AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾನ್ಸರ್​​ನಿಂದ ಕಾಪಾಡಿದ ವೈದ್ಯರಿಗೆ ತನ್ನ ಕೈಯಾರೆ ಮಾಡಿ ಉಡುಗೊರೆ ನೀಡಿದ ಪುಟ್ಟ ಹುಡುಗಿ

ವೈದ್ಯರು ಮತ್ತು ರೋಗಿಗಳ ನಡುವೆ ಒಂದು ಆತ್ಮೀಯ ಸಂಬಂಧ ಬೆಳದಾಗ ಮಾತ್ರ ಆತನಲ್ಲಿ ರೋಗವನ್ನು ಗುಣಮಾಡಿಕೊಳ್ಳವ ಧೈರ್ಯ ಬರುವುದು. ಔಷಧಿಗಿಂತ, ಆತನಲ್ಲಿ ಮುಖ್ಯವಾಗಿ ಒಂದು ನಂಬಿಕೆ ಹಾಗೂ ಧೈರ್ಯ ಬರಬೇಕು. ಇದಕ್ಕೆ ಉದಾಹರಣೆಯಾಗಿ ಈ ವಿಡಿಯೋ ಇದೆ. ಪುಟ್ಟ ಬಾಲಕಿಯ ಕ್ಯಾನ್ಸರ್​​ ಗುಣ ಮಾಡಿದ ವೈದ್ಯರಿಗೆ ಎಂದು ಮರೆಯದ ಉಡುಗೊರೆಯನ್ನು ಆ ಪುಟ್ಟ ಮಗು ನೀಡಿದೆ. ಈ ಬಗ್ಗೆ ವೈದ್ಯರು ಭಾವುಕ ಪೋಸ್ಟ್​​​ವೊಂದನ್ನು ಹಾಕಿಕೊಂಡಿದ್ದಾರೆ.

ಕ್ಯಾನ್ಸರ್​​ನಿಂದ ಕಾಪಾಡಿದ ವೈದ್ಯರಿಗೆ ತನ್ನ ಕೈಯಾರೆ ಮಾಡಿ ಉಡುಗೊರೆ ನೀಡಿದ ಪುಟ್ಟ ಹುಡುಗಿ
ವೈರಲ್​​ ಪೋಸ್ಟ್
ಸಾಯಿನಂದಾ
| Edited By: |

Updated on:Aug 02, 2025 | 6:24 PM

Share

ವೈದ್ಯರು (doctor) ಮಾಡುವ ಒಂದೊಂದು ಕೆಲಸವೂ ನಮ್ಮ ಹೃದಯವನ್ನು (heartfelt story) ಮುಟ್ಟುತ್ತದೆ. ವೈದ್ಯರು ಜೀವ ಹಾಗೂ ಜೀವನವನ್ನು ಕಾಪಾಡುವ ದೇವರು. ಒಬ್ಬ ವ್ಯಕ್ತಿಯ ಜೀವವನ್ನು ಕಾಪಾಡಲು ಏನೆಲ್ಲ ಕಷ್ಟಪಡುತ್ತಾರೆ. ಇಂತಹ ವೈದ್ಯರಿಗೆ ಹೇಗೆ ಧನ್ಯವಾದ ಹೇಳಿದ್ರು ಸಾಲುವುದಿಲ್ಲ. ವೈದ್ಯರು ಮಾಡಿದ ಸಹಾಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವೈದ್ಯರು ಕೂಡ ಅಷ್ಟೇ ರೋಗಿಗಳ ಮೇಲೆ ಕಾಳಜಿ ಹಾಗೂ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ. ಇದೀಗ ಇಂತಹದೇ ಒಂದು ಘಟನೆ ನಡೆದಿದೆ. ಪುಟ್ಟ ಹುಡುಗಿ ತನ್ನ ಜೀವ ಕಾಪಾಡಿದ ವೈದ್ಯರಿಗೆ ತನ್ನ ಕೈಯಾರೆ ಮಾಡಿದ ಗಿಫ್ಟ್​​​ ನೀಡಿದ್ದಾಳೆ. ಈ ಬಗ್ಗೆ ವೈದ್ಯರು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ  ಭಾರೀ ವೈರಲ್​ ಆಗಿದೆ. ಛತ್ತೀಸ್‌ಗಢದ ಮಕ್ಕಳ ವೈದ್ಯರಾದ ಡಾ. ತನ್ಮಯ್ ಮೋತಿವಾಲಾ ಅವರು ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಪುಟ್ಟ ಹುಡುಗಿಯ ಅನಿರೀಕ್ಷಿತ ಮತ್ತು ಅತ್ಯಂತ ಹೃದಯಸ್ಪರ್ಶಿ ಉಡುಗೊರೆ ಪಡೆದು ಈ ಭಾವುಕ ಪೋಸ್ಟ್​​ನ್ನು ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ.

ಡಾ. ತನ್ಮಯ್ ಮೋತಿವಾಲಾ ಅವರ ಮದುವೆಗೆ ಬರಲು ಸಾಧ್ಯವಾಗದ ಕಾರಣ ಈ ಪುಟ್ಟ ಹುಡುಗಿ ತಾನೇ ಕೈಯಿಂದ ಮಾಡಿದ ಉಡುಗೊರೆಯನ್ನು ನೀಡಿದ್ದಾಳೆ. ಈ ಬಗ್ಗೆ ಎಕ್ಸ್​​ನಲ್ಲಿ ವಿವರಿಸಿದ್ದಾರೆ. ‘ನನ್ನ ಹೃದಯ ತುಂಬಿ ಬಂದಿದೆ. ಇಂದು ಸಂತೋಷದ ಕಣ್ಣೀರು ಬಂತು. ನನಗೆ ತುಂಬಾ ಖುಷಿ ನೀಡಿದ ಉಡುಗೊರೆ ಒಂದು ನಮ್ಮ ಮನೆಗೆ ಬಂದಿತು. ನಾನು ಅವಳನ್ನು ನನ್ನ ಮದುವೆಗೆ ಆಹ್ವಾನಿಸಿದ್ದೆ ಆದರೆ ಅವಳಿಗೆ ಮದುವೆಗೆ ಬರಲು ಸಾಧ್ಯವಾಗಿಲ್ಲ. ಬದಲಾಗಿ, ಅವಳು ನನಗೆ ಸುಂದರವಾದ ತಾನೇ ಕೈಯಾರ ಮಾಡಿದ ಉಡುಗೊರೆಗಳನ್ನು ಕಳುಹಿಸಿದಳು. ಖುಷಿ ನನ್ನ ರೋಗಿ, ಆದರೆ ಅದಕ್ಕಿಂತ ಹೆಚ್ಚಾಗಿ, ಅವಳು ಆತ್ಮೀಯ ಸ್ನೇಹಿತೆ. ಧೈರ್ಯಶಾಲಿ ಕ್ಯಾನ್ಸರ್ ನಿಂದ ಬದುಕುಳಿದವಳು. ಜೀವನದ ಬಗ್ಗೆ ನನಗೆ ಎಂದಿಗಿಂತಲೂ ಹೆಚ್ಚು ಕಲಿಸಿದ ಮಗು’ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ಇಲ್ಲಿನ ಜನರು ವಾರಕ್ಕೊಮ್ಮೆ ಈ ರೀತಿ ಮಾಡಿ ಒತ್ತಡಕ್ಕೆ ಬ್ರೇಕ್ ಹಾಕಿಕೊಳ್ತಾರೆ
Image
ಭಾರತೀಯ ಕಾರು ಚಾಲಕರೆಲ್ಲರೂ ಹೀಗೆನಾ, ವಿದೇಶಿಗ ಹೀಗೆಂದಿದ್ದೇಕೆ?
Image
ರಸ್ತೆ ಬದಿಯಲ್ಲಿ ಡ್ಯಾನ್ಸ್ ಮಾಡ್ತಿದ್ದ ವಿದೇಶಿಗ ಅರೆಸ್ಟ್
Image
ಉತ್ತರ ಕರ್ನಾಟಕದ ರೊಟ್ಟಿ ಸವಿಯಲು ಅಮೆರಿಕದಿಂದ ಬೆಂಗಳೂರಿಗೆ ಬರುವ ಉದ್ಯಮಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಡಾ. ಮೋತಿವಾಲಾ ಉಡುಗೊರೆಗಳ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಅವಳ ಜತೆಗೆ ಕಳೆದ ದಿನಗಳನ್ನು ಕೂಡ ನೆನಪಿಸಿಕೊಂಡರು. ಅವಳ ಜತೆಗಿನ ಕಳೆದು ನಗು, ಜತೆಗೆ ಆಟವಾಡಿದ ಕ್ಷಣ ಎಲ್ಲವೂ ನನ್ನ ಮುಂದೆ ಬಂತು. DONKEY = TANMAY ಎಂಬ ಕಥೆಗಳು, ನಂತರ ಅದು ನಮ್ಮ ಅಡ್ಡಹೆಸರಾಗಿ ಬದಲಾಗಿದೆ ಎಂದು ಹೇಳಿಕೊಂಡಿದ್ದಾರೆ. 2022ರಲ್ಲಿ ಆಕೆ ನಮ್ಮ ಆಸ್ಪತ್ರೆಗೆ ಕ್ಯಾನ್ಸರ್​​ ರೋಗಿಯಾಗಿ ಬಂದಿದ್ದಳು. ಎದೆಯಲ್ಲಿ ಗೆಡ್ಡೆಯಾಗಿ, ಭಾರದ ಹೃದಯದಿಂದ ಆಸ್ಪತ್ರೆಗೆ ಬಂದಿದ್ದಳು ಈ ಐದು ವರ್ಷದ ಖುಷಿ. ನಾನು ಅವಳೊಂದಿಗೆ ಮಾತನಾಡಲು, ತಮಾಷೆ ಮಾಡಲು, ನನ್ನ ಫೋನ್‌ನಲ್ಲಿ ಕಾರ್ಟೂನ್‌ಗಳನ್ನು ತೋರಿಸಲು, ಅವಳಿಗೆ ಕಚಗುಳಿ ಇಡಲು ಒಂದು ಗಂಟೆ ಅಲ್ಲಿ ಕುಳಿತಿದ್ದೆ. ಸಮಯ ಕಳೆದಂತೆ ಬಾಂಧವ್ಯ ಬೆಳೆಯಿತು. ಈ ಸಮಯದಲ್ಲಿ ಅವಳ ಕೀಮೋಥೆರಪಿ ಪ್ರಾರಂಭವಾಯಿತು.

ಇದನ್ನೂ ಓದಿ: ವಿಮಾನದಲ್ಲಿ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಸಹ ಪ್ರಯಾಣಿಕ, ಹಲ್ಲೆಗೊಳಗಾದ ವ್ಯಕ್ತಿ ನಾಪತ್ತೆ

ಕಾಲಾನಂತರದಲ್ಲಿ ನಾನು ಸಂಜೆ ಆಸ್ಪತ್ರೆಗೆ ಬರುವಾಗ ನಮ್ಮ ಕೈಹಿಡಿದು ಮಾತನಾಡಿಸುತ್ತಾಳೆ. ನಾನು ಕೆಲಸ ಮಾಡುವಾಗ ಅವಳು ನನ್ನ ಇಯರ್‌ಫೋನ್‌ಗಳನ್ನು ಬಳಸಿ ಹಾಡುಗಳನ್ನು ಕೇಳುತ್ತಿದ್ದಳು ಎಂದು ವೈದ್ಯರು ನೆನಪಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ಸಮಸ್ಯೆ ಇದ್ದರು ಆಕೆ ಎಲ್ಲವನ್ನು ಎದುರಿಸಿ ನಿಂತಳು, ಜೀವನದಲ್ಲಿ ಹೋರಾಡುವ ಕಲೆಯನ್ನು ಆಕೆ ನನಗೆ ಕಲಿಸಿದ್ದಳು. ಏನೇ ಆಗಲಿ ಆ ನಗುವನ್ನು ಎಂದಿಗೂ ಬಿಟ್ಟುಕೊಡಬಾರದು. ವೈದ್ಯರು-ರೋಗಿಗಳ ಬಾಂಧವ್ಯವು ಪರೀಕ್ಷೆಗಳು, ಶಸ್ತ್ರಚಿಕಿತ್ಸೆಗಳು ಮತ್ತು ಬಿಲ್‌ಗಳನ್ನು ಮೀರಿದ್ದು ಎಂದು ಆಕೆ ಕಲಿಸಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಈ ಪೋಸ್ಟ್​​ ಎಲ್ಲ ಕಡೆ ವೈರಲ್​​ ಆಗಿದ್ದು, ಅನೇಕರು ಕಮೆಂಟ್​​ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Sat, 2 August 25

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ