AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರನೇ ಚಾರ್ಲ್ಸ್ ಪಟ್ಟಾಭಿಷೇಕಕ್ಕೆ ಆಗಮಿಸಿದ ಅಪರಿಚಿತ ಜವರಾಯನೇ?

Grim Reaper : ಚಾರ್ಲ್ಸ್‌ರ ಪಟ್ಟಾಭಿಷೇಕವನ್ನು ಮಿಲಿಯಗಟ್ಟಲೇ ಮಂದಿ ನೋಡಿ ಸಂಭ್ರಮಿಸುತ್ತಿದ್ದ ಗಳಿಗೆಯಲ್ಲೇ… ಭಯಂಕರ ಪ್ರೇತಾಕೃತಿ ಹಿಂದಿನ ಬಾಗಿಲಗುಂಟ ದಾಟಿ ಹೋಯಿತಲ್ಲ! ಇದು ಖಂಡಿತ ಸಾವೇ ಎನ್ನುತ್ತಿದ್ದಾರೆ ಜಗತ್ತಿನ ಜನ.

ಮೂರನೇ ಚಾರ್ಲ್ಸ್ ಪಟ್ಟಾಭಿಷೇಕಕ್ಕೆ ಆಗಮಿಸಿದ ಅಪರಿಚಿತ ಜವರಾಯನೇ?
ಮೂರನೇ ಕಿಂಗ್ ಚಾರ್ಲಸ್​ ಪಟ್ಟಾಭಿಷೇಕ
TV9 Web
| Edited By: |

Updated on:May 08, 2023 | 2:39 PM

Share

Viral News : ನಮ್ಮಲ್ಲಿ ಸಾವಿನ ಅಧಿದೇವತೆಯಾಗಿ ಕೋಣವೇರಿ ಬರುವ ಯಮಧರ್ಮನ ಬಗ್ಗೆ ನಿಮಗೆ ಗೊತ್ತೇ ಇದೆ. ಇನ್ನು ಕೆಲವು ಪಾಶ್ಚಾತ್ಯ ಪುರಾಣಗಳಲ್ಲಿ ಸಾವಿನ ಅಧಿದೇವತೆಯ ರೂಪ ಹೇಗಿರುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿದೆಯೇ? ಸಾವನ್ನು ಉದ್ದನೆಯ ಕೊಯ್ಲುಗತ್ತಿಯನ್ನು ಹಿಡಿದ ಅಸ್ಥಿಪಂಜರದಂತೆಯೋ ಕಪ್ಪು ಬಣ್ಣದ ಮೇಲಂಗಿ ಹಾಗೂ ಗೊರಬು ಧರಿಸಿದ ಮುಖ ಕಾಣದ ಆಕೃತಿಯಂತೆ ಇರುತ್ತದೆ. ಈ ಪ್ರೇತದಂತಹ ಆಕೃತಿಗೆ ‘ಗ್ರಿಮ್ ರೀಪರ್’ ಎನ್ನುತ್ತಾರೆ.

ಮೊನ್ನೆ ಲಂಡನ್ನಿನ ವೆಸ್ಟ್‌ಮಿನ್‌ಸ್ಟರ್‌ ಆಬ್ಬೀಯಲ್ಲಿ ರಾಜಮನೆತನದ ಮೂರನೇ ಚಾರ್ಲ್ಸ್ ಅವರ ಪಟ್ಟಾಭಿಷೇಕ ಬಹು ವಿಜೃಂಭಣೆಯಿಂದ ನಡೆಯಿತಷ್ಟೇ. ಕ್ಯಾಂಟರ್​ಬೆರಿಯ ಆರ್ಚ್‌ಬಿಷಪ್‌ರ ಸಮ್ಮುಖದಲ್ಲಿ ರಾಣಿ ಪತ್ನಿ ಕಮಿಲಾ ಜೊತೆಗೂಡಿ ನಡೆದ ಈ ಚಾರ್ಲ್ಸ್‌ರ ಪಟ್ಟಾಭಿಷೇಕ ಮಹೋತ್ಸವವನ್ನು ಜಗತ್ತಿನಾದ್ಯಂತ ಮಿಲಿಯಗಟ್ಟಲೇ ಮಂದಿ ನೋಡಿ ಸಂಭ್ರಮಿಸುತ್ತಿದ್ದ ಗಳಿಗೆಯಲ್ಲೇ… ಅರೇ! ಇದೇನಿದು? ಒಂದು ಭಯಂಕರ ಪ್ರೇತಾಕೃತಿ ಹಿಂದಿನ ಬಾಗಿಲಗುಂಟ ದಾಟಿ ಹೋಯಿತಲ್ಲ!?

ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

‘ವೆಸ್ಟ್‌ಮಿನ್‌ಸ್ಟರ್ ಆಬ್ಬೀಗೆ ಆಗಮಿಸಿದ ಗ್ರಿಮ್ ರೀಪರ್​ನನ್ನು ಮತ್ತ್ಯಾರಾದರೂ ಗಮನಿಸಿದಿರಾ?’ ಎಂಬ ಒಕ್ಕಣೆಯ ಟ್ವೀಟ್ ಈಗ ಎಲ್ಲೆಡೆ ಹರಿದಾಡುತ್ತಿದೆ. ಹತ್ತಾರು ಸಾವಿರ ಮಂದಿ ಪ್ರತಿಕ್ರಿಯಿಸಿದ್ದಾರೆ. ‘ಇದು ಖಂಡಿತ ಸಾವೇ,’ ಎಂದು ಹಲವರು ಹೇಳಿದ್ದರೆ, ಜನಪ್ರಿಯ ಫ್ಯಾಂಟಸಿ ಸಾಹಿತ್ಯ ಓದುವ ಅಥವಾ ಸಿನೆಮಾ ನೋಡುವ ಹವ್ಯಾಸವಿರುವ ಒಂದಷ್ಟು ಮಂದಿ ಡಾರ್ತ್ ವೇಡರ್, ಹ್ಯಾರಿ ಪಾಟರ್ ಮೊದಲಾದವುಗಳನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಗುಂಗೀಯ ಹುಳ ಬಂದಿತ್ತೇನ ತಂಗಿ?; ಕಣ್ಣಲ್ಲೇ ಕೊಲ್ಲುವ ಪ್ರಾಂಜಲಿ ಶರ್ಮಾ ಬೆಳ್ಳಿತೆರೆಗೆ ಯಾವಾಗ?

ಒಬ್ಬ ಮಾತ್ರ, ‘ಅದು ಮೇಘನ್ ಮರ್ಕಲ್’ ಇರಬೇಕು ಎಂದು ಚಟಾಕಿ ಹಾರಿಸಿದ್ದಾನೆ. ಮೇಘನ್ ಮತ್ತು ರಾಜಕುಮಾರ ಹ್ಯಾರಿ ಸುಮಾರು ಮೂರು ವರ್ಷಗಳ ಹಿಂದೆ ರಾಜಮನೆತನದ ಜವಾಬ್ದಾರಿಗಳನ್ನೂ ಅದರೊಟ್ಟಿಗೆ ಬರುವ ಅಂಕಿತಗಳನ್ನೂ ತೊರೆದದ್ದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು.

ಒಟ್ಟಿನಲ್ಲಿ ಪಟ್ಟಾಭಿಷೇಕದ ಸಂತಸದ ಸಂಭ್ರಮದಲ್ಲಿ ಪ್ರೇತದರ್ಶನವಾದುದು ಯಾರದೋ ಕುಚೇಷ್ಟೆಯೋ? ಕಾಕತಾಳೀಯವೋ? ಅಥವಾ ನಮ್ಮೆಲ್ಲರ ಅಂತಿಮ ಸತ್ಯದ ದರ್ಶನವೋ? ಇದನ್ನು ನೋಡಿ ನಿಮಗೇನೆನ್ನಿಸುತ್ತದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:09 pm, Mon, 8 May 23

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!