AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಗುಳೇದಗುಡ್ಡದ ಖಣ ತೊಟ್ಟುಬಂದ ಜವಾರೀ ನೋಟ್​ಬುಕ್​ಗಳು

Notebooks : ಕೆಲ ಪ್ರಜ್ಞಾವಂತರಾದರೂ ಈ ಉತ್ಪನ್ನಗಳಿಗೆ ಹೊಸ ಆಯಾಮದಲ್ಲಿ ಮಾರುಕಟ್ಟೆ ಸೃಷ್ಟಿಸುತ್ತಿದ್ದಾರೆ, ಪ್ರೋತ್ಸಾಹಿಸುತ್ತಿದ್ದಾರೆ ಎನ್ನುವುದು ಸಮಾಧಾನವೆನ್ನಿಸಿದರೂ ನೇಕಾರಿಕೆಯ ಕುಟುಂಬಗಳಿಗೆ ನಿರೀಕ್ಷಿತ ಆದಾಯ ತರಬಲ್ಲುದೇ?

Viral: ಗುಳೇದಗುಡ್ಡದ ಖಣ ತೊಟ್ಟುಬಂದ ಜವಾರೀ ನೋಟ್​ಬುಕ್​ಗಳು
ಗುಳೇದಗುಡ್ಡ ಖಣಗಳ ಹೊದಿಕೆಯುಳ್ಳ ನೋಟ್​ಬುಕ್​ಗಳು
ಶ್ರೀದೇವಿ ಕಳಸದ
|

Updated on:Jun 16, 2023 | 11:59 AM

Share

Weavers : ಸಭೆ ಸಮಾರಂಭಗಳಲ್ಲಿ ಅತಿಥಿಗಳನ್ನು ಆದರಿಸಲು ಸಾವಿರಾರು ರೂಪಾಯಿಗಳನ್ನು ಹೂಗುಚ್ಛಗಳ ಖರೀದಿಗೆ ವ್ಯಯಿಸುತ್ತೇವೆ. ಕೌಟುಂಬಿಕ ಕಾರ್ಯಕ್ರಮಗಳಲ್ಲಿಯೂ ಸ್ನೇಹಿತರಿಗೆ ಸಂಬಂಧಿಕರಿಗೆ ಉಡುಗೊರೆ ಕೊಡಲು ಅನವಶ್ಯಕವಾಗಿ ಹಣ ಪೋಲು ಮಾಡುತ್ತೇವೆ. ಅದರ ಬದಲಾಗಿ ನೆನಪಿನಲ್ಲಿ ಉಳಿಯುವಂಥ, ಉಪಯುಕ್ತ ಮತ್ತು ಅರ್ಥಪೂರ್ಣ ಉಡುಗೊರೆಗಳನ್ನು ಕೊಡುವುದು ಬಹಳಷ್ಟು ಆಯಾಮಗಳಿಂದ ಸೂಕ್ತ ಎನ್ನಿಸುತ್ತದೆ. ಇದೀಗ ವೈರಲ್ ಆಗಿರುವ ಈ ಟ್ವೀಟ್ ಗಮನಿಸಿ. ಗದುಗಿನಲ್ಲಿರುವ ಐಎಫ್​ಎಸ್ ಅಧಿಕಾರಿ ದೀಪಿಕಾ ಬಾಜಪೇಯಿ (Dipika Bajpai) ಗುಳೇದಗುಡ್ಡ ಖಣಗಳ (Guledagudda Khana) ಹೊದಿಕೆಯನ್ನು ಉಳ್ಳ ನೋಟ್​ಬುಕ್/ಡೈರಿ​ಗಳನ್ನು ಟ್ವೀಟ್​ ಮಾಡಿದ್ದಾರೆ.

ಇಳಕಲ್​ ಸೀರೆ ಮತ್ತು ಗುಳೇದಗುಡ್ಡ ಖಣದ ಮೆರುಗು, ಜವಾರೀತನ ಮತ್ತು ಆಪ್ತತೆಗಾಗಿ ಹೆಣ್ಣುಮಕ್ಕಳು ಹಂಬಲಿಸುತ್ತಾರೆ. ಇನ್ನು ಕೆಲ ಗಂಡಸರು ತನ್ನ ಅಕ್ಕ ತಂಗಿಯನ್ನೋ, ಗೆಳತಿಯನ್ನೋ, ಅಮ್ಮನನ್ನೋ, ಹೆಂಡತಿಯನ್ನೋ ಅಥವಾ ಪ್ರೀತಿಪಾತ್ರರನ್ನೋ ಇಂಥದೊಂದು ಸೀರೆ, ರವಿಕೆಯಲ್ಲಿ ನೋಡಬೇಕು ಎಂದು ಆಶಿಸುತ್ತಾರೆ. ಆದರೂ ಈ ಸೀರೆ ರವಿಕೆಗಳ ವಹಿವಾಟಿನ ಅಂಕಿ ಸಂಖ್ಯೆ ನೋಡಿದಾಗ ಆರಕ್ಕೆ ಏರದು ಮೂರಕ್ಕೆ ಇಳಿಯದು.

ಇದನ್ನೂ ಓದಿ : Viral Video: ಸೋರುತಿಹುದು ರೈಲುಮಾಳಿಗೀ; ವಂದೇಭಾರತ್​ ಪ್ರಯಾಣಿಕರಿಗೆ ಉಚಿತ ಶವರ್

ಇದೀಗ ದೀಪಿಕಾ ಅವರ ಟ್ವೀಟ್​ ಅನ್ನು ಸುಮಾರು 60,000 ಜನರು ನೋಡಿದ್ದಾರೆ. ನೂರಾರು ಜನರು ಈ ಖಣ ನೋಟ್​ಬುಕ್/ಡೈರಿ​ ತಯಾರಕರನ್ನು ಸಂಪರ್ಕಿಸುವುದು ಹೇಗೆ ಎಂದು ಕೇಳಿದ್ದಾರೆ. ಕೆಲ ಪ್ರಜ್ಞಾವಂತರಾದರೂ ಈ ಉತ್ಪನ್ನಗಳಿಗೆ ಹೊಸ ಆಯಾಮದಲ್ಲಿ ಮಾರುಕಟ್ಟೆ ಸೃಷ್ಟಿಸುತ್ತಿದ್ದಾರೆ ಮತ್ತು ಮಾರಾಟಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ ಎನ್ನುವುದು ಒಂದೆಡೆ ಸಮಾಧಾನವೆನ್ನಿಸಿದರೂ ಇದು ನೇಕಾರಿಕೆಯ ಕುಟುಂಬಗಳಿಗೆ ನಿರೀಕ್ಷಿತ ಆದಾಯ ತರಬಲ್ಲುದೇ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತಿದೆ. ಇಂಥ ಕೆಲಸಗಳಿಗೆ ಒಟ್ಟಾಗಿ ಕೈಜೋಡಿಸಬೇಕಲ್ಲವೆ? ವಿವಿಧ ಬಣ್ಣ, ವಿನ್ಯಾಸದ ಡೈರಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:01 am, Fri, 16 June 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ