ಭಾರತೀಯ ಸಂಸ್ಕ್ರತಿ ಮರೆಯದ ಅಂಬಾನಿ ಸೊಸೆ; ಪ್ಯಾರಿಸ್‌ನಲ್ಲೂ ಕರಿಮಣಿ ತೊಟ್ಟು ಬಂದ ರಾಧಿಕಾ ಮರ್ಚೆಂಟ್

ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ವಿವಾಹಿತ ಮಹಿಳೆಯರು ಕಡ್ಡಾಯವಾಗಿ ಮಂಗಳಸೂತ್ರವನ್ನು ಧರಿಸಬೇಕು. ಇತ್ತೀಚಿನ ದಿನಗಳಲ್ಲಿ ಮಂಗಳಸೂತ್ರ ಧರಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಆದರೆ ಪ್ಯಾರಿಸ್‌ನಲ್ಲಿ ವೆಸ್ಟರ್ನ್ ಡ್ರೆಸ್​​ ಧರಿಸಿದ್ದರೂ ಕೂಡ ಮುಖೇಶ್​​ ಅಂಬಾನಿಯ ಕಿರಿಯ ಸೊಸೆ ಮಂಗಳಸೂತ್ರ ತೊಟ್ಟು ಬಂದಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್​​ ಆಗಿದೆ.

ಭಾರತೀಯ ಸಂಸ್ಕ್ರತಿ ಮರೆಯದ ಅಂಬಾನಿ ಸೊಸೆ; ಪ್ಯಾರಿಸ್‌ನಲ್ಲೂ ಕರಿಮಣಿ ತೊಟ್ಟು ಬಂದ ರಾಧಿಕಾ ಮರ್ಚೆಂಟ್
ಪ್ಯಾರಿಸ್‌ನಲ್ಲೂ ಕರಿಮಣಿ ತೊಟ್ಟು ಬಂದ ರಾಧಿಕಾ ಮರ್ಚೆಂಟ್
Follow us
|

Updated on: Aug 01, 2024 | 11:10 AM

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯೆ ಮತ್ತು ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಹಾಗೂ ಅವರ ಕುಟುಂಬ ಒಲಂಪಿಕ್ಸ್ ನ ಪಂದ್ಯ ವೀಕ್ಷಣೆಗೆ ಪ್ಯಾರಿಸ್‌ಗೆ ತೆರಳಿದ್ದಾರೆ. ಈ ವೇಳೆ ನವ ದಂಪತಿಗಳಾದ ಅನಂತ್​ ಅಂಬಾನಿ ಹಾಗೂ ರಾಧಿಕ ಮರ್ಚೆಂಟ್​ ಕೂಡ ಭಾಗಿಯಾಗಿದ್ದು, ಮುಖೇಶ್ ಅಂಬಾನಿಯ ಮುದ್ದಿನ ಸೊಸೆಯನ್ನು ಕಂಡು ನೆಟ್ಟಿಗರು ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪ್ಯಾರಿಸ್‌ನಲ್ಲಿ ವೆಸ್ಟರ್ನ್ ಡ್ರೆಸ್​​ ಧರಿಸಿದ್ದರೂ ಕೂಡ ರಾಧಿಕ ಮಂಗಳಸೂತ್ರಕ್ಕೆ ವಿಶೇಷ ಗೌರವ ನೀಡಿದ್ದಾರೆ. ಸದ್ಯ ರಾಧಿಕಾ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. @ambani_update ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಫೋಟೋ ಹಂಚಿಕೊಳ್ಳಲಾಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ವೈರಲ್​​ ಫೋಟೋ ಇಲ್ಲಿದೆ ನೋಡಿ:

ಇದನ್ನೂ ಓದಿ: 200 ಕಿ.ಮೀ ಕ್ರಮಿಸಿ ಮಾಲೀಕನ ಮನೆ ಸೇರಿಸಿದ ಕಾಣೆಯಾಗಿದ್ದ ಶ್ವಾನ

ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ವಿವಾಹಿತ ಮಹಿಳೆಯರು ಕಡ್ಡಾಯವಾಗಿ ಮಂಗಳಸೂತ್ರವನ್ನು ಧರಿಸಬೇಕು. ವಿವಾಹದ ನಂತರ ಸ್ತ್ರೀ ಎಷ್ಟೇ ಅಲಂಕಾರವನ್ನು ಮಾಡಿಕೊಂಡರೂ ಮಂಗಳ ಸೂತ್ರವಿಲ್ಲದ ಅವಳ ಅಲಂಕಾರ ಕೂಡ ವ್ಯರ್ಥ ಅನ್ನೋ ಭಾವನೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಂಗಳಸೂತ್ರ ಅಥವಾ ಕರಿಮಣಿ ಧರಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಆದರೆ ಬಿಲಿಯನೇರ್ ಆಗಿದ್ದರೂ ಕೂಡ ಮುಖೇಶ್​ ಅಂಬಾನಿಯ ಮುದ್ದಿನ ಸೊಸೆ ರಾಧಿಕಾ ಮರ್ಚೆಂಟ್ ಭಾರತೀಯ ಸಂಸ್ಕ್ರತಿಯನ್ನು ಮರೆತಿಲ್ಲ ಎಂಬುದು ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ