆರ್. ರೆಹಮಾನ್ ಹೇಳಿದ್ದರು. ಅಲ್ಲದೇ ‘ಛಾವ’ ಸಿನಿಮಾದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ. ಎ.ಆರ್. ರೆಹಮಾನ್ ಅವರನ್ನು ಪೂರ್ವಾಗ್ರಹ ಪೀಡಿತ, ದ್ವೇಷಪೂರಿತ ವ್ಯಕ್ತಿ ಎಂದು ಕಂಗನಾ ಅವರು ಹೇಳಿದ್ದಾರೆ.

‘ನನಗೆ ಮದುವೆ ಆಗಿಲ್ಲ ಅಂತ ಯಾರು ಹೇಳಿದ್ದು?’; ಕಂಗನಾ ರಣಾವತ್

Kangana Ranaut Marriage: ಇತ್ತೀಚಿನ ಸಂದರ್ಶನದಲ್ಲಿ, ನಟಿ ಕಂಗನಾ ರನೌತ್ ಅವರು ಮದುವೆ ಮತ್ತು ಲಿವ್-ಇನ್ ಸಂಬಂಧಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮದುವೆಯಾಗಲು ತಮಗೆ ಇನ್ನೂ ಸಮಯವಿದೆ ಎಂದು ಹೇಳಿದ ಅವರು, ಲಿವ್-ಇನ್ ಸಂಬಂಧಗಳು ಮಹಿಳೆಯರಿಗೆ ಅಪಾಯಕಾರಿ ಎಂದು ನಂಬುತ್ತಾರೆ ಎಂದು ಹೇಳಿದ್ದಾರೆ.

ಈಗ ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಪ್ರವಾಹ ಸಂತ್ರಸ್ತೆಯ ಪ್ರಶ್ನೆಗೆ ಮಳೆಯಲ್ಲೂ ಬೆವರಿದ ಕಂಗನಾ ರಣಾವತ್

ಭಾರೀ ಪ್ರವಾಹಕ್ಕೆ ಒಳಗಾಗಿರುವ ಹಿಮಾಚಲ ಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿನ ಮಂಡಿ ಸಂಸದೆಯಾಗಿರುವ ಕಂಗನಾ ರಣಾವತ್ ಇಷ್ಟು ದಿನಗಳಾದ ನಂತರ ಇಂದು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಮಂಡಿಗೆ ಭೇಟಿ ನೀಡುವಲ್ಲಿ ವಿಳಂಬವಾಗಿದ್ದಕ್ಕಾಗಿ ಕಾಂಗ್ರೆಸ್ ಕೂಡ ಬಿಜೆಪಿ ಸಂಸದೆ ಕಂಗನಾರನ್ನು ಟೀಕಿಸಿತ್ತು. ಅದಕ್ಕೆ ಕಂಗನಾ ಕೂಡ ಉತ್ತರ ನೀಡಿದ್ದರು.

ಪ್ರವಾಹಪೀಡಿತರಿಗೆ ಪರಿಹಾರ ನೀಡಲು ನಾನು ಸಚಿವೆಯಲ್ಲ; ವಿವಾದಕ್ಕೀಡಾದ ಸಂಸದೆ ಕಂಗನಾ ರಣಾವತ್

ಹಿಮಾಚಲ ಪ್ರದೇಶದಲ್ಲಿ ಕಳೆದ 2 ವಾರಗಳಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಭೂಕುಸಿತ, ಪ್ರವಾಹದಿಂದ ಹಿಮಾಚಲದ ಜನರು ಕಂಗಾಲಾಗಿದ್ದಾರೆ. ಆದರೆ, ಇಲ್ಲಿನ ಮಂಡಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಇಲ್ಲಿಯವರೆಗೂ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಭಾನುವಾರ ಅವರು ಮಂಡಿಗೆ ಭೇಟಿ ನೀಡಿದಾಗ ಪ್ರವಾಹಪೀಡಿತರಿಗೆ ಪರಿಹಾರ ನೀಡುವ ಕುರಿತು ಪ್ರಶ್ನಿಸಿದ್ದಾಗ ಉಡಾಫೆಯ ಉತ್ತರ ನೀಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಂಗನಾಗೆ ಇರುವ ಕೆಟ್ಟ ಬುದ್ಧಿಯನ್ನು ಎಳೆಎಳೆಯಾಗಿ ವಿವರಿಸಿದ ನಟಿ ಕುನಿಕಾ

ನಟಿ ಕಂಗನಾ ರಣಾವತ್ ಅವರನ್ನು ಅನೇಕರು ವಿರೋಧಿಸುತ್ತಾರೆ. ಅಂಥವರ ಪೈಕಿ ಕುನಿಕಾ ಸದಾನಂದ್ ಕೂಡ ಇದ್ದಾರೆ. ಕಂಗನಾ ಅವರನ್ನು ಕಂಡರೆ ತಮಗೆ ಯಾಕೆ ಆಗುವುದಿಲ್ಲ ಎಂದು ಕುನಿಕಾ ತಿಳಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕುನಿಕಾ ಸದಾನಂದ್ ಅವರು ಕಂಗನಾ ಬಗ್ಗೆ ಹಲವು ಟೀಕೆಗಳನ್ನು ಮಾಡಿದ್ದಾರೆ.

‘ವಯಸ್ಸಾಗುವುದು ಕೂಡ ಒಂದು ಸಂತೋಷ’; ಕಂಗನಾಗೆ ಇಲ್ಲ ಬಿಳಿ ಕೂದಲ ಬಗ್ಗೆ ಚಿಂತೆ

Kangana Ranaut: ಕಂಗನಾ ರಣಾವತ್ ತಮ್ಮ ವಯಸ್ಸು ಮತ್ತು ಬಿಳಿ ಕೂದಲಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರೆ. ವಯಸ್ಸಾಗುವುದು ಸಂತೋಷ ಎಂದು ಹೇಳಿದ್ದಾರೆ. ಬಾಲಿವುಡ್‌ನಲ್ಲಿ ವಯಸ್ಸಾದ ನಟಿಯರಿಗೆ ಅವಕಾಶ ಕಡಿಮೆ ಎಂಬುದು ಗೊತ್ತು. ಆದರೆ, ರಾಜಕೀಯದಲ್ಲಿ ವಯಸ್ಸು ಗೌರವಕ್ಕೆ ಪಾತ್ರ ಎಂದು ಅವರು ನಂಬುತ್ತಾರೆ.

‘ಪಾಕಿಗಳು ರಕ್ತಸಿಕ್ತ ಜಿರಳೆಗಳು, ಭೂಪಟದಿಂದಲೇ ಇಲ್ಲದಂತೆ ಮಾಡಬೇಕು’; ಕಂಗನಾ ರಣಾವತ್

ಕಂಗನಾ ರಣಾವತ್ ಅವರು ಇತ್ತೀಚಿನ ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದಕರ ಊರು ಎಂದು ಕರೆದ ಅವರು, ಅದನ್ನು ವಿಶ್ವ ನಕ್ಷೆಯಿಂದ ಅಳಿಸಿಹಾಕಬೇಕೆಂದು ಆಗ್ರಹಿಸಿದ್ದಾರೆ. ಭಾರತದ S-400 ಮಿಸೈಲ್ ರಕ್ಷಣಾ ವ್ಯವಸ್ಥೆಯನ್ನು ಶ್ಲಾಘಿಸಿ, ಪಾಕಿಸ್ತಾನದ ಡ್ರೋನ್ ದಾಳಿಗಳನ್ನು ಹತ್ತಿಕ್ಕಿದ್ದಕ್ಕೆ ಅಭಿನಂದಿಸಿದ್ದಾರೆ.

ಕಂಗನಾ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದ್ದು ನಿಜವೇ? ನಟಿಯ ಕಳ್ಳಾಟ ಬಯಲು

ನಟಿ ಕಂಗನಾ ರಣಾವತ್ ಅವರ ಮನೆಗೆ 1 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ ಎಂಬುದನ್ನು ತಿಳಿದು ಜನರಿಗೆ ಅಚ್ಚರಿ ಆಗಿತ್ತು. ಆದರೆ ಅದಕ್ಕೆ ಕಾರಣ ಏನು ಎಂಬುದು ಈಗ ಬಹಿರಂಗ ಆಗಿದೆ. ಹಳೇ ಬಾಕಿ ಪಾವತಿ ಮಾಡದೇ ಇರುವ ಕಾರಣದಿಂದ ಕಂಗನಾ ಮನೆಗೆ ಲಕ್ಷಾಂತರ ರೂಪಾಯಿ ಬಿಲ್ ಬಂದಿದೆ. ಆ ಬಗ್ಗೆ ಇಲ್ಲಿದೆ ವಿವರ..