AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಾನಸಿಕ ಕಿರಿಕಿರಿ, ಒಂಟಿತನ ಫ್ರೀಯಾಗಿ ಕೊಟ್ಟ ವರ್ಕ್ ಫ್ರಮ್ ಹೋಮ್; ಯುವಕ ಹೀಗೆಂದಿದ್ದೇಕೆ?

ಮನೆಯಲ್ಲೇ ಕುಳಿತು ಮಾಡುವ ವರ್ಕ್ ಫ್ರಮ್ ಹೋಮ್ ಎಲ್ಲರಿಗೂ ಇಷ್ಟನೇ. ಈ ಉದ್ಯೋಗಿಗಳು ಅನುಭವಿಸುವ ಒತ್ತಡ ಹೇಳಲಾಗದು. ಕೆಲವರು ಈ ಮನೆಯಲ್ಲೇ ಕುಳಿತು ಕೆಲಸ ಮಾಡುವುದನ್ನು ಪ್ಲಸ್ ಪಾಯಿಂಟ್ ಆಗಿ ತೆಗೆದುಕೊಂಡರೆ, ಇನ್ನು ಕೆಲವರಿಗೆ ಇದ್ದ ನೆಮ್ಮದಿಯನ್ನೇ ಕಸಿದು ಬಿಡುತ್ತದೆ. ಮನೆಯಿಂದ ಕೆಲಸ ಮಾಡುವ ಯುವಕನೊಬ್ಬ ತನ್ನ ಕರಾಳ ಅನುಭವ ಬಿಚ್ಚಿಟ್ಟಿದ್ದಾನೆ. ಮನೆಯಲ್ಲೇ ಕುಳಿತುಕೊಂಡು ಒಂಟಿ ಎನ್ನುವ ಭಾವನೆ ಮೂಡಿದೆ ಎಂದಿದ್ದಾನೆ. ಈ ಕ್ಲಿಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ.

Video: ಮಾನಸಿಕ ಕಿರಿಕಿರಿ, ಒಂಟಿತನ ಫ್ರೀಯಾಗಿ ಕೊಟ್ಟ ವರ್ಕ್ ಫ್ರಮ್ ಹೋಮ್; ಯುವಕ ಹೀಗೆಂದಿದ್ದೇಕೆ?
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Jul 05, 2026 | 2:29 PM

Share

ವರ್ಕ್ ಫ್ರಂ ಹೋಮ್ ಆಯ್ಕೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಕಾಮನ್ ಆಗಿ ಬಿಟ್ಟಿದೆ. ಆಫೀಸಿಗೆ ಹೋಗಿ ಕೆಲಸ ಮಾಡೋದಕ್ಕಿಂತ ವರ್ಕ್ ಫ್ರಮ್ ಹೋಮ್ (work from home) ಬೆಸ್ಟ್ ಎನ್ನುವುದು ಅನೇಕರ ಅಭಿಪ್ರಾಯ. ವರ್ಕ್ ಫ್ರಮ್ ಹೋಮ್ ಆಪ್ಷನ್ ಸಿಕ್ರೆ ಖುಷಿ ಎಷ್ಟಿದೆಯೋ, ಅಷ್ಟೇ ಕಿರಿಕಿರಿ ಕೂಡ. ಇದೀಗ ಯುವಕನೊಬ್ಬನದ್ದು ಇದೇ ಪರಿಸ್ಥಿತಿ. ಮನೆಯಲ್ಲೇ ಕೆಲಸ ಮಾಡಿಕೊಂಡು ತಾನು ಅನುಭವಿಸುವ ಒಂಟಿತನ ಹಾಗೂ ಕಿರಿಕಿರಿಯ ಬಗ್ಗೆ ಮಾತನಾಡಿದ್ದಾನೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಈತನ ಮಾತನ್ನು ಒಪ್ಪಿಕೊಂಡಿದ್ದಾರೆ.

ನಮಾನ್ (better.with.naman) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ದಲ್ಲಿ ವರ್ಕ್ ಫ್ರಮ್ ಹೋಮ್ ಬಗ್ಗೆ ಮಾತನಾಡಿದ್ದಾನೆ. ಈ ಕ್ಲಿಪಿಂಗ್ ನಲ್ಲಿ ಮನೆಯಿಂದಲೇ ಕೆಲಸ ಮಾಡುವುದು ನನ್ನ ಪಾಲಿನ ಬಹುದೊಡ್ಡ ಕನಸಾಗಿತ್ತು. ಆಫೀಸ್‌ಗೆ ಹೋಗಿ ಬರುವ ಸಮಯ ಉಳಿಯುತ್ತದೆ ಎಂದುಕೊಂಡಿದ್ದೆ. ಈ ವರ್ಕ್ ಫ್ರಮ್ ಕೆಲಸ ಸಿಕ್ಕ ಬಳಿಕ ಒಂದು ತಿಂಗಳಿನಿಂದ ಯಾರೊಂದಿಗೂ ಮುಖಾಮುಖಿ ಮಾತನಾಡಿಲ್ಲ. ಆಫೀಸ್‌ನಲ್ಲಿ ಸಣ್ಣದೊಂದು, ಸಹೋದ್ಯೋಗಿಗಳ ಜತೆಗೆ ಹರಟೆ, ಒಡನಾಟ, ಬಾಂಧವ್ಯವನ್ನು ಮಿಸ್ ಮಾಡುತ್ತಿದ್ದೇನೆ. ಟೈಮ್ ಏನೋ ಉಳಿಯಿತು. ಆದರೆ ಶೂನ್ಯಭಾವವೊಂದು ಕಾಡುತ್ತಿದೆ ಎಂದು ಹೇಳಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಕೈಯಲ್ಲಿ ಕೆಲಸ ಇಲ್ಲದಾಗ ಉದ್ಯೋಗವಿದ್ರೆ ಸಾಕು ಅನಿಸುತ್ತದೆ. ಕೆಲಸ ಸಿಕ್ಕರೆ ಫ್ರೀಡಂ ಬೇಕು ಎಂದೇನಿಸುತ್ತದೆ. ಆದರೆ ಪ್ರತಿಯೊಂದಕ್ಕೂ ಬಾಸ್ ಗಳ ಪರ್ಮಿಷನ್ ಕೇಳಬೇಕು. ಅದನ್ನು ಎನಿಸಿಕೊಂಡರೆ ಬೇಸರ. ನಮ್ಗೆ ಏನೇ ಸಿಕ್ಕರೂ ಅದರಲ್ಲಿ ತೃಪ್ತರಾಗಿ ಇಲ್ಲ. ನಾವು ಕೆಲಸ ಮಾಡುವ ಬದಲು, ಆ ಬಳಿಕ ಬರುವ ಫಲಿತಾಂಶದ ಬಗ್ಗೆ ಹೆಚ್ಚು ಯೋಚಿಸುತ್ತೇವೆ. ಇಲ್ಲಿ ಗುರಿಯೊಂದಿಗೆ ನಡೆಯುವ ದಾರಿಯೂ ಅಷ್ಟೇ ಮುಖ್ಯ. ಹೀಗಾಗಿ ಪ್ರತಿಯೊಂದು ಕ್ಷಣವನ್ನು ಆನಂದಿಸಲು ಕಲಿಯಬೇಕು ಎಂದು ವಿಡಿಯೋದ ಕೊನೆಗೆ ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಕೆಲಸ ಕಳೆದುಕೊಳ್ಳುತ್ತಿರುವುದಕ್ಕೆ ನಂಗೆ ಖುಷಿಯಾಗಿದೆ; ಉದ್ಯೋಗಿ ಹೀಗೆಂದಿದ್ದೇಕೆ?

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮನುಷ್ಯನಿಗೆ ಏನೇ ಸಿಕ್ಕರೂ ತೃಪ್ತಿ ಇಲ್ಲ ಎಂದಿದ್ದಾರೆ. ಇನ್ನೊಬ್ಬರು, ಮನೆಯಲ್ಲೇ ಕೆಲಸ ಮಾಡುವುದು ಹಾಗೂ ಆಫೀಸಿಗೆ ಹೋಗಿ ಕೆಲಸ ಮಾಡುವುದು ಎರಡು ಭಿನ್ನ ಅನುಭವ ಎಂದು ಹೇಳಿದ್ದಾರೆ. ಮತ್ತೊಬ್ಬರು, ಸಿಕ್ಕಿದ್ದನ್ನು ಖುಷಿ ಪಡಿ. ಅದರ ಬಗ್ಗೆ ಗಮನ ಹರಿಸಿ. ಇಷ್ಟ ಪಟ್ಟು ಕೆಲಸ ಮಾಡಿದರೆ ಬೇಸರ ಕಾಡುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ