AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಬೇಜ್​ ಜಾಕೇಟ್​? ರೂ. 60,000 ಬೆಲೆಯ ಡೀಸಲ್​ನ ಹೊಸ ಜಾಕೆಟ್​ ಬಗ್ಗೆ ಭಾರೀ ಚರ್ಚೆ

Jacket : ಕ್ಯಾಬೇಜಿನ ಎಲೆಗಳಂತೆ ಕಾಣುತ್ತಿರುವ ಈ ಜಾಕೆಟ್ಟಿಗೆ ರೂ. 60,000? ಎಂದು ಕೆಲವರು. ಇದೇ ಹಣದಲ್ಲಿ ಆ್ಯಕ್ಟಿವಾ ಗಾಡಿ ಬರುತ್ತದೆ ಎಂದು ಹಲವರು. ಇದರ ವಿನ್ಯಾಸಕರು ಬಾಬಾ ರಾಮ್​ದೇವ್​ ಆಗಿರಬಹುದೆ, ಮೀಮ್​ಗಳನ್ನು ನೆನಪಿಸಿಕೊಳ್ಳಿ.

ಕ್ಯಾಬೇಜ್​ ಜಾಕೇಟ್​? ರೂ. 60,000 ಬೆಲೆಯ ಡೀಸಲ್​ನ ಹೊಸ ಜಾಕೆಟ್​ ಬಗ್ಗೆ ಭಾರೀ ಚರ್ಚೆ
ರೂ. 60,000 ಬೆಲೆಬಾಳುವ ಡೀಸಲ್​ನ ಹೊಸ ಜಾಕೆಟ್​
TV9 Web
| Edited By: |

Updated on:Jan 06, 2023 | 6:13 PM

Share

Viral News: ಡೀಸಲ್ ಬ್ರ್ಯಾಂಡ್​ ಹೊಸ ಜಾಕೆಟ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ರೂ. 60,000 ಬೆಲೆಯುಳ್ಳ ಈ ಜಾಕೆಟ್​ನ ವಿನ್ಯಾಸ ನೋಡಿದ ನೆಟ್ಟಿಗರು, ಇದೇನು ಕ್ಯಾಬೇಜ್​ನಂತೆ ಕಾಣುತ್ತಿದೆ. ಇದು ಹೊಸ ಫ್ಯಾಷನ್ನಾ? ಎಂದು ಕೇಳುತ್ತಿದ್ದಾರೆ. ಜಾಕೆಟ್​ನ ಬೆಲೆ ಇಷ್ಟು ದುಬಾರಿಯಾಗಿದ್ದರೂ ವಿನ್ಯಾಸ ಮಾತ್ರ ಇಷ್ಟೊಂದು ಅನಾಕರ್ಷಕವಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಜಾಕೆಟ್​ ಕ್ಯಾಬೇಜ್​ನಂತೆ ಕಾಣಲು ರೂ. 60,000 ತೆರಬೇಕೆ? ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋ ಟ್ವೀಟ್ ಮಾಡಲಾಗಿದೆ. ಮೂರು ದಿನಗಳ ಹಿಂದೆ ಅಪ್​ಲೋಡ್ ಮಾಡಲಾದ ಈ ಪೋಸ್ಟ್​ ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ಬೆಲೆಯಲ್ಲಿ ಆ್ಯಕ್ಟಿವಾ ಗಾಡಿ ಖರೀದಿಸಬಹುದಿತ್ತು. ಯಾರು ಇಷ್ಟು ದುಬಾರಿ ಜಾಕೆಟ್​ ಖರೀದಿಸುತ್ತಾರೆ? ಎಂದು ಕೇಳುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : ದುಬಾರಿ ಬೈಕ್ ಮೇಲೆ ಹಾಲು ಮಾರುವವನ ಸವಾರಿ; ದುಡಿದದ್ದೆಲ್ಲ ಪೆಟ್ರೋಲಿಗೆ ಎನ್ನುತ್ತಿರುವ ನೆಟ್ಟಿಗರು

ರೂ. 2,000 ಬೆಲೆಯ ಜಾಕೆಟ್​ ಇದು, ಉಳಿದದ್ದು ರೂ. 58,000 ಬ್ರ್ಯಾಂಡಿಂಗ್​. ನೋಡಿ ಬ್ರ್ಯಾಂಡ್ ಹೇಗೆ ಕೆಲಸ ಮಾಡುತ್ತದೆ ಎಂದಿದ್ದಾರೆ ಒಬ್ಬರು. ಕ್ಯಾಬೇಜ್​ನ ಎಲೆಗಳು ಕೂಡ ತಾಜಾತನದಿಂದ ಕೂಡಿಲ್ಲವಲ್ಲ ಎಂದಿದ್ದಾರೆ ಮತ್ತೊಬ್ಬರು. ಇದರ ಬದಲಾಗಿ ಆದಿಮಾನವನಂತೆ ಎಲೆ ಹೊದ್ದುಕೊಂಡಿರುವುದು ಉತ್ತಮ ಎಂದಿದ್ಧಾರೆ ಮಗದೊಬ್ಬರು.

ನಿಮ್ಮ ಅಭಿಪ್ರಾಯವೇನು ಈ ವಿಷಯವಾಗಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:56 pm, Fri, 6 January 23

Follow Us
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ