ಆಸ್ಟ್ರಾಜೆನೆಕಾ ಲಸಿಕೆಯ ಮೊದಲ ಡೋಸ್​ 12 ವಾರಗಳ ನಂತರ ಹೆಚ್ಚು ಪರಿಣಾಮಕಾರಿ; ಎರಡನೇ ಡೋಸ್​ ಶಕ್ತಿವರ್ಧಕ – ಆ್ಯಂಡ್ರೂ ಪೊಲಾರ್ಡ್

Corona Vaccine: ಎರಡು ಡೋಸ್​ಗಳ ನಡುವಿನ ಅಂತರ ಒಂದು ಪ್ರಮುಖ ವಿಚಾರ. ಮೊದಲ ಡೋಸ್​ ಪ್ರತಿಕಾಯಗಳನ್ನು ವೃದ್ಧಿಸಿದರೆ ಎರಡನೇ ಡೋಸ್ ಶಕ್ತಿವರ್ಧಕದಂತೆ ಕಾರ್ಯ ನಿರ್ವಹಿಸುತ್ತದೆ. ಎರಡನೇ ಡೋಸ್ ಕೊಂಚ ವಿಳಂಬವಾದರೆ ಮೊದಲ ಡೋಸ್​ಗೆ ಕೆಲಸ ಮಾಡಲು ಮತ್ತಷ್ಟು ಸಮಯ ಸಿಕ್ಕಂತಾಗುತ್ತದೆ.

ಆಸ್ಟ್ರಾಜೆನೆಕಾ ಲಸಿಕೆಯ ಮೊದಲ ಡೋಸ್​ 12 ವಾರಗಳ ನಂತರ ಹೆಚ್ಚು ಪರಿಣಾಮಕಾರಿ; ಎರಡನೇ ಡೋಸ್​ ಶಕ್ತಿವರ್ಧಕ - ಆ್ಯಂಡ್ರೂ ಪೊಲಾರ್ಡ್
ಆಸ್ಟ್ರಾಜೆನೆಕಾ ಲಸಿಕೆ
Follow us
| Updated By: Skanda

Updated on:Jun 19, 2021 | 11:23 AM

ದೆಹಲಿ: ಭಾರತದಲ್ಲಿ ಕೊರೊನಾ ಲಸಿಕೆಯ ಕುರಿತು ದೊಡ್ಡ ಮಟ್ಟದ ಚರ್ಚೆ ಆರಂಭದಿಂದಲೂ ನಡೆಯುತ್ತಿದೆ. ಕೊವ್ಯಾಕ್ಸಿನ್​ಗೆ ಮಾನ್ಯತೆ ನೀಡುವ ಹಂತದಿಂದ ಶುರುವಾದ ಬಿಸಿಬಿಸಿ ಮಾತುಕತೆ ನಂತರದಲ್ಲಿ ಕೊವಿಶೀಲ್ಡ್​, ಕೊವ್ಯಾಕ್ಸಿನ್​ನಲ್ಲಿ ಯಾವುದು ಉತ್ತಮ ಎಂಬಲ್ಲಿಂದ ಹಿಡಿದು ಇದೀಗ ಕೊವಿಶೀಲ್ಡ್​ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರದ ಹೆಚ್ಚಳದ ತನಕ ವಿವಿಧ ಹಂತಗಳನ್ನು ದಾಟಿ ಬಂದು ನಿಂತಿದೆ. ಕೊವಿಶೀಲ್ಡ್​ ಲಸಿಕೆಯನ್ನು ಭಾರತದಲ್ಲಿ ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ್ದರೂ ಅದು ಮೂಲದಲ್ಲಿ ಆಸ್ಟ್ರಾಜೆನೆಕಾ AZD1222 ಹೆಸರಿನ ಕೊರೊನಾ ಲಸಿಕೆಯಾಗಿದೆ. ಪ್ರಸ್ತುತ ಇದೇ ಆಸ್ಟ್ರಾಜೆನೆಕಾ ಲಸಿಕೆಯ ಮುಖ್ಯ ನಿರ್ವಾಹಕ ಅಧಿಕಾರಿ ಸಂದರ್ಶನವೊಂದರಲ್ಲಿ ಸದರಿ ಲಸಿಕೆಯು ಯಾವ ಹಂತದಲ್ಲಿ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ ಎಂಬ ಬಗ್ಗೆ ಮಾತನಾಡಿದ್ದಾರೆ. ಅವು ಹೇಳುವ ಪ್ರಕಾರ ಆಸ್ಟ್ರಾಜೆನೆಕಾ ಲಸಿಕೆ ಪಡೆದ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ದೇಹದೊಳಗಿನ ಪ್ರತಿಕಾಯಗಳ ಮಟ್ಟ ಗಣನೀಯ ಹಂತದಲ್ಲಿ ಏರಿಕೆ ಕಾಣಲಿದೆ. ಭಾರತದಲ್ಲಿ ಸದ್ಯಕ್ಕೆ ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ಹೆಚ್ಚಿಸಲಾಗಿದ್ದು, ಇನ್ನೊಂದಷ್ಟು ಲೆಕ್ಕಾಚಾರಗಳಿಗೆ ಇದು ನಾಂದಿ ಹಾಡಿದೆ.

ಭಾರತದಲ್ಲಿ ಈ ಮೊದಲು ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರ 6ರಿಂದ 8ವಾರ ಇತ್ತು. ಆದರೆ, ಅದನ್ನು ನಂತರ 12ರಿಂದ 16ವಾರಕ್ಕೆ ಹೆಚ್ಚಿಸಲಾಗಿದೆ. ಸರ್ಕಾರದ ಈ ನಿರ್ಧಾರ ಸಾಕಷ್ಟು ಗೊಂದಲ, ಅನುಮಾನ, ಚರ್ಚೆಗಳಿಗೂ ಕಾರಣವಾಗಿದೆ. ಬಹುತೇಕರು ಅಂತರ ಹೆಚ್ಚುವುದರಿಂದ ಲಸಿಕೆಯ ಶಕ್ತಿ ಕುಂದುವುದಿಲ್ಲವೇ ಎಂಬ ಆತಂಕವನ್ನೂ ಹೊರಹಾಕಿದ್ದರು. ಇದೀಗ ಆಸ್ಟ್ರಾಜೆನೆಕಾ ಲಸಿಕೆಯ ಮುಖ್ಯ ನಿರ್ವಾಹಕ ಅಧಿಕಾರಿ ಹೇಳಿರುವ ಮಾತು ಕೂಡಾ ಈ ಗೊಂದಲವನ್ನು ಮುಂದುವರೆಸುವ ಅಥವಾ ಹೆಚ್ಚಿಸುವ ಸಾಧ್ಯತೆ ಇದೆ.

ಆದರೆ, ಮುಖ್ಯ ನಿರ್ವಾಹಕ ಅಧಿಕಾರಿ ಪ್ರೊ. ಆ್ಯಂಡ್ರೂ ಪೊಲಾರ್ಡ್​ ಗಮನಾರ್ಹ ಅಂಶವೊಂದನ್ನು ಉಲ್ಲೇಖಿಸಿದ್ದಾರೆ. ಅವರು ಹೇಳಿರುವ ಪ್ರಕಾರ ಆಸ್ಟ್ರಾಜೆನೆಕಾ ಲಸಿಕೆ ಪಡೆದ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ದೇಹದೊಳಗಿನ ಪ್ರತಿಕಾಯಗಳ ಮಟ್ಟ ಗಣನೀಯ ಹಂತದಲ್ಲಿ ಏರಿಕೆ ಕಾಣಲಿದೆ ಎಂಬ ಮಾತು ಬ್ರಿಟನ್​ಗೆ ಅನ್ವಯಿಸುತ್ತದೆ ಎಂದ ಮಾತ್ರಕ್ಕೆ ಭಾರತದಲ್ಲೂ ಹಾಗೆಯೇ ಆಗುತ್ತದೆ ಎಂದು ನಿರ್ಧರಿಸುವುದು ಸಾಧ್ಯವಿಲ್ಲ. ಈ ಎರಡೂ ದೇಶಗಳ ನಡುವೆ ಪ್ರಾಕೃತಿಕ ಸ್ಥಿತಿಗತಿಗಳಿಂದ ಹಿಡಿದು, ಜೀವನಶೈಲಿ ತನಕ ಸಾಕಷ್ಟು ವ್ಯತ್ಯಾಸ ಇರುವುದರಿಂದ ಎರಡನ್ನೂ ಪ್ರತ್ಯೇಕವಾಗಿಯೇ ನೋಡಬೇಕಾಗುತ್ತದೆ ಎಂದಿದ್ದಾರೆ.

ಅಲ್ಲದೇ, ಭಾರತದಲ್ಲಿ ಲಸಿಕೆ ವಿತರಣೆಯ ಆದ್ಯತೆ ಎಲ್ಲಾ ಜನರಿಗೂ ಒಂದು ಡೋಸ್​ ಲಸಿಕೆಯನ್ನಾದರೂ ಆಸದಷ್ಟು ಬೇಗ ತಲುಪಿಸಬೇಕು ಎನ್ನುವುದಾಗಿದ್ದು, ಸದ್ಯ ದೇಶದಲ್ಲಿ ಕೊರೊನಾ ಎರಡನೇ ಅಲೆ ಉಂಟುಮಾಡಿರುವ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿರುವ ಜನ ಸಂಖ್ಯೆಯನ್ನು ಏಕಾಏಕಿ ನಿಭಾಯಿಸುವುದು ಸಲೀಸಲ್ಲ ಎನ್ನುವುದನ್ನೂ ಅರ್ಥೈಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇವೇಳೆ ಇನ್ನೊಂದು ವಿಚಾರವನ್ನು ಸ್ಪಷ್ಟಪಡಿಸಿರುವ ಪೊಲಾರ್ಡ್, ಆಕ್ಸ್​ಫರ್ಡ್​ ಆಸ್ಟ್ರಾಜೆನೆಕಾ ಲಸಿಕೆ ಒಂದು ಡೋಸ್​ನಲ್ಲೇ ಪೂರೈಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಕೊರೊನಾ ವಿರುದ್ಧ ಪ್ರಬಲವಾಗಿ ಹೋರಾಡಲು ಎರಡು ಡೋಸ್​ಗಳ ಅವಶ್ಯಕತೆ ಇದೆ. ಆದರೆ, ಲಸಿಕೆಯ ಕೊರತೆ ಉಂಟಾದಾಗ ಅದಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಾಗುತ್ತದೆ ಎನ್ನುವುದು ಅರ್ಥವಾಗುವ ವಿಚಾರ ಎಂದಿದ್ದಾರೆ.

ಎರಡು ಡೋಸ್​ಗಳ ನಡುವಿನ ಅಂತರ ಒಂದು ಪ್ರಮುಖ ವಿಚಾರ. ಮೊದಲ ಡೋಸ್​ ಪ್ರತಿಕಾಯಗಳನ್ನು ವೃದ್ಧಿಸಿದರೆ ಎರಡನೇ ಡೋಸ್ ಶಕ್ತಿವರ್ಧಕದಂತೆ ಕಾರ್ಯ ನಿರ್ವಹಿಸುತ್ತದೆ. ಎರಡನೇ ಡೋಸ್ ಕೊಂಚ ವಿಳಂಬವಾದರೆ ಮೊದಲ ಡೋಸ್​ಗೆ ಕೆಲಸ ಮಾಡಲು ಮತ್ತಷ್ಟು ಸಮಯ ಸಿಕ್ಕಂತಾಗುತ್ತದೆ. ಇಂಗ್ಲೆಂಡ್​ನಲ್ಲಿ ನಡೆದ ಅಧ್ಯಯನಗಳು ಲಸಿಕೆಗಳ ನಡುವಿನ 12 ವಾರ ಇದ್ದರೆ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ತಿಳಿಸಿವೆ. ಇತ್ತ ಬ್ರಿಟನ್​ ಕೂಡಾ ಆಲ್ಫಾ ಮಾದರಿಯ ಅಬ್ಬರದ ನಡುವೆಯೇ ಎರಡು ಡೋಸ್​ಗಳ ನಡುವಿನ ಅಂತರವನ್ನು 12 ವಾರ ಇಟ್ಟುಕೊಂಡೇ ಪರಿಸ್ಥಿತಿ ನಿಭಾಯಿಸಿದೆ ಎನ್ನುವುದು ಗಮನಾರ್ಹ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜಾನ್ಸನ್​ ಅಂಡ್​ ಜಾನ್ಸನ್​ ಸಂಸ್ಥೆಯ ಸಿಂಗಲ್​ ಡೋಸ್​ ಕೊರೊನಾ ಲಸಿಕೆಯನ್ನು ಭಾರತಕ್ಕೆ ತರಲು ಪ್ರಯತ್ನ

Published On - 11:23 am, Sat, 19 June 21

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ