AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೊಂಬೆಯಲ್ಲಿ ಸಿಲುಕಿದ್ದ ಗೂಬೆಯನ್ನು ರಕ್ಷಿಸಿದವನಿಗೆ ನೆಟ್ಟಿಗರಿಂದ ಧನ್ಯವಾದ

Owl Rescue : ಹಕ್ಕಿಗೆ ರೆಕ್ಕೆಯೇ ಜೀವ. ಕೆಳಗೆ ನೀರು ಬೇರೆ. ಭಯದಿಂದ ಗೂಬೆ ಎಷ್ಟೊಂದು ಒದ್ದಾಡಿತೋ. ತನ್ನನ್ನು ಈಗ ಈ ಅಪಾಯದಿಂದ ಯಾರು ಹೇಗೆ ಕಾಪಾಡಬಹುದು ಎಂಬ ಅಂದಾಜೂ ಅದಕ್ಕಿರಲಿಲ್ಲವೇನೋ.

Viral Video: ಕೊಂಬೆಯಲ್ಲಿ ಸಿಲುಕಿದ್ದ ಗೂಬೆಯನ್ನು ರಕ್ಷಿಸಿದವನಿಗೆ ನೆಟ್ಟಿಗರಿಂದ ಧನ್ಯವಾದ
ಗೂಬೆಯನ್ನು ರಕ್ಷಿಸುತ್ತಿರುವುದು
TV9 Web
| Edited By: ಶ್ರೀದೇವಿ ಕಳಸದ|

Updated on: Jun 10, 2023 | 10:57 AM

Share

Animal Love: ದಯೆ, ಕರುಣೆ, ಸಹಾನುಭೂತಿ ಮನುಷ್ಯನಲ್ಲಿರಬೇಕಾದ ಅತ್ಯವಶ್ಯ ಗುಣಗಳು. ಈ ಗುಣಗಳನ್ನು ಹೊಂದಿದ ಮನುಷ್ಯ ಯಾರನ್ನೂ ನೋಯಿಸಲಾರ. ಕಷ್ಟದಲ್ಲಿರುವ ಯಾವ ಜೀವಿಯನ್ನೂ ಮೇಲೆತ್ತುವ ಹೃದಯವಂತ ಅವನಾಗಿರುತ್ತಾನೆ. ಇದೀಗ ವೈರಲ್ (Viral Video) ಆಗಿರುವ ಈ ವಿಡಿಯೋ ನೋಡಿ. ಹರಿವ ನೀರು, ದಡದಲ್ಲಿರುವ ಮರ, ಮರದ ಕೊಂಬೆಯಲ್ಲಿ ಸಿಕ್ಕಿಹಾಕಿಕೊಂಡು ಪ್ರಾಣಭಯದಲ್ಲಿ ಒದ್ದಾಡುತ್ತಿರುವ ಗೂಬೆ. ಅಂತೂ ಅಲ್ಲಿಗೆ ಬಂದ ಈ ಮನುಷ್ಯ ಅದನ್ನು ರಕ್ಷಿಸಿದ್ದಾನೆ. ನೆಟ್ಟಿಗರೆಲ್ಲ ಈತನನ್ನು ಪ್ರಶಂಸಿಸುತ್ತಿದ್ದಾರೆ.

54 ಸೆಕೆಂಡುಗಳ ಈ ವಿಡಿಯೋ ಕ್ಲಿಪ್​ ಗಮನಿಸಿದಿರಲ್ಲವೆ? ಇದರ ರೆಕ್ಕೆಗಳು ಕೊಂಬೆಗೆ ಸಿಕ್ಕಿಕೊಂಡುಬಿಟ್ಟಿವೆ. ಬಿಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹಕ್ಕಿಗೆ ರೆಕ್ಕೆಯೇ ಜೀವ. ರೆಕ್ಕೆಯ ಗತಿಯೇ ಹೀಗಾದರೆ? ಕೆಳಗೆ ನೀರು ಬೇರೆ. ಭಯದಿಂದ ಗೂಬೆ ಎಷ್ಟೊಂದು ಒದ್ದಾಡಿತೋ. ತನ್ನನ್ನು ಈಗ ಈ ಅಪಾಯದಿಂದ ಯಾರು ಹೇಗೆ ಕಾಪಾಡಬಹುದು ಎಂಬ ಅಂದಾಜೂ ಅದಕ್ಕಿರಲಾರದು. ಅದೃಷ್ಟವಶಾತ್​ ಈ ಮನುಷ್ಯ ಅಲ್ಲಿಗೆ ಬಂದಿದ್ದಾನೆ.

ಇದನ್ನೂ ಓದಿ : Viral Video: ”ಡ್ರೀಮಮ್ ವೇಕಪಮ್ ಕ್ರಿಟಿಕಲ್ ಕಂಡೀಷನಮ್” ಗಾಯಕಿ ಅಂಕಿತಾ ಕುಂಡು ಹೊಸ ರೀಲ್​ಗೆ ನೆಟ್ಟಿಗರ ಬೇಸರ

ಗೂಬೆಯ ಜೀವ ಉಳಿಸಿದ ನಿಮಗೆ ಕೃತಜ್ಞತೆ ಎನ್ನುತ್ತಿದ್ದಾರೆ ನೆಟ್​ಮಂದಿ. ನಿಮ್ಮ ತಾಳ್ಮೆ, ಉಪಾಯ ನಿಜಕ್ಕೂ ಶ್ಲಾಘನೀಯ. ಗೂಬೆ ಬಲೆಯೊಳಗೆ ಕುಳಿತುಕೊಳ್ಳುತ್ತಿದ್ದಂತೆ ಆ ದಾರವನ್ನು ಸುಡುವ ನಿಮ್ಮ ಜಾಣ್ಮೆ ಸ್ತುತ್ಯಾರ್ಹ ಎಂದಿದ್ದಾರೆ ಕೆಲವರು. ನೀವು ಅದನ್ನು ಸ್ಪರ್ಶಿಸಿ ಮುದ್ದಿಸುವ ಕ್ಷಣಗಳು ವರ್ಣಿಸಲಸಾಧ್ಯ, ಪರಸ್ಪರ ನಿಮ್ಮಿಬ್ಬರಿಗೂ ಇವ ಅಪೂರ್ವ ಗಳಿಗೆಗಳು ಎಂದು ಹಲವರು ಹೇಳಿದ್ದಾರೆ. ಈ ವಿಡಿಯೋ ಅನ್ನು ಈತನಕ ಸುಮಾರು 2.7 ಮಿಲಿಯನ್​ ಜನರು ನೋಡಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ