AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀ ಬೀಳೋದೇ ಇಲ್ಲ ತಂಗಿ; ಹೇಗಿದೆ ಈ ಅಣ್ಣನ ಕಾಳಜಿ

Brother Sister Love : ತಾನು ಸೈಕಲ್ ಓಡಿಸುವಾಗ ಆಯತಪ್ಪಿ ಬಿದ್ದರೂ ತಂಗಿಗೆ ಏನೂ ಆಗಬಾರದು ಅಥವಾ ಯಾರಾದರೂ ಬಂದು ಸೈಕಲ್​ಗೆ ಹಾದರೂ ತನ್ನ ತಂಗಿಗೆ ಏನೂ ಆಗಬಾರದು. ಹೇಗಿದೆ ಅಣ್ಣನ ಕಾಳಜಿಯ ಪರಿ. ನೋಡಿ ವಿಡಿಯೋ.

ನೀ ಬೀಳೋದೇ ಇಲ್ಲ ತಂಗಿ; ಹೇಗಿದೆ ಈ ಅಣ್ಣನ ಕಾಳಜಿ
ತಂಗಿ ಬೀಳದಂತೆ ಅಣ್ಣ ಗಟ್ಟಿಯಾಗಿ ಬಟ್ಟೆಯಿಂದ ಕಟ್ಟಿ ಸೈಕಲ್​ ಮೇಲೆ ಕರೆದೊಯ್ಯುತ್ತಿರುವುದು
TV9 Web
| Edited By: |

Updated on:Jan 04, 2023 | 2:30 PM

Share

Viral Video : ಚಿಕ್ಕವರನ್ನು ಯಾವ ಪ್ರಯಾಣದಲ್ಲಿಯೂ ಹೀಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗುವುದು ದೊಡ್ಡವರ ಕರ್ತವ್ಯ. ಇಲ್ಲಿರುವ ಅಣ್ಣನೇನು ಅಂಥಾ ದೊಡ್ಡವನಲ್ಲ. ಆದರೂ ತಂಗಿಗಿಂತ ದೊಡ್ಡವನು. ಮೂರು ವರ್ಷವೂ ದಾಟದ ತನ್ನ ತಂಗಿಯನ್ನು ಹೀಗೆ ಸೈಕಲ್​ನ ರಾಡ್​ಗೆ ಕಾಲುಗಳನ್ನು ಕಟ್ಟಿ ಆಕೆ ಸುರಕ್ಷಿತವಾಗಿ ಕುಳಿತುಕೊಳ್ಳುವಂತೆ ಮಾಡಿ ಸೈಕಲ್​ ಓಡಿಸುತ್ತಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ತಂಗಿಯ ಬಗೆಗಿರುವ ಅಣ್ಣನ ಕಾಳಜಿ ಪ್ರೀತಿಯನ್ನು ಕಂಡು ನೆಟ್ಟಿಗರ ಮನ ಕರಗುತ್ತಿದೆ. 22 ಸೆಕೆಂಡುಗಳ ಈ ಪುಟ್ಟ ವಿಡಿಯೋ ಅನ್ನು ಈತನಕ ಸುಮಾರು 14,000 ಜನರು ನೋಡಿದ್ದಾರೆ. ತಂಗಿಯ ಬೆನ್ನ ಹಿಂದೆ ಚೀಲಗಳನ್ನು ಕಟ್ಟಿದ್ದಾನೆ. ಎದೆಗೆ ತನ್ನ ಬೆನ್ನಿದೆ. ಕಾಲುಗಳನ್ನು ಸೈಕಲ್​ ರಾಡಿಗೆ ಕಟ್ಟಿದ್ದಾನೆ. ಅಕಸ್ಮಾತ್ ಬಿದ್ದರೂ ಗಂಭೀರವಾದ ಏಟು ಆಗದ ರೀತಿಯಲ್ಲಿ ಆಕೆಯನ್ನು ಎಲ್ಲಾ ರೀತಿಯಿಂದ ರಕ್ಷಿಸಿದ್ದಾನೆ ಅಣ್ಣ.

ಇದನ್ನೂ ಓದಿ : ನಾಯಿಯ ದಾಳಿಯಿಂದ ತನ್ನ ‘ಅಣ್ಣ’ನನ್ನು ರಕ್ಷಿಸಿದ ಜರ್ಮನ್ ಶೆಫರ್ಡ್​

ಅಪ್ಪ ಅಮ್ಮ ಕೂಲಿ ಮಾಡಿದರೇ ಆ ದಿನ ಹೊಟ್ಟೆ ತುಂಬುತ್ತದೆ. ಹೀಗಿರುವಾಗ ಅವರು ಕೂಲಿಗೆ ಹೊರಟಾಗ ಪುಟ್ಟಮಕ್ಕಳನ್ನು ದೊಡ್ಡಮಕ್ಕಳೇ ನೋಡಿಕೊಳ್ಳಬೇಕಲ್ಲವೆ? ಹಾಗಾಗಿ ಗಂಡುಮಕ್ಕಳಾಗಲಿ, ಹೆಣ್ಣುಮಕ್ಕಳಾಗಲಿ ತಮಗಿಂತ ಚಿಕ್ಕಮಕ್ಕಳನ್ನು ಅಥವಾ ಬೆನ್ನಿಗೆ ಹುಟ್ಟಿದವರನ್ನು ನೋಡಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಹೀಗಿರುವಾಗ ಜವಾಬ್ದಾರಿ ಎನ್ನುವುದು ಎಳವೆಯಲ್ಲಿಯೇ ಅವರಿಗಂಟಿರುತ್ತದೆ. ನಿಮ್ಮ ಸುತ್ತಮುತ್ತಲೂ ಇಂಥ ಅನೇಕ ಕುಟುಂಬಗಳು ವಾಸಿಸುತ್ತಿರುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಅವರ ಇಂಥ ಜೀವನಶೈಲಿ ಕಣ್ಣಿಗೆ ಬೀಳುತ್ತದೆ.

ಇದನ್ನೂ ಓದಿ : ಅಣ್ಣ ಕೊಟ್ಟ ಅಚ್ಚರಿ; ಸ್ಕೂಟಿ ನೋಡಿ ಹನಿಗಣ್ಣಾದ ತಂಗಿ

ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್​ಲೋಡ್ ಮಾಡುವುದರ ಹೊರತಾಗಿಯೂ ಇಂಥವರಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳುವುದು ಮಾನವೀಯತೆ. ಸಹಾಯ ಮಾಡಿದಲ್ಲಿ ಪರಸ್ಪರ ಬೆಳೆಯಬಹುದಲ್ಲವೆ? ಪರರ ಸಂತೋಷದಲ್ಲಿ ನಿಮ್ಮ ಸಂತೋಷವೂ ಇದೆಯಲ್ಲವೆ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:14 pm, Wed, 4 January 23

ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್