AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಸಹದ್ಯೋಗಿಯನ್ನೇ ಮದುವೆಯಾಗಿ; ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ನಿಭಾಯಿಸಲು ವಿಶಿಷ್ಟ ಸಲಹೆ ನೀಡಿದ ವ್ಯಕ್ತಿ

ಇಂದಿನ ಕಾಲಘಟ್ಟದಲ್ಲಿ ಕೆಲಸದ ಒತ್ತಡದಿಂದಾಗಿ ಹಲವರಿಗೆ ವರ್ಕ್‌-ಲೈಫ್‌ ಬ್ಯಾಲೆನ್ಸ್‌ ಮಾಡುವುದೇ ತುಂಬಾ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕುಟುಂಬದೊಂದಿಗೆ ಅಥವಾ ವೈಯಕ್ತಿಕ ಸಮಯವನ್ನು ಕಳೆಯಲು ಟೈ ಸಿಕ್ತಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಅಂತಹವರಿಗಾಗಿ ಇಲ್ಲೊಬ್ರು ವ್ಯಕ್ತಿ ವಿಶಿಷ್ಟ ವರ್ಕ್‌ ಲೈಫ್‌ ಬ್ಯಾಲೆನ್ಸ್‌ ಟಿಪ್ಸ್‌ ನೀಡಿದ್ದಾರೆ. ಹೌದು ನಿಮ್ಮ ಸಹದ್ಯೋಗಿಗಳನ್ನೇ ಮದುವೆಯಾಗಿ ಇದರಿಂದ ಹಲವು ಪ್ರಯೋಜನಗಳಿಗೆ ಎಂದು ಅವರು ಹೇಳಿದ್ದು, ಈ ಪೋಸ್ಟ್‌ ಇದೀಗ ವೈರಲ್‌ ಆಗುತ್ತಿದೆ.

ನಿಮ್ಮ ಸಹದ್ಯೋಗಿಯನ್ನೇ ಮದುವೆಯಾಗಿ; ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ನಿಭಾಯಿಸಲು ವಿಶಿಷ್ಟ ಸಲಹೆ ನೀಡಿದ ವ್ಯಕ್ತಿ
ವೈರಲ್​​ ಫೊಸ್ಟ್​
ಮಾಲಾಶ್ರೀ ಅಂಚನ್​
| Edited By: |

Updated on:Mar 27, 2025 | 2:08 PM

Share

ಇಂದಿನ ಬಿಡುವಿಲ್ಲದ ಹಾಗೂ ಧಾವಂತದ ಬದುಕಿನಲ್ಲಿ ವೃತ್ತಿ (work) ಮತ್ತು ವೈಯಕ್ತಿಕ ಜೀವನದ (personal life) ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಜನರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 24×7 ಕೆಲಸವೇ ಆಯ್ತು, ಕುಟುಂಬದೊಂದಿಗೆ ಹಾಗೂ ವೈಯಕ್ತಿಕವಾಗಿ ಸಮಯ ಕಳೆಯಲು ಟೈಮ್‌ ಸಿಕ್ತಿಲ್ಲ ಎಂದು ಹಲವರು ಗೊಣಗಾಡುತ್ತಾರೆ. ಇನ್ನೂ ಕೆಲವರು ಈಗ ಏನೋ ಪರವಾಗಿಲ್ಲ, ಮದುವೆ ಆದ್ಮೇಲೆ ಹೆಂಗಪ್ಪಾ ವರ್ಕ್‌-ಲೈಫ್‌ ಬ್ಯಾಲೆನ್ಸ್‌ (Work-life balance) ಮಾಡೋದು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಅಂತಹವರಿಗೆ ಇಲ್ಲೊಬ್ರು ವ್ಯಕ್ತಿ ವರ್ಕ್‌-ಲೈಫ್‌ ಬ್ಯಾಲೆನ್ಸ್‌ಗೆ ಕ್ರೇಜಿ ಟಿಪ್ಸ್‌ (tips) ಒಂದನ್ನು ನೀಡಿದ್ದಾರೆ. ಹೌದು ನಿಮ್ಮ ಸಹದ್ಯೋಗಿಗಳನ್ನೇ ಮದುವೆಯಾಗಿ ಇದರಿಂದ ಹಲವು ಪ್ರಯೋಜನಗಳಿಗೆ ಎಂದು ಅವರು ಹೇಳಿದ್ದು, ಈ ಪೋಸ್ಟ್‌ ಇದೀಗ ವೈರಲ್‌ ಆಗುತ್ತಿದೆ.

ಬೆಂಗಳೂರು ಮೂಲದ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಹರ್ಷಿತ್‌ ಮಹಾವರ್‌ (Harshith Mahawar) ಎಂಬವರು ವರ್ಕ್‌-ಲೈಫ್‌ ಬ್ಯಾಲೆನ್ಸ್‌ ಮಾಡಲು ಕ್ರೇಜಿ ಟಿಪ್ಸ್‌ ನೀಡಿದ್ದಾರೆ. ಇಂದಿನ ಕಾಲಘಟ್ಟದಲ್ಲಿನ ಕೆಲಸದ ಒತ್ತಡದಿಂದಾಗಿ ಕುಟುಂಬದೊಂದಿಗೆ ಮಾತನಾಡಲು ಕೂಡಾ ಸಮಯ ಸಿಗುತ್ತಿಲ್ಲ. ಇದಕ್ಕೆ ಪರಿಹಾರ ಏನಂದ್ರೆ ನೀವು ನಿಮ್ಮ ಸಹದ್ಯೋಗಿಯನ್ನೇ ಮದುವೆಯಾಗಿ, ಇದರಿಂದ ಹಲವಾರು ಪ್ರಯೋಜನಗಳು ಕೂಡ ಇದೆ ಎಂದು ಹೇಳಿಕೊಂಡಿದ್ದಾರೆ.

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ಇದನ್ನೂ ಓದಿ
Image
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
Image
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
Image
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
Image
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ಈ ಕುರಿತ ಪೋಸ್ಟ್‌ ಒಂದನ್ನು ಹರ್ಷಿತ್‌ ತನ್ನ ಲಿಂಕ್ಡ್‌ಇನ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. “ಕೆಲಸದ ಒತ್ತಡದಿಂದಾಗಿ ಕುಟುಂಬದೊಂದಿಗೆ ಮಾತನಾಡಲು ಸಮಯ ಸಿಕ್ತಿಲ್ಲ, ಕೆಲಸ ಬೇಡ ಎಂದು ಬಿಟ್ರೆ ಕುಟುಂಬ ನಮ್ಮೊಂದಿಗೆ ಮಾತನಾಡಲ್ಲ. ಇಂತಹ ಪರಿಸ್ಥಿತಿಯಲ್ಲಿ ವರ್ಕ್‌ಲೈಫ್‌ ಬ್ಯಾಲೆನ್ಸ್‌ಗೆ ನನ್ನ ಕಡೆಯ ಪರಿಹಾರ ಏನಂದ್ರೆ ನೀವು ನಿಮ್ಮ ಸಹದ್ಯೋಗಿಯನ್ನೇ ಮದುವೆಯಾಗಿ. ಇದರಿಂದ ಹಲವಾರು ಪ್ರಯೋಜನಗಳು ಕೂಡಾ ಇವೆ, ಕ್ಯಾಬ್ ವೆಚ್ಚ ಅರ್ಧದಷ್ಟು ಕಡಿಮೆಯಾಗುತ್ತದೆ‌, ಕೆಲಸದ ಸ್ಥಳಗಳಲ್ಲಿ ಆಗುವಂತಹ ವಿವಾಹೇತರ ಸಂಬಂಧಗಳಿಗೆ ಅವಕಾಶ ಇರುವುದಿಲ್ಲ” ಎಂದು ಕೆಲವೊಂದು ವರ್ಕ್‌ ಲೈಫ್‌ ಬ್ಯಾಲೆನ್ಸ್‌ಗಾಗಿ ಕೆಲವೊಂದು ತಮಾಷೆಯ ಟಿಪ್ಸ್‌ ನೀಡಿದ್ದಾರೆ.

ಇದನ್ನೂ ಓದಿ: ಪರೀಕ್ಷೆಗೆ ತಡ ಆಗುತ್ತೆ ಎಂದು ಮಾರು ದೂರ ಓಡಿ ಬಸ್‌ ಹತ್ತಿದ ವಿದ್ಯಾರ್ಥಿನಿ

ಒಂದು ವಾರಗಳ ಹಿಂದೆ ಶೇರ್‌ ಮಾಡಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೊಂದು ಅದ್ಭುತ ತಂತ್ರ, ಮನೆ ಜಗಳಗಳು ಕೆಲಸದ ಸ್ಥಳದಲ್ಲಿ ನಡೆದ್ರೆ ಏನು ಮಾಡೋದಪ್ಪಾʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕಂಪೆನಿ ಹೆಚ್.‌ಆರ್‌ನ್ನು ಮದುವೆ ಆಗ್ಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅದ್ಭುತ ಪರಿಹಾರʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:05 pm, Thu, 27 March 25

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ