AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಚ್ಚಾ ಬಾದಾಮ್​ ಖ್ಯಾತಿಯ ಬುಬನ್​ ಬಡ್ಯಾಕರ್​ಗೆ ಅಪಘಾತ: ಆಸ್ಪತ್ರೆಗೆ ದಾಖಲು

ರಾತ್ರಿ ಬೆಳಗಾಗುವಷ್ಟರಲ್ಲಿ ಕಚ್ಚಾ ಬಾದಾಮ್​ ಹಾಡಿನ ಮೂಲಕ ಹೊಸ ಸೆನ್ಸೇಷನ್​ ಹುಟ್ಟುಹಾಕಿದ ಗಾಯಕ ಬುಬನ್​ ಬಡ್ಯಾಕರ್​ ಕಾರು ಅಪಘತಾದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಚ್ಚಾ ಬಾದಾಮ್​ ಖ್ಯಾತಿಯ ಬುಬನ್​ ಬಡ್ಯಾಕರ್​ಗೆ ಅಪಘಾತ: ಆಸ್ಪತ್ರೆಗೆ ದಾಖಲು
ಕಚ್ಚಾ ಬಾದಾಮ್​ ಗಾಯಕ
TV9 Web
| Updated By: Pavitra Bhat Jigalemane|

Updated on:Mar 01, 2022 | 1:21 PM

Share

ರಾತ್ರಿ ಬೆಳಗಾಗುವಷ್ಟರಲ್ಲಿ ಕಚ್ಚಾ ಬಾದಾಮ್(Kacha Badam) ಹಾಡಿನ ಮೂಲಕ ಹೊಸ ಸೆನ್ಸೇಷನ್​ ಹುಟ್ಟುಹಾಕಿದ ಗಾಯಕ ಬುಬನ್​ ಬಡ್ಯಾಕರ್(Buban Badykar)​ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಬನ್ ಇತ್ತೀಚೆಗೆ ಸೆಕೆಂಡ್​ ಹ್ಯಾಂಡ್​ ಕಾರ್​ ಖರೀದಿಸಿದ್ದು, ಅದನ್ನು ಕಲಿಯುತ್ತಿರುವಾಗ ಅಪಘಾತಕ್ಕೀಡಾಗಿದ್ದಾರೆ. ಬುಬನ್​ ಅವರು ಎದೆಯ ಭಾಗದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಬುಬನ್​ ಅವರನ್ನು ಸದ್ಯ ಸುರಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಬನ್​ ಬಡ್ಯಾಕರ್​ ಪಶ್ಚಿಮ ಬಂಗಾಳ ಮೂಲದ ಬಿರ್ಭೂಮ್ ಗ್ರಾಮದ ಕಡಲೆಕಾಯಿ ವ್ಯಾಪಾರಿ. ಕಡಲೆಕಾಯಿ ಮಾರಾಟ ಮಾಡುವ ವೇಳೆ ಕಚ್ಚಾ ಬಾದಾಮ್​ ಹಾಡನ್ನುಹಾಡಿ ತಾವು ತಂದಿರುವ ಕಡಲೆಕಾಯಿಯನ್ನು ಕೊಳ್ಳುವಂತೆ ಹೇಳುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರು ಹಾಡು ಕಚ್ಚಾ ಬಾದಾಮ್​ ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಬುಬನ್​ ಅವರ ಹಾಡಿನ ಸಾಲಿಗೆ ರಿಮಿಕ್ಸ್​ ಹಾಕಿದ ನಂತರವಂತೂ ಇನ್ಸ್ಟಾಗ್ರಾಮ್​ನಲ್ಲಿ ಕಚ್ಚಾ ಬಾದಾಮ್​ ಹಾಡಿನ ರೀಲ್ಸ್​​ಗಳದ್ದೇ ಕಾರುಬಾರಾಗಿತ್ತು.  ರಿಮಿಕ್ಸ್​​ ವಿಡಿಯೋವನ್ನು ಯುಟ್ಯೂಬ್​ನಲ್ಲಿ ಹಂಚಿಕೊಂಡ ಮೇಲೆ 50 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದು ನೆಟ್ಟಿಗರ  ಮನ ಗೆದ್ದಿತ್ತು.

ಬುಬನ್​ ತನ್ನ ಪತ್ನಿ ಮತ್ತು ಮಗನನ್ನು ಕಡಲೆಕಾಯಿ ಮಾರಾಟ ಮಾಡಿ ಸಾಕುತ್ತಿದ್ದರು. ಇವರ ಹಾಡು ವೈರಲ್​ ಆಗುತ್ತಿದ್ದಂತೆ ಸ್ಟಾರ್ ನಟ ನಟಿಯರೂ ಕೂಡ ಇವರ ಹಾಡಿಗೆ ರೀಲ್ಸ್​ ಮಾಡಿದ್ದು, ಈಗ ಬುಬನ್​ ಅವರ ಲುಕ್​ ಬದಲಾಗಿದೆ. ಪ್ರತಿದಿನ 3 ರಿಂದ 4 ಕೆಜಿ ಕಡಲೆಕಾಯಿಯನ್ನು ಮಾರಾಟ ಮಾಡಿ 200 ರಿಂದ 250 ರೂ ದುಡಿಯುತ್ತಿದ್ದ ಬುಬನ್​ ಅವರೂ ಕೂಡ ದೊಡ್ಡ ಸ್ಟಾರ್​ ಆಗಿದ್ದಾರೆ.  ಸದ್ಯ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:

Video: ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ ಯುಎಸ್​​ನಲ್ಲಿ ಭರ್ಜರಿ ಮಾರಾಟವಾಗ್ತಿದೆ ರಷ್ಯಾ ವೋಡ್ಕಾ; ಚರಂಡಿ ತುಂಬಿ ಹರಿಯುತ್ತಿದೆ !

Published On - 9:37 am, Tue, 1 March 22

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!