Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಮಾಸೆಬೈಲು; ಕೆಸರಿನಲ್ಲಿ ಹೂತುಹೋಗಿದ್ದ ಆಕಳನ್ನು ರಕ್ಷಿಸಿದ ಬೈಕ್​ ಸವಾರರು

Rescue : ಮಳೆಗಾಲವನ್ನು ಆನಂದಿಸುತ್ತ ಅಮಾಸೆಬೈಲಿನ ಕಡೆಗೆ ಹೊರಟಿದ್ದಾರೆ ಈ ಬೈಕರ್​ಗಳು. ಕೆಸರಿನಲ್ಲಿ ಆಕಳೊಂದು ಸಿಲುಕಿರುವುದು ಕಂಡಿದೆ. ತಕ್ಷಣವೇ ಬೈಕ್ ನಿಲ್ಲಿಸಿ ಅದನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಅನ್ನು ಮೂರು ದಿನಗಳ ಹಿಂದೆ ಅಪ್​ಲೋಡ್ ಮಾಡಲಾಗಿದ್ದು ಈತನಕ ಸುಮಾರು 8 ಮಿಲಿಯನ್​ ಜನ ನೋಡಿದ್ದಾರೆ.

Viral Video: ಅಮಾಸೆಬೈಲು; ಕೆಸರಿನಲ್ಲಿ ಹೂತುಹೋಗಿದ್ದ ಆಕಳನ್ನು ರಕ್ಷಿಸಿದ ಬೈಕ್​ ಸವಾರರು
ಅಮಾಸೆಬೈಲಿನ ಬಳಿ ಕೆಸರಿನಲ್ಲಿ ಹೂತುಹೋಗಿದ್ದ ಆಕಳು
Follow us
ಶ್ರೀದೇವಿ ಕಳಸದ
|

Updated on:Aug 12, 2023 | 2:56 PM

Cow : ಎಡೆಬಿಡದೇ ಸುರಿಯುವ ಮಳೆ. ಎಷ್ಟೊತ್ತಿನಿಂದ ಈ ಆಕಳು ಈ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದೆಯೋ ಏನೋ. ಅಂತೂ ಬೈಕ್​ಸವಾರರಿಬ್ಬರು ಇಲ್ಲಿಗೆ ಬಂದು ಬೈಕ್ ನಿಲ್ಲಿಸುತ್ತಾರೆ. ಕೆಸರಿನಲ್ಲಿ ಹುದುಗಿಹೋಗಿರುವ ಆಕಳನ್ನು ಮೇಲಕ್ಕೆತ್ತಿ ನಡೆದು ಹೋಗಲು ಸಹಾಯ ಮಾಡುತ್ತಾರೆ. ಇನ್​ಸ್ಟಾಗ್ರಾಮ್​ನ ಆ್ಯನಿ ಅರುಣ್ ಎನ್ನುವವರು ಈ ರಸ್ತೆ ಮಾರ್ಗವಾಗಿ ಸಾಗುತ್ತಿದ್ದಾಗ ಈ ಆಕಳು ಅವರ ಕಣ್ಣಿಗೆ ಬಿದ್ದಿದೆ. ‘ನಾವು ಅಮಾಸೆಬೈಲು (Amasebailu) ಸುತ್ತಮುತ್ತಲಿನ ದಾರಿಗಳಲ್ಲಿ ಓಡಾಡುತ್ತಿದ್ದಾಗ ರಸ್ತೆಯ ಬದಿಯ ಕೆಸರಿನಲ್ಲಿ ಸಿಕ್ಕಿಬಿದ್ದಿದ್ದ ಹಸುವನ್ನು ಗಮನಿಸಿದೆವು. ನಂತರ ಅದನ್ನ ರಕ್ಷಿಸಿದೆವು. ಹತ್ತಿರದಲ್ಲಿದ್ದ ಮಹಿಳೆಯೊಬ್ಬರು ನಮಗೆ ಕೈಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿದರು. ಒಳ್ಳೆಯ ಮಳೆ ಒಳ್ಳೆಯ ಜನ’ ಎಂದು ಅವರು ಒಕ್ಕಣೆ ಬರೆದು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral Optical Illusion; ಇಲ್ಲಿ ಗೂಬೆಯೊಂದು ಅಡಗಿದೆ, 5 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು 3 ದಿನಗಳ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 8 ಮಿಲಿಯನ್​ ಜನರು ಇದನ್ನು ನೋಡಿದ್ದಾರೆ. 1.3 ಮಿಲಿಯನ್​ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸುತ್ತಿದ್ದಾರೆ. ನೀವು ಅದ್ಭುತವಾದ ಕೆಲಸವನ್ನು ಮಾಡಿದ್ದೀರಿ ಎಂದು ಬೆನ್ನು ತಟ್ಟುತ್ತಿದ್ದಾರೆ. ಪ್ರಾಣಿ ಪಕ್ಷಿಗಳನ್ನು ಈ ಕಾಲದಲ್ಲಿಯೂ ರಕ್ಷಿಸುವವರಿದ್ದಾರೆ ಎಂದರೆ ಮಾನವೀಯತೆ ದಯೆ ಇನ್ನೂ ಉಳಿದಿದೆ ಎಂದು ಕೆಲವರು ಶ್ಲಾಘಿಸಿದ್ದಾರೆ.

ಅಮಾಸೆಬೈಲಿನ ಬಳಿ ಬೈಕರ್​​ಗಳು ಆಕಳನ್ನು ರಕ್ಷಿಸಿದ ವಿಡಿಯೋ ಅನ್ನು ನೋಡಿ

View this post on Instagram

A post shared by AnnyArun (@anny.arun)

ಸೋಡಿಯಮ್​ನ ಕೊರತೆಯಿಂದ ಅದು ಕಸುವು ಕಳೆದುಕೊಂಡಂತಿದೆ, ಬಹುಶಃ ಆಕಳು ಗರ್ಭಧರಿಸಿರಬಹುದು ಎಂದಿದ್ದಾರೆ ಒಬ್ಬರು. ಸೋಡಿಯಂಗೂ ಇದಕ್ಕೂ ಏನೂ ಸಂಬಂಧ ಎಂದು ಮತ್ತೊಬ್ಬರು ಕೇಳಿದ್ದಾರೆ ಅದಕ್ಕೆ ಪ್ರತಿಯಾಗ ಇವರು, ಮಾಂಸಖಂಡಗಳನ್ನು ಬಲಿಷ್ಠಗೊಳಿಸುವಲ್ಲಿ ಸೋಡಿಯಂನ ಪಾತ್ರ ಮುಖ್ಯ ಎಂದಿದ್ದಾರೆ. ನೀವು ಇಲ್ಲಿ ಸಹಾಯಕ್ಕೆ ಬರುತ್ತೀರಿ ಎಂದು ಆಕೆಗೆ ಗೊತ್ತಿತ್ತು ಎನ್ನಿಸುತ್ತದೆ, ನೋಡಿ ಎಷ್ಟು ನಿರಾಳವಾದಳು ನೀವು ಸಹಾಯ ಮಾಡಿದಮೇಲೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral: ಜಪಾನ್; ವಿಶ್ವದ ಅತ್ಯಂತ ದುಬಾರಿ ಖಾದ್ಯ ಸುಶಿಯ ಬೆಲೆ ರೂ 2 ಲಕ್ಷ; ಏನೇನೆಲ್ಲಾ ಇದೆ ಇದರಲ್ಲಿ?

ಬೈಕರ್ಸ್ ಕಮ್ಯೂನಿಟಿ ಯಾವಾಗಲು ಸಹಾಯಹಸ್ತ ಚಾಚುವಲ್ಲಿ ಮುಂದು ಎಂದು ಹೇಳಿದ್ದಾರೆ ಇನ್ನೊಬ್ಬರು. ನಿಮ್ಮ ಬಗ್ಗೆ ನನಗೆ ಮತ್ತಷ್ಟು ಪ್ರೀತಿಯುಂಟಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಒಂದು ಜೀವವನ್ನು ರಕ್ಷಿಸುವುದಕ್ಕಿಂತ ಮಹಾಕಾರ್ಯ ಬದುಕಿನಲ್ಲಿ ಏನೂ ಇಲ್ಲ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನೀವು ಏನು ಹೇಳುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:55 pm, Sat, 12 August 23

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್