AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಸ್​ ನಡೆಯುತ್ತಿದ್ದಾಗ ಹುಲಿಯ ದಾಳಿಗೆ ಈಡಾದ ಇಟಾಲಿಯನ್​ ತರಬೇತುದಾರ; ವಿಡಿಯೋ ವೈರಲ್

Tiger Attack : ಸರ್ಕಸ್​ ಪ್ರದರ್ಶನದ ವೇಳೆ ತನ್ನ ತರಬೇತುದಾರನ ಮೇಲೆಯೇ ಹುಲಿ ದಾಳಿ ಮಾಡಿದೆ. ಮಕ್ಕಳೆಲ್ಲರೂ ಈ ಭಯಾನಕ ದೃಶ್ಯ ನೋಡಿ ಕಂಗಾಲಾಗಿದ್ಧಾರೆ. ನೆಟ್ಟಿಗರಂತೂ ಬೆಚ್ಚಿಬಿದ್ದಿದ್ಧಾರೆ.

ಸರ್ಕಸ್​ ನಡೆಯುತ್ತಿದ್ದಾಗ ಹುಲಿಯ ದಾಳಿಗೆ ಈಡಾದ ಇಟಾಲಿಯನ್​ ತರಬೇತುದಾರ; ವಿಡಿಯೋ ವೈರಲ್
ಇಟಲಿಯ ಸರ್ಕಸ್​ ತರಬೇತುದಾರ ಇವಾನ್​ ಓರ್ಫಿ
TV9 Web
| Updated By: ಶ್ರೀದೇವಿ ಕಳಸದ|

Updated on: Jan 04, 2023 | 5:19 PM

Share

Viral Video : ಪ್ರಾಣಿಗಳನ್ನು ಎಷ್ಟೇ ಪಳಗಿಸಿದರೂ ಅವು ತಮ್ಮ ಸ್ವಭಾವವನ್ನು ಬಿಟ್ಟುಕೊಡಲಾರವು. ಅದರಲ್ಲೂ ವನ್ಯಪ್ರಾಣಿಗಳ ವಿಷಯವಾಗಿ ಇದು ಅಕ್ಷರಶಃ ಸತ್ಯ. ಇದೀಗ ವೈರಲ್ ಆಗಿರುವ ವಿಡಿಯೋ ಇದಕ್ಕೆ ಉದಾಹರಣೆ. ಇಟಾಲಿಯನ್​ ಸರ್ಕಸ್​ ನ ಲೈವ್​ ಷೋನಲ್ಲಿ ಈ ದುರ್ಘಟನೆ ನಡೆದಿದೆ. ತರಬೇತುದಾರ ಇವಾನ್​ ಓರ್ಫೀ ಮೂರು ಹುಲಿಗಳೊಂದಿಗೆ ಪ್ರದರ್ಶನ ಆರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ಹಿಂದಿನಿದ ಬಂದ ಒಂದು ಹುಲಿ ಅವನ ಕಾಲನ್ನು ಹಿಡಿದೆಳೆದಿದೆ.

ಇಟಲಿಯ ಲೆಸ್ಸೆ ಪ್ರಾಂತ್ಯದಲ್ಲಿ ಈ ಸರ್ಕಸ್ ಏರ್ಪಾಡಾಗಿತ್ತು. ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಅನೇಕ ಕಿರಿಯರು ಹಿರಿಯರಿಗೆಲ್ಲ ಈ ಭಯಾನಕ ಘಟನೆ ದುಃಸ್ವಪ್ನದಂತೆ ಭಾಸವಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಬೆಚ್ಚಿ ಬೀಳುತ್ತಿದ್ದಾರೆ.

ಇನ್ನೊಂದು ಹುಲಿಯೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದ 31 ವರ್ಷದ ತರಬೇತುದಾರ ಇವಾನ್​ನ ಹಿಂಬದಿಯಿಂದ ಬಂದ ಹುಲಿ ಸೆಕೆಂಡುಗಳ ಅಂತರದಲ್ಲಿ ಅವನ ಮೇಲೆ ಹಾರಿ ಕಾಲನ್ನು ಕಚ್ಚಿದೆ. ನಂತರ ಕುತ್ತಿಗೆಯನ್ನೂ ಕಚ್ಚಿದೆ. ಸಹಾಯಕರು ಪಂಜರದೊಳಗೆ ರಕ್ಷಣೆಗಾಗಿ ಧಾವಿಸುತ್ತಿದ್ದಂತೆ ಪ್ರೇಕ್ಷಕರ ಕಿರುಚಾಟ ಮುಗಿಲು ತಲುಪಿರುವುದನ್ನು ಈ ವಿಡಿಯೋದಲ್ಲಿ ಗಮನಿಸಬಹುದು.

ಇದನ್ನೂ ಓದಿ : ‘ನಾಗರಾಜ’ನಿಗೆ ಮುತ್ತು ಕೊಟ್ಟ ಸುರೇಶ, ನೆಟ್ಟಿಗರೆಲ್ಲ ಗಡಗಡಗಡಗಡ

ಈತನಕ ಸುಮಾರು 17,000 ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ಧಾರೆ. ಅಲ್ಲದೆ ಸರ್ಕಸ್​ ಕಂಪನಿಯ ಮಾಲೀಕರು ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. ‘ತರಬೇತಿ ಕೌಶಲದಲ್ಲಿ ಪಳಗಿದ ಇವಾನ್​ ಅಚಾನಕ್​ ಆಗಿ ಹುಲಿಯ ದಾಳಿಗೆ ಒಳಗಾಗಿದ್ಧಾರೆ, ಆದರೆ ಅದೃಷ್ಟವಶಾತ್ ಅವರಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗಿಲ್ಲ’ ಎಂದು.

ಇದನ್ನೂ ಓದಿ : ಸಾಕಿದಾಕೆಯ ಕೈಯನ್ನೇ ಕಚ್ಚಿ ದಾಳಿ ಮಾಡಿದ ಹೆಬ್ಬಾವು

ಪ್ರಾಣಿಪ್ರೀತಿಯ ಬಗ್ಗೆ ಜನಸಾಮಾನ್ಯರಿಗೆ ತೋರಿಸಿಕೊಡುವ ಸರ್ಕಸ್​ ಮಂದಿಯ ಜೀವನ ತಂತಿ ಮೇಲಿನ ನಡಿಗೆಯಂತೆಯೇ. ಅವುಗಳನ್ನು ಎಷ್ಟೇ ಪಳಗಿಸಿದರೂ, ಅವುಗಳೊಂದಿಗೆ ಎಷ್ಟೇ ವಿಶ್ವಾಸದಿಂದ ನಡೆದುಕೊಂಡರೂ ಯಾವಾಗ ಏನಾಗುತ್ತದೆಂದು ಹೇಳಲಾಗದು. ಪ್ರಾಣಿಗಳನ್ನು ಪಳಗಿಸುವುದೂ ಒಂದು ಕಲೆ. ಇಂಥ ಸಾಹಸ ಕಲೆಯಲ್ಲಿ ತೊಡಗಿಕೊಳ್ಳುವವರು ಅದೆಷ್ಟು ಧೈರ್ಯದಿಂದ ಕೂಡಿರಬೇಕು!? ಯೋಚಿಸಿ.

ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಸರ್ಕಸ್​ ಪ್ರದರ್ಶನಗಳಲ್ಲಿ ಇವಾನ್​ ತೊಡಗಿಕೊಳ್ಳುತ್ತಾನೆ ಎಂದು ಇಟಾಲಿಯನ್ ಸರ್ಕಸ್ ಕಂಪೆನಿ ತಿಳಿಸಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ