Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಣ್ಣಿನ ಧೂಳು ಕಂಡು ಆನೆಗೆ ಖುಷಿಯೋ ಖುಷಿ; ಸಂತೋಷಪಟ್ಟ ಪರಿ ಹೇಗಿದೆ ನೋಡಿ

ಚಿಕ್ಕ ಮರಿಗಳಂತೆಯೇ ದೈತ್ಯಾಕಾರದ ಆನೆಗಳೂ ಸಹ ಆಟವಾಡುತ್ತವೆ. ತನ್ನ ಖುಷಿಯನ್ನು ಮಣ್ಣಿನಲ್ಲಿ ಆಟವಾಡುವ ಮೂಲಕ ತೋರಿಸುತ್ತವೆ. ಆನೆಗಳು ನೆಲಕ್ಕೆ ಬಿದ್ದು ಹೊರಳಾಡುತ್ತಾ, ಕಾಲಿನಲ್ಲಿ ಮಣ್ಣನ್ನು ಕಿತ್ತು ಎಸೆಯುತ್ತಾ ಸಂತೋಷ ಹಂಚಿಕೊಳ್ಳುತ್ತಿವೆ.

Viral Video: ಮಣ್ಣಿನ ಧೂಳು ಕಂಡು ಆನೆಗೆ ಖುಷಿಯೋ ಖುಷಿ; ಸಂತೋಷಪಟ್ಟ ಪರಿ ಹೇಗಿದೆ ನೋಡಿ
ಮಣ್ಣಿನ ಧೂಳು ಕಂಡು ಆನೆಗೆ ಖುಷಿಯೋ ಖುಷಿ
Follow us
TV9 Web
| Updated By: shruti hegde

Updated on:Jul 05, 2021 | 9:59 AM

ಆನೆಯ ತುಂಟಾಟದ ದೃಶ್ಯಗಳನ್ನು ನೋಡುವುದೇ ಒಂದು ರೀತಿಯ ಖುಷಿ. ಪ್ರಾಣಿಗಳು ಖುಷಿ ಪಟ್ಟು ಆಡುತ್ತಾ ಸಮಯ ಕಳೆಯುವುದನ್ನು ನೋಡುತ್ತಿದ್ದರೆ ನಮ್ಮ ಸಮಯ ಕಳೆದು ಹೋಗಿರುವುದೇ ಗೊತ್ತಾಗುವುದಿಲ್ಲ. ಅಷ್ಟು ಮನಸ್ಸಿಗೆ ಇಷ್ವಾಗುವಂತಹ ಕೆಲವು ಪ್ರಾಣಿಗಳ ತುಂಟಾಟದ ವಿಡಿಯೋಗಳು ಸಾಮಾಜಿಕ ಜಾತಾಣದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ದೈತ್ಯಾಕಾರದ ಆನೆಗಳು ಮಣ್ಣಿನ ಧೂಳಿನಲ್ಲಿ ಬಿದ್ದು ಹೊರಳಾಡುತ್ತಿರುವ ವಿಡಿಯೋ ನೆಟ್ಟಿಗರ ಮನ ಕದ್ದಿದೆ.

ಆನೆ ಚಿಕ್ಕ ವಯಸ್ಸಿನದ್ದೇ ಆಗಿರಲಿ ಅಥವಾ ದೈತ್ಯಾಕಾರದ ಆನೆಯೇ ಆಗಿರಲಿ.. ಅವುಗಳಿಗೂ ಪುಟ್ಟ ಮನಸ್ಸಿರುತ್ತದೆ. ಅದರಲ್ಲಿಯೂ ಧೂಳಿನ ಮಣ್ಣು, ಕೆಸರು ಕಂಡಾಗಲೆಂತೂ ಅವುಗಳ ಖುಷಿಗೆ ಮಿತಿಯೇ ಇಲ್ಲ. ಚಿಕ್ಕ ಮರಿಗಳಂತೆಯೇ ದೈತ್ಯಾಕಾರದ ಆನೆಗಳೂ ಸಹ ಆಟವಾಡುತ್ತವೆ. ತನ್ನ ಖುಷಿಯನ್ನು ಮಣ್ಣಿನಲ್ಲಿ ಆಟವಾಡುವ ಮೂಲಕ ತೋರಿಸುತ್ತಿದೆ. ನೆಲಕ್ಕೆ ಬಿದ್ದು ಹೊರಳಾಡುತ್ತಾ, ಕಾಲಿನಲ್ಲಿ ಮಣ್ಣನ್ನು ಕಿತ್ತು ಎಸೆಯುತ್ತಾ ಸಂತೋಷ ಹಂಚಿಕೊಳ್ಳುತ್ತಿದೆ.

ಶೆಲ್​ಡ್ರಿಕ್​ ವೈಲ್ಡ್​ಲೈಫ್​ ಟ್ರಸ್ಟ್​ನ ಟ್ವಿಟರ್​​ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ಧೂಳಿನಲ್ಲಿ ಆನೆ ಆಟವಾಡುತ್ತಿರುವುದು ವಿನೋದಮಯವಾಗಿದೆ. ಸೂರ್ಯನ ಶಾಖದಿಂದ ತಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ಅವು ಮಣ್ಣುಗಳಲ್ಲಿ ಹೊರಳಾಡುತ್ತವೆ. ಬೇಕಾದರೆ ಕೀನ್ಯೆಯಿಯನ್ನು(ಆನೆಯ ಹೆಸರು) ಕೇಳಿ! ಎಂದು ವಿಡಿಯೋ ಕ್ಲಿಪ್​ನಲ್ಲಿ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದಂತೆಯೇ 6,200 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ವಿಡಿಯೋ ಕುರಿತಾಗಿ ಕಾಮೆಂಟ್ಸ್​ಗಳನ್ನೂ ಸಹ ಮಾಡಿದ್ದಾರೆ. ಕೆಲವರು ಉಲ್ಲಾಸದ ಪ್ರತಿಕ್ರಿಯೆಯನ್ನು ಹಂಚಿಕೊಳ್ಳುವುದರ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ

Viral Video: ಆಹಾರ ಹುಡುಕುತ್ತಾ ಅಡುಗೆ ಮನೆಗೆ ನುಗ್ಗಿದ ಆನೆಯನ್ನು ನೋಡಿ ಮಹಿಳೆ ಕಂಗಾಲು!

Published On - 9:56 am, Mon, 5 July 21

ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ