Video: ಕಣ್ಣಿಲ್ಲದ ಈ ಕರುವಿಗೆ ಗೋಪಾಲಕ ಕೃಷ್ಣನೆಂದರೆ ಎಷ್ಟು ಇಷ್ಟ ನೋಡಿ
ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಕೆಲವು ಘಟನೆಗಳನ್ನು ನಂಬಲು ಕಷ್ಟವಾಗುತ್ತದೆ. ಕೆಲವೊಮ್ಮೆ ಇದು ನಿಜಾನಾ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಇದೀಗ ಇಲ್ಲೊಂದು ಕಣ್ಣಿಲ್ಲದ ಕರುವೊಂದು ಪ್ರತಿದಿನ ಶ್ರೀಕೃಷ್ಣನ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುವ ಮೂಲಕ ಎಲ್ಲರನ್ನೂ ಅಚ್ಚರಿ ಮೂಡಿಸಿದೆ. ಈ ಮುದ್ದಾದ ಕರುವು ಪ್ರದಕ್ಷಿಣೆ ಹಾಕುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಹೈದರಾಬಾದ್, ಅಕ್ಟೋಬರ್ 21: ನಾವೆಲ್ಲರೂ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದ ಗರ್ಭಗುಡಿ ಸುತ್ತಲೋ ಅಥವಾ ದೇವಾಲಯದ ಆವರಣ ಸುತ್ತಲೋ ಬೆಸಸಂಖ್ಯೆಯಲ್ಲಿ ಪ್ರದಕ್ಷಿಣೆ ಹಾಕ್ತೇವೆ. ಆದರೆ ಈ ಸುದ್ದಿ ಕೇಳಿದ್ರೆ ನೀವು ನಿಮ್ಗೆ ನಂಬೋದಕ್ಕೆ ಕಷ್ಟವಾಗಬಹುದು. ಇಲ್ಲೊಂದು ಕಣ್ಣಿಲ್ಲದ ಕರುವೊಂದು (Blind calf) ಪ್ರತಿನಿತ್ಯ ಶ್ರೀಕೃಷ್ಣನ ವಿಗ್ರಹಕ್ಕೆ ಪ್ರದಕ್ಷಿಣೆ ಬರುವ ಮೂಲಕ ಎಲ್ಲರನ್ನೂ ನಿಬ್ಬೆರಾಗಿಸಿದೆ. ಹೈದರಾಬಾದ್ನ (Hyderabad) ಹೊರವಲಯದ ಬಟಸಿಂಗಾರಂನಲ್ಲಿರುವ ಯುಗತುಳಸಿ ಫೌಂಡೇಶನ್ ಗೋಮಹಾಕ್ಷೇತ್ರದಲ್ಲಿ (Yugatulasi Foundation Gomahakshetra) ಪ್ರತಿದಿನ ಈ ದೃಶ್ಯ ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.
ಪ್ರತಿಷ್ಠಾನದ ಅಧ್ಯಕ್ಷ ಮತ್ತು ಟಿಟಿಡಿ ಮಂಡಳಿಯ ಮಾಜಿ ಸದಸ್ಯ ಕೋಲಿಸೆಟ್ಟಿ ಶಿವಕುಮಾರ್ ಕರುವು ಕೃಷ್ಣನ ವಿಗ್ರಹಕ್ಕೆ ಪ್ರದಕ್ಷಿಣೆ ಬರುವ ದೃಶ್ಯವನ್ನು ಚಿತ್ರೀಕರಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕರುವೊಂದು ಶ್ರೀಕೃಷ್ಣನ ವಿಗ್ರಹಕ್ಕೆ ಪ್ರದಕ್ಷಿಣೆ ಬರುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:Video: ಶೇರಿಂಗ್ ಇಸ್ ಕೇರಿಂಗ್; ಒಂದೇ ತಟ್ಟೆಯಲ್ಲಿ ಪುಂಗನೂರು ಕರುವಿನೊಂದಿಗೆ ಊಟ ಮಾಡಿದ ಮಾಲೀಕ
ಕಳೆದ ಎರಡು ವರ್ಷಗಳ ಹಿಂದೆ, ಕಸಾಯಿಖಾನೆಗೆ ಕರೆದೊಯ್ಯುತ್ತಿದ್ದ ಹಸುವನ್ನು ನಾವು ರಕ್ಷಿಸಿದ್ದೇವೆ. ಈ ಹಸು ಕೆಲವೇ ದಿನಗಳಲ್ಲಿ ಈ ಕರುವಿಗೆ ಜನ್ಮ ನೀಡಿತು. ಈ ಕರುವಿಗೆ ಸಂಧ್ಯಾ ಎಂದು ನಾಮಕರಣ ಮಾಡಿದೆವು. ಈ ಕುರುಡು ಕರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸುಮಾರು 15 ನಿಮಿಷಗಳ ಕಾಲ ಗೋಮಹಾ ಕ್ಷೇತ್ರದಲ್ಲಿರುವ ಕೃಷ್ಣನ ಪ್ರತಿಮೆಗೆ ಪ್ರದಕ್ಷಿಣೆ ಬರುತ್ತದೆ. ಈ ಕರುವಿಗೆ ಯಾರು ತರಬೇತಿ ನೀಡಿಲ್ಲ ಎಂದು ಪ್ರತಿಷ್ಠಾನದ ಅಧ್ಯಕ್ಷ ಮತ್ತು ಟಿಟಿಡಿ ಮಂಡಳಿಯ ಮಾಜಿ ಸದಸ್ಯ ಕೋಲಿಸೆಟ್ಟಿ ಶಿವಕುಮಾರ್ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Tue, 21 October 25








