AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೊಂಬೆಯಲ್ಲಿ ಸಿಲುಕಿದ್ದ ಗೂಬೆಯನ್ನು ರಕ್ಷಿಸಿದವನಿಗೆ ನೆಟ್ಟಿಗರಿಂದ ಧನ್ಯವಾದ

Owl Rescue : ಹಕ್ಕಿಗೆ ರೆಕ್ಕೆಯೇ ಜೀವ. ಕೆಳಗೆ ನೀರು ಬೇರೆ. ಭಯದಿಂದ ಗೂಬೆ ಎಷ್ಟೊಂದು ಒದ್ದಾಡಿತೋ. ತನ್ನನ್ನು ಈಗ ಈ ಅಪಾಯದಿಂದ ಯಾರು ಹೇಗೆ ಕಾಪಾಡಬಹುದು ಎಂಬ ಅಂದಾಜೂ ಅದಕ್ಕಿರಲಿಲ್ಲವೇನೋ.

Viral Video: ಕೊಂಬೆಯಲ್ಲಿ ಸಿಲುಕಿದ್ದ ಗೂಬೆಯನ್ನು ರಕ್ಷಿಸಿದವನಿಗೆ ನೆಟ್ಟಿಗರಿಂದ ಧನ್ಯವಾದ
ಗೂಬೆಯನ್ನು ರಕ್ಷಿಸುತ್ತಿರುವುದು
TV9 Web
| Edited By: ಶ್ರೀದೇವಿ ಕಳಸದ|

Updated on: Jun 10, 2023 | 10:57 AM

Share

Animal Love: ದಯೆ, ಕರುಣೆ, ಸಹಾನುಭೂತಿ ಮನುಷ್ಯನಲ್ಲಿರಬೇಕಾದ ಅತ್ಯವಶ್ಯ ಗುಣಗಳು. ಈ ಗುಣಗಳನ್ನು ಹೊಂದಿದ ಮನುಷ್ಯ ಯಾರನ್ನೂ ನೋಯಿಸಲಾರ. ಕಷ್ಟದಲ್ಲಿರುವ ಯಾವ ಜೀವಿಯನ್ನೂ ಮೇಲೆತ್ತುವ ಹೃದಯವಂತ ಅವನಾಗಿರುತ್ತಾನೆ. ಇದೀಗ ವೈರಲ್ (Viral Video) ಆಗಿರುವ ಈ ವಿಡಿಯೋ ನೋಡಿ. ಹರಿವ ನೀರು, ದಡದಲ್ಲಿರುವ ಮರ, ಮರದ ಕೊಂಬೆಯಲ್ಲಿ ಸಿಕ್ಕಿಹಾಕಿಕೊಂಡು ಪ್ರಾಣಭಯದಲ್ಲಿ ಒದ್ದಾಡುತ್ತಿರುವ ಗೂಬೆ. ಅಂತೂ ಅಲ್ಲಿಗೆ ಬಂದ ಈ ಮನುಷ್ಯ ಅದನ್ನು ರಕ್ಷಿಸಿದ್ದಾನೆ. ನೆಟ್ಟಿಗರೆಲ್ಲ ಈತನನ್ನು ಪ್ರಶಂಸಿಸುತ್ತಿದ್ದಾರೆ.

54 ಸೆಕೆಂಡುಗಳ ಈ ವಿಡಿಯೋ ಕ್ಲಿಪ್​ ಗಮನಿಸಿದಿರಲ್ಲವೆ? ಇದರ ರೆಕ್ಕೆಗಳು ಕೊಂಬೆಗೆ ಸಿಕ್ಕಿಕೊಂಡುಬಿಟ್ಟಿವೆ. ಬಿಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹಕ್ಕಿಗೆ ರೆಕ್ಕೆಯೇ ಜೀವ. ರೆಕ್ಕೆಯ ಗತಿಯೇ ಹೀಗಾದರೆ? ಕೆಳಗೆ ನೀರು ಬೇರೆ. ಭಯದಿಂದ ಗೂಬೆ ಎಷ್ಟೊಂದು ಒದ್ದಾಡಿತೋ. ತನ್ನನ್ನು ಈಗ ಈ ಅಪಾಯದಿಂದ ಯಾರು ಹೇಗೆ ಕಾಪಾಡಬಹುದು ಎಂಬ ಅಂದಾಜೂ ಅದಕ್ಕಿರಲಾರದು. ಅದೃಷ್ಟವಶಾತ್​ ಈ ಮನುಷ್ಯ ಅಲ್ಲಿಗೆ ಬಂದಿದ್ದಾನೆ.

ಇದನ್ನೂ ಓದಿ : Viral Video: ”ಡ್ರೀಮಮ್ ವೇಕಪಮ್ ಕ್ರಿಟಿಕಲ್ ಕಂಡೀಷನಮ್” ಗಾಯಕಿ ಅಂಕಿತಾ ಕುಂಡು ಹೊಸ ರೀಲ್​ಗೆ ನೆಟ್ಟಿಗರ ಬೇಸರ

ಗೂಬೆಯ ಜೀವ ಉಳಿಸಿದ ನಿಮಗೆ ಕೃತಜ್ಞತೆ ಎನ್ನುತ್ತಿದ್ದಾರೆ ನೆಟ್​ಮಂದಿ. ನಿಮ್ಮ ತಾಳ್ಮೆ, ಉಪಾಯ ನಿಜಕ್ಕೂ ಶ್ಲಾಘನೀಯ. ಗೂಬೆ ಬಲೆಯೊಳಗೆ ಕುಳಿತುಕೊಳ್ಳುತ್ತಿದ್ದಂತೆ ಆ ದಾರವನ್ನು ಸುಡುವ ನಿಮ್ಮ ಜಾಣ್ಮೆ ಸ್ತುತ್ಯಾರ್ಹ ಎಂದಿದ್ದಾರೆ ಕೆಲವರು. ನೀವು ಅದನ್ನು ಸ್ಪರ್ಶಿಸಿ ಮುದ್ದಿಸುವ ಕ್ಷಣಗಳು ವರ್ಣಿಸಲಸಾಧ್ಯ, ಪರಸ್ಪರ ನಿಮ್ಮಿಬ್ಬರಿಗೂ ಇವ ಅಪೂರ್ವ ಗಳಿಗೆಗಳು ಎಂದು ಹಲವರು ಹೇಳಿದ್ದಾರೆ. ಈ ವಿಡಿಯೋ ಅನ್ನು ಈತನಕ ಸುಮಾರು 2.7 ಮಿಲಿಯನ್​ ಜನರು ನೋಡಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!