AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೊಂಬೆಯಲ್ಲಿ ಸಿಲುಕಿದ್ದ ಗೂಬೆಯನ್ನು ರಕ್ಷಿಸಿದವನಿಗೆ ನೆಟ್ಟಿಗರಿಂದ ಧನ್ಯವಾದ

Owl Rescue : ಹಕ್ಕಿಗೆ ರೆಕ್ಕೆಯೇ ಜೀವ. ಕೆಳಗೆ ನೀರು ಬೇರೆ. ಭಯದಿಂದ ಗೂಬೆ ಎಷ್ಟೊಂದು ಒದ್ದಾಡಿತೋ. ತನ್ನನ್ನು ಈಗ ಈ ಅಪಾಯದಿಂದ ಯಾರು ಹೇಗೆ ಕಾಪಾಡಬಹುದು ಎಂಬ ಅಂದಾಜೂ ಅದಕ್ಕಿರಲಿಲ್ಲವೇನೋ.

Viral Video: ಕೊಂಬೆಯಲ್ಲಿ ಸಿಲುಕಿದ್ದ ಗೂಬೆಯನ್ನು ರಕ್ಷಿಸಿದವನಿಗೆ ನೆಟ್ಟಿಗರಿಂದ ಧನ್ಯವಾದ
ಗೂಬೆಯನ್ನು ರಕ್ಷಿಸುತ್ತಿರುವುದು
TV9 Web
| Edited By: ಶ್ರೀದೇವಿ ಕಳಸದ|

Updated on: Jun 10, 2023 | 10:57 AM

Share

Animal Love: ದಯೆ, ಕರುಣೆ, ಸಹಾನುಭೂತಿ ಮನುಷ್ಯನಲ್ಲಿರಬೇಕಾದ ಅತ್ಯವಶ್ಯ ಗುಣಗಳು. ಈ ಗುಣಗಳನ್ನು ಹೊಂದಿದ ಮನುಷ್ಯ ಯಾರನ್ನೂ ನೋಯಿಸಲಾರ. ಕಷ್ಟದಲ್ಲಿರುವ ಯಾವ ಜೀವಿಯನ್ನೂ ಮೇಲೆತ್ತುವ ಹೃದಯವಂತ ಅವನಾಗಿರುತ್ತಾನೆ. ಇದೀಗ ವೈರಲ್ (Viral Video) ಆಗಿರುವ ಈ ವಿಡಿಯೋ ನೋಡಿ. ಹರಿವ ನೀರು, ದಡದಲ್ಲಿರುವ ಮರ, ಮರದ ಕೊಂಬೆಯಲ್ಲಿ ಸಿಕ್ಕಿಹಾಕಿಕೊಂಡು ಪ್ರಾಣಭಯದಲ್ಲಿ ಒದ್ದಾಡುತ್ತಿರುವ ಗೂಬೆ. ಅಂತೂ ಅಲ್ಲಿಗೆ ಬಂದ ಈ ಮನುಷ್ಯ ಅದನ್ನು ರಕ್ಷಿಸಿದ್ದಾನೆ. ನೆಟ್ಟಿಗರೆಲ್ಲ ಈತನನ್ನು ಪ್ರಶಂಸಿಸುತ್ತಿದ್ದಾರೆ.

54 ಸೆಕೆಂಡುಗಳ ಈ ವಿಡಿಯೋ ಕ್ಲಿಪ್​ ಗಮನಿಸಿದಿರಲ್ಲವೆ? ಇದರ ರೆಕ್ಕೆಗಳು ಕೊಂಬೆಗೆ ಸಿಕ್ಕಿಕೊಂಡುಬಿಟ್ಟಿವೆ. ಬಿಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹಕ್ಕಿಗೆ ರೆಕ್ಕೆಯೇ ಜೀವ. ರೆಕ್ಕೆಯ ಗತಿಯೇ ಹೀಗಾದರೆ? ಕೆಳಗೆ ನೀರು ಬೇರೆ. ಭಯದಿಂದ ಗೂಬೆ ಎಷ್ಟೊಂದು ಒದ್ದಾಡಿತೋ. ತನ್ನನ್ನು ಈಗ ಈ ಅಪಾಯದಿಂದ ಯಾರು ಹೇಗೆ ಕಾಪಾಡಬಹುದು ಎಂಬ ಅಂದಾಜೂ ಅದಕ್ಕಿರಲಾರದು. ಅದೃಷ್ಟವಶಾತ್​ ಈ ಮನುಷ್ಯ ಅಲ್ಲಿಗೆ ಬಂದಿದ್ದಾನೆ.

ಇದನ್ನೂ ಓದಿ : Viral Video: ”ಡ್ರೀಮಮ್ ವೇಕಪಮ್ ಕ್ರಿಟಿಕಲ್ ಕಂಡೀಷನಮ್” ಗಾಯಕಿ ಅಂಕಿತಾ ಕುಂಡು ಹೊಸ ರೀಲ್​ಗೆ ನೆಟ್ಟಿಗರ ಬೇಸರ

ಗೂಬೆಯ ಜೀವ ಉಳಿಸಿದ ನಿಮಗೆ ಕೃತಜ್ಞತೆ ಎನ್ನುತ್ತಿದ್ದಾರೆ ನೆಟ್​ಮಂದಿ. ನಿಮ್ಮ ತಾಳ್ಮೆ, ಉಪಾಯ ನಿಜಕ್ಕೂ ಶ್ಲಾಘನೀಯ. ಗೂಬೆ ಬಲೆಯೊಳಗೆ ಕುಳಿತುಕೊಳ್ಳುತ್ತಿದ್ದಂತೆ ಆ ದಾರವನ್ನು ಸುಡುವ ನಿಮ್ಮ ಜಾಣ್ಮೆ ಸ್ತುತ್ಯಾರ್ಹ ಎಂದಿದ್ದಾರೆ ಕೆಲವರು. ನೀವು ಅದನ್ನು ಸ್ಪರ್ಶಿಸಿ ಮುದ್ದಿಸುವ ಕ್ಷಣಗಳು ವರ್ಣಿಸಲಸಾಧ್ಯ, ಪರಸ್ಪರ ನಿಮ್ಮಿಬ್ಬರಿಗೂ ಇವ ಅಪೂರ್ವ ಗಳಿಗೆಗಳು ಎಂದು ಹಲವರು ಹೇಳಿದ್ದಾರೆ. ಈ ವಿಡಿಯೋ ಅನ್ನು ಈತನಕ ಸುಮಾರು 2.7 ಮಿಲಿಯನ್​ ಜನರು ನೋಡಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ