Kangana Ranaut
ಕಂಗನಾ ರಣಾವತ್ ಅವರರು ನಟನೆಯಿಂದ ಹಾಗೂ ವಿವಾದಗಳಿಂದ ಸದಾ ಸುದ್ದಿ ಆಗುವ ನಟಿ. ಪರದೆಯ ಮೇಲೆ ಮತ್ತು ಪರದೆಯ ಹೊರಗೆ ಸದಾ ಚರ್ಚೆಯಲ್ಲಿ ಇರುತ್ತಾರೆ. ಅವರು ದಿಟ್ಟತನಕ್ಕೆ ಹೆಸರುವಾಸಿಯಾಗಿದ್ದಾರೆ. 1987ರ ಮಾರ್ಚ್ 23ರಂದು ಹಿಮಾಚಲ ಪ್ರದೇಶದಲ್ಲಿ ಕಂಗನಾ ಜನಿಸಿದರು. ಅವರು 2006ರಲ್ಲಿ ‘ಗ್ಯಾಂಗ್ಸ್ಟರ್’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು. ಮೊದಲ ಸಿನಿಮಾದಲ್ಲೇ ಗೆಲುವು ಸಿಕ್ಕಿತು. ಈ ಚಿತ್ರಕ್ಕಾಗಿ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿತು. ಕಂಗನಾ ಅವರು ‘ಕ್ವೀನ್’, ‘ತನು ವೆಡ್ಸ್ ಮನು’, ‘ಫ್ಯಾಶನ್’ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಂಗನಾ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳತ್ತಾರೆ. ಅವರು ನಿರ್ದೇಶಕಿ ಹಾಗೂ ನಿರ್ಮಾಪಕಿ ಕೂಡ ಹೌದು. ಸಾಕಷ್ಟು ವಿವಾದಗಳನ್ನು ಕೂಡ ಕಂಗನಾ ಮಾಡಿಕೊಂಡಿದ್ದಾರೆ.
ಇನ್ನೂ ಹೆಚ್ಚು ಓದಿಉದಯನಿಧಿ ಸ್ಟಾಲಿನ್ ಬಂಧಿಸಿದ್ದು ಉತ್ತಮ ನಿರ್ಧಾರ: ಖಡಕ್ ಆಗಿ ಹೇಳಿದ ಕಂಗನಾ ರಣಾವತ್
ನಟಿ ತ್ರಿಷಾ ಕೃಷ್ಣನ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಬೆಂಬಲಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
- Madan Kumar
- Updated on: Aug 4, 2026
- 8:36 pm
‘ನಾನು ಸಂಘಿ ಆಗಬೇಕು’: ವಿಡಿಯೋ ನೋಡಿ ಟ್ರೋಲ್ ಮಾಡಿದವರಿಗೆ ಕಂಗನಾ ತಿರುಗೇಟು
ನಟಿ ಕಂಗನಾ ರಣಾವತ್ ಅವರು ಒಂದರ ಮೇಲೊಂದು ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯ ರೀತಿಯನ್ನು ಟೀಕಿಸುವುದರಿಂದ ಆರಂಭವಾದ ಅವರ ವಿವಾದ ಈಗ ಇನ್ನೊಂದು ಹಂತಕ್ಕೆ ಏರಿದೆ. ‘ನಾನು ಸಂಘಿ ಆಗಬೇಕು’ ಎಂದು ಕಂಗನಾ ರಣಾವತ್ ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Aug 3, 2026
- 10:47 pm
ಸೋನಾಕ್ಷಿ ಸಿನ್ಹಾ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್; ಖಾರದ ಮಾತುಗಳಲ್ಲಿ ಟೀಕೆ
ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ ನಟಿಯೊಬ್ಬರ ವಿರುದ್ಧ ಕಂಗನಾ ರಣಾವತ್ ಗರಂ ಆಗಿದ್ದಾರೆ. ಹೆಸರು ಹೇಳದೆಯೇ ಕಟುವಾಗಿ ಟೀಕೆ ಮಾಡಿದ್ದಾರೆ. ಆದರೆ ಅವರು ಟೀಕಿಸಿರುವುದು ಸೋನಾಕ್ಷಿ ಸಿನ್ಹಾ ಅವರನ್ನು ಎಂದು ನೆಟ್ಟಿಗರು ಊಹಿಸಿದ್ದಾರೆ. ಈ ಟೀಕೆಗೆ ಸೋನಾಕ್ಷಿ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ಕುತೂಹಲ ಸೃಷ್ಟಿ ಆಗಿದೆ.
- Madan Kumar
- Updated on: Aug 3, 2026
- 3:27 pm
ಬೆಂಕಿಗೆ ತುಪ್ಪ ಸುರಿಯಬೇಡಿ: ಹೃತಿಕ್ ರೋಷನ್ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್
ಕಂಗನಾ ರಣಾವತ್ ಮತ್ತು ಹೃತಿಕ್ ರೋಷನ್ ನಡುವಿನ ಕಿರಿಕ್ ಇಂದು ನಿನ್ನೆಯದಲ್ಲ. ಹತ್ತು ವರ್ಷಗಳ ಹಳೆಯ ಜಗಳ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕಂಗನಾ ವಿರುದ್ಧ ಜೆನ್ ಜಿ ಯುವಜನತೆ ತಿರುಗಿ ಬಿದ್ದಿದ್ದಾರೆ. ಅದಕ್ಕೆ ಪರೋಕ್ಷವಾಗಿ ಹೃತಿಕ್ ರೋಷನ್ ಪ್ರೋತ್ಸಾಹ ನೀಡಿದ್ದಾರೆ. ಅದು ಕಂಗನಾ ಕೋಪಕ್ಕೆ ಕಾರಣ ಆಗಿದೆ.
- Madan Kumar
- Updated on: Aug 2, 2026
- 12:38 pm
‘ಬೇರೆಯವರ ಮಕ್ಕಳನ್ನು ಹಾದಿ ತಪ್ಪಿಸಿದರೆ, ನಿಮ್ಮ ಮಕ್ಕಳಿಗೂ ಅದೇ ಪರಿಸ್ಥಿತಿ ಬರುತ್ತದೆ’; ಕಂಗನಾ ರಣಾವತ್
ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ತಮ್ಮ ಸಿನಿಮಾ ಪಾತ್ರಗಳನ್ನು ಬಳಸಿ ಟ್ರೋಲ್ ಮಾಡಿದವರಿಗೆ ಸೋಶಿಯಲ್ ಮೀಡಿಯಾದಲ್ಲಿ ಕಠಿಣ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾದ ಕಾಲ್ಪನಿಕ ಪಾತ್ರಗಳನ್ನು ನೈಜ ಜೀವನಕ್ಕೆ ಹೋಲಿಸಿ ಇಂದಿನ ಮುಗ್ಧ ಯುವ ಪೀಳಿಗೆಯನ್ನು ಹಾದಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಟ್ರೋಲಿಗರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
- Rajesh Duggumane
- Updated on: Aug 1, 2026
- 10:31 am
ಸೀತೆಯ ವೇಷದಲ್ಲಿ ಜೆನ್ ಜಿ ಮಂದಿಗೆ ಆಶೀರ್ವಾದ ಮಾಡಿದ ನಟಿ, ಸಂಸದೆ ಕಂಗನಾ ರಣಾವತ್
ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಸೀತೆ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ನಡುವೆಯೇ ಕಂಗನಾ ರಣಾವತ್ ಅವರು ತಮ್ಮ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಮೂಲಕ ಅವರು ಜೆನ್ ಜಿ ಯುವ ಜನತೆಯ ಕಾಲೆಳೆದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Jul 31, 2026
- 6:18 pm
ಜೆನ್ ಜಿ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತ ವಿಶಾಲ್ ದದ್ಲಾನಿ: ಕಂಗನಾ ಮಾತಿಗೆ ತಿರುಗೇಟು
ನಟಿ ಕಂಗನಾ ರಣಾವತ್ ಅವರು ಜೆನ್ ಜಿ ಯುವಕ-ಯುವತಿಯರ ಪ್ರತಿಭಟನೆಯನ್ನು ಖಂಡಿಸಿದ್ದರು. ಆದರೆ ಗಾಯಕ ವಿಶಾಲ್ ದದ್ಲಾನಿ ಅವರು ಜೆನ್ ಜಿಗಳ ಪರ ನಿಂತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಆದ ಹಲ್ಲೆಯನ್ನು ವಿಶಾಲ್ ದದ್ಲಾನಿ ಟೀಕಿಸಿದ್ದಾರೆ.
- Madan Kumar
- Updated on: Jul 29, 2026
- 5:31 pm
‘ಜೆನ್ ಜಿ’ಗಳನ್ನು ‘ಜನರೇಷನ್ ಗಟಾರ್’ ಎಂದಿದ್ದಕ್ಕೆ ಸ್ಪಷ್ಟನೆ ನೀಡಿದ ಕಂಗನಾ ರಣಾವತ್
‘ಮಾನವ ಜೀವನವು ವಿಕಸನದ ಮೇಲೆ ಆಧಾರಿತವಾಗಿದೆ ಎಂದು ವಿಜ್ಞಾನ ಹೇಳುತ್ತದೆ. ಆದರೆ ಫೆಮಿನಾಜಿಗಳು ಪ್ರಾಣಿ ಪ್ರವೃತ್ತಿಯನ್ನು ಉತ್ತೇಜಿಸುತ್ತಿದ್ದಾರೆ’ ಎಂದು ಕಂಗನಾ ರಣಾವತ್ ಅವರು ಹೇಳಿದ್ದಾರೆ. ಗುರುಪೂರ್ಣಿಮೆ ಪ್ರಯುಕ್ತ ವಿಡಿಯೋ ಹಂಚಿಕೊಂಡಿರುವ ಅವರು ಜಿನ್ ಜಿಗಳ ಬಗ್ಗೆ ತಾವು ಮಾತನಾಡಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ.
- Madan Kumar
- Updated on: Jul 29, 2026
- 4:17 pm
ಹಿಂದೂ ಯುವತಿಯರ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ಕಂಗನಾ ರಣಾವತ್
ಇತ್ತೀಚೆಗೆ ‘ನೀಟ್’ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆನ್ ಜಿ ಯುವಜನರು ನಡೆಸಿದ ಪ್ರತಿಭಟನೆಯ ವೀಡಿಯೋಗಳನ್ನು ನೋಡಿದ ಕಂಗನಾ ಅವರು ‘ವಾಂತಿ ಬರಿಸುವಂತಿವೆ’ ಎಂದು ಟೀಕಿಸಿದ್ದರು. ಅದರ ಬೆನ್ನಲ್ಲೇ ಈಗ ಮತ್ತೊಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಹಿಂದೂ ಯುವತಿಯರ ಜೀವನಶೈಲಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
- Madan Kumar
- Updated on: Jul 28, 2026
- 5:47 pm
‘ಇಂಥ ಅಸಹ್ಯ ಎಲ್ಲೂ ನೋಡಿಲ್ಲ’: ಜೆನ್ ಜಿ ಪ್ರತಿಭಟನೆ ವಿರುದ್ಧ ಕಂಗನಾ ರಣಾವತ್ ಗರಂ
ಪ್ರತಿಭಟನಾಕಾರರು ಜಂತರ್ ಮಂತರ್ನಲ್ಲಿ 60 ಮೆಟ್ರಿಕ್ ಟನ್ಗೂ ಹೆಚ್ಚು ಕಸವನ್ನು ಬಿಟ್ಟು ಹೋಗಿದ್ದಾರೆ ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ. ಅಲ್ಲದೇ, ಜೆನ್ ಜಿ ವಿದ್ಯಾರ್ಥಿಗಳ ವರ್ತನೆ ಮತ್ತು ಭಾಷೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಬಳಿಕ ಅವರು ಜೆನ್ ಜಿ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
- Madan Kumar
- Updated on: Jul 27, 2026
- 7:27 pm
ಲಿಪ್ಲಾಕ್ ದೃಶ್ಯದಲ್ಲಿ ಸಹ ಕಲಾವಿದನಿಗೆ ಗಾಯ ಮಾಡಿದರಾ ಕಂಗನಾ?
2014ರ 'ರಿವಾಲ್ವರ್ ರಾಣಿ' ಚಿತ್ರದ ಕಂಗನಾ-ವೀರ್ ದಾಸ್ ಲಿಪ್ ಲಾಕ್ ದೃಶ್ಯದ ಬಗ್ಗೆ ಹಳೆಯ ವದಂತಿ ಮತ್ತೆ ವೈರಲ್ ಆಗಿದೆ. ಶೂಟಿಂಗ್ ವೇಳೆ ಕಂಗನಾ ವೀರ್ ದಾಸ್ ತುಟಿಗೆ ಕಚ್ಚಿ ಗಾಯಗೊಳಿಸಿದ್ದರು ಎಂಬ ಆರೋಪವನ್ನು ನಟ ವೀರ್ ದಾಸ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಕಂಗನಾ ವೃತ್ತಿಪರರು ಎಂದು ಹೇಳಿ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಂಗನಾ ಧನ್ಯವಾದ ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ಯ ಈಗ ಸ್ಪಷ್ಟವಾಗಿದೆ.
- Rajesh Duggumane
- Updated on: Jun 29, 2026
- 11:00 am
ಕಂಗನಾಗೆ ತೀವ್ರ ನಿರಾಶೆ; ಮೊದಲ ವಾರದಲ್ಲಿ ‘ಭಾರತ್ ಭಾಗ್ಯ ವಿಧಾತ’ ಗಳಿಕೆ ಕೇವಲ 6 ಕೋಟಿ ರೂ.
‘ಭಾರತ್ ಭಾಗ್ಯ ವಿಧಾತ’ ಸಿನಿಮಾದಲ್ಲಿ ಉತ್ತಮವಾದ ಕಥಾವಸ್ತು ಇದೆ ಎಂಬ ಕಾರಣಕ್ಕೆ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಯಿತು. ಹಾಗಿದ್ದರೂ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಈ ಚಿತ್ರ ವಿಫಲವಾಗಿದೆ. ಈ ಮೂಲಕ ನಟಿ ಕಂಗನಾ ರಣಾವತ್ ಅವರ ಫ್ಲಾಪ್ ಸಿನಿಮಾಗಳ ಪಟ್ಟಿಗೆ ಈ ಚಿತ್ರ ಕೂಡ ಸೇರ್ಪಡೆ ಆಗಿದೆ.
- Madan Kumar
- Updated on: Jun 19, 2026
- 4:10 pm