AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟಿಷ್​ ಕೌನ್ಸಿಲ್​ನ ಕೆಲಸ ತೊರೆದು ಕನಸಿನ ಟೀ ಸ್ಟಾಲ್ ತೆರೆದ ದೆಹಲಿಯ ಮಹಿಳೆ

Tea Stall : ಎಂ ಎ ಇಂಗ್ಲಿಷ್​ ಓದಿ ಇಂಥಾ ಕೆಲಸ ಯಾಕೆ ಮಾಡಬೇಕು? ಇಂಥವರಿಗೆ ಪ್ರಚಾರ ಕೊಟ್ಟು ಅಸಂಘಟಿತ ವ್ಯವಹಾರ ವಲಯವನ್ನು ಪ್ರೋತ್ಸಾಹಿಸುತ್ತಿದ್ದೀರಿ. ಇದು ದೇಶದ ಆರ್ಥಿಕತೆಗೆ ನಷ್ಟ ತರುತ್ತದೆ ಎಂದಿದ್ದಾರೆ ನೆಟ್ಟಿಗರೊಬ್ಬರು.

ಬ್ರಿಟಿಷ್​ ಕೌನ್ಸಿಲ್​ನ ಕೆಲಸ ತೊರೆದು ಕನಸಿನ ಟೀ ಸ್ಟಾಲ್ ತೆರೆದ ದೆಹಲಿಯ ಮಹಿಳೆ
ದೆಹಲಿಯ ಶರ್ಮಿಷ್ಠಾ ಘೋಷ್​ ತನ್ನ ಚಹಾದ ಅಂಗಡಿಯ ಜೊತೆ
TV9 Web
| Edited By: |

Updated on:Jan 16, 2023 | 6:30 PM

Share

Viral News : ಎಂಬಿಎ, ಎಂಜಿನಿಯರಿಂಗ್, ಬಿಬಿಎ ಓದಿದ ಅನೇಕರು ಟೀ ಸ್ಟಾಲ್​ ತೆರೆದ ಸುದ್ದಿಗಳನ್ನು ಇದೇ ತಾಣದಲ್ಲಿ ಓದಿದ್ದೀರಿ. ಈಗ ಇವರ ಸಾಲಿಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ಇಂಗ್ಲಿಷ್​ನಲ್ಲಿ ಎಂ.ಎ ಮಾಡಿ ಬ್ರಿಟಿಷ್ ಕೌನ್ಸಿಲ್​ನಲ್ಲಿ ಉದ್ಯೋಗಿಯಾಗಿದ್ದ ಇವರು ತಮ್ಮ ಕನಸಿನ ಟೀ ಸ್ಟಾಲ್​ ತೆರೆಯಲೆಂದೇ ಈ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಚಹಾ ಅಂಗಡಿ ನಡೆಸುವಲ್ಲಿ ಬಿಝಿಯಾಗಿದ್ಧಾರೆ. ಲಿಂಕ್ಡ್​ಇನ್​ನಲ್ಲಿ ಈ ಪೋಸ್ಟ್​ ವೈರಲ್ ಆಗುತ್ತಿದೆ.

Viral News MA Graduated woman quits job at British council to run a tea stall in Delhi

ಶರ್ಮಿಷ್ಠಾ ಘೋಷ್,​ ದೆಹಲಿಯ ಕಾಂಟ್ಸ್​ ಗೋಪಿನಾಥ್ ಬಜಾರ್​ನಲ್ಲಿ (Delhi Cantt’s Gopinath Bazar) ಟೀ ಸ್ಟಾಲ್​ ನಡೆಸುತ್ತಿದ್ಧಾರೆ. ನಿವೃತ್ತ ಬ್ರಿಗೇಡಿಯರ್​, ಇಂಡಿಯನ್ ಆರ್ಮಿ ಸಂಜಯ್​ ಖನ್ನಾ ಇವರ ಕುರಿತು ಲಿಂಕ್ಡ್​ಇನ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಂಜೆ ಚಹಾ ಕುಡಿಯಲೆಂದು ಈ ರಸ್ತೆಗೆ ಬಂದಾಗ ಇಂಗ್ಲಿಷ್​ನಲ್ಲಿ ಮಾತನಾಡುತ್ತಾ ಚುರುಕಾಗಿ ಅಂಗಡಿ ನಡೆಸುತ್ತಿದ್ದ ಈ ಯುವತಿ ಕಣ್ಣಿಗೆ ಬಿದ್ದಳು. ಮಾತನಾಡಿಸುತ್ತಾ ಆಕೆಯ ಬಗ್ಗೆ ವಿಚಾರಿಸಿದೆ. ತನ್ನ ಹೆಸರು ಶರ್ಮಿಷ್ಠಾ ಘೋಷ್​ ಎಂದಳು. ತನ್ನ ಸ್ನೇಹಿತೆ ಭಾವನಾ ರಾವ್​ ಜೊತೆ ಸೇರಿ ಈ ಚಹಾ ಅಂಗಡಿ ನಡೆಸುತ್ತಿರುವುದಾಗಿ ಹೇಳಿದಳು. ಭಾವನಾ ಲುಫ್ತಾನ್ಸಾದ ಉದ್ಯೋಗಿಯಾಗಿದ್ದು ಈಕೆಯದು ಈ ಸಣ್ಣ ಹೂಡಿಕೆಯಲ್ಲಿ ಪಾಲಿದೆ. ಸಂಜೆಹೊತ್ತಿಗೆ ಇಬ್ಬರೂ ಸೇರಿ ಈ ಅಂಗಡಿಯನ್ನು ನಡೆಸುತ್ತಾರೆ ಎಂದಿದ್ದಾರೆ ಸಂಜಯ್ ಖನ್ನಾ.

ಇದನ್ನೂ ಓದಿ : ಬಾಬಾ ನೀಮ್ ಕರೋಲಿ; ವಿರಾಟ್​, ಅನುಷ್ಕಾ, ಜುಕರ್​ಬರ್ಕ್​, ಸ್ಟೀವ್​ ಜಾಬ್ಸ್​ಗೆ ಸ್ಫೂರ್ತಿ ನೀಡಿದ ಅತೀಂದ್ರಿಯ ಸಂತನ ಹಿನ್ನೆಲೆ ಏನು?

ಕನಸನ್ನು ನನಸಾಗಿಸಿಕೊಳ್ಳುವವರು ಎಂದೂ ಉನ್ನತ ಹುದ್ದೆ, ಉನ್ನತ ಮಟ್ಟದ ಉದ್ಯೋಗದ ಬಗ್ಗೆ ಯೋಚಿಸಬಾರದು ಎನ್ನುವುದನ್ನು ನಾನು ಬಲವಾಗಿ ನಂಬುತ್ತೇನೆ. ಗುರಿಯನ್ನು ತಲುಪಲು ಸಣ್ಣ ಮಾರ್ಗಗಳನ್ನೇ ಅನುಸರಿಸಬೇಕು ಎಂದೂ ಖನ್ನಾ ಹೇಳಿದ್ದಾರೆ. ಯಾವ ಕೆಲಸವೂ ಚಿಕ್ಕದು ದೊಡ್ಡದೂ ಅಂತಿಲ್ಲ. ಎಲ್ಲವೂ ನಮ್ಮ ಭಾವನೆಗೆ ಸಂಬಂಧಿಸಿದ್ದು ಮತ್ತು ಕನಸಿಗೂ. ಆದರೆ ಗುರಿ ಮುಟ್ಟುವಲ್ಲಿ ಉತ್ಸಾಹ ಹೊಂದುವುದು ಮುಖ್ಯ. ಶರ್ಮಿಷ್ಠಾ ಘೋಷ್​ ಮತ್ತು ಭಾವನಾ ಅವರ ಈ ಪ್ರಯತ್ನವು ನಿಜಕ್ಕೂ ಶ್ಲಾಘನೀಯ ಎಂದು ನೆಟ್ಟಿಗರು ಹೇಳಿದ್ದಾರೆ.

ಇದನ್ನೂ ಓದಿ : ರಸ್ತೆಯಲ್ಲಿ ಬಸ್ ನಿಲ್ಲಿಸಿ ಚಿಕನ್ ತರಲು ಅಂಗಡಿಗೆ ಹೋದ ಲಂಡನ್ ಡ್ರೈವರ್ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಎಲ್ಲವೂ ಸಾಧ್ಯ. ಸ್ವಂತ ಕನಸನ್ನು ಅನುಸರಿಸುವುದರೊಂದಿಗೆ ಸ್ವಂತ ಉದ್ಯೋಗದಿಂದ ಇತರರಿಗೂ ಅವಕಾಶ ಕಲ್ಪಿಸಿಕೊಡುವುದು ಹೆಚ್ಚು ಪ್ರಶಂಸನೀಯ ಎಂದಿದ್ಧಾರೆ ಅನೇಕರು. ಆದರೆ ಕೆಲವರು ಶರ್ಮಿಷ್ಠಾಳ ನಡೆಯನ್ನು ವಿರೋಧಿಸಿದ್ದಾರೆ. ಶರ್ಮಿಷ್ಠಾಳ ತೀರ್ಮಾನ ನನಗೆ ಇಷ್ಟವಾಗುತ್ತಿಲ್ಲ. ಇಂಗ್ಲಿಷ್​ನಲ್ಲಿ ಎಂ. ಎ. ಓದಿ ಚಹಾ ಅಂಗಡಿ ಯಾಕೆ ನಡೆಸುವುದು? ಕಚೇರಿ ಕೆಲಸ ಬೇಡವೆಂದರೆ ಬೋಧನೆಯಲ್ಲಿ ತೊಡಗಿಕೊಳ್ಳಬಹುದಿತ್ತು. ಚಹಾದ ಅಂಗಡಿಯನ್ನೇ ಮಾಡುವುದಾದಲ್ಲಿ ಎಂ.ಎ. ಮುಗಿಯುವ ತನಕ ಯಾಕೆ ಕಾಯಬೇಕಿತ್ತು? ಎಂದಿದ್ಧಾರೆ ಒಬ್ಬರು. ಅಸಂಘಟಿತ ವ್ಯವಹಾರವು ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ. ಇಂಥವರಿಗೆ ಅನ್ಯಥಾ ಪ್ರಚಾರ ನೀಡುತ್ತಿದ್ದೀರಿ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್

ಇಂಗ್ಲಿಷ್​ ಮಾತನಾಡದ ಚಹಾ ಅಂಗಡಿಯವರೂ ಇಂಥ ಕನಸುಗಳನ್ನು ಹೊಂದಿದ್ಧಾರೆ. ಕಷ್ಟಪಟ್ಟು ಕೆಲಸವನ್ನೂ ಮಾಡುತ್ತಾರೆ. ಈಕೆಗೆ ಇಂಗ್ಲಿಷ್​ ಗೊತ್ತಿದೆ ಮತ್ತು ಮಾತನಾಡುತ್ತಾರೆ ಅಷ್ಟೇ ವ್ಯತ್ಯಾಸ. ಇಲ್ಲಿ ಬೇಕಾಗಿರುವುದು ಕನಸು ಮತ್ತು ಅದನ್ನು ಸಾಧ್ಯವಾಗಿಸಿಕೊಳ್ಳಲು ಶ್ರಮ, ಶ್ರದ್ಧೆ. ಇವಳಿಗೆ ಶುಭವಾಗಲಿ ಎಂದಿದ್ದಾರೆ ಮಗದೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:26 pm, Mon, 16 January 23

ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?