AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್​ಬುಕ್​ ವಿರುದ್ಧ ಅಮೆರಿಕ​ ಸರ್ಕಾರದಿಂದ ಮೊಕದ್ದಮೆ; ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕುತ್ತಿದೆ ಎಂಬ ಆರೋಪ

ಫೇಸ್​ಬುಕ್​ ಜಗತ್ತಿನ ಅತ್ಯಂತ ದೊಡ್ಡ ಸಾಮಾಜಿಕ ನೆಟ್​ವಕರ್ಟ್​ ಎನ್ನುವುದರಲ್ಲಿ ಸಂಶಯವಿಲ್ಲ. ಕಳೆದ ಒಂದೇ ವರ್ಷ 70 ಬಿಲಿಯನ್​ ಡಾಲರ್​ಗೂ ಹೆಚ್ಚು ಆದಾಯ ಗಳಿಸಿದೆ. 18.5 ಬಿಲಿಯನ್ ಡಾಲರ್​ಗಿಂತಲೂ ಹೆಚ್ಚು ಲಾಭ ಗಳಿಸಿತ್ತು.

ಫೇಸ್​ಬುಕ್​ ವಿರುದ್ಧ ಅಮೆರಿಕ​ ಸರ್ಕಾರದಿಂದ ಮೊಕದ್ದಮೆ; ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕುತ್ತಿದೆ ಎಂಬ ಆರೋಪ
ಸಾಂದರ್ಭಿಕ ಚಿತ್ರ
Lakshmi Hegde
| Edited By: |

Updated on: Dec 10, 2020 | 6:05 PM

Share

ವಾಷಿಂಗ್ಟನ್​: ಅಮೆರಿಕ ಸರ್ಕಾರ ಮತ್ತು 48 ರಾಜ್ಯಗಳು ಫೇಸ್​ಬುಕ್​ ವಿರುದ್ಧ ಸಮಾನಾಂತರ ನಂಬಿಕೆ ದ್ರೋಹದ ಮೊಕದ್ದಮೆ ಹೂಡಿವೆ. ಸಾಮಾಜಿಕ ಮಾಧ್ಯಮ ದೈತ್ಯ ಎನಿಸಿಕೊಂಡಿರುವ ಫೇಸ್​ಬುಕ್​, ತನ್ನ ಮಾರುಕಟ್ಟೆ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ವ್ಯವಸ್ಥೆಗೆ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಈ ಮೂಲಕ ಏಕಸ್ವಾಮ್ಯತ್ವ ಸೃಷ್ಟಿಸಿಕೊಂಡು, ಸಣ್ಣ ಮಟ್ಟದ ಸ್ಪರ್ಧಿಗಳನ್ನು ತುಳಿಯುತ್ತಿದೆ ಎಂದು ಆರೋಪಿಸಿವೆ.

ಷೇರುಗಳು ಕುಸಿತ ಅಮೆರಿಕ​ ಸರ್ಕಾರದ ಸ್ವಾಯುತ್ತ ಸಂಸ್ಥೆಯಾದ ಫೆಡರಲ್​ ಟ್ರೇಡ್​ ಕಮಿಷನ್ ಮತ್ತು 48 ರಾಜ್ಯಗಳ ಅಟಾರ್ನಿ ಜನರಲ್​ಗಳು ಬುಧವಾರ ಮೊಕದ್ದಮೆ ಹೂಡಿದ ಬೆನ್ನಲ್ಲೇ, ಫೇಸ್​ಬುಕ್​ನ ಶೇರುಗಳ ಮೌಲ್ಯ ಗಣನೀಯ ಪ್ರಮಾಣದಲ್ಲಿ ಕುಸಿದಿವೆ. ಫೇಸ್​ಬುಕ್​ ತನ್ನ ಏಕಸ್ವಾಮ್ಯಕ್ಕಿರುವ ಅಪಾಯವನ್ನು ತೊಡೆದುಹಾಕಲು, ವ್ಯವಸ್ಥಿತ ಕಾರ್ಯತಂತ್ರ ಹೆಣೆಯುತ್ತಿದೆ. ಅದಕ್ಕೆ ಉದಾಹರಣೆಯೆಂಬಂತೆ ಮುಂದೊಂದು ದಿನ ತನಗೆ ತೀವ್ರ ಪ್ರತಿಸ್ಪರ್ಧಿಯಾಗಬಲ್ಲ ಇನ್​ಸ್ಟಾಗ್ರಾಮ್​ ಅನ್ನು 2012ರಲ್ಲಿ ಸ್ವಾಧೀನ ಪಡಿಸಿಕೊಂಡಿತು..ಹಾಗೇ 2014ರಲ್ಲಿ ಮೊಬೈಲ್​ ಮೆಸೇಜಿಂಗ್​ ಆ್ಯಪ್​ ವಾಟ್ಸ್​ಆ್ಯಪ್​ನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಹಾಗೇ, ಸಾಫ್ಟ್​ವೇರ್​​ ಡೆವಲಪರ್​​ಗಳ ಮೇಲೆ ಸ್ಪರ್ಧಾತ್ಮಕ ವಿರೋಧಿ ಷರತ್ತುಗಳನ್ನು ಹೇರುತ್ತಿದೆ ಎಂದು ನ್ಯೂಯಾರ್ಕ್​ನ ಅಟಾರ್ನಿ ಜನರಲ್​ ಲೆಟಿಟಾ ಜೇಮ್ಸ್​ ನೇತೃತ್ವದ ಉಭಯ ಪಕ್ಷೀಯ ಒಕ್ಕೂಟ ಮೊಕದ್ದಮೆಯಲ್ಲಿ ಆರೋಪ ಮಾಡಿದೆ.

ಫೇಸ್​ಬುಕ್​ನ ಇಂಥ ನಡೆ ಸ್ಪರ್ಧೆಗೆ ಮಾರಕ .ಗ್ರಾಹಕರಿಗೆ ವೈಯಕ್ತಿಕ ಸಾಮಾಜಿಕ ನೆಟ್​ವರ್ಕ್​ಗಳ ಆಯ್ಕೆ ಸೀಮಿತವಾಗುತ್ತದೆ ಮತ್ತು ಜಾಹೀರಾತುದಾರರಿಗೆ ಸ್ಪರ್ಧೆಯಿಂದ ಸಿಗುವ ಅನುಕೂಲವನ್ನು ಕಸಿಯುತ್ತದೆ. ಕಳೆದ ಒಂದು ದಶಕಗಳಿಂದಲೂ ಫೇಸ್​ಬುಕ್​ ತನ್ನ ಸಣ್ಣ ಪ್ರತಿಸ್ಪರ್ಧಿಗಳ ಮೇಲೆ ಪ್ರಾಬಲ್ಯ ಸ್ಥಾಪಿಸುತ್ತಿದೆ. ಏಕಸ್ವಾಮ್ಯದಿಂದ ಹತ್ತಿಕ್ಕುತ್ತಿದೆ ಎಂದೂ ಹೇಳಿದೆ.

ಫೇಸ್​ಬುಕ್​ ಜಗತ್ತಿನ ಅತ್ಯಂತ ದೊಡ್ಡ ಸಾಮಾಜಿಕ ನೆಟ್​ವರ್ಕ್ ಎನ್ನುವುದರಲ್ಲಿ ಸಂಶಯವಿಲ್ಲ. ಕಳೆದ ಒಂದೇ ವರ್ಷ 70 ಶತಕೋಟಿ ಡಾಲರ್​ಗೂ ಹೆಚ್ಚು ಆದಾಯ, 18.5 ಶತಕೋಟಿ ಡಾಲರ್ ನಿವ್ವಳ ಲಾಭ ಗಳಿಸಿತ್ತು. ಆದರೆ ತನ್ನೊಂದಿಗೆ ಇನ್ನ್ಯಾವುದೇ ಸಣ್ಣ ಪ್ರತಿಸ್ಪರ್ಧಿಗಳನ್ನು ಬೆಳೆಯಲು ಕೊಡುವುದಿಲ್ಲ ಎಂಬುದೇ ಮೊಕದ್ದಮೆಯ ಸಾರಾಂಶ.

ಬಡರಾಷ್ಟ್ರಗಳ ಬಡಪಾಯಿಗಳಿಗೆ ಕೊರೊನಾ ಲಸಿಕೆ ಮರೀಚಿಕೆಯಷ್ಟೇ.. ಅಧ್ಯಯನ ಹೇಳಿದ ಕಟು ಸತ್ಯ ಇಲ್ಲಿದೆ

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?