AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಪ್ಪಾ ನನಗೆ ಮುತ್ತು ಕೊಡಪ್ಪಾ….ವೈರಲ್​​​ ಆಗುತ್ತಿದೆ ತಂದೆ ಮಗಳ ಮುದ್ದಾದ ವೀಡಿಯೊ

ಪುಟ್ಟ ಮಗುವೊಂದು ತನ್ನ ತಂದೆಯ ಬಳಿ ಮುತ್ತುಗಳನ್ನು ಕೇಳುವ ಮುದ್ದಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತಂದೆ ಮಗುವಿನ ಪರಿಶುದ್ಧ ಪ್ರೀತಿ ನೋಡುಗರ ಮುಖದಲ್ಲಿ ಕಿರು ನಗೆಯನ್ನು ಮೂಡಿಸಿದೆ.

Viral Video: ಅಪ್ಪಾ ನನಗೆ ಮುತ್ತು ಕೊಡಪ್ಪಾ....ವೈರಲ್​​​ ಆಗುತ್ತಿದೆ ತಂದೆ ಮಗಳ ಮುದ್ದಾದ ವೀಡಿಯೊ
ವೈರಲ್​​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 02, 2023 | 1:26 PM

ಪುಟ್ಟ ಮಕ್ಕಳಿರುವ ಮನೆ ನಂದಗೋಕುಲವಿದ್ದಂತೆ. ಆ ಮನೆಯು ಪ್ರತಿನಿತ್ಯ ಸಂತೋಷದ ವಾತಾವರಣದಿಂದ ಕೂಡಿರುತ್ತದೆ. ಇನ್ನೂ ತಂದೆತಾಯಿಗಳಿಗಂತೂ ತಮ್ಮ ಪುಟ್ಟ ಮಗುವೇ ಪ್ರಪಂಚ. ಮಗುವಿನ ಸಂತೋಷಕ್ಕಾಗಿ ತಮ್ಮ ಕೈಯಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾರೆ. ಮಗುವನ್ನು ಸಂತೋಷವಾಗಿ ನೋಡಿಕೊಳ್ಳಲು ಪೋಷಕರು ತಾವು ಮಕ್ಕಳಂತೆ ವರ್ತಿಸುತ್ತಾರೆ. ಇದೇ ರೀತಿ ಇಲ್ಲೊಂದು ಪುಟ್ಟ ಕಂದಮ್ಮ ತನ್ನ ತಂದೆಯ ಬಳಿ ಕೆನ್ನೆಗೆ ಕೈ ಕಾಲಿಗೆ ಮುತ್ತು ಕೊಡಪ್ಪಾ ಎಂದು ಕೇಳುತ್ತದೆ. ಮುಗುವಿನ ಈ ಮುದ್ದಾದ ಆಜ್ಞೆಯನ್ನು ಪಾಲಿಸುತ್ತಾ ತಂದೆ ಪ್ರೀತಿಯಿಂದ ಮಗುವಿಗೆ ಮುತ್ತುಗಳನ್ನು ನೀಡುತ್ತಾನೆ. ತಂದೆ ಮಗಳ ಈ ವೀಡಿಯೋ ಸಾಮಾಜಿಕ ಜಾಲತಾಣ ಬಳಕೆದಾರರ ಮನಗೆದ್ದಿದೆ.

@TheFigen ಎಂಬ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸೋ ಕ್ಯೂಟ್ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಹಾಸಿಗೆಯ ಮೇಲೆ ತನ್ನ ಮುದ್ದು ಕಂದಮ್ಮನೊಂದಿಗೆ ತಂದೆಯು ಆಟವಾಡುತ್ತಿರುತ್ತಾನೆ. ಆಗ ಮಗು ತನ್ನ ಕಾಲನ್ನು ಎತ್ತಿ ಮುತ್ತು ನೀಡು ಎಂದು ಕೇಳುತ್ತದೆ. ತಂದೆಯು ಮಗುವಿನ ಪುಟ್ಟ ಕಾಲುಗಳಿಗೆ ಪ್ರೀತಿಯ ಮುತ್ತುಗಳನ್ನು ನೀಡುತ್ತಾನೆ. ಹೀಗೆ ಕೈಗಳಿಗೆ ಬೆರಳುಗಳಿಗೆ, ಕೆನ್ನೆಗೆ, ಕಣ್ಣಿಗೆ ಮುತ್ತು ನೀಡು ಎಂದು ಮಗು ಕೇಳುತ್ತದೆ. ಮಗಳ ಈ ಮುದ್ದು ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಾ ತಂದೆಯು ಮಗಳಿಗೆ ಮುತ್ತಿನ ಸುರಿಮಳೆಯನ್ನೇ ನೀಡುವುದನ್ನು ಈ ಮುದ್ದಾದ ವೀಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: Viral: ಗ್ರಾಹಕರ ಹೂಕುಂಡವೇನೋ ಒಡೆಯಿತು, ಡೆಲಿವರಿ ಸಿಬ್ಬಂದಿ ಮುಂದೇನು ಮಾಡಿದ?

ಮೇ 30 ರಂದು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ ಇಲ್ಲಿಯವರೆಗೆ 6.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 71.6 ಸಾವಿರ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳು ಹರಿದುಬಂದಿವೆ. ಒಬ್ಬ ಬಳಕೆದಾರರು ‘ಈ ವಿಡಿಯೋ ನನ್ನ ಹೃದಯವನ್ನು ಕರಗಿಸಿದೆ’ ಎಂದು ಬರೆದುಕೊಂಡಿದ್ದಾರೆ. ಅನೇಕ ಬಳಕೆದಾರರು ತಂದೆ ಮಗುವಿನ ಬಾಂಧವ್ಯದ ಈ ವೀಡಿಯೋ ತುಂಬಾ ಮುದ್ದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್